ಕುಂಜತ್ತೂರಿನ ಜಿ.ವಿ.ಎಚ್.ಎಸ್.ಎಸ್ ಶಾಲೆಯಲ್ಲಿ ವಾರ್ಷಿಕ ಶಾಲಾ ಕ್ರೀಡೋತ್ಸವ.

ಮಂಜೇಶ್ವರ : ಕುಂಜತ್ತೂರಿನ ಜಿ.ವಿ.ಎಚ್.ಎಸ್.ಎಸ್ ಶಾಲೆಯಲ್ಲಿ ಶುಕ್ರವಾರದಂದು ವಿಜೃಂಭಣೆಯಿಂದ ವಾರ್ಷಿಕ ಶಾಲಾ ಕ್ರೀಡೋತ್ಸವ ನಡೆಯಿತು. ಶಾಲೆಯ ಆವರಣವೇ ಕ್ರಿಯಾಶೀಲತೆಯಿಂದ ತುಂಬಿ ತುಳುಕುತ್ತಿತ್ತು. ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನೀತಾ ಕೆ.ಬಿ ಅವರು ಧ್ವಜಾರೋಹಣದ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಸಮೂಹ ಗಾಯನದಿಂದ ಉದ್ವೇಗಕಾರಿ ವಾತಾವರಣ ನಿರ್ಮಾಣವಾಯಿತು. ಆತಿಥ್ಯ ವಹಿಸಿದ್ದ ಶ್ರೀನಿವಾಸ್ ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ಹಾಗೂ ಎಸ್‌ಪಿಸಿ ಘಟಕದ ಶ್ರೀ ರಂಜಿತ್…

Read More

ಕ್ರಿಶ್ಚಿಯನ್ ಬ್ರಾಹ್ಮಣ ಎಂದರೆ ಯಾವ ಜಾತಿ ಹೇಳಿ ಎಂಬ ಶಾಸಕ ಡಾ ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರ ಹೇಳಲಾಗದೇ ತೊದಲಿದ ಮಂಗಳೂರು ಜಿಲ್ಲಾಧಿಕಾರಿ …. !

ಮಂಗಳೂರು: ಕ್ರಿಶ್ಚಿಯನ್ ಬ್ರಾಹ್ಮಣ ಎಂದರೆ ಯಾವ ಜಾತಿ ಹೇಳಿ ಎಂದು ಮಂಗಳೂರು ನಗರ ಶಾಸಕ ಡಾ ಭರತ್ ಶೆಟ್ಟಿ ಪ್ರಶ್ನೆಗೆ ಡಿಸಿ ಉತ್ತರ ಹೇಳಲಾಗದೇ ತೊದಲಿದ್ದಾರೆ. ಈ ವಿಡಿಯೋವನ್ನು ಖುದ್ದು ಭರತ್ ಶೆಟ್ಟಿ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ . ಜಾತಿಗಣತಿ ಬಗ್ಗೆ ನಗರದಲ್ಲಿ ಸಭೆಯಲ್ಲಿ ಸ್ಪೀಕರ್ ಯುಟಿ ಖಾದ‌ರ್, ಮಂಗಳೂರು ಡಿಸಿ ಸೇರಿದಂತೆ ಜನಪ್ರತಿನಿಧಿಗಳು, ನಾಗರಿಕರು ಸೇರಿದ್ದರು. ಈ ವೇಳೆ ಸಭೆಯಲ್ಲಿ ಡಾ ಭರತ್ ಶೆಟ್ಟಿ ಜಾತಿ ಕಾಲಂನಲ್ಲಿ ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಕುರುಬ ಎಂದೆಲ್ಲಾ…

Read More

ರಾಜ್ಯದಲ್ಲಿರುವ ಮರಾಠ ಸಮುದಾಯ ಬಾಂಧವರು ಜಾತಿಯನ್ನು ಮರಾಠವೆಂದು ಕೊಡಿ ; ಮುಖಂಡ ಸುರೇಶ್ ರಾವ್

ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ತೀರ್ಮಾನಿಸಿದ್ದು ರಾಜ್ಯದಲ್ಲಿರುವ ಮರಾಠ ಸಮುದಾಯ ಬಾಂಧವರು ಧರ್ಮವನ್ನು ಹಿಂದು ಎಂದು, ಜಾತಿಯನ್ನು ಮರಾಠವೆಂದು , ಉಪ ಜಾತಿಯನ್ನು ಕುಣುಬಿ ಎಂದು , ಮಾತೃ ಭಾಷೆಯನ್ನು ಮರಾಠಿ ಎಂದು ಸಮೀಕ್ಷೆಗೆ ಬರುವಾಗ ನಮೂದಿಸಬೇಕೆಂದು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ರಾವ್ ಕೋರಿಕೊಂಡರು. ಅವರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ,…

