ವಾಣಿಜ್ಯ ಗ್ಯಾಸ್ ಅಭಾವ: ಉಡುಪಿಯಲ್ಲಿ 150ಕ್ಕೂ ಹೆಚ್ಚು ಹೊಟೇಲ್‌ಗಳು ಬಂದ್

ಉಡುಪಿ: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಅಭಾವದಿಂದಾಗಿ ಉಡುಪಿಯಲ್ಲಿ 150ಕ್ಕೂ ಹೆಚ್ಚು ಹೊಟೇಲ್‌ಗಳು ಬಂದ್ ಆಗಿರುವ ಘಟನೆ ನಡೆದಿದೆ. ಕೃಷ್ಣನಗರಿ ಉಡುಪಿಗೆ ಪ್ರತಿದಿನ ವಿವಿಧ ಪ್ರದೇಶಗಳಿಂದ ಸುಮಾರು 600ಕ್ಕೂ ಹೆಚ್ಚು ಬಸ್‌ಗಳು ಆಗಮಿಸುತ್ತಿದ್ದು, ಸಾವಿರಾರು ಪ್ರವಾಸಿಗರಿಗೆ ಊಟ-ತಿಂಡಿ ಸಿದ್ಧಪಡಿಸುವ ಹೊಣೆಗಾರಿಕೆ ಹೊಟೇಲ್‌ಗಳ ಮೇಲಿದೆ. ಆದರೆ ಗ್ಯಾಸ್ ಕೊರತೆಯಿಂದಾಗಿ ಆಹಾರ ಸಿದ್ಧಪಡಿಸುವುದು ಕಷ್ಟಕರವಾಗಿದೆ. ಕೆಲವು ದಿನಗಳಿಂದ ಹೊಟೇಲ್‌ಗಳಲ್ಲಿ ಕುಚ್ಚಲಕ್ಕಿ ಅನ್ನ, ದೋಸೆ ಸೇರಿದಂತೆ ಕೆಲವು ತಿನಿಸುಗಳನ್ನು ಕೈಬಿಟ್ಟು ಸೀಮಿತವಾಗಿ ಹೊಟೇಲ್ ನಡೆಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಗಂಭೀರವಾಗಿದ್ದು, 150ಕ್ಕೂ…

Read More

ನಾಗರಹೊಳೆ ಅಂಚಿನಲ್ಲಿ ಕಾಡಾನೆ ಸಂಕಷ್ಟ, ಅರಣ್ಯ ಇಲಾಖೆ ರಕ್ಷಣೆ

ಹುಣಸೂರು: ನಾಗರಹೊಳೆ ಕಾಡಂಚಿನ ಗ್ರಾಮದಲ್ಲಿ ಮೇವನ್ನರಸಿ ಹೊರಬಂದ ಕಾಡಾನೆ ರೈತರ ಬೆಳೆ ಹಾನಿಗೊಳಿಸಿ ವಾಪಸ್ ಕಾಡಿಗೆ ತೆರಳುವ ವೇಳೆ ರೈಲ್ವೆ ಕಂಬಿ ಬೇಲಿಗೆ ಸಿಲುಕಿಕೊಂಡ ಘಟನೆ ಹನಗೋಡು ಹೋಬಳಿಯ ಉಡುವೇಪುರ ಗ್ರಾಮದ ಸಮೀಪ ನಡೆದಿದೆ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ಆಹಾರ ಅರಸಿ ಕಾಡಿನಿಂದ ಹೊರಬರುವುದು ಸಾಮಾನ್ಯವಾಗಿದ್ದು, ರೈಲ್ವೆ ಕಂಬಿಗಳ ನಡುವೆ ಅಂತರ ಕಡಿಮೆ ಇರುವುದರಿಂದ ದಾಟುವಾಗ ಆನೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿದೆ. ಬೆಳಗಿನ ಜಾವ ಹೊಲಗಳಿಗೆ ತೆರಳಿದ ರೈತರು ಈ ಘಟನೆ ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ…

