ಅಶೋಕನಗರದಲ್ಲಿ ಮಹಿಳಾ ಮಂಡಲ–ಅಂಗನವಾಡಿಗೆ ಇಂಟರ್‌ಲಾಕ್ ಅಳವಡಿಕೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ

ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 25ನೇ ವಾರ್ಡಿನ ಅಶೋಕನಗರದಲ್ಲಿರುವ ಮಹಿಳಾ ಮಂಡಲ ಹಾಗೂ ಅಂಗನವಾಡಿ ಶಾಲೆಗೆ ಇಂಟರ್‌ಲಾಕ್ ಅಳವಡಿಸಲಾಗಿದ್ದು, ಶಾಸಕ Vedavyas Kamath ಅವರು ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು, ಸ್ಥಳೀಯರ ಮನವಿಯಂತೆ ಅನುದಾನವನ್ನು ವ್ಯವಸ್ಥೆ ಮಾಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ಅಗತ್ಯ ಬಿದ್ದರೆ ಇನ್ನಷ್ಟು ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಮನಪಾ ಸದಸ್ಯೆ ಜಯಲಕ್ಷ್ಮೀ ವಿ. ಶೆಟ್ಟಿ, ಬಿಜೆಪಿ ಪ್ರಮುಖರಾದ ದೀಕ್ಷಿತ್, ವರದರಾಜ್,…

Read More

ಮಂಗಳೂರಿನಲ್ಲಿ ಏಪ್ರಿಲ್ 9ರಂದು “ಶ್ರೀರಾಮ್ ಸಾರಥಿ ಸಂಗಮ” — ಸಾರಿಗೆ ಕ್ಷೇತ್ರದ ಕಾರ್ಮಿಕರು, ಮಾಲಕರಿಗೆ ವಿಶೇಷ ಕಾರ್ಯಕ್ರಮ

ಮಂಗಳೂರು: ಸಾರಿಗೆ ಕ್ಷೇತ್ರದ ಕಾರ್ಮಿಕರು ಮತ್ತು ಮಾಲೀಕರಿಗಾಗಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ ಏಪ್ರಿಲ್ 9 ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ “ಶ್ರೀರಾಮ್ ಸಾರಥಿ ಸಂಗಮ” ಎಂಬ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಮಂಗಳೂರು ವಲಯದ ಅಧ್ಯಕ್ಷ ಶರಶ್ಚಂದ್ರ ಭಟ್ ಕಾಕುಂಜೆ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮದಲ್ಲಿ ಪ್ರಮುಖ ಬ್ಯಾಂಡ್ ಗಳ ಹೊಸ ವಾಹನಗಳು ಮತ್ತು ಯಂತ್ರಗಳ ಪ್ರದರ್ಶನ ನಡೆಯಲಿದ್ದು, ಅಂದು ಬುಕ್ಕಿಂಗ್ ಮಾಡುವ ವಾಹನಗಳ ಮೇಲೆ ವಿಶೇಷ…

Read More

ಉರ್ವಮಾರ್ಕೆಟ್ ಉಪಕೇಂದ್ರದಲ್ಲಿ ನಿರ್ವಹಣೆ: ಇಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಮಂಗಳೂರು:ನಗರದ 33/11 ಕೆವಿ ಉರ್ವಮಾರ್ಕೆಟ್ ಜಿಐಎಸ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಇಂದು (07.04.2026) ಬೆಳಿಗ್ಗೆ 10.00 ರಿಂದ ಸಂಜೆ 5.30ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. ಡೊಮಿನಿಕ್ ಚರ್ಚ್ ಮತ್ತು ಹೊಯಿಗೆಬೈಲ್ ಫೀಡರ್ ವ್ಯಾಪ್ತಿಯಲ್ಲಿ:ಲೈನ್ ನಿರ್ವಹಣೆ, ಟ್ರೀ ಕಟಿಂಗ್ ಹಾಗೂ ತುರ್ತು ಕಾಮಗಾರಿಗಳ ಕಾರಣ ಗೋಕುಲ್ ಹಾಲ್, ಅಶೋಕನಗರ, ಆಂಟೋನಿ ಕಾಲೋನಿ, ಗೋಲ್ಡನ್ ಎಂಪಾಯರ್ ರೋಡ್, ಕುಕ್ಕಾಡಿ, ಬಾಪೂಜಿನಗರ, ಸುಂಕದಕಟ್ಟೆ, ರಘು ಬಿಲ್ಡಿಂಗ್, ಕೋಡಿಕಲ್ ಕಟ್ಟೆ, ಶಾಂತಿ ಲೇನ್, ಎಸ್.ಎನ್.ಡಿ.ಪಿ, ಕಂಚಿಗಾರ ಗುತ್ತು, ನಾಗಬ್ರಹ್ಮ…

