ಮರೆಯಾಗದಿರಲಿ ತುಳುನಾಡಿನ ಮೂಲ ಸಂಪ್ರದಾಯ.ತುಳುವೆರೆ ಕಲ ಕಾರ್ಯಕ್ರಮದಲ್ಲಿ ಕೊಡೆತ್ತೂರು ಗುತ್ತಿನಾರ್ ನಿತಿನ್ ಶೆಟ್ಟಿ ಆಶಯ
ಕಿನ್ನಿಗೋಳಿ: ತುಳುನಾಡಿನ ನಂಬಿಕೆ ಅನನ್ಯ. ದೈವವನ್ನು ಪ್ರೀತಿಪೂರ್ವಕವಾಗಿ ನಂಬಿದರೆ ಅವು ನಮ್ಮನ್ನು ಅಷ್ಟೇ ಪ್ರೀತಿಯಿಂದ ಕೈ ಹಿಡಿಯುತ್ತದೆ. ಅದಕ್ಕೆ ಅನೇಕ ನಿದರ್ಶನಗಳಿವೆ. ಯಾವುದೇ ಕಾರಣಕ್ಕೂ ನಮ್ಮ ಮೂಲ ಸಂಪ್ರದಾಯವನ್ನು ಮರೆಯಬಾರದು ಎಂದು ಕೊಡೆತ್ತೂರು ಗಡಿ ಪ್ರಧಾನರಾದ ನಿತಿನ್ ಶೆಟ್ಟಿ ಹೇಳಿದರು.ತುಲುವೆರೆ ಕಲ(ರಿ.) ಮಂಗಳೂರು ವತಿಯಿಂದ ಭಾನುವಾರ ಗುತ್ತಿನ ಚಾವಡಿಯಲ್ಲಿ ನಡೆದ ‘ಗುತ್ತುಗೊಂಜಿ ಕಲೊತ ಸುತ್ತು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಸಂಸ್ಕೃತಿಯಲ್ಲಿ ಗುತ್ತುಗಳ ಪಾತ್ರ ಅಪಾರ. ದೇವಳಗಳಲ್ಲಿರುವ ಶಿಷ್ಟಾಚಾರ ಗುತ್ತಿನ ಮನೆಗಳಿಗೂ ಅನ್ವಯ. ವಿಶ್ವಾದ್ಯಂತ ಅನೇಕ ಖ್ಯಾತನಾಮರನ್ನು…
