ದೈವಜ್ಞರು ಬದುಕಿನ ದಾರಿದೀಪವೋ ಅಥವಾ ವಿಧಿಯ ವ್ಯಾಪಾರಿಗಳೋ?
ಭಾರತೀಯ ಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ‘ವೇದಚಕ್ಷು’ ಎಂದು ಗೌರವಿಸಲಾಗುತ್ತದೆ. ಅಂದರೆ, ಅಜ್ಞಾನದ ಕತ್ತಲೆಯಲ್ಲಿ ದಾರಿ ಕಾಣದೆ ತಡಕಾಡುವ ಮನುಷ್ಯನಿಗೆ ಕಾಲದ ಗತಿಯನ್ನು ತೋರಿಸುವ ದಿವ್ಯ ದೃಷ್ಟಿ ಇದು. ಆದರೆ ಇಂದು ಸ್ವರ್ಣ ಪ್ರಶ್ನೆ, ಪ್ರೇತ ಚಿಂತನೆ ಮತ್ತು ದೋಷ ಪರಿಹಾರಗಳೆಂಬ ಪವಿತ್ರ ಶಬ್ದಗಳು ಭಕ್ತಿಯ ಹಾದಿಗಿಂತ ಹೆಚ್ಚಾಗಿ ಲಾಭದಾಯಕ ವ್ಯಾಪಾರದ ಸಂಕೇತಗಳಾಗಿ ಬದಲಾಗುತ್ತಿರುವುದು ಒಂದು ಸಾಮಾಜಿಕ ದುರಂತವೇ ಸರಿ. ಅನಿಶ್ಚಿತತೆಯ ಮೇಲೆ ಕುದುರುವ ವ್ಯಾಪಾರ ಒಬ್ಬ ನೈಜ ದೈವಜ್ಞನು ವ್ಯಕ್ತಿಯ ಜಾತಕದಲ್ಲಿರುವ ದೋಷಗಳನ್ನು ಕಂಡು ಅವರನ್ನು ಹೆದರಿಸುವ…