Read More

ಬಂಟ್ವಾಳದಲ್ಲಿ ಅನಾದಿಕಾಲದ ಪದ್ದತಿ ಮುಂದುವರಿಕೆ: ಮಸೀದಿಯಲ್ಲಿ ದೈವಕ್ಕೆ ಸೀಯಾಳ

ಬಂಟ್ವಾಳ: ಅರಸರ ಕಾಲದಿಂದಲೂ ನಡೆಯುತ್ತಿದ್ದ ಪದ್ದತಿಯೊಂದನ್ನು ಮಸೀದಿಯ ಪ್ರಮುಖರು ಇಂದಿಗೂ ಮುಂದುವರಿಸಿಕೊಂಡು ಬಂದ ಕ್ಷಣಕ್ಕೆ ಮಾ.17 ರಂದು ಮತ್ತೆ ಸಾಕ್ಷಿಯಾಯಿತು.ಬಂಟ್ವಾಳ ತಾಲೂಕಿನ ನಂದಾವರ ದೇವಸ್ಥಾನದ ಸಮೀಪವಿರುವ ಕೇಂದ್ರ ಜುಮಾ ಮಸೀದಿಯಲ್ಲಿ ದೈವಕ್ಕೆ ಸೀಯಾಳ ನೀಡುವ ಪದ್ದತಿಯನ್ನು ಇಂದು ಕೂಡ ಮುಂದುವರಿಸಿಕೊಂಡು ಬಂದಿದ್ದಾರೆ. ಮಸೀದಿ ಸಮೀಪವೇ ಮೂರು ವರ್ಷಕ್ಕೊಮ್ಮೆ ನಡೆಯುವ ಮಂಜದಗೋಳಿ ಜಾತ್ರೆಗೆ ಸಜೀಪನಡು ಮೂಲಸ್ಥಾನದಿಂದ ಭಂಡಾರ ಬಂದು ಜಾತ್ರೆ ನಡೆಯುತ್ತದೆ.ದೈವ ಮಂಜದಗೋಳಿ ಕ್ಷೇತ್ರಕ್ಕೆ ಆಗಮಿಸುವ ಮೊದಲು ದಾರಿಯಲ್ಲಿರುವ ಕೇಂದ್ರ ಜುಮಾ ಮಸೀದಿಯ ನಾಲ್ಕು ಮೆಟ್ಟಿಲು ಹತ್ತಿ ಸೀಯಾಳ…

Read More

ಆಳ್ವಾಸ್ ನುಡಿಸಿರಿ-ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ ಮಂಗಳೂರಿನಲ್ಲಿ ಮಾರ್ಚ್ 21ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ …. !

ಮಂಗಳೂರು: ಆಳ್ವಾಸ್ ನುಡಿಸಿರಿ ವಿರಾಸತ್ ಮಂಗಳೂರು ಘಟಕದ ವತಿಯಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಆಳ್ವಾಸ್ ನುಡಿಸಿರಿ-ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ ಮಂಗಳೂರಿನ ಲಾಲ್ಭಾಗ್ ಕರಾವಳಿ ಉತ್ಸವ ಮೈದಾನದ ಕೀರ್ತಿಶೇಷ ಡಾ. ಎನ್ ವಿನಯ್ ಹೆಗ್ಡೆ ವೇದಿಕೆಯಲ್ಲಿ ಮಾರ್ಚ್ 21ರ ಸಂಜೆ 6.15ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಭರ್ಜರಿಯಾಗಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದ ಪೂರ್ವದಲ್ಲಿ…

Read More

ಆಟೋ ಚಾಲಕರ ಸಮಸ್ಯೆಗೆ ಆಕ್ರೋಶ: ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋರಿಕ್ಷಾ ಚಾಲಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಆಟೋ ರಿಕ್ಷಾ, ಟೂರಿಸ್ಟ್ ಮತ್ತು ಭಾರೀ ವಾಹನ ಚಾಲಕರ ಸಂಘ (ಎಐಸಿಸಿಟಿಯು) ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ವಾಹನಗಳ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಆಟೋ ಚಾಲಕರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜೊತೆಗೆ ಮಂಗಳೂರು ನಗರದಲ್ಲಿ ರಿಕ್ಷಾ ಪಾರ್ಕಿಂಗ್ ಸಮಸ್ಯೆ, ಬೈಕ್ ಟ್ಯಾಕ್ಸಿಗಳು ಹಾಗೂ…

Read More

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಚಾಲನೆ: ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವರು

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಆರಂಭವಾಗಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅವರು ಆತ್ಮಸ್ಥೈರ್ಯ ತುಂಬಿ ಶುಭ ಹಾರೈಸಿದರು. ಈ ವರ್ಷ ರಾಜ್ಯಾದ್ಯಂತ ಒಟ್ಟು 8,65,988 ವಿದ್ಯಾರ್ಥಿಗಳು 2,870 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ವಿಶೇಷವಾಗಿ 16 ದೃಷ್ಟಿಮಾಂದ್ಯ ಮಕ್ಕಳು ಬರಹಗಾರರ ಸೌಲಭ್ಯ ಬಳಸದೆ,…

Read More

“ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರೈಸ್ತ ಅಲ್ಲ ಹಿಂದೂ!” ಸ್ಪಷ್ಟನೆ ನೀಡಿದ ಕುಟುಂಬ , ಡಾ ರತಿ ಹೇಳಿಕೆಗೆ ಕ್ಷಮೆಯಾಚೆನೆಗೆ ಪಟ್ಟು

