Avatar

NAMMA MEDIA 24X7

​ವಿದಾಯದ ಕಣ್ಣೀರು: ವಿಶೇಷ ಚೇತನರ ಪಾಲಿನ ‘ಗಿಫ್ಟ್’ ಆಗಿದ್ದ ರೂಪಾ ಟೀಚರ್ ಇನ್ನಿಲ್ಲ

​ಮಂಜೇಶ್ವರ: ಅವರ ಹೆಸರಲ್ಲೇ ಒಂದು ವಿಶಿಷ್ಟತೆ ಇತ್ತು, ಅವರ ನಗುವಿನಲ್ಲೇ ಒಂದು ಆತ್ಮೀಯತೆ ಇತ್ತು. ಮಂಜೇಶ್ವರ ಬಿ.ಆರ್.ಸಿ. ವ್ಯಾಪ್ತಿಯ ಸಾವಿರಾರು ವಿಶೇಷ ಚೇತನ ಮಕ್ಕಳ ಬಾಳಿಗೆ ಬೆಳಕಾಗಿದ್ದ, ಪ್ರೀತಿಯ ರೂಪಾ ರೋಯಲ್ ಗಿಫ್ಟ್ ಡಿ ಸೋಜ (44) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ​ಮೀಯಪದವಿನ ಜನಪ್ರಿಯ ವ್ಯಕ್ತಿತ್ವ, ಚಲನಚಿತ್ರ ನಟ ಹಾಗೂ ನಾಟಕ ಕಲಾವಿದ ರಾಜೇಶ್ ಮೀಯಪದವು ಅವರ ಪತ್ನಿಯಾಗಿದ್ದ ರೂಪಾ ಟೀಚರ್, ಕೇವಲ ಒಬ್ಬ ಶಿಕ್ಷಕಿಯಷ್ಟೇ ಆಗಿರಲಿಲ್ಲ; ವಿಶೇಷ ಅಗತ್ಯವಿರುವ ಮಕ್ಕಳ…

Read More

ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಪ್ರಾರಂಭೋತ್ಸವವಿದ್ಯೆ ಜೀವನದ ಯಶಸ್ಸಿಗೆ ಮುಖ್ಯ ಆಧಾರ: ಅಬ್ದುಲ್ ನಾಸಿರ್ ಸಅದಿ

ಮಂಗಳೂರು: ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಪ್ರಾರಂಭೋತ್ಸವ ಹಾಗೂ ಫತ್ಹೇ ಮುಬಾರಕ್ ಕಾರ್ಯಕ್ರಮ ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಇಲ್ಲಿನ ಮದ್ರಸಾ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖತೀಬ್ ಅಬ್ದುಲ್ ನಾಸಿರ್ ಸಅದಿ, ಜನರು ಸಂಪಾದಿಸುವುದರಲ್ಲಿ ಅತ್ಯುತ್ತಮವಾದದ್ದು ವಿದ್ಯೆ. ವಿದ್ಯೆಯನ್ನು ಪಡೆದವನು ಎಲ್ಲವನ್ನೂ ಕರಗತ ಮಾಡಿಕೊಳ್ಳಲು ಸಾಧ್ಯ. ವಿದ್ಯೆ ಮಾನವನಿಗೆ ಸನ್ಮಾರ್ಗವನ್ನು ತೋರಿಸುವ ದೀಪವಾಗಿದೆ. ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿ, ನೈತಿಕ ಮೌಲ್ಯಗಳನ್ನು ಬೆಳೆಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ…

Read More

ಮಂಗಳೂರು: ಪಾಂಡೇಶ್ವರ ಶಿವನಗರದಲ್ಲಿ 1.23 ಕೋಟಿ ರೂ. ತಡೆಗೋಡೆ ನಿರ್ಮಾಣಕ್ಕೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ

ಮಂಗಳೂರು : ಮಂಗಳೂರುಮಹಾನಗರ ಪಾಲಿಕೆ ವ್ಯಾಪ್ತಿಯ 46ನೇ ಕಂಟೋನ್ಮೆಂಟ್ ವಾರ್ಡಿನ ಪಾಂಡೇಶ್ವರ ಶಿವನಗರದಲ್ಲಿ 1.23 ಕೋಟಿ ರೂ. ವಿಶೇಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು ಶಾಸಕ ವೇದವ್ಯಾಸ್ ಕಾಮತ್‌ ರವರ ನೇತೃತ್ವದಲ್ಲಿ ಶಿಲನ್ಯಾಸವು ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದ ಜನರು ನೆರೆ ಸಮಸ್ಯೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿಂದೆಯೇ ಕೆಲವು ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣವಾಗಿದ್ದರೂ ಅನಿವಾರ್ಯ ಕಾರಣಗಳಿಂದ ಒಂದಷ್ಟು ಬಾಕಿ ಇದ್ದು, ಇದೀಗ ಆ ಕಾಮಗಾರಿಯನ್ನೂ ಸಹ ಕೈಗೆತ್ತಿಕೊಳ್ಳಲಾಗಿದೆ….

Read More

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ, ಕಾಸರಗೋಡು ಕರ್ನಾಟಕ ಮಕ್ಕಳ ಕವಿಗೋಷ್ಟಿ- ಮಕ್ಕಳ ಸಾಂಸ್ಕೃತಿಕ ಉತ್ಸವ

ಕಾಸರಗೋಡು: ಮಕ್ಕಳ ಸಾಹಿತ್ಯವನ್ನು ಪುನಶ್ಚೇತನಗೊಳಿಸಿ ಮಕ್ಕಳ ಸಾಹಿತಿಗಳು,ಕವಿ, ಕವಯತ್ರಿಯರು, ಬರಹಗಾರರು, ಸಾಹಿತಿಗಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಇದರ ಕೇರಳ ರಾಜ್ಯ ಘಟಕವಾಗಿ 2019 ರಲ್ಲಿ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕವು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯೋತ್ಸವ, ಮಕ್ಕಳ ಕವಿಗೋಷ್ಠಿ ಮತ್ತು ಕನ್ನಡಪರ ಚಟುವಟಿಕೆಗಳನ್ನು…

Read More

ಉಡುಪಿ: ಎ. 4 ರಂದು ಕಲಾಸೌರಭ ಕಾರ್ಯಕ್ರಮ.ಆಟಿಸಂ ಸೊಸೈಟಿ ಉಡುಪಿ ಆಯೋಜನೆ

ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ “ಕಲಾಸೌರಭ” ಕಾರ್ಯಕ್ರಮವನ್ನು ಆಟಿಸಂ ಸೊಸೈಟಿ ಉಡುಪಿ ಮತ್ತು ಇನ್ನಿತರ ಸಮಾನ ಮನಸ್ಕ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಆಯೋಜಿಸುತ್ತಾ ಬಂದಿದ್ದೇವೆ.ಈ ವರ್ಷ “ಕಲಾಸೌರಭ” ಕಾರ್ಯಕ್ರಮವು “ವಿಶಿಷ್ಟತೆಗಳನ್ನು ಸಂಭ್ರಮಿಸಿ” ಎಂಬ ವಿಷಯವನ್ನು ಆಧರಿಸಿ ಎಪ್ರಿಲ್ 4ರ ಶನಿವಾರದಂದು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ನಡೆಯಲಿದೆ ಎಂದು ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,…

Read More

ಮಂಗಳೂರು: ‘ಹನಿಟ್ರ್ಯಾಪ್’ ಆರೋಪ – ಸುದೀಪ್ ಸಾವಿನ ಪ್ರಕರಣಕ್ಕೆ ಹೊಸ ತಿರುವು

ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಉದ್ಯಮಿ ಸುದೀಪ್ ರೈ ನೆಲ್ಯಾಡಿ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಮೃತನ ಪತ್ನಿ ಸೌಮ್ಯ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಇನ್ನೊಬ್ಬ ಯುವಕ ಕೂಡ ಆಕೆಯಿಂದ ಮೋಸಕ್ಕೊಳಗಾಗಿದ್ದೇನೆ ಎಂದು ಮುಂದೆ ಬಂದಿದ್ದಾನೆ.ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಪೋಷಕರೊಂದಿಗೆ ಭಾಗವಹಿಸಿದ್ದ ಮುಲ್ಕಿಯ ವೇಣುಗೋಪಾಲ ಶೆಟ್ಟಿ, ಸೌಮ್ಯ ಶೆಟ್ಟಿಯ ಕುರಿತು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದರು. ವೇಣುಗೋಪಾಲ ಶೆಟ್ಟಿಯ ಹೇಳಿಕೆಯ ಪ್ರಕಾರ, 2024ರ ಜೂನ್‌ನಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ…

Read More

ಕೇರಳ ಚುನಾವಣಾ ಕುರುಕ್ಷೇತ್ರ 2026: ಭರವಸೆಗಳ ಸುನಾಮಿ ಹಾಗೂ ಮತದಾರನ ನಿಗೂಢ ಮೌನ

​ಕೇರಳದ ಹಸಿರು ಸೀರೆಯುಟ್ಟಂತಿರುವ ತೆಂಗಿನ ತೋಟಗಳ ನಡುವೆ ಈಗ ಕೋಗಿಲೆಯ ಗಾನಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಆರ್ಭಟ ಕೇಳಿಬರುತ್ತಿದೆ. ಅರಬ್ಬಿ ಸಮುದ್ರದ ಉಪ್ಪಿನ ಗಾಳಿಯಲ್ಲಿ ಚುನಾವಣಾ ಘೋಷಣೆಗಳ ಕಾವೇರಿದ ಘಾಟು ಬೆರೆತಿದೆ. 2026ರ ವಿಧಾನಸಭಾ ಚುನಾವಣೆ ಕೇವಲ ಅಧಿಕಾರ ಬದಲಾವಣೆಯ ಪ್ರಶ್ನೆಯಲ್ಲ; ಇದು ರಾಜಕೀಯ ಪಕ್ಷಗಳ ಭರವಸೆಗಳ ಮಹಾಪೂರ ಮತ್ತು ಸಾಮಾನ್ಯ ಜನರ ಬದುಕಿನ ಕಟು ವಾಸ್ತವಗಳ ನಡುವಿನ ತೀವ್ರ ಸಂಘರ್ಷ. ​ಗ್ಯಾರಂಟಿಗಳ ಮಾಯಾಲೋಕ: ಯುಡಿಎಫ್ (UDF) ತಂತ್ರ​ದಶಕಗಳ ಕಾಲದ ಅಧಿಕಾರದ ವನವಾಸ ಮುಗಿಸಲು ಕಾಂಗ್ರೆಸ್…

