ಮಂಜೇಶ್ವರ: ಬಿರುಸಿನ ಮಳೆ ಸುರಿದು ವಿವಿಧೆಡೆಗಳಲ್ಲಿ ಹಾನಿ
ಮಂಜೇಶ್ವರ ಹೊಸಂಗಡಿ ಎಂ ಎಂ ಪ್ಲಾಜದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಕಟ್ಟಡದ ಕೆಳಭಾಗದಲ್ಲಿರುವ ಎಲ್ಲಾ ವ್ಯಾಪಾರ ಕೇಂದ್ರಗಳು ಜಲಾವೃತಗೊಂಡಿದೆ. ಅದೇ ರೀತಿ ಪೊಸೋಟು ರಾಷ್ಟ್ರೀಯ ಹೆದ್ದಾರಿಯ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಮೀಪದ ಅಂದುಞ ಎಂಬವರ ಮನೆ ಜಲಾವೃತಗೊಂಡಿದೆ. ಇದರ ಸಮೀಪದ ಎರಡು ಮನೆಗಳು ಕೂಡಾ ಜಲಾವೃತಗೊಂಡಿದೆ. ಅದೇ ರೀತಿ ಎಡನೀರು ಸಮೀಪದ ಚೂರಿಮೂಲೆ ಎಂಬಲ್ಲಿ ತೆಂಗಿನಮರವೊಂದುದು ರಸ್ತೆಯ ಮೇಲೆ ಸಾಗುತ್ತಿದ್ದ ವಿದ್ಯುತ್ ತಂತಿಗೆ…
