ಕಾಸರಗೋಡು ಮಂಜೇಶ್ವರ ಸೇರಿದಂತೆ ಐದು ವಿಧಾನ ಸಭಾ ಕ್ಷೇತ್ರ ಸಮೀಕ್ಷೆ: ಗಡಿ ಜಿಲ್ಲೆಯಲ್ಲಿ ಹಳೆ ಆಟ, ಹಳೆ ಲೆಕ್ಕಾಚಾರ? ಐದು ಚಾನೆಲ್‌ಗಳ ಭವಿಷ್ಯ ಹೀಗಿದೆ.

​ ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವಂತೆಯೇ ಹೊರಬಿದ್ದಿರುವ ಮಲಯಾಳಂನ ಪ್ರಮುಖ ಐದು ಸುದ್ದಿವಾಹಿನಿಗಳ ಸಮೀಕ್ಷಾ ವರದಿಗಳು ಜಿಲ್ಲೆಯಲ್ಲಿ ಹಳೆ ಫಲಿತಾಂಶವೇ ಮರುಕಳಿಸುವ ಮುನ್ಸೂಚನೆ ನೀಡಿವೆ. ಏಶ್ಯಾನೆಟ್, ಮನೋರಮಾ, ಮಾತೃಭೂಮಿ, ಬಿಗ್ ಟಿವಿ ಮತ್ತು ರಿಪೋರ್ಟರ್ ಚಾನೆಲ್‌ಗಳ ಸಮೀಕ್ಷೆಯ ಪ್ರಕಾರ, ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಎಡರಂಗ 3 ಮತ್ತು ಯುಡಿಎಫ್ 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿವೆ. ​ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬದಲಾಗದ ಹವಾ!​ಎಲ್ಲರ ಕಣ್ಣು ನೆಟ್ಟಿರುವ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳಲ್ಲಿ ಈ ಬಾರಿಯೂ ಯಾವುದೇ…

Read More

ಲೀಗ್ ನಾಯಕರ ವಿರುದ್ಧ ಅಸಮಾಧಾನ: ಮಂಜೇಶ್ವರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಬ್ದುಲ್ಲ ಮಾಸ್ಟರ್ ಕಣಕ್ಕೆ

ಕುಂಬಳೆ (ಕಾಸರಗೋಡು):ಮುಸ್ಲಿಂ ಲೀಗ್ ನಾಯಕರು ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲವೆಂದು ಆರೋಪಿಸಿ, ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಬ್ದುಲ್ಲ ಮಾಸ್ಟರ್ ಕಣ್ಣೂರು ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅಲ್ಪ ಮತಾಂತರದಲ್ಲಿ ಜಯಗಳಿಸಿದ್ದ ಮುಸ್ಲಿಂ ಲೀಗ್ ಪಕ್ಷವನ್ನು ಮತ್ತೆ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸುತ್ತಿರುವ ಸಂದರ್ಭದಲ್ಲೇ, ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಅಬ್ದುಲ್ಲ ಮಾಸ್ಟರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸುಮಾರು 14 ವರ್ಷಗಳ ಹಿಂದೆ ತನ್ನ ಪುತ್ರ ಮೊಹಮ್ಮದ್ ಇರ್ಷಾದ್ ಮೂಲಕ, ಲೀಗ್…

Read More

ಗಡಿನಾಡ ಕನ್ನಡ ಸೇವೆಗೆ ಡಾ. ವಾಮನ್ ರಾವ್ ಬೇಕಲ್‌ಗೆ ‘ಹೊಯ್ಸಳ ಪ್ರಶಸ್ತಿ–2025’ ಗೌರವ

ಕಾಸರಗೋಡು/ಮೈಸೂರು:ಗಡಿನಾಡ ಕಾಸರಗೋಡಿನಲ್ಲಿ ಕನ್ನಡ ಸೇವೆಗಾಗಿ ನಿರಂತರವಾಗಿ ದುಡಿಯುತ್ತಿರುವ ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅವರಿಗೆ ಪ್ರತಿಷ್ಠಿತ “ಹೊಯ್ಸಳ ಪ್ರಶಸ್ತಿ–2025” ಪ್ರದಾನ ಮಾಡಲಾಗಿದೆ. ಮೈಸೂರಿನ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏಪ್ರಿಲ್ 5, 2026ರಂದು ನಡೆದ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು. ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಪುಸ್ತಕಪ್ರೇಮಿ ಅಂಕೆಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ…

