ತುಂಬೆ ಮೆಡಿಸಿಟಿಗೆ ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ ಭೇಟಿ

ಅಜ್ಮಾನ್:* ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವ ಹಿಸ್ ಎಕ್ಸಲೆನ್ಸಿ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ ಅವರು ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿಗೆ ಭೇಟಿ ನೀಡಿದರು. ತುಂಬೆ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ ಹಾಗೂ ಸಂಸ್ಥೆಯ ಹಿರಿಯ ಶೈಕ್ಷಣಿಕ ಮತ್ತು ವೈದ್ಯಕೀಯ ಅಧಿಕಾರಿಗಳು ಸಚಿವರನ್ನು ಸ್ವಾಗತಿಸಿದರು. ಭೇಟಿ ವೇಳೆ ಮಾತನಾಡಿದ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ, ವೈದ್ಯಕೀಯ ಹಾಗೂ ದೀರ್ಘಾಯುಷ್ಯ ಪ್ರವಾಸೋದ್ಯಮವು ಜಾಗತಿಕವಾಗಿ…

Read More

ಸಿಡ್ನಿಯಲ್ಲಿ ನಾಪತ್ತೆಯಾಗಿದ್ದ 18 ವರ್ಷದ ಯುವತಿ ಶವವಾಗಿ ಪತ್ತೆ

ಸಿಡ್ನಿ: ಪಾರ್ಕ್‌ಗೆ ನಡೆದುಕೊಂಡು ಹೋಗುವುದಾಗಿ ಮನೆಯಿಂದ ಹೊರಟು ನಾಪತ್ತೆಯಾಗಿದ್ದ 18 ವರ್ಷದ ಯುವತಿ ಲಿಲ್ಲಿ ಹೂಪರ್ ಅವರನ್ನು ಎಂಟು ದಿನಗಳ ಕಾಲ ನಡೆಸಿದ ಶೋಧದ ಬಳಿಕ ಶವವಾಗಿ ಪತ್ತೆಹಚ್ಚಲಾಗಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ನೀಡಿದ ತಪ್ಪು ಮಾಹಿತಿಯ ಆಧಾರದ ಮೇಲೆ ಯುವತಿಯನ್ನು ಜೀವಂತವಾಗಿ ಪತ್ತೆಹಚ್ಚಲಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸಂಸತ್ತಿಗೆ ತಿಳಿಸಿದ ಬೆನ್ನಲ್ಲೇ ಆಕೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಗುರುವಾರ ಸಿಡ್ನಿಯ ದಕ್ಷಿಣದ ಪರ್ವತ ಪ್ರದೇಶದಲ್ಲಿ ದಟ್ಟ ಪೊದೆಗಳ ನಡುವೆ ಯುವತಿಯ…

Read More

49 ವೈದ್ಯಕೀಯ ವಿಶೇಷತೆಗಳಿಗೆ ದಾರಿ ತೆರೆಯುವ ತುಂಬೆ–UMFST ಅಂತರರಾಷ್ಟ್ರೀಯ ರೆಸಿಡೆನ್ಸಿ ಪಾಥ್‌ವೇ