Read More

ಜನಗಣತಿ ಸಮೀಕ್ಷೆಯಲ್ಲಿ ಬೆಲ್ಚಡ ಮತ್ತು ಮಲಯಾಳಿ ಬಿಲ್ಲವ ಸಮಾಜದವರು ‘ತೀಯಾ’ ಜಾತಿಯೆಂದು ನಮೂದಿಸಿ : ತಿಯಾ ಸಮಾಜ್ ನ ಅಧ್ಯಕ್ಷ ಸದಾಶಿವ ಉಳ್ಳಾಲ್

ಮಂಗಳೂರು: ಕರ್ನಾಟಕ ರಾಜ್ಯ ಸರಕಾರದಿಂದ ಇದೇ ತಿಂಗಳ 22 ರಿಂದ ಅಕ್ಟೋಬರ್ 7 ರ ವರೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಜ್ಯಾತೀಯ ಜನಗಣತಿ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ . ಈ ಸಮಯದಲ್ಲಿ ಪ್ರತಿ ಮನೆಮನೆಗೆ ಆಶಾ ಕಾರ್ಯಕರ್ತರು, ಶಿಕ್ಷಕರು ಭೇಟಿ ನೀಡಿ ಜಾತಿ ಪಂಗಡಗಳನ್ನು ಕೇಳುವಾಗ ನಾವು ತೀಯಾ ಎಂದು ಮಾತ್ರ ಜಾತಿ ನಮೂದಿಸುವ ಕಾಲಂ ಸಂಖ್ಯೆ 9 ರಲ್ಲಿ ನಮೂದಿಸಬೇಕು ಎಂದು ಭಾರತೀಯ ತಿಯಾ ಸಮಾಜ್ ನ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ತಿಳಿಸಿದರು. ಅವರು ನಗರದ…

Read More

ನವರಾತ್ರಿಗೆ ಉಡುಗೆರೆಕೊಟ್ಟ ನಂದಿನಿ ಸಂಸ್ಥೆ ….. !

ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 12 ರಿಂದ ಶೇ. 5ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22 ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ಸೇರಿದಂತೆ ನಂದಿನಿ ವಿವಿಧ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್) ನಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಉತ್ಪನ್ನಗಳ ಜಿಎಸ್‌ಟಿ ಕಡಿಮೆ ಮಾಡಲು ಮುಂದಾಗಿದೆ.ಹಾಲಿನ ಉತ್ಪನ್ನಗಳ ಜಿಎಸ್ಟಿ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಸೆ. 22ರಿಂದ ನಂದಿನಿ ಉತ್ಪನ್ನಗಳ ದರ ಶೇಕಡ…

Read More

ಕನಿಲ ಶ್ರೀ ಭಗವತಿ ಕ್ಷೇತ್ರಕ್ಕೆ ನವೀಕರಣಕ್ಕಾಗಿ ಧರ್ಮಸ್ಥಳ ಕ್ಷೇತ್ರದಿಂದ ಆರ್ಥಿಕ ನೆರವು.

ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಡೆಯವರು ಆರ್ಥಿಕ ನೆರವನ್ನು ನೀಡಿದ್ದಾರೆ. ಇಂದು ಬೆಳಗ್ಗೆ ಕ್ಷೇತ್ರ ಪರಿಸರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳು ಹಾಗು ಜನಜಾಗ್ರತಿಯ ಪ್ರಮುಖರು ರೂ.5 ಲಕ್ಷ ಡಿ.ಡಿ ಯನ್ನು ಕ್ಷೇತ್ರ ಸಮಿತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜನಜಾಗ್ರತಿ ವೇದಿಕೆಯ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತೋಡಿ ಮಾತನಾಡಿ ನಿವೇದನೆಗಾಗಿ ಕ್ಷೇತ್ರದಿಂದ ಧರ್ಮಸ್ಥಳಕ್ಕೆ ಹೋದಾಗ ಬಹಳ…

Read More

ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 ಸೆಪ್ಟೆಂಬರ್ 22 ಕ್ಕೆ ಚಾಲನೆ.

ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ “ಶ್ರೀ ದುರ್ಗಾಂಬ ವೇದಿಕೆ” ಯಲ್ಲಿ 2925 ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರ ತನಕ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2025 ಜರುಗಲಿದೆ. ಕನ್ನಡ ಭವನದ ಸಂಸ್ಥಾಪಕ ಶ್ರೀ ವಾಮನ್ ರಾವ್ ಬೇಕಲ್ ಸಾರಥ್ಯದಲ್ಲಿ ಕಳೆದ 12 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾ ಸಂಭ್ರಮದ ಈ ಬಾರಿಯ ಉದ್ಘಾಟನೆ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11 ಗಂಟೆಗೆ ಪಾಂಗೋಡು ಕ್ಷೇತ್ರ ಸಭಾಂಗಣದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ಡಾl ಕೆ.ಎನ್….