Read More

​ಬ್ಯಾಲೆಟ್ ಬಾಕ್ಸ್‌ನಿಂದ ಭವಿಷ್ಯದವರೆಗೆ: 2026ರ ಮಹಾ ಚುನಾವಣೆಯ ಸಮಗ್ರ ನೋಟ

​ಭಾರತದ ಪ್ರಜಾಪ್ರಭುತ್ವದ ಆಕಾಶದಲ್ಲಿ ಈಗ ಚುನಾವಣಾ ನಕ್ಷತ್ರಗಳು ಮಿನುಗುತ್ತಿವೆ. ಅಸ್ಸಾಂನ ಬ್ರಹ್ಮಪುತ್ರ ನದಿಯ ತೀರದಿಂದ ಕನ್ಯಾಕುಮಾರಿಯ ಹಿಂದೂ ಮಹಾಸಾಗರದ ಅಲೆಗಳವರೆಗೆ ಒಂದು ಹೊಸ ರಾಜಕೀಯ ಸ್ಪಂದನ ಕೇಳಿಬರುತ್ತಿದೆ. ಇದು ಕೇವಲ ಮತದಾನವಲ್ಲ; ಇದು 17.4 ಕೋಟಿ ಜನರ ಆಶೋತ್ತರಗಳು ಬ್ಯಾಲೆಟ್ ಬಾಕ್ಸ್ (EVM) ಸೇರಿ, ದೇಶದ ಭವಿಷ್ಯವನ್ನು ಬರೆಯಲಿರುವ ‘ಮಹಾ ಮನ್ವಂತರ’.ರಣರಂಗದ ವೇಳಾಪಟ್ಟಿ : ಐದು ದಿಕ್ಕುಗಳ ದಿಕ್ಸೂಚಿ​ಭಾರತೀಯ ಚುನಾವಣಾ ಆಯೋಗವು ಈಗಾಗಲೇ ರಣಕಹಳೆ ಮೊಳಗಿಸಿದ್ದು, ಐದು ಪ್ರಮುಖ ರಾಜ್ಯಗಳಲ್ಲಿ ಏಪ್ರಿಲ್ ತಿಂಗಳು ನಿರ್ಣಾಯಕವಾಗಲಿದೆ:​ಅಸ್ಸಾಂ, ಕೇರಳ ಮತ್ತು…

Read More

ಗಣೇಶ

ನಾನು ಕುಶ್ವಂತ್ ಸಿಂಗ್, ಅಮೃತ್ಸರ್ ನ ರಾಜಸಾನಿ ಹಳ್ಳಿಯಲ್ಲಿ ಎಲೆಕ್ಟ್ರಿಸಿಟಿ ಆಫೀಸಿನಲ್ಲಿ ಕೆಲಸದಲ್ಲಿದ್ದೇನೆ. ದಿನಾ ಆಫೀಸ್ ಗೆ ಹೋಗ್ಬೇಕಾದ್ರೆ ನಮ್ಮ ಊರಿನ ರೈಲ್ವೆ ಸ್ಟೇಷನ್ ಹತ್ರವೇ ಹೋಗ್ಬೇಕು. ಒಂದು ದಿನ ಒಬ್ಬ ಹುಡುಗನನ್ನು ಸ್ಟೇಷನ್ ಬಳಿ ನೋಡಿದೆ . ವಯಸ್ಸು ಸುಮಾರು 20 ರಿಂದ 25 ಇರಬಹುದೇನೋ. ತನ್ನ ಪಾಡಿಗೆ ತಾನೇ ಕೂತಿದ್ದ , ನೋಡುವಾಗ ಊರಿಗೆ ಹೊಸಬ, ಇಲ್ಲಿ ಅವನಿಗೆ ಯಾರು ಪರಿಚಯ ಇದ್ದಂತೆ ಇರಲಿಲ್ಲ. ಮಾರನೆಯ ದಿನ ನೋಡಬೇಕಾದರೆ ಆ ಹುಡುಗ ಅಲ್ಲಿ ಇದ್ದಾನೆ!…

Read More

ಡಿಜಿಟಲ್ ಸೆರೆಮನೆಯಲ್ಲಿ ಮನುಷ್ಯತ್ವದ ಹುಡುಕಾಟ

ನಮ್ಮ ಅಂಗೈಯೊಳಗಿನ ಪುಟ್ಟ ಪರದೆ ಇಂದು ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಆದರೆ, ಆ ವರ್ಚುವಲ್ ಜಗತ್ತನ್ನು ನೋಡುವ ಆತುರದಲ್ಲಿ ನಾವು ನಮ್ಮೊಳಗಿನ “ಅನಂತ ಶಾಂತಿ”ಯನ್ನು ಹರಾಜು ಹಾಕುತ್ತಿದ್ದೇವೆಯೇ? ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟವಿದು. ​೧. ಕವಲು ಹಾದಿಯಲ್ಲಿ ಏಕಾಗ್ರತೆಯ ಕನ್ನಡಿ ​ಒಂದು ಕಾಲದಲ್ಲಿ ಓದಿನ ಹಸಿವು ನಮ್ಮನ್ನು ಗಂಟೆಗಟ್ಟಲೆ ಪುಸ್ತಕದ ಪುಟಗಳಲ್ಲಿ ಬಂಧಿಸಿಡುತ್ತಿತ್ತು. ಅಲ್ಲಿ ಕಲ್ಪನೆಗಳಿದ್ದವು, ಮೌನವಿತ್ತು ಮತ್ತು ವಿಚಾರಗಳ ಆಳವಿತ್ತು. ಆದರೆ ಇಂದು? ಪ್ರತಿ ಐದು ನಿಮಿಷಕ್ಕೊಮ್ಮೆ ಮೊಳಗುವ ಸ್ಮಾರ್ಟ್‌ಫೋನ್‌ನ ‘ಟಿಂಗ್’ ಸದ್ದಿಗೆ ನಮ್ಮ ಮಿದುಳು…

