Avatar

NAMMA MEDIA 24X7

ಕದ್ರಿಗುಡ್ಡೆಯಲ್ಲಿ ₹30 ಲಕ್ಷ ರಸ್ತೆ ಅಭಿವೃದ್ಧಿಗೆ ಚಾಲನೆ

ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ ಮಂಗಳೂರು ಮಹಾನಗರ ಪಾಲಿಕೆಯ 30ನೇ ಕೊಡಿಯಾಲ್‌ಬೈಲ್ ವಾರ್ಡಿನ ಕದ್ರಿಗುಡ್ಡೆ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹30 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು. ಬಳಿಕ ಮಾತನಾಡಿದ ಶಾಸಕರು, ರಸ್ತೆ ಅಭಿವೃದ್ಧಿಯ ಅಗತ್ಯತೆ ಕುರಿತು ಸ್ಥಳೀಯ ನಿಕಟ ಪೂರ್ವ ಪಾಲಿಕೆ ಸದಸ್ಯರು ಹಾಗೂ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ನಿರಂತರವಾಗಿ ಪ್ರಯತ್ನಿಸಿದ್ದರು. ಇದೀಗ ಅಗತ್ಯ…

Read More

ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಇಂಗ್ಲಿಷ್ ಐಚ್ಛಿಕ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಆರಂಭ .

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಯೂನಿವರ್ಸಿಟಿ ಕಾಲೇಜು ಮಂಗಳೂರು ನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಬಿಎ ಇಂಗ್ಲಿಷ್ ಐಚ್ಛಿಕ (English Optional) ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಎನ್‌ಎಎಸಿ ‘ಎ’ ಗ್ರೇಡ್ ಮಾನ್ಯತೆ ಹಾಗೂ “College with Potential for Excellence” ಗೌರವ ಪಡೆದಿರುವ ಕಾಲೇಜು, ವಿದ್ಯಾರ್ಥಿಗಳಿಗೆ ಭಾಷೆ, ಸಾಹಿತ್ಯ ಹಾಗೂ ಸಂವಹನ ಕೌಶಲ್ಯಗಳನ್ನು ಬೆಳೆಸುವ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕಾಲೇಜಿನಲ್ಲಿ ಬಿಎ ವಿಭಾಗದಲ್ಲಿ ಇಂಗ್ಲಿಷ್ ಐಚ್ಛಿಕ ಕೋರ್ಸ್‌ನಡಿ ವಿವಿಧ ಸಂಯೋಜನೆಗಳು ಲಭ್ಯವಿದ್ದು, ಇಂಗ್ಲಿಷ್-ಅರ್ಥಶಾಸ್ತ್ರ-ಇತಿಹಾಸ (EEH), ಇಂಗ್ಲಿಷ್-ಇತಿಹಾಸ-ಸಮಾಜಶಾಸ್ತ್ರ…

Read More

ಎಸ್ ಡಿ ಪಿ ಐ ಪುತ್ತೂರು ನಗರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷರಾಗಿ ತಾಜುದ್ದೀನ್ ಸಾಲ್ಮರ, ಕಾರ್ಯದರ್ಶಿಯಾಗಿ ಇಫಾಝ್ ಬನ್ನೂರು

ಪುತ್ತೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿಯು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ತಾಜುದ್ದೀನ್ ಸಾಲ್ಮರ, ಉಪಾಧ್ಯಕ್ಷರಾಗಿ ಶಮೀರ್ ನಾಜೂಕು, ಕಾರ್ಯದರ್ಶಿಯಾಗಿ ಇಫಾಝ್ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಫವಾಝ್ ಬನ್ನೂರು, ಕೋಶಾಧಿಕಾರಿಯಾಗಿ ಸಮೀರ್ ಡಿ.ಕೆ ಹಾಗೂ ಸಮಿತಿ ಸದಸ್ಯರಾಗಿ ರಿಯಾಝ್ ಭೂಮಿ, ಅಶ್ರಫ್ ಗೋಳಿಕಟ್ಟೆ, ರಫೀಕ್ ಬಲ್ನಾಡ್ ಹಾಗೂ ಅಲಿ ಸಾಲ್ಮರ ಆಯ್ಕೆಯಾದರು. ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರುರವರು…

Read More

ಮೇ 31ರಂದು ನೀರ್ಚಾಲಿನಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ

ನೀರ್ಚಾಲು: ಕನ್ನಡದ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅವರ 85ನೇ ಅಭಿನಂದನಾ ಪೂರ್ವಕವಾಗಿ ‘ಮಂಜೇಶ್ವರದ ಮುತ್ತು’ ಸಾಕ್ಷ್ಯಚಿತ್ರ ಬಿಡುಗಡೆ, ಕುಟ್ಟಿಯಾನ ಮುಹಮ್ಮದ್ ಅವರ ‘ಕನಸುಗಳ ಭೂಮಿಗೆ ಯಾತ್ರೆ’ ಕೃತಿ ಬಿಡುಗಡೆ ಹಾಗೂ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿ ಸರಣಿಯ 7ನೇ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ ಮೇ 31ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನದಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಗಡಿನಾಡಿನ ಕನ್ನಡ ಚಟುವಟಿಕೆಗಳಿಗೆ…

Read More

ಭೋವಿ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ; ಉಡುಪಿ ಜಿಲ್ಲೆಗೆ ನಿಗಮ ಅಧ್ಯಕ್ಷ ಎಂ. ರಾಮಪ್ಪ ಭೇಟಿ

ಉಡುಪಿ ಜಿಲ್ಲೆಗೆ ಭೋವಿ ಸಮಾಜದ ಮಾನವೀಯ ಮೇರೆಗೆ ಜಿಲ್ಲೆಗೆ ಪ್ರಪ್ರಥಮವಾಗಿ ಆಗಮಿಸುತ್ತಿರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ ಅವರ ಪ್ರವಾಸದ ವಿವರವನ್ನು ಭೋವಿ ಸಮಾಜದ ಯುವ ಮುಖಂಡ ಪವನ್ ಕುಮಾರ್ ಶಿರ್ವ ನೀಡಿದರು.. ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಪವನ್ ಕುಮಾರ್ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಅಧ್ಯಕ್ಷರೊಂದಿಗೆ ಜಿಲ್ಲಾಧಿಕಾರಿ ಭೇಟಿ ಮಾಡಿ ಈ ಸಮಸ್ಯೆಯ ಬಗ್ಗೆ ಮನವಿ ಮಾಡುತ್ತೇವೆ.. ಒಂದು ವೇಳೆ ಜಿಲ್ಲೆಯಲ್ಲಿ…

Read More

NEET ಪ್ರಶ್ನೆಪತ್ರಿಕೆ ಸೋರಿಕೆ, ಇಂಧನ ದರ ಏರಿಕೆ ವಿರೋಧಿಸಿ ಬಂಟ್ವಾಳದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬಂಟ್ವಾಳ:ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ,ಯುವ ಕಾಂಗ್ರೆಸ್ ,ಮಹಿಳಾ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ.ಇವರ ವತಿಯಿಂದ NEET. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರುದ್ದ ಬೃಹತ್ ಪ್ರತಿಭಟನೆ ಬಿಸಿರೋಡಿನ ಪ್ಲೈ ಓವರ್ ಕೆಳಭಾಗದಲ್ಲಿ ನಡೆಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಯು‌ಪಿ‌ಎ ಸರಕಾರ ಇರುವಾಗ ಹಾಗೂ ಬಿಜೆಪಿ ಎನ್‌‌ಡಿಎ ಸರಕಾರದ ಅವಧಿಯಲ್ಲಿನ ಕಚ್ಚಾತೈಲದ ಬೆಲೆಯ ಬಗ್ಗೆ ಸಾರ್ವಜನಿಕರು ಅವಲೋಕನ ಮಾಡಬೇಕಾಗಿದೆ ಎಂದು ಹೇಳಿದರು.ಅ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದ್ದರೂ…

Read More

ಮಂಗಳೂರಿನಲ್ಲಿ ಮೇ 28-29ರಂದು ‘ಅಮೃತಸಂಗಮ 2026’: ಸಪ್ತ ಸಂವತ್ಸರದ ಬಳಿಕ ಕರಾವಳಿ ಜಿಲ್ಲೆಗೆ ಅಮ್ಮ

ಮಂಗಳೂರು ಮಾತಾ ಅಮೃತಾನಂದಮಯಿ ದೇವಿ ಅವರು ಮೇ 28 ಮತ್ತು 29ರಂದು ಮಂಗಳೂರಿನಲ್ಲಿ ನಡೆಯಲಿರುವ ‘ಅಮೃತಸಂಗಮ 2026’ ಹಾಗೂ ಬ್ರಹ್ಮಸ್ಥಾನಂ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಏಳು ವರ್ಷಗಳ ಬಳಿಕ ಮಂಗಳೂರಿಗೆ ಆಗಮಿಸುತ್ತಿರುವ ಅಮ್ಮನವರ ಸ್ವಾಗತಕ್ಕೆ ಭಕ್ತರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ಕೇರಳದ ಹೊರಗೆ ಕರ್ನಾಟಕದಲ್ಲಿ ಆಯ್ಕೆಯಾದ ಏಕೈಕ ಸ್ಥಳ ಮಂಗಳೂರು ಎನ್ನುವುದು ವಿಶೇಷವಾಗಿದ್ದು, ಅಮ್ಮನವರಿಗೆ ಮಂಗಳೂರಿನ ಭಕ್ತರ ಮೇಲೆ ಇರುವ ಅಪಾರ ಮಮತೆಯ ಪ್ರತಿಫಲವೆಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ 25ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ…

Read More

​ಗಡಿನಾಡಿನ ಸಾಹಿತ್ಯ-ಸಾಂಸ್ಕೃತಿಕ ಕಣ್ಮಣಿ ಫಾದರ್ ಬಾಸಿಲ್ ವಾಸ್ ಅವರಿಗೆ ಭಾವುಕ ವಿದಾಯ

​ಕಾಸರಗೋಡು: ಗಡಿನಾಡ ಕಾಸರಗೋಡಿನ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಾ, ಅಂತರಧರ್ಮೀಯ ಸೌಹಾರ್ದದ ಪ್ರತೀಕವಾಗಿ ಗುರುತಿಸಿಕೊಂಡಿದ್ದ ವರ್ಕಾಡಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನ ಧರ್ಮಗುರು ಅತೀ ವಂದನೀಯ ಫಾದರ್ ಬಾಸಿಲ್ ವಾಸ್ ಅವರು ಇದೀಗ ಹೊಸ ಜವಾಬ್ದಾರಿಯೊಂದಿಗೆ ಮಂಗಳೂರಿನ ಬೊಂದೆಲ್ ಚರ್ಚ್‌ಗೆ ವರ್ಗಾವಣೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕನ್ನಡ ಕಾರ್ಯನಿರತ ಪತ್ರಕರ್ತರ ಶ್ರೇಯೋಭಿವೃದ್ಧಿ ಸಂಘ ಮತ್ತು ವಿವಿಧ ಕನ್ನಡ ಸಂಘಟನೆಗಳ ವತಿಯಿಂದ ಅದ್ಧೂರಿಯಾಗಿ ಅಭಿನಂದನೆ ಸಲ್ಲಿಸಲಾಯಿತು. ​ಕನ್ನಡ ಪತ್ರಕರ್ತರ ಸಂಘದ…

Read More

ಕೈಯ ತುತ್ತು ಯಾರ ಬಾಯಿಗೆ?

ರಾತ್ರಿ ಸುಮಾರು ಎಂಟು ಗಂಟೆ ಆಗಿರಬಹುದು, ವಿಜಯ್ ನ ಮನೆಯಲ್ಲಿ ಊಟಕ್ಕೆ ತಯಾರಿ ನಡೆಯುತ್ತಿತ್ತು. ಮಡದಿ ಪೂಜಾ ಊಟಕ್ಕೆ ಬನ್ನಿ ಎಂದು ಕರೆದಾಗ, ವಿಜಯ್. “ ಆ, ಸ್ವಲ್ಪವೇ ಅಡಿಕೆ ಇದೆ ಅದನ್ನು ಸುಲಿದು ಮುಗಿಸಿ ಬರುತ್ತೇನೆ. ಮಗನನ್ನು ಕರೆ” ಎಂದ. ವಿಜಯನ ಅಮ್ಮ ಆಗಷ್ಟೇ ದೇವರ ನಾಮ ಹೇಳಿ ಮುಗಿಸಿ, ಓದುತ್ತಿದ್ದ ಮೊಮ್ಮಗನನ್ನು ಕರೆದು ಬಂದರು. ತಾನು ಬೆಳೆದ ಅಡಿಕೆ, ಸುಲಿಯಲು ಹಾಕಿದ್ದಷ್ಟನ್ನು ಮುಗಿಸಿ, ಕೈಕಾಲು ತೊಳೆದು ಇನ್ನೇನು ಒಳಗೆ ಬರುವಷ್ಟರಲ್ಲಿ, ಅವನ ಗೆಳೆಯ ಗುರು,…

Read More

ರಸಗೊಬ್ಬರ ದರ ಏರಿಕೆ ವಿರುದ್ಧ ರೈತಸಂಘದ ಪ್ರತಿಭಟನೆ:“ಕೇಂದ್ರ ಸರ್ಕಾರದ ರೈತದ್ರೋಹಿ ನೀತಿ ಖಂಡನೀಯ” – ಕೆ.ಆರ್. ಜಯಾನಂದ

ಬಾಯಾರು : ರಸಗೊಬ್ಬರದ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ರೈತಸಂಘದ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಬಾಯಾರು ಪದವಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟನಾ ಸಭೆಯನ್ನು ರೈತಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿ, ರಸಗೊಬ್ಬರ ದರ ಏರಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಚಂದ್ರಹಾಸ ಶೆಟ್ಟಿ ಮಾಸ್ಟರ್ ವಹಿಸಿದ್ದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ…

Read More
error: Content is protected !!