ಮಂಜೇಶ್ವರ : ಕಾಸರಗೋಡು ಭಾಗದಿಂದ ಮಂಗಳೂರು ಭಾಗಕ್ಕೆ ತೆರಳುತಿದ್ದ ಎಗ್ಮೋರ್ ರೈಲಿನಲ್ಲಿ ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಬಂದಿಳಿದ ವ್ಯಕ್ತಿಯೊಬ್ಬರು ರೈಲು ಹಳಿ ದಾಟುತ್ತಿರುವ ಮಧ್ಯೆ ಮಂಗಳೂರು ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಮಾವೇಲಿ ರೈಲು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಸೋಮವಾರ ಸಂಜೆ 5.40 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ತಮಿಳ್ನಾಡು ನಿವಾಸಿ ನಜ್ಮುದ್ಧೀನ್ ಕಾದರ್ ಬಾಚಾ (71) ಸಾವನ್ನಪ್ಪಿದ ದುರ್ದೈವಿ.
ರೈಲ್ವೇ ಪೊಲೀಸರು ಹಾಗೂ ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಶವದ ಮಹಜರು ನಡೆಸಿ ಡಿಕ್ಕಿಯ ಹೊಡೆತಕ್ಕೆ ಛಿಧ್ರಗೊಂಡ ಶವಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ.