ಚುನಾವಣಾ ಗೆಲುವು ಸೋಲು ಪ್ರಕ್ರಿಯೆಯ ಭಾಗ.. ಸಮಾಜ ಸೇವೆ ನಿರಂತರ ವಾಗಬೇಕು-ಆದರ್ಶ ಬಿ ಎಂ

ಉದ್ಯಾವರ : ಸಮಾಜ ಸೇವೆ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯ, ಅದು ಸ್ಥಳೀಯ ಜನತೆಯ ಅಗ್ರಹ, ಬೇಡಿಕೆ, ನಂಬಿಕೆ,ಮತ್ತು ವಿಶ್ವಾಸ ಪ್ರಕ್ರಿಯೆ ಆಗಬೇಕು, ಚುನಾವಣೆಯಲ್ಲಿ ಸೋಲು, ಗೆಲುವು ಪ್ರಕ್ರಿಯೆ ಯ ಭಾಗ ಆದರೆ ಸಮಾಜ ಸೇವೆ ನಿರಂತರ ವಾಗಿರಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.


ಮಂಜೇಶ್ವರ ಪಂಚಾಯತ್ ಬೂತ್ 14ರ ವತಿಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಆದರ್ಶ ಬಿ ಎಂ ಮಾತನಾಡಿದರು.ಸಮಾಜ ಸೇವಕ ನ್ಯಾ ನವೀನ್ ರಾಜ್ ಉಪಸ್ಥಿತರಿದ್ದರು. ಬೂತ್ ಅಧ್ಯಕ್ಷ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಯಶ್ ಪಾಲ್, ಯಶರಾಜ್ ಮಂಜೇಶ್ವರ, ನವೀನ್ ಉದ್ಯಾವರ,, ಚಕ್ರಶ್ ಮಂಜೇಶ್ವರ , ದಿನೇಶ್ ಗುಡ್ಡೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.SSLC ಹಾಗೂ puc ಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದವರನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!