ಓಣಂ

ಓಣಂ ಹಬ್ಬವನ್ನು ಮಲಯಾಳಿಗಳು ಆಚರಿಸುವಂತಹ ವಿಶಿಷ್ಟ ಬಗೆಯ ಹಬ್ಬವಾಗಿದೆ . ಕರಾವಳಿ ಜಿಲ್ಲೆಗಳಲ್ಲಿಯೂ ಈ ಹಬ್ಬದ ಆಚರಣೆಯನ್ನು ತುಂಬಾನೇ ಸಂಭ್ರಮದಿಂದ ಆಚರಿಸುತ್ತಾರೆ . ಈ ಹಬ್ಬವು ಮಹಾಬಲಿ ಚಕ್ರವರ್ತಿ ಅಥವಾ ಮಾವೇಲಿ ಎಂದು ಕರೆಯುವ ಮಹಾರಾಜನೊಂದಿಗೆ ನಂಟನ್ನು ಆತನ ನೆನೆಪಿಗಾಗಿ ಆಚರಣೆಯನ್ನು ಮಾಡುವ ದೇವರ ನಾಡಿನ ಹಬ್ಬವಾಗಿದೆ . ಈ ಹಬ್ಬ ತನ್ನದೇ ಆದ ಹಿನ್ನಲೆಯನ್ನು ಹೊಂದಿದೆ , ತಲೆ ತಲೆ ಮಾರುಗಳ ಹಿಂದೆ ಮಲಯಾಳಂ ನಾಡನ್ನು ಮಹಾಬಲಿ ಎಂಬ ಅಸುರರಾಜನು ಆಳುತ್ತಿದ್ದನು .ಆತ ಅಸುರನಾದರೂ ಅತ್ಯಂತ…

Read More

ಶ್ರೀ ಅಯ್ಯಂಗಾಳಿ (1863 – 1941 )

ಕೇರಳದ ನವೋತ್ಥಾನ ನಾಯಕರಲ್ಲಿ ಒಬ್ಬರಾದ , ಅಗ್ರಗಣ್ಯ ಧೀಮಂತ ನಾಯಕರು ಆಗಿರುವ ದಲಿತರ ಸಾಮಾಜಿಕ ರಾಜಕೀಯ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ ಕೇರಳದ ಅಂಬೇಡ್ಕರ್ ಎಂದು ವಿಶೇಷಣವನ್ನು ಪಡೆದಿರುವ ಕೇರಳದ ಮಹಾನ್ ಪುತ್ರನಾಗಿರುವ ಶ್ರೀ ಅಯ್ಯಂಕಾಲಿ ಅವರ ಜನ್ಮದಿನವನ್ನು ಅಗಸ್ಟ್ 28ರಂದು ಎಲ್ಲಾ ವರ್ಷ ಅಯಂಕಾಲಿ ದಿನವನ್ನಾಗಿ ಆಚರಿಸಲಾಗುವುದು. ಶ್ರೀ ಅಯ್ಯಂಗಾಳಿಯವರು ತಿರುವನಂತಪುರದ ವೆಂಗನೂರು ಎಂಬಲ್ಲಿ ಶ್ರೀ ಅಯ್ಯನ್ ಮತ್ತು ಶ್ರೀಮತಿ ಮಾಲ ದಂಪತಿಗಳಿಗೆ 1863 ಅಗಸ್ಟ್ 28ರಂದು ಜನಿಸಿದರು. ಕೇರಳದ ದಲಿತ ಸಮುದಾಯದ ಸಾಮಾಜಿಕ ರಾಜಕೀಯ ಶೈಕ್ಷಣಿಕ…

Read More

ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು. CPR V/S BSR. “ದಕ್ಷಿಣಾಸ್ತ್ರಕ್ಕೆ” ವೇದಿಕೆ ಸಜ್ಜು

ಮುಂಬರುವ ಉಪರಾಷ್ಟ್ರಪತಿ ಚುನಾವಣೆಯು ಎರಡು ಒಕ್ಕೂಟಗಳ ಮಧ್ಯೆ ನಡೆಯುವ ಸ್ಪರ್ಧೆಗಿಂತಲೂ ದಕ್ಷಿಣದ ಎರಡು ರಾಜ್ಯಗಳ ಮಧ್ಯೆ ನಡೆಯುವ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿದೆ .NDA ತನ್ನ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ನಾಮಪತ್ರ ಸಲ್ಲಿಸಿದ್ದಾರೆ. ಸಿಪಿ ರಾಧಾಕೃಷ್ಣನ್ ತಮಿಳುನಾಡಿನ ಹಿರಿಯ ಬಿಜೆಪಿ ನಾಯಕರಾಗಿದ್ದು ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯ ಕರ್ತರಾಗಿದ್ದರೆ. 1974 ರಲ್ಲಿ ಭಾರತೀಯ ಜನ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಕೊಯಂಬತ್ತೂರು ಲೋಕ ಸಭಾ ಕ್ಷೇತ್ರದಿಂದ ಎರಡು ಭಾರಿ ಸಂಸದರಾಗಿ ,…

Read More

ಉಪರಾಷ್ಟ್ರಪತಿ ಚುನಾವಣೆ ಸೆಪ್ಟೆಂಬರ್ 9 ರಂದು.ಸಿ ಪಿ ರಾಧಾಕೃಷ್ಣನ್ ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥ ?

ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಮುಖ್ಯಸ್ಥರಾದ ಉಪರಾಷ್ಟ್ರಪತಿ ಚುನಾವಣೆಯು ಸೆಪ್ಟೆಂಬರ್ 9 ರಂದು ನಡೆಸಲು ಚುನಾವಣಾ ಆಯೋಗ ಈಗಾಗಲೇ ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ .ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ತನ್ನ ಹುದ್ದೆಗೆ ಇತ್ತೀಚಿಗೆ ಧಿಡೀರ್ ರಾಜೀನಾಮೆ ನೀಡಿದ ಕಾರಣ ಈ ಸ್ಥಾನ ತೆರವು ಆಗಿದೆ.ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ತಿನ ಉಭಯ ಸದನಗಳಾದ ರಾಜ್ಯಸಭೆ ಹಾಗೂ ಲೋಕಸಭೆ ಯ ಚುನಾಯಿತ ಪ್ರತಿನಿಧಿಗಳು ಹಾಗೂ ನಾಮನಿರ್ದೇಶನಗೊಂಡ ಸದಸ್ಯರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರು. ಸಂವಿಧಾನದ 68 ನೇ ವಿಧಿ ಕಾಲಂ 2…

Read More

ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದ ಹೊಸದುರ್ಗ ಕೋಟೆ-ಇದೀಗ ಅನಾಥ ಸ್ಥಿತಿಯಲ್ಲಿ

ಕೆಳದಿ ನಾಯಕರಿಂದ ಕೇರಳದ ದಕ್ಷಿಣದಲ್ಲಿ ಸ್ಥಾಪಿತ ಕೋಟೆಗಳಲ್ಲಿ ಹೊಸದುರ್ಗ ಕೋಟೆಯು ಒಂದು . ಬಹುಷಃ ಈ ಕೋಟೆ ಕೆಳದಿ ನಾಯಕರ ಆಳ್ವಿಕೆ ಕಾಲಘಟದ ಕೊನೆಯಲ್ಲಿ ನಿರ್ಮಿಸಲಾಗಿತ್ತೆಂದು ಇತಿಹಾಸಕಾರರ ಅಭಿಪ್ರಾಯವಾಗಿದೆ . ಹಾಗಾಗಿ ಈ ಭವ್ಯತೆಯನ್ನು ಹೊಸದುರ್ಗ ಎಂದು ಕರೆಯುತ್ತಾರೆ . ಹೊಸ ಎಂದರೆ ನವ , ದುರ್ಗ ಎಂದರೆ ಕೋಟೆ ಎನ್ನುವ ಅರ್ಥವನ್ನು ನೀಡುತ್ತದೆ . ಈಗಾಗಲು ಈ ಪ್ರದೇಶವನ್ನು ಕನ್ನಡಿಗರು ಮತ್ತು ದಾಖಲೆಗಳಲ್ಲಿ ಹೊಸದುರ್ಗ ಎಂದು . ಮಲೆಯಾಳಿಗಳು ಪುದಿಯಕೋಟ ಎಂದು ಕರೆಯುತ್ತಾರೆ . ಹೊಸದುರ್ಗ…

Read More

ತುಳುನಾಡ ಹೆಗ್ಗುರುತು ಚಂದ್ರಗಿರಿ ಕೋಟೆಯ ಕಥೆ ವ್ಯಥೆ

ಉತ್ತರ ಕೇರಳದ ಇತಿಹಾಸ ಅರಿಯುವುದು ಸುಲಭದ ಮಾತಲ್ಲ . ಈ ಭಾಗದ ಇತಿಹಾಸವನ್ನು ತಿಳಿಯುವಲ್ಲಿ ಬರಹಗಳ ಹೊರತಾಗಿ ಇಲ್ಲಿನ ಪುರಾತತ್ವ ವಸ್ತು ಆಧಾರಗಳು ಸಾಕಷ್ಟು ಸಹಕಾರಿಯಾಗಿದೆ. ಅವುಗಳು ಸತ್ಯ ಇತಿಹಾಸಕ್ಕೆ ಕೈ ಕನ್ನಡಿಯಂತಿವೆ. ಅವುಗಳಲ್ಲಿ ಶಾಸನಗಳು , ಕೋಟೆಗಳು , ದೇವಾಲಯಗಳು , ನಾಣ್ಯಗಳು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತವೆ. ಅವು ಇತಿಹಾಸದ ಪುನರ್ ರಚನೆಗೆ ಸಹಕಾರಿಯಾಗುತ್ತವೆ. ಈ ನಾಡಿನ ಸಂಸ್ಕೃತಿಯ ನಾಡಿಮಿಡಿತದಂತಿರುವ ಕೋಟೆ ಕೊತ್ತಲಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಲೇಬೇಕು . ಕಾಸರಗೋಡನ್ನು ಕೋಟೆಗಳ ನಾಡೆಂದು ಕರೆಯುತ್ತಾರೆ. ಯಾಕೆಂದರೆ…

Read More

ಆಟಿದ ಪೊರ್ಲು ಸಂಸ್ಕೃತಿದ ಅನಾವರಣ .ಇನಿ ಆಟಿ ಅಮಾಸೆ.

ವರ್ಷ 12 ತಿಂಗೊಳ್ದ್ ಆಟಿದ ತಿಂಗೊಳು ತುಳುವೆರೆಗ್ ಬಾರಿ ಪೆರ್ಮೆದ ಒಂಜಿ ತಿಂಗೊಳು.ಆನಿದ ಕಾಲದ ಆಟಿ ತುಳುವೆರೆನ ಬಡವುದ ಬದ್ಕ್ ಆದ್ ಸಂಸ್ಕೃತಿದ ಅನಾವರದ ಬದ್ಕ್ ಲಾ ಅಂಡ್. ಎಂಚ ಪಂಡಾ ಆಟಿದ ತಿಂಗೊಳ್ದ್ ತಿನ್ಪುನ ತೆನಾಸ್ ,ಮಲ್ಪುನ ಆಚರಣೆಲು ಮಾತಾ ನಮ್ಮ ಸಂಸ್ಕೃತಿದ ಪೊಲಬುನು ತೆರಿಪಾವಲೆಕ ಆಂಡ್ . ಈ ಒಂಜಿ ತಿಂಗೊಳ್ದ್ ನಮ ಮನ್ಪುನ ಆಚರಣೆಲು, ತಿನ್ಪುನ ತೆನಾಸ್ ಗ್ಲಾ ಒಂಜಿ ವೈಜ್ಞಾನಿಕ ಕಾರಣ ಉಂಡು .ಆಟಿದ ತಿಂಗೊಳ್ದ್ ತುಳುನಾಡ್ ದ ಸಾರಾಮನಿ ಸತ್ಯೋಳು…

Read More

ಕೈಬೀಸಿ ಕರೆಯುವ ಬೇಕಲಕೋಟೆ…

ಕೇರಳ ರಾಜ್ಯದ ಸ್ವರ್ಣ ಕಿರೀಟದಂತೆ ,ಗಜರಾಜನಂತೆ, ಸಪ್ತ ಭಾಷೆಯ ಸಂಗಮ ನಾಡು ತುಳು, ಮಲಯಾಳಂ, ಕನ್ನಡ, ಮರಾಠಿ, ಬ್ಯಾರಿ ,ಕೊಂಕಣಿ, ಉರ್ದು ಭಾಷೆಗಳ ಪೊರೆಯುವ ತೊಟ್ಟಿಲು ಈ ಗೂಡು. ಚರಿತ್ರೆಯ ಪುಟಗಳನ್ನು ಒಮ್ಮೆ ಇಣುಕಿ ನೋಡಿದರೆ ಭವ್ಯವಾದ ಇಕ್ಕೇರಿ ನಾಯಕರು ಕಟ್ಟಿದ ಬೇಕಲ ಕೋಟೆ ಮತ್ತು ಅದರ ಅಕ್ಕಪಕ್ಕದ ನೆಲೆಗಳು ಪುಳಕಿಸುವಂತದ್ದು. ಸರ್ವ ಧರ್ಮದ ಶಾಂತಿಯ ತೋಟವಾಗಿರುವ, ದೈವಗಳ ಆರಾಧನೆಯ ಬೀಡಾಗಿರುವ ಕಾಸರಗೋಡು ದೇವಾಲಯಗಳಿಗೆ, ಮಂದಿರಗಳಿಗೆ, ಪಳ್ಳಿಗಳಿಗೆ ಹೆಸರುವಾಸಿ. ಉದಾಹರಣೆ ಮಧೂರು, ಅಡೂರು, ಅನಂತಪುರ , ಮಾಲಿಕ್…

Read More

ಗಡಿನಾಡ ಗುಡಿಯಲ್ಲಿ ಕನ್ನಡಮ್ಮನ ಉಸಿರಾಗಿರುವ ಶಾಲೆ

ಗಡಿನಾಡಿನಲ್ಲಿ ನಿರಂತರ ಕನ್ನಡ ಕಲರವಿಸಲು ಭಾಷಾ ಅಭಿಮಾನಿಗಳು, ಭಾಷೆಯ ಆಡುವವರು ಎಷ್ಟು ಮುಖ್ಯವೋ ಇವುಗಳಿಗೆ ನೀರರೆಯುವ ಸಾಹಿತ್ಯ , ಕನ್ನಡ ಭವನ, ಕನ್ನಡ ಶಾಲೆಗಳು ಅಷ್ಟೇ ಮುಖ್ಯ. ಒಂದು ಕಾಲದಲ್ಲಿ ನೂರಾರು ಶಾಲೆಗಳು ಅಸ್ತಿತ್ವದಲ್ಲಿದ್ದು ಅವುಗಳನ್ನೆಲ್ಲಾ ಸುವರ್ಣಾಕ್ಷರದಲ್ಲಿ ಬರೆಯುತ್ತಿದ್ದ ಕಾಲವದು. ಇಂದು ಆ ಸಂಖ್ಯೆಗಳು ಕುಗ್ಗುತ್ತಾ ಇದೆ, ಭಾಷಾ ಅಭಿಮಾನ ಇಲ್ಲಿನ ಅನ್ಯ ಭಾಷೆಯ ಮೇಲಿನ ವ್ಯಾಮೋಹದಿಂದ ಕಡಿಮೆ ಆಗ್ತಾ ಇದೆ. ಈ ವ್ಯಾಮೋಹದ ಜಾಲವು ಬಹುಶಃ ಗಡಿನಾಡು ಕೈ ತಪ್ಪಿದಾಗಿನಿಂದ ಆರಂಭವಾಗಿತ್ತೆಂಬುದು ಸ್ಪಷ್ಟ. ಗಡಿನಾಡ ಕನ್ನಡಿಗರ…

Read More

ದೇಶ ಕಂಡ ಕ್ರಾಂತಿಕಾರಿ ನಾಯಕ ಅಜಾತಶತ್ರು ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಚುತಾನಂದ್ ಇನ್ನು ನೆನಪು ಮಾತ್ರ

ದೇಶ ಕಂಡ ಅಪರೂಪದ ಮತ್ತು ವಿಶಿಷ್ಟ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ ವಿ ಎಸ್ ಎಂದೇ ಖ್ಯಾತರಾದ ವೇಲಿಕ್ಕತ್ತು ಶೇಖರನ್ ಅಚ್ಚುತಾನಂದನ್.1923 ಒಕ್ಟೋಬರ್ 20 ಅಲಪ್ಪುಳ ಜಿಲ್ಲೆಯ ಪುನ್ನಪ್ಪುರದ ಶಂಕರನ್ ಮತ್ತು ಅಕ್ಕಮ್ಮ ದಂಪತಿಗಳ ಪುತ್ರನಾಗಿ ಜನಿಸಿ ,ಕೃಷಿಕರ ಮತ್ತು ಶೋಷಿತ ವರ್ಗದ ಜನರ ಧ್ವನಿಯಾಗಿ ಜನಾನುರಾಗಿ ದೇಶದಲ್ಲೇ ಅತಿ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.ತನ್ನ ನಾಲ್ಕನೇ ವಯಸ್ಸಿನಲ್ಲಿ ತಾಯಿಯನ್ನು ಏಳನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಸಹೋದರನಾದ ಗಂಗಾಧರನ್ ನವರ ಟೈಲರಿಂಗ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.ತಂದೆ ತಾಯಿಯನ್ನು ಕಳೆದುಕೊಂಡು…

Read More
error: Content is protected !!