Read More

ಬಂಟರು ಮತ್ತು ನಾಡವರು ಪ್ರತ್ಯೇಕ ಜಾತಿಗಳಲ್ಲ ಒಂದೇ; ಮಾಲಾಡಿ ಅಜಿತ್ ಕುಮಾರ್

ಮಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಿದ್ದತೆಯನ್ನು ನಡೆಸುತ್ತಿದ್ದು, ಈ ಸಮೀಕ್ಷೆಯಲ್ಲಿ ಒಂದೇ ಜಾತಿಯಾಗಿರುವ ಬಂಟರುಯಾನೆ ನಾಡವರನ್ನು ಬಂಟರು ಮತ್ತು ನಾಡವರೆಂದು ಪ್ರತ್ಯೇಕ ಜಾತಿಗಳೆಂದು ಗುರುತ್ತಿಸಲಾಗಿದೆ , ನಾವು ಇದನ್ನು ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ಸ್ವೀಕರ್ ಮತ್ತು ಸರಕಾರದದ ಗಮನಕ್ಕೆ ತಂದಿದ್ದೇವೆ . ನಾಡವರು ಮತ್ತು ಬಂಟರು ಅನಾದಿ ಕಾಲದಿಂದಲೂ ಒಂದೇ ಆಗಿರುವ ಕಾರಣ ಪ್ರತ್ಯೇಕವಾಗಿ ಗಣತಿಯಲ್ಲಿ ಜಾತಿಯನ್ನು ನಮೂದು ಮಾಡಬಾರದೆಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ…

Read More

ಗ್ರಾಂಡ್ ರಾವ್ಸ್ ಚೆಸ್ಸ್ ಕಾರ್ನರ್ ವತಿಯಿಂದ ಅಂತರಾಷ್ಟ್ರೀಯ ಫಿಡೆ ರೇಟೆಡ್ ಚೆಸ್ ಫೆಸ್ಟಿವಲ್ ಪಂದ್ಯಕೂಟ

ಮಂಗಳೂರು:ಗ್ರಾಂಡ್ ರಾವ್ಸ್ ಚೆಸ್ಸ್ ಕಾರ್ನರ್ ವತಿಯಿಂದ ಅಂತರಾಷ್ಟ್ರೀಯ ಫಿಡೆ ರೇಟೆಡ್ ಚೆಸ್ ಫೆಸ್ಟಿವಲ್ ಪಂದ್ಯಕೂಟವು ಸೆಪ್ಟೆಂಬರ್ 25 ರಿಂದ 30 ರ ತನಕ ಮಂಗಳೂರಿನ ಶಾರದಾ ವಿದ್ಯಾಲಯದ ಭುವರಹ ಅಟ್ರಿಯಂ ನಲ್ಲಿ ನಡೆಯಲಿದೆ ಎಂದು ಆರ್.ಸಿ.ಸಿ ಸಂಸ್ಥೆಯ ಸಲಹೆಗಾರರು ಹಾಗೂ ಸಂಘಟಕರೂ ಆಗಿರುವ ಡಾ ಶುಭಾನಂದ್ ರಾವ್ ತಿಳಿಸಿದರು. ಅವರು ಪತ್ರಿಕಾಭವನದಲ್ಲಿ ನಡೆದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಸಿ ಸಿ ಯನ್ನು 2012 ರಲ್ಲಿ ಐ ಎಂ ಶರಣ್ ರಾವ್ ಮತ್ತು ಡ ಬ್ಲ್ಯೂ…

Read More

ಸೆಪ್ಟೆಂಬರ್ -23 ರಂದು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ 2025

ಮಂಗಳೂರು: ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕಳೆದ ಹಲವು ವರ್ಷಗಳಿಂದ ತಲಪಾಡಿ ಪರಿಸರದಲ್ಲಿ ಸಾರ್ವಜನಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ತಿಂಗಳಿಗೆ ಕನಿಷ್ಠ ಎರಡರಂತೆ ಆರೋಗ್ಯ ಅರಿವು ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು ಇದೇ ತಿಂಗಳ ತಾರೀಕು 23 ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ೨೦೨೫ ನ್ನು ಕಾಲೇಜಿನಲ್ಲಿ ಆಯೋಜಿಸಿದೆ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಬಿ ಪುರಾಣಿಕ್ ತಿಳಿಸಿದರು. ಪತ್ರಿಕಾ…

Read More
error: Content is protected !!