ಅಜ್ಮಾನ್/ಟಾರ್ಗು ಮುರೆಶ್ (ರೊಮೇನಿಯಾ)ಆ.19: ವೈದ್ಯಕೀಯ ಪದವೀಧರರಿಗೆ ಯುರೋಪಿಯನ್ ಮಟ್ಟದ ವಿಶೇಷ ವೈದ್ಯಕೀಯ ತರಬೇತಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ತುಂಬೆ ಗ್ರೂಪ್ ಹಾಗೂ ರೊಮೇನಿಯಾದ ಜಾರ್ಜ್ ಎಮಿಲ್ ಪಲಾಡೆ ಯೂನಿವರ್ಸಿಟಿ ಆಫ್ ಮೆಡಿಸಿನ್, ಫಾರ್ಮಸಿ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಆಫ್ ಟಾರ್ಗು ಮುರೆಶ್ (UMFST) ಜಂಟಿಯಾಗಿ **‘ತುಂಬೆ–UMFST ಇಂಟರ್‌ನ್ಯಾಷನಲ್ ರೆಸಿಡೆನ್ಸಿ ಪಾಥ್‌ವೇ ಪ್ರೋಗ್ರಾಂ’ ಆರಂಭಿಸಿದೆ. ಈ ಕಾರ್ಯಕ್ರಮದ ಮೂಲಕ ಅರ್ಹ ವೈದ್ಯಕೀಯ ಪದವೀಧರರಿಗೆ ರೊಮೇನಿಯಾ ಮತ್ತು ಯುರೋಪಿಯನ್ ಆರೋಗ್ಯ ವ್ಯವಸ್ಥೆಗಳ ಮಾನ್ಯತೆಗೆ ಒಳಪಟ್ಟ 49 ವೈದ್ಯಕೀಯ ವಿಶೇಷತೆಗಳಲ್ಲಿ ರೆಸಿಡೆನ್ಸಿ…

Read More

ಟ್ರಂಪ್ ಆಡಳಿತಾವಧಿ ಮುಗಿಯುವವರೆಗೂ ಯುದ್ಧ ಮುಂದುವರಿಯಲಿದೆ; ಇರಾನ್ ಸುಳಿವು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿ ಮುಗಿಯುವವರೆಗೂ ಯುದ್ಧ ಮುಂದುವರಿಯಲಿದೆ ಎಂಬ ಸುಳಿವನ್ನು ಇರಾನ್ ನೀಡಿದೆ. ಕದನ ವಿರಾಮ ಒಪ್ಪಂದವನ್ನು ಮುಂದುವರಿಸಲು ಇರಾನ್ ಒಪ್ಪಿಕೊಂಡಿದೆ ಎಂಬ ವರದಿಗಳನ್ನು ಇರಾನ್ ತಳ್ಳಿಹಾಕಿದೆ. 60 ದಿನಗಳ ಅವಧಿಯನ್ನು ವಿಸ್ತರಿಸಲು ಒಪ್ಪಿಕೊಂಡಿದೆ ಎಂಬ ವರದಿಗಳನ್ನೂ ಇರಾನ್ ನಿರಾಕರಿಸಿದೆ. ಅಮೆರಿಕ ಮತ್ತು ಇರಾನ್‌ನ್ನು ಮತ್ತೆ ಮಾತುಕತೆಯ ಮೇಜಿಗೆ ಕರೆತರಲು ಪ್ರಯತ್ನಗಳು ಮುಂದುವರಿದಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ. ಮಿಸೈಲ್ ದಾಳಿಯ ಭೀತಿಯಿಂದಲೇ ನ್ಯಾಟೋ ಶೃಂಗಸಭೆಗೆ ಆಗಮಿಸಿದ್ದ ಟ್ರಂಪ್ ತಮ್ಮ ವಿಮಾನವನ್ನು…

Read More

ಜಿಂಬಾಬ್ವೆಯಲ್ಲಿ ಭೀಕರ ದೋಣಿ ದುರಂತ: 15 ಮಂದಿ ಸಾವು, 27 ಮಂದಿ ನಾಪತ್ತೆ

ಹರಾರೆ: ಜಿಂಬಾಬ್ವೆಯ ಕರಿಬಾ ಕೆರೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದು ಕನಿಷ್ಠ 15 ಮಂದಿ ಮೃತಪಟ್ಟಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಪ್ರಕಾರ, 77 ಮಂದಿಯನ್ನು ರಕ್ಷಿಸಲಾಗಿದ್ದು, ಅವರು ಕೆರೆಯ ಸಣ್ಣ ದ್ವೀಪವೊಂದನ್ನು ತಲುಪಿದ್ದಾರೆ. ಅಪಘಾತದ ವೇಳೆ ದೋಣಿಯಲ್ಲಿ 114 ವಯಸ್ಕ ಪ್ರಯಾಣಿಕರು ಹಾಗೂ ಐವರು ಸಿಬ್ಬಂದಿ ಇದ್ದರು ಎಂಬುದು ಟಿಕೆಟ್ ದಾಖಲೆಗಳಿಂದ ತಿಳಿದುಬಂದಿದೆ. ಆದರೆ, ಟಿಕೆಟ್ ಅಗತ್ಯವಿಲ್ಲದ ವಯಸ್ಸಿನ ಮಕ್ಕಳು ಎಷ್ಟು ಮಂದಿ ದೋಣಿಯಲ್ಲಿದ್ದರು ಎಂಬುದು ಸ್ಪಷ್ಟವಾಗಿಲ್ಲ. ದೋಣಿಯ ಗರಿಷ್ಠ…

