ಗುರುಪುರ ಕಂಬಳದಲ್ಲಿ ಕ್ರೀಡೆಗೂ ಮೀರಿದ ಮಾನವೀಯತೆ: ₹25 ಲಕ್ಷ ಸಹಾಯಧನ ವಿತರಣೆ
ತುಳುನಾಡಿನ ಸಂಪ್ರದಾಯಕ ಕ್ರೀಡೆ ಕಂಬಳವು ಗುರುಪುರ ಮಾಣಿಬೆಟ್ಟು ಗುತ್ತಿನಲ್ಲಿ ಶನಿವಾರ ನಡೆದ ಮೂಳೂರು-ಅಡ್ಡರು ಜೋಡುಕರೆ ಗುರುಪುರ ಕಂಬಳವು ಈ ವಿಶಿಷ್ಟ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಅವರ ನೇತೃತ್ವದಲ್ಲಿ 3ನೇ ವರ್ಷದ ಈ ಜಾನಪದ ಕ್ರೀಡಾಕೂಟಕ್ಕೆ ಧ್ವಜಾರೋಹಣದ ಮೂಕಕ ಚಾಲನೆ ಸಿಕ್ಕಿದೆ. ಈ ಬಾರಿಯ ಕಂಬಳದ ವಿಶೇಷತೆಯೆಂದರೆ ಅದು ಮೆರೆದ ಮಾನವೀಯತೆ. ಕ್ರೀಡಾಕೂಟದ ಸಂದರ್ಭದಲ್ಲಿ ಅಶಕ್ತ ಕುಟುಂಬಗಳ ಹೆಣ್ಣು ಮಕ್ಕಳ ವಿವಾಹ, ಬಡವರಿಗೆ ಮನೆ ನಿರ್ಮಾಣ…