“ಕಳೆದ ಮಾರ್ಚ್ 13 ರಂದು ಸುದ್ದಿಗೋಷ್ಠಿ ನಡೆಸಿದ್ದ ಡಾ.ರತಿ ಅವರು ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸುಮಾರು 16 ಜಾತಿಗಳವರು ಮಾಡಬೇಕು ಆದರೆ ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅವರ ಈ ಆರೋಪಕ್ಕೆ ಬೇಕಾದ ಜಾತಿ ಪ್ರಮಾಣಪತ್ರ ನಮ್ಮಲ್ಲಿದ್ದು ನರ್ತನ ಸೇವೆ ಮಾಡಿರುವ ಸುಶಾಂತ್ ಬಂಗೇರ ಒಬ್ಬ ಹಿಂದೂ ಆಗಿದ್ದು ಪಂಬದ ಸಮಾಜಕ್ಕೆ ಸೇರಿದವನು“ ಎಂದು ದೈವನರ್ತಕ ಸೂರಜ್…

Read More

ಅಂಗಡಿಪದವಿನಲ್ಲಿ ಮಾರ್ಚ್ 22ರಂದು ಬೃಹತ್ ರಕ್ತದಾನ ಶಿಬಿರ

ಹೊಸಂಗಡಿ: ಅಂಗಡಿಪದವು, ಶ್ರೀ ಆದಿಶಕ್ತಿ ಭಜನ ಮಂಡಳಿ, ಆದಿಶಕ್ತಿ ತರವಾಡು ಕ್ಷೇತ್ರ, ಚೇತನ್ ನಗರ ಅಂಗಡಿಪದವು ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ಈ ಶಿಬಿರ ನಡೆಯಲಿದೆ. ಮಾರ್ಚ್ 22ರಂದು ಆದಿತ್ಯವಾರ ಬೆಳಗ್ಗೆ 10.00 ಗಂಟೆಗೆ ನಡೆಯಲಿರುವ ಈ ಶಿಬಿರವು ದಿ. ಪ್ರಜ್ವಲ್ ಅವರ ದ್ವಿತೀಯ ವರ್ಷದ ಸ್ಮರಣಾರ್ಥವಾಗಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಶಿಬಿರವು ಆದಿಶಕ್ತಿ ತರವಾಡು ಕ್ಷೇತ್ರ, ಚೇತನ್ ನಗರ, ಅಂಗಡಿಪದವು ಪ್ರದೇಶದಲ್ಲಿ ನಡೆಯಲಿದ್ದು, ಸಾರ್ವಜನಿಕರು…

Read More

ಮಂಜೇಶ್ವರದಲ್ಲಿ ಎನ್‌ಡಿಎ ಪ್ರಚಾರಕ್ಕೆ ಚಾಲನೆ: ಸುರೇಶ್ ಗೋಪಿ ಗೋಡೆ ಬರಹ

ಮಂಜೇಶ್ವರ: ವಿಧಾನಸಭಾ ಚುನಾವಣೆಯನ್ನು ಹಿನ್ನೆಲೆ ಮಾಡಿಕೊಂಡು ಎನ್‌ಡಿಎ ಪ್ರಚಾರ ಚಟುವಟಿಕೆಗಳು ಮಂಜೇಶ್ವರ ಕ್ಷೇತ್ರದಲ್ಲಿ ವೇಗ ಪಡೆದುಕೊಂಡಿವೆ. ಇದರ ಭಾಗವಾಗಿ ಕೇಂದ್ರ ಸಚಿವರಾದ ಸುರೇಶ್ ಗೋಪಿ ಅವರು ಕುಂಬಳೆ ಪಟ್ಟಣದಲ್ಲಿ ಗೋಡೆ ಬರಹದ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂಜೇಶ್ವರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಎನ್‌ಡಿಎ ಸಂಯೋಜಕ ವಿಜಯ್ ಕುಮಾರ್ ರೈ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಇದೇ ವೇಳೆ ರಾಜ್ಯ…

Read More

ಶಿರಿಯ ಮುಸ್ಲಿಂ ಲೀಗ್ ವತಿಯಿಂದ ರoಝಾನ್ ನೆರವು ವಿತರಣೆ: ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ

ಶಿರಿಯ: ಪವಿತ್ರ ರoಝಾನ್ ತಿಂಗಳ ಅಂಗವಾಗಿ ಶಿರಿಯ ಮುಸ್ಲಿಂ ಲೀಗ್ ಸಮಿತಿಯ ವತಿಯಿಂದ ರಮಝಾನ್ ನೆರವು ವಿತರಣೆ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ರಹ್ಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಅರ್ಹ ಕುಟುಂಬಗಳಿಗೆ ನೆರವು ಕಿಟ್‌ಗಳನ್ನು ಹಾಗೂ ಸುಮಾರು 50 ಮಕ್ಕಳಿಗೆ ಈದ್ ಹಬ್ಬದ ಉಡುಪುಗಳನ್ನು ವಿತರಿಸಲಾಯಿತು. ಮಂಗಲ್ಪಾಡಿ ಮುಸ್ಲಿಂ ಲೀಗ್ ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಬಂದಿಯೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಾಮಾಜಿಕ ಸೇವಾ ಕಾರ್ಯಗಳ ಅಂಗವಾಗಿ ಕುಡಿಯುವ…

Read More
error: Content is protected !!