Read More

ತಾಂತ್ರಿಕ ತಪಸ್ವಿಯ ಸಂಶೋಧನಾ ಸಾರ್ಥಕತೆ: ಡಾ. ಸ್ವಾತಿ ಕೆ. ಅವರಿಗೆ ಸಾಹಿತ್ಯಾಭಿನಂದನೆ

ಬೆಳ್ಳೂರು, ಕಾಸರಗೋಡು :“ಶ್ರಮದ ಹಾದಿಯಲ್ಲಿ ಗೆಲುವಿನ ನಾದ” ಎಂಬಂತೆ, ಜ್ಞಾನದ ಅನ್ವೇಷಣೆಯಲ್ಲಿ ಅಚಲ ಛಲವನ್ನೂ, ಸಂಶೋಧನೆಯ ಕಠಿಣ ಪಥದಲ್ಲಿ ನಿರಂತರ ಪರಿಶ್ರಮವನ್ನೂ ತೋರುತ್ತಾ, ಗಣಕವಿಜ್ಞಾನದ ಅತ್ಯುನ್ನತ ‘ಡಾಕ್ಟರೇಟ್’ (Ph.D) ಪದವಿಯನ್ನು ಮುಡಿಗೇರಿಸಿಕೊಂಡಿರುವ ಡಾ. ಸ್ವಾತಿ ಕೆ. ಅವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಹಾಗೂ ಅಭಿಮಾನದ ಅಭಿನಂದನೆಗಳು.​ತಾಂತ್ರಿಕ ಕುಶಲತೆ ಮತ್ತು ಸಂಶೋಧನಾ ಸಾರ್ಥಕತೆ ಕಾರ್ಕಳದ ಜ್ಞಾನ ದೇಗುಲ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ನೀವು, ಗಣಕಶಾಸ್ತ್ರದ ಸಂಕೀರ್ಣ ಅಲ್ಗಾರಿಥಮ್‌ಗಳ ಜಟಿಲತೆ ಹಾಗೂ ತಾಂತ್ರಿಕ ತತ್ತ್ವಗಳ…

Read More

ಅನಧಿಕೃತ ಮರಳು ಸಾಗಾಟ; ಪೊಲೀಸರ ದಾಳಿ : ಐವರ ವಿರುದ್ಧ ಜಾಮೀನು ರಹಿತ ಕೇಸು

ಮಂಜೇಶ್ವರ: ಕುಂಬಳೆ ಶಿರಿಯ ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಮೇಲೆ ಕುಂಬಳೆ ಪೊಲೀಸರು ದಾಳಿ ನಡೆಸಿದ್ದು, ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ​ಹೇರೂರು ಗ್ರಾಮದ ಪಯ್ಯಾ‌ರ್ ಕಡವಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಸರ್ಕಾರಿ ಸ್ವತ್ತಾದ ಹೊಳೆ ಮರಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಲಾರಿ ಚಾಲಕ ಸೇರಿದಂತೆ ಐವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರ ವಿರುದ್ಧ ಪೊಲೀಸರು ಜಾಮೀನು ರಹಿತ ಕಳವು ಪ್ರಕರಣ…

Read More

ಕೂಳೂರು ಕೋಡಿಮಾರ್ ರಸ್ತೆಗೆ ಡ್ರೈನೇಜ್ ನೀರು ಚೆಲ್ಲಿದ ದುಷ್ಕರ್ಮಿಗಳು ಸಾರ್ವಜನಿಕರಿಗೆ ತೀವ್ರ ಸಂಕಷ್ಟ

ಮಂಜೇಶ್ವರ: ಕೂಳೂರು ಕೋಡಿಮಾರ್ ರಸ್ತೆಯಲ್ಲಿ ಅನಾಮಿಕರು ಡ್ರೈನೇಜ್ ನೀರನ್ನು ರಸ್ತೆಗೆ ಚೆಲ್ಲಿದ ಪರಿಣಾಮ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಕೂಳೂರಿನ ಕೋಡಿಮಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೆಲವು ದಿನಗಳಿಂದ ಇದೇ ರೀತಿಯ ಕೃತ್ಯಗಳು ನಡೆಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಡ್ರೈನೇಜ್ ನೀರನ್ನು ವಾಹನದ ಮೂಲಕ ತಂದು ರಸ್ತೆಗೆ ಸುರಿದ ಪರಿಣಾಮ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ. ಅಶುಚಿ…

Read More
error: Content is protected !!