ಮಾನವೀಯತೆ ಮೆರೆದ ತಲಪಾಡಿ ಬಿಎಂಎಸ್ ಲಾಟರಿ ಮಾರಾಟಗಾರರು: ಕ್ಯಾನ್ಸರ್ ಪೀಡಿತನಿಗೆ ಆರ್ಥಿಕ ನೆರವು
ಮಾನವೀಯತೆಯ ಮೆರುಗು ತೋರಿದ ತಲಪಾಡಿ ಬಿಎಂಎಸ್ ಕೇರಳ ಲಾಟರಿ ಮಾರಾಟಗಾರರು, ಕ್ಯಾನ್ಸರ್ ಪೀಡಿತನಿಗೆ ಆರ್ಥಿಕ ನೆರವು ನೀಡಿ ಸಮಾಜ ಸೇವೆಗೆ ಮಾದರಿಯಾದರು. ಕಾಸರಗೋಡು ತಾಲೂಕಿನ ತಲಪಾಡಿ ಗ್ರಾಮದ ಮಾಧವ ಅವರ ಪುತ್ರ ಪ್ರದೀಪ್ ಅವರು ಕೊರಳು ಭಾಗದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದು, ಮುಂದಿನ ಚಿಕಿತ್ಸೆಗೆ ಸಹಾಯ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ತಲಪಾಡಿ ಬಿಎಂಎಸ್ ಲಾಟರಿ ಮಾರಾಟಗಾರರ ಸಂಘದ ಸದಸ್ಯರು ಒಟ್ಟುಗೂಡಿ ಸಂಗ್ರಹಿಸಿದ ನೆರವುಧನವನ್ನು ಶ್ರೀ ಭ್ರಾಮರಿ…