ಕೃಷಿ ನಾಶ ಮತ್ತು ಉಪ್ಪುನೀರಿನ ಭೀತಿ: ಇಚ್ಚಿಲಂಕೋಟೆಯ ರೈತರು ಸಂಕಷ್ಟದಲ್ಲಿ
ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್ನ ಇಚ್ಚಿಲಂಕೋಟೆ ಪ್ರದೇಶವು ತೀವ್ರ ಕೃಷಿ ನಾಶದತ್ತ ಸಾಗುತ್ತಿದ್ದು, ರೈತರು ಭಾರಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪರಂಪರಾಗತವಾಗಿ ಅಕ್ಕಿ, ಅಡಕೆ, ಮೆಣಸು ಮೊದಲಾದ ಬೆಳೆಗಳನ್ನು ಬೆಳೆಸಿಕೊಂಡು ಬಂದ ನೂರಾರು ರೈತರು ಇಂದು ಏನು ಮಾಡಬೇಕೆಂದು ತಿಳಿಯದೆ ಸಂದಿಗ್ದತೆಯಲ್ಲಿದ್ದಾರೆ ಸಮೀಪದ ತೋಡು ಮತ್ತು ನದಿಗಳಿಂದ ಕೃಷಿ ಭೂಮಿಗೆ ಉಪ್ಪುನೀರು ನುಗ್ಗುತ್ತಿರುವುದರಿಂದ ತೆಂಗು, ಅಡಕೆ ಮುಂತಾದ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಮಣ್ಣಿನ ಲವಣಾಂಶ ಹೆಚ್ಚಾಗುವುದರಿಂದ ಸಸ್ಯಗಳು ಒಣಗಿ ಸಾಯುವ ಸ್ಥಿತಿ ಉಂಟಾಗಿದೆ.ಬೇಸಿಗೆ ತೀವ್ರವಾಗುತ್ತಿರುವಂತೆ ಕೃಷಿಗೆ ಅಗತ್ಯವಾದ ಶುದ್ಧ…