Read More

ಸಿರಿಯಾದ ಮಾಜಿ ಅಧ್ಯಕ್ಷ ಬಷರ್ ಅಸ್ಸಾದ್‌ಗೆ ಮರಣದಂಡನೆ

ಡಮಾಸ್ಕಸ್: ಸಿರಿಯಾದಲ್ಲಿ 14 ವರ್ಷಗಳ ಕಾಲ ನಡೆದ ಸುದೀರ್ಘ ಸಂಘರ್ಷಕ್ಕೆ ಕಾರಣವಾದ ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ಯುದ್ಧ ಅಪರಾಧಗಳ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಬಷರ್ ಅಸ್ಸಾದ್ ಮತ್ತು ಅವರ ಸಹೋದರ ಮಹೇರ್ ಅಸ್ಸಾದ್‌ಗೆ ಸಿರಿಯಾದ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಸಂಘರ್ಷದಲ್ಲಿ ಸುಮಾರು 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಅಸ್ಸಾದ್ ಅವರ ಸೋದರಸಂಬಂಧಿ ಅತೆಫ್ ನಜೀಬ್ ಅವರಿಗೂ ದಂಗೆ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದಡಿ ಮರಣದಂಡನೆ ವಿಧಿಸಲಾಗಿದೆ. ಭದ್ರತಾ ವ್ಯವಸ್ಥೆ…

Read More

ಇಡಾಹೊ ರೆಸ್ಟೋರೆಂಟ್‌ನಲ್ಲಿ ಗುಂಡಿನ ದಾಳಿ: ಮೂವರು ಸಾವು, 7 ಮಂದಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ಇಡಾಹೊದಲ್ಲಿರುವ ‘ಇನ್-ಎನ್-ಔಟ್ ಬರ್ಗರ್’ ರೆಸ್ಟೋರೆಂಟ್‌ನಲ್ಲಿ ಕಳೆದ ವಾರ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಹೊಸ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಬಂದೂಕುಧಾರಿ ರೆಸ್ಟೋರೆಂಟ್‌ನ ಕಿಟಕಿಯ ಬಳಿ ನಾಲ್ಕು ಬಾರಿ ತೆರಳಿ ಗುಂಡು ಹಾರಿಸಿದ್ದಾನೆ. ಈ ವೇಳೆ ರೆಸ್ಟೋರೆಂಟ್‌ನ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಬಳಿಕ ಬಂದೂಕುಧಾರಿ ರೆಸ್ಟೋರೆಂಟ್‌ನಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸಮೀಪದ ಅಂಗಡಿಯ ಸಿಬ್ಬಂದಿಯೊಬ್ಬರು ಧೈರ್ಯದಿಂದ ಸ್ಥಳಕ್ಕೆ ಧಾವಿಸಿ, ಹೊರಗಿದ್ದ ಬಂದೂಕುಧಾರಿಯನ್ನು…

Read More

ಅಮೆರಿಕಾದ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆ ಅನುಕರಣೀಯ;’ ಬನ’ ಮಹಾಧಿವೇಶನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ.

ವಾಷಿಂಗ್ಟನ್‌:ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು ತಮ್ಮ ಮೂಲ ಸಂಸ್ಕೃತಿಯನ್ನು ಬಿಡದೆ ನವ ಪೀಳಿಗೆಗೂ ಅದರ ಅರಿವು ಮೂಡಿಸುತ್ತಿರುವುದು ಅನುಕರಣೀಯ ಕೆಲಸ ಎಂದು ಉದ್ಯಮಿ ಹಾಗು ಮಹಾ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಕುಳೂರು ಹೇಳಿದ್ದಾರೆ. ಅಮೆರಿಕಾದ ಸೀಟೆಲ್ ನಲ್ಲಿ ಉತ್ತರ ಅಮೆರಿಕಾ ಬಂಟರ ಸಂಘ ‘ಬನ’ ಆಯೋಜಿಸಿದ್ದ ೨೫ ನೇ ಹೆಗ್ಗುರುತು ಮಹಾ ಅಧಿವೇಶನ ‘ದಿಬ್ಬಣ’ ದಲ್ಲಿ ಪಾಲ್ಗೊಂಡು ಮಾತನಾಡಿದ…

Read More

ಇರಾನ್ ಮೇಲಿನ ದಾಳಿಗೆ ಬ್ರೇಕ್: ಗಲ್ಫ್ ನಾಯಕರ ಸಲಹೆಗೆ ಟ್ರಂಪ್ ಮನ್ನಣೆ

ವಾಷಿಂಗ್ಟನ್: ಇರಾನ್ ಮೇಲೆ ಭಾರೀ ಸೇನಾ ದಾಳಿ ನಡೆಸುವ ಯೋಜನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ನಾಯಕರ ಸಲಹೆಯ ಮೇರೆಗೆ ಯುದ್ಧಕ್ಕಿಂತ ರಾಜತಾಂತ್ರಿಕ ಮಾತುಕತೆಗೆ ಆದ್ಯತೆ ನೀಡಲು ಈ ನಿರ್ಧಾರ ಕೈಗೊಂಡಿದ್ದಾರೆ. ಟ್ರಂಪ್ ಅವರ ಪ್ರಕಾರ, ಎರಡನೇ ವಿಶ್ವಯುದ್ಧದ ಬಳಿಕದ ಅತಿದೊಡ್ಡ ದಾಳಿಯ ಯೋಜನೆ ಸಿದ್ಧವಾಗಿದ್ದರೂ, ಗಲ್ಫ್ ರಾಷ್ಟ್ರಗಳ ಮಧ್ಯಸ್ಥಿಕೆಯಿಂದ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಅಮೆರಿಕ ಹಾಗೂ ಇರಾನ್ ನಡುವಿನ ಮಾತುಕತೆಗಳು…

Read More

ಮೊರಾಕೊದಿಂದ ಸಿಯುಟಾಗೆ 60 ಸಾವಿರ ವಲಸಿಗರ ನುಸುಳಿಕೆ; 34 ಮಂದಿ ಸಾವು

ಸಿಯುಟಾ: ಕಳೆದ 24 ಗಂಟೆಗಳಲ್ಲಿ ಮೊರಾಕೊದಿಂದ ಸ್ಪೇನ್‌ನ ಉತ್ತರ ಆಫ್ರಿಕಾದ ಪ್ರದೇಶವಾದ ಸಿಯುಟಾಗೆ ಸುಮಾರು 60 ಸಾವಿರ ಅಕ್ರಮ ವಲಸಿಗರು ನುಸುಳಲು ಯತ್ನಿಸಿದ್ದು, ಸಮುದ್ರದಲ್ಲಿ ಈಜುವ ವೇಳೆ 34 ಮಂದಿ ಮೃತಪಟ್ಟಿದ್ದಾರೆ ಎಂದು ಸಿಯುಟಾ ಅಧ್ಯಕ್ಷ ಜುವಾನ್ ಜೀಸಸ್ ವಿವಾಸ್ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಪೇನ್ ಸರ್ಕಾರ ಸಿಯುಟಾದಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ. ಗಡಿ ದಾಟುತ್ತಿರುವ ಸಾವಿರಾರು ವಲಸಿಗರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಅಕ್ರಮ…

Read More
error: Content is protected !!