Read More

ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದಲ್ಲಿ 55ನೇ ಪ್ರತಿಷ್ಠಾ ಮಹೋತ್ಸವ ವೈಭವ

ಕಾಸರಗೋಡು:ಜಿಲ್ಲೆಯ ಐತಿಹಾಸಿಕ ಚಂದ್ರಗಿರಿ ಕೋಟೆ ಪರಿಸರದಲ್ಲಿರುವ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ವೈಭವದಿಂದ ಜರಗಿತು. ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ, ಕೀಕಾಂಗೋಡು ಪನ್ನಿಪಳ್ಳಿ ಬ್ರಹ್ಮಶ್ರೀ ಶ್ರೀಧರ ಕಾಯರ್ ತ್ತಾಯರ ನೇತೃತ್ವದಲ್ಲಿ, ಚಂದ್ರಗಿರಿ ಅವಿನಾಶ್ ಭಟ್ ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನೆರವೇರಿದವು. ಏಪ್ರಿಲ್ 3ರಿಂದ 5ರವರೆಗೆ ನಡೆದ ಈ ಮಹೋತ್ಸವದ ಅಂಗವಾಗಿ ಕುಲಪುರೋಹಿತರಾದ ನಾಗೇಶ್ ಭಟ್ ತಲ್ಲಾಣಿ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹರಿಸೇವೆ ಹಾಗೂ…

Read More

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ: ಉಪಚುನಾವಣೆಯಲ್ಲಿ ಸೋಲಿಸಲು ಕರೆ – ಮಂಜುನಾಥ್ ಭಂಡಾರಿ

ಬಾಗಲಕೋಟೆ/ದಾವಣಗೆರೆ:ರಾಜ್ಯದಲ್ಲಿ ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಂತೆ ಕರೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್‌ಪಿಜಿ ಗ್ಯಾಸ್ ಕೊರತೆಯಿಂದ ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಟೋ ಚಾಲಕರಿಗೂ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅವರು ಆರೋಪಿಸಿದರು. “ಬಿಜೆಪಿ ಕಾರ್ಯಕರ್ತರೂ ಸಹ ಈ ಬೆಲೆ ಏರಿಕೆಯಿಂದ…

Read More

ಉರ್ವಮಾರ್ಕೆಟ್ ಉಪಕೇಂದ್ರದಲ್ಲಿ ನಿರ್ವಹಣೆ: ಇಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಮಂಗಳೂರು:ನಗರದ 33/11 ಕೆವಿ ಉರ್ವಮಾರ್ಕೆಟ್ ಜಿಐಎಸ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಇಂದು (07.04.2026) ಬೆಳಿಗ್ಗೆ 10.00 ರಿಂದ ಸಂಜೆ 5.30ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಡೊಮಿನಿಕ್ ಚರ್ಚ್ ಮತ್ತು ಹೊಯಿಗೆಬೈಲ್ ಫೀಡರ್ ವ್ಯಾಪ್ತಿಯಲ್ಲಿ:ಲೈನ್ ನಿರ್ವಹಣೆ, ಟ್ರೀ ಕಟಿಂಗ್ ಹಾಗೂ ತುರ್ತು ಕಾಮಗಾರಿಗಳ ಕಾರಣ ಗೋಕುಲ್ ಹಾಲ್, ಅಶೋಕನಗರ, ಆಂಟೋನಿ ಕಾಲೋನಿ, ಗೋಲ್ಡನ್ ಎಂಪಾಯರ್ ರೋಡ್, ಕುಕ್ಕಾಡಿ, ಬಾಪೂಜಿನಗರ, ಸುಂಕದಕಟ್ಟೆ, ರಘು ಬಿಲ್ಡಿಂಗ್, ಕೋಡಿಕಲ್ ಕಟ್ಟೆ, ಶಾಂತಿ ಲೇನ್, ಎಸ್.ಎನ್.ಡಿ.ಪಿ, ಕಂಚಿಗಾರ ಗುತ್ತು, ನಾಗಬ್ರಹ್ಮ…

Read More

ಬಲ್ಮಠ ಮಹಿಳಾ ಕಾಲೇಜಿನಲ್ಲಿ 118ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಯಶಸ್ವಿ

118ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಅಮೃತ ಪ್ರಕಾಶ ಪತ್ರಿಕೆ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಜಂಟಿ ಆಶ್ರಯದಲ್ಲಿ 118ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಏಪ್ರಿಲ್ 6 ರಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೋಪಾಲಕೃಷ್ಣ .ಕೆ .ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ಎಸ್ .ವಿ .ಎಸ್ .ಟೆಂಪಲ್ ಪದವಿ ಪೂರ್ವ ಕಾಲೇಜು ಬಂಟ್ವಾಳ ಪ್ರಾಂಶುಪಾಲರಾದ ಕೆ.ಎನ್ .ಗಂಗಾಧರ ಆಳ್ವ…

Read More
error: Content is protected !!