Read More

ಜಪ್ಪಿನಮೊಗರು ವಾರ್ಡಿನಲ್ಲಿ ವೈದ್ಯನಾಥ ಆಟೋ ಪಾರ್ಕ್ ಸುಧಾರಣೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನ ಶ್ರೀ ವೈದ್ಯನಾಥ ಆಟೋ ಪಾರ್ಕ್‌ ಗೆ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಅಳವಡಿಸಲಾಗಿದ್ದು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, ಆಟೋ ಚಾಲಕರು ಶ್ರಮಿಕ ವರ್ಗವಾಗಿದ್ದು, ಪ್ರಯಾಣಿಕರ ಜೊತೆಗೆ ತಮ್ಮ ಆಟೋಗಳ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುವವರು. ಸದ್ಯ ಎಲ್ಲೆಡೆ ವಿಪರೀತ ಬಿಸಿಲಿನ ವಾತಾವರಣವಿದ್ದು ತಮ್ಮ ಆಟೋಗಳು ಬಿಡುವಿನ ವೇಳೆ ನೆರಳಲ್ಲಿ ಇರಬೇಕು ಎಂದು ಬಯಸುತ್ತಾರೆ. ಅವರ ಬೇಡಿಕೆಗೆ ಅನುಗುಣವಾಗಿ ಇಲ್ಲಿಗೆ ಸುಸಜ್ಜಿತ ಮೇಲ್ಛಾವಣಿ…

Read More

ವಿಷು ರಜೆ ಹಿನ್ನೆಲೆ: ಮಂಗಳೂರು–ಚೆನ್ನೈ ನಡುವೆ ವಿಶೇಷ ರೈಲು ಸೇವೆ ಘೋಷಣೆ

ಮಂಗಳೂರು:ವಿಷು ರಜಾದಿನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದಕ್ಷಿಣ ರೈಲ್ವೆ ಇಲಾಖೆ ಮಂಗಳೂರು ಸೆಂಟ್ರಲ್ ಹಾಗೂ ಚೆನ್ನೈ ಎಗ್ಮೋರ್ ನಡುವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಏಪ್ರಿಲ್ ತಿಂಗಳಲ್ಲಿ ಹಬ್ಬದ ಸಂದರ್ಭದ ಜನಸಂದಣಿಯನ್ನು ನಿರ್ವಹಿಸಲು ಪ್ರತಿ ದಿಕ್ಕಿನಲ್ಲಿ ಎರಡು ವಿಶೇಷ ಸೇವೆಗಳನ್ನು ಅನುಮತಿಸಲಾಗಿದೆ ಎಂದು ಪಾಲಕ್ಕಾಡ್ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ. ದೇವದಾನಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲು ಸಂಚಾರ ವಿವರಗಳು: ಪ್ರಮುಖ ನಿಲ್ದಾಣಗಳು (ಮಂಗಳೂರುದಿಂದ):ಕಾಸರಗೋಡು, ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ്ശೇರಿ, ವಡಕರ, ಕೋಝಿಕ್ಕೋಡ್,…

Read More

ವಿಶ್ವ ಆರೋಗ್ಯ ದಿನಾಚರಣೆ: ಇಂಡಿಯಾನಾ ಆಸ್ಪತ್ರೆಯ ವಿಶೇಷ ಆಫರ್ – ಗೋಲ್ಡ್ ಕಾರ್ಡ್ ₹99ಕ್ಕೆ, ಸಿಲ್ವರ್ ಕಾರ್ಡ್ ಉಚಿತ!

ಮಂಗಳೂರು:ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಇಂಡಿಯಾನಾ ಆಸ್ಪತ್ರೆಯು ಏಪ್ರಿಲ್ 8 ರಿಂದ 14 ರವರೆಗೆ ರೂ. 399/-ಬೆಲೆಯ ಇಂಡಿಯಾನಾ ಆರೋಗ್ಯ ಗೋಲ್ಡ್ ಕಾರ್ಡ್ ನ್ನು ರೂ. 99ಕ್ಕೂ ಹಾಗೂ ಹೆಚ್ಚುವರಿಯಾಗಿ ಏಪ್ರಿಲ್ 7 ರ ಎಲ್ಲಾ ಹೊರರೋಗಿಗಳು ಮತ್ತು ಒಳರೋಗಿಗಳಿಗೆ ಇಂಡಿಯಾನಾ ಪ್ರಿವಿಲೇಜ್ ಸಿಲ್ವರ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತಿದೆ ಎಂದು ