ಕೆಸರುಗದ್ದೆಯ ವೀರಕ್ರೀಡೆಗೆ ಸುಪ್ರೀಂ ಜಯ ಗಡಿ ಮೀರಿ ಮೊಳಗಲಿದೆ ಕಂಬಳದ ಕಹಳೆ!
ಹೊಸ ಚಿಗುರು ಹಳೆ ಬೇರು ಹೊಸತು ಹಳೆಬರ ಕೂಟ | ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ || ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ | ಜಸವು ಜನಜೀವನಕೆ – ಮಂಕುತಿಮ್ಮ || ಡಿ.ವಿ.ಜಿ ಅವರ ಈ ಸಾಲುಗಳಂತೆ, ನಮ್ಮ ಹಳೆಯ ಬೇರಾದ ಸಂಪ್ರದಾಯಕ್ಕೆ ಹೊಸ ಕಾಲದ ನ್ಯಾಯದ ಬಲ ಸಿಕ್ಕಿದೆ. ತುಳುನಾಡಿನ ಮಣ್ಣಿನ ಘಮಲು, ಕಷ್ಟಜೀವಿ ರೈತನ ಬೆವರಿನ ಹನಿ ಹಾಗೂ ಕರುನಾಡಿನ ಕಲಿ ಕೋಣಗಳ ಪರಾಕ್ರಮಕ್ಕೆ ಈಗ ಸುಪ್ರೀಂ ಕೋರ್ಟ್ನಿಂದ ಐತಿಹಾಸಿಕ ಮಾನ್ಯತೆ ಲಭಿಸಿದೆ….