ಫೆಬ್ರವರಿ ಯಲ್ಲಿ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026.ಚಿಂತನೆ

ಫೆಬ್ರವರಿ ಯಲ್ಲಿ ಡಾ. ವಾಮನ್ ರಾವ್ ಬೇಕಲ್ ಸ್ಥಾಪಿತ “ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ” ಸ್ಥಾಪನ ದಿನ 02.02.2025.ಪ್ರಯುಕ್ತ ಪ್ರಥಮ ವಾರ್ಷಿಕೋತ್ಸವದ ಭಾಗವಾಗಿ ಮಾತೃ ಸಂಸ್ಥೆ ಕನ್ನಡ ಭವನ ಪ್ರಾಯೋಜಕತ್ವದಲ್ಲಿ “ಕಾಸರಗೋಡು ಚುಟುಕು ಸಾಹಿತ್ಯ ಸಮ್ಮೇಳನ 2026.”ಆಯೋಜಿಸುವ ಆಲೋಚನೆ ಮಾಡುತ್ತಿದೆ. ಫೆಬ್ರವರಿ ತಿಂಗಳು 15ರಿಂದ 28ರ ಒಳಗೆ ಬರುವ ಒಂದು ಬಾನುವಾರ ಸಮ್ಮೇಳನ ಆಯೋಜಿಸುವ ಬಗ್ಗೆ ಚಿಂತನ ನಡೆಯುತ್ತಿದೆ. ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಘಟಕ, ದ….

Read More

ರೀಲ್ಸ್ ವೈರಲ್ ಸ್ಟಾರ್ ಆಶಾ ಪಂಡಿತ್ ಇನ್ನಿಲ್ಲ … !

ಮಂಗಳೂರು:ತನ್ನ ಅಭಿಮಾನಿಗಳನ್ನು ಬೈಯುತ್ತಲೇ ಇನ್ಸ್ಟಾಗ್ರಾಮ್ ನಲ್ಲಿ ಹವಾ ಎಬ್ಬಿಸಿದ್ದ ನಾಗುರಿ ನಿವಾಸಿ ಆಶಾ ಪಂಡಿತ್ ಇಂದು ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ . ಇನ್ಸ್ಟಾ ಗ್ರಾಮ್ ನಲ್ಲಿ ಚಿತ್ರ ವಿಚಿತ್ರ ಬೈಗುಳದಿಂದ ಪ್ರಸಿದ್ಧಿ ಪಡೆದಿದ್ದ ಅವರು ಪಡೀಲ್ ಬಳಿ ಪುಟ್ಟ ಗೂಡಂಗಡಿ ಹೊಂದಿದ್ದರು. ನಿನ್ನೆ ರಾತ್ರಿ ವಾಂತಿ ಮಾಡಿದ್ದು ಇಂದು ನಸುಕಿನ ಜಾವ ಹೃದಯಾಘಾತಕ್ಕೆ ತುತ್ತಾಗಿ ಅಂಗಳದಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು ಎಂದು ಕುಟುಂಬ ಮೂಲಗಳು ಹೇಳಿವೆ.

Read More

ಕುಂಬಳೆ ಆರಿಕ್ಕಾಡಿ ಹೆದ್ದಾರಿ ಕಾಮಗಾರಿ ಅಪೂರ್ಣ: ಟೋಲ್ ಸಂಗ್ರಹಕ್ಕೆ ಹೈಕೋರ್ಟ್ ಕಠಿಣ ಪ್ರಶ್ನೆ, ವಿಚಾರಣೆ 28ಕ್ಕೆ ಮುಂದೂಡು

ಕುಂಬಳೆ ಆರಿಕ್ಕಾಡಿಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಲು ಹೇಗೆಂದು ಹೈಕೋರ್ಟ್ ಪ್ರಶ್ನಿಸಿದೆ.ಕ್ರಿಯಾ ಸಮಿತಿಯ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಅವಶ್ಯಕ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಟೋಲ್ ಸಂಗ್ರಹಿಸುವುದು ಜನರಿಗೆ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಹೇಳಿದೆ. ಇದೇ ವೇಳೆ, ಆಯೋಗ ನೇಮಿಸಲು ಅನುವು ನೀಡಬೇಕೆಂದು ನ್ಯಾಯವಾದಿ ಸಜನ್ ಇಬ್ರಾಹಿಂ ಆಗ್ರಹಿಸಿದ್ದಾರೆ. ಈ ಪ್ರಕರಣವನ್ನು ಜಸ್ಟೀಸ್ ಬಚ್ಚು ಕುರ್ಯನ್ ಥೋಮಸ್ ನೇತೃತ್ವದ ಪೀಠ ಪರಿಗಣಿಸಿದ್ದು, ಅರ್ಜಿಯ ಮೇಲಿನ ವಾದವನ್ನು 28 ರಂದು ಮುಂದೂಡಿದೆ.

Read More

ಮಂಜೇಶ್ವರ: ಮದ್ರಸ ವಿದ್ಯಾರ್ಥಿ ನಾಪತ್ತೆ – ಪೊಲೀಸರಿಂದ ತನಿಖೆ ಆರಂಭ

ಮಂಜೇಶ್ವರ : ಮದ್ರಸದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೊಸೋಟು ಸತ್ಯಡ್ಕ ಮುತ್ತುಕುಂಜ ಹೌಸ್‌ನ ಅಬೂಬಕ್ಕರ್‌ರ ಪುತ್ರ ಯೂಸಫ್ ಖಲಂದರ್ ಬಾಬ (14) ನಾಪತ್ತೆ ಯಾದ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಎರಡು ದಿವಸದಿಂದ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಬಳಿಕ ಪುತ್ರ ಮರಳಿ ಬಂದಿಲ್ಲವೆಂದು ತಿಳಿಸಿ ಅಬೂ ಬಕ್ಕರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯ ಮೊಬೈಲ್ ಫೋನ್ ಮನೆಯಲ್ಲೇ ಇದೆಯೆಂದೂ ದೂರಿನಲ್ಲಿ ತಿಳಿಸಲಾಗಿದೆ.

Read More

ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ ₹30 ಲಕ್ಷ ನಗದು ವಶ: KSRTC ಬಸ್‌ನಿಂದ ದಾಖಲೆರಹಿತ ಹಣ ಪತ್ತೆ, ವ್ಯಕ್ತಿ ಕಸ್ಟಡಿಗೆ

ಮಂಜೇಶ್ವರ:ದಿನಾಂಕ 22.01.2026 ರಂದು ಬೆಳಿಗ್ಗೆ 9.30 ಗಂಟೆಗೆ, ನಿಯಮಿತ ವಾಹನ ಪರಿಶೀಲನೆಯ ಸಂದರ್ಭದಲ್ಲಿ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ, ತಲಪಾಡಿ ಯಿಂದ ಕಾಸರಗೋಡು ಕಡೆಗೆ ಬರುತ್ತಿದ್ದ KSRTC ಬಸ್ನಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ₹30,00,000 ನಗದು ಹಣವನ್ನು ಎಕ್ಸೈಸ್ ಅಧಿಕಾರಿಗಳು ಪತ್ತೆಹಚ್ಚಿದರು. ಈ ಸಂಬಂಧ ಮಲಪ್ಪುರಂ ಜಿಲ್ಲೆ, ಪೆರಿಂಥಲ್‌ಮಣ್ಣ ತಾಲ್ಲೂಕು, ವಡಕ್ಕಂಕಾರ ಗ್ರಾಮ, ಮಂಕಡ ವಡಕ್ಕಂಕಾರ ದೇಶ, ಏರುಂಬತ್ ಮನೆ ನಿವಾಸಿ **ಅಬ್ದುಲ್ ರಹ್ಮಾನ್ ಅವರ ಪುತ್ರ ಹಂಸ (64 ) ಎಂಬ ವ್ಯಕ್ತಿಯನ್ನು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಶಿಜಿಲ್…

Read More

ನಿರ್ಲಕ್ಷ್ಯದ ವಿರುದ್ಧ ತೀಯಾ ಕ್ಷೇಮ ಸಭೆ ಪ್ರತಿಭಟನೆಗೆ

​ನೀಲೇಶ್ವರಂ: ತೀಯಾ ಸಮುದಾಯವು ಎದುರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಆರಂಭಿಸುವುದಾಗಿ ತೀಯಾ ಕ್ಷೇಮ ಸಭೆಯ ಮುಖಂಡರಾದ ರವಿ ಕುಳಂಗರ, ನಾರಾಯಣನ್ ಮಯ್ಯಿಲ್, ಸತೀಶನ್ ಕುವತ್ತೋಟ್ಟಿ, ಕೆ.ಪಿ.ಪಿ ಕುಂಞಿಕೋರನ್ ಮತ್ತು ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರ್ ಹಾಗೂ ನಾಗೇಶ್ ಕುಂಬಳೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ​ಪ್ರತಿಭಟನೆಯ ವಿವರಗಳು ​ಪ್ರತಿಭಟನೆಯ ಮೊದಲ ಹಂತವಾಗಿ ‘ತೀಯಾ ಸಮುದಾಯದ ಹಕ್ಕುಗಳ ಘೋಷಣಾ ಉತ್ತರ ವಲಯ ಯಾತ್ರೆ’ಯನ್ನು ಜನವರಿ 25 ರಿಂದ 28 ರವರೆಗೆ ಆಯೋಜಿಸಲಾಗಿದೆ. ಜನವರಿ 25 ರಂದು ಬೆಳಿಗ್ಗೆ 9…

Read More

ವಿಟ್ಲ;ಕೊಳ್ನಾಡು ಗ್ರಾಮಪಂಚಾಯತ್ ಮಕ್ಕಳ, ಮಹಿಳಾ ಹಾಗೂ ಅಂಗವಿಕಲರ ಗ್ರಾಮಸಭೆ

ಕೊಳ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಮಕ್ಕಳ, ಮಹಿಳಾ ಹಾಗೂ ಅಂಗವಿಕಲರ ಗ್ರಾಮಸಭೆ ಫೆಬ್ರವರಿ 22ರಂದು ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರಿಬೈಲಿನ ವಿದ್ಯಾರ್ಥಿನಿ ಅಪ್ರಾ ವಹಿಸಿಕೊಂಡು ಗಮನಸೆಳೆದರು. ಸಭೆಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸಭೆಯಲ್ಲಿ ಮಕ್ಕಳಿಂದ ತಮ್ಮ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ…

Read More

ಮಂಜೇಶ್ವರದಲ್ಲಿ ಮರಳು ಮಾಫಿಯಾ ವಿರುದ್ಧ ಪೊಲೀಸ್ ಕ್ರಮ: ಅನಧಿಕೃತ ಮರಳು ಸಾಗಾಟದ ವಾಹನ ವಶ, ಆರೋಪಿಗಳು ಪರಾರಿ

ಮಂಜೇಶ್ವರ: ಮರಳು ಮಾಫಿಯಾಗಳ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಮರಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಬೆನ್ನಟ್ಟಿ ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದವರು ಓಡಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕೊಯಿಪ್ಪಾಡಿ ಬದ್ರಿಯಾ ನಗರದ ಕೆ.ಬೆಡ್ ತಹ್ವನೂನ್ ಹಾಗೂ ಜೊತೆಗಿದ್ದ ಜುನೈದ್ ಎಂಬಿ ವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುಂಬಳೆ ಎಸ್‌ಐ ಕೆ. ಶ್ರೀಜೇಶ್, ಎಎಸ್‌ಐ ಸುರೇಶ್, ಸಿಪಿಒ ಸಂದೀಪ್ ಎಂಬಿವರು ನಿನ್ನೆ ರಾತ್ರಿ ಪಟ್ರೋಲಿಂಗ್ ನಡೆಸುತ್ತಿರುವ ಮಧ್ಯೆ ಮೊಗ್ರಾಲ್ ಹೊಳೆಯಿಂದ…

Read More

ಬದಿಯಡ್ಕದಲ್ಲಿ ಗೃಹಿಣಿ ಹತ್ಯೆ: ಕೃತ್ಯದ ಸಂಪೂರ್ಣ ವಿವರ ನೀಡಿದ ಆರೋಪಿ

ಬದಿಯಡ್ಕ:ಕುಂಡಾಜೆ ಅಜಿಲದಲ್ಲಿ ಗೃಹಿಣಿ ಪುಷ್ಪಲತಾ ವಿ. ಶೆಟ್ಟಿ (70) ಅವರನ್ನು ಹತ್ಯೆ ಮಾಡಿ ಚಿನ್ನದ ಸರ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಡು ಕಡಿತ ಕಾರ್ಮಿಕ ಪರಮೇಶ್ವರ ಕೆ. (ರಮೇಶ್ ನಾಯ್ಕ್–48) ಅವರನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಕಾಸರಗೋಡು ನ್ಯಾಯಾಲಯವು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಹತ್ಯೆ ನಡೆದ ಪುಷ್ಪಲತಾ ಶೆಟ್ಟಿ ಅವರ ಮನೆಗೆ ಕರೆತಂದು ಪೊಲೀಸರು ಸ್ಥಳ ಮಹಜರು ಹಾಗೂ ಸಾಕ್ಷ್ಯ ಸಂಗ್ರಹ ನಡೆಸಿದರು.ಹತ್ಯೆಯನ್ನು ಹೇಗೆ ನಡೆಸಿದ್ದಾನೆ ಎಂಬುದನ್ನು ಆರೋಪಿಯು…

Read More

ಬದಿಯಡ್ಕದಲ್ಲಿ ಮದುವೆ ಭರವಸೆ ನೀಡಿ ಗಲ್ಫ್ ಉದ್ಯೋಗಿಯ ಪತ್ನಿಗೆ ಕಿರುಕುಳ: ಮೀನು ವ್ಯಾಪಾರಿ ಬಂಧನ

ಬದಿಯಡ್ಕ: ಬದಿಯಡ್ಕದಲ್ಲಿ ಗಲ್ಫ್ ಉದ್ಯೋಗಿಯ ಪತ್ನಿಗೆ ಮದುವೆ ಭರವಸೆ ನೀಡಿ ಕಿರುಕುಳ ನೀಡಿದ ಆರೋಪದ ಮೇಲೆ ಮೀನು ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ಬೀಜಂತಡ್ಕ ನಿವಾಸಿ ಅಬ್ದುಲ್ ಖಾದರ್ (45) ಬಂಧಿತ ಆರೋಪಿ. 38 ವರ್ಷದ ಯುವತಿಯ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿದ್ದಾರೆ. 2025 ಆಗಸ್ಟ್ 1ರಿಂದ ಆರೋಪಿಯು ಮದುವೆ ಭರವಸೆ ನೀಡಿ ಕಿರುಕುಳ ನೀಡಿದ್ದು, ದೃಶ್ಯಗಳನ್ನು ಪತಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ ಎಂದು ದೂರಲಾಗಿದೆ. ನ್ಯಾಯಾಲಯ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಿದೆ.

Read More
error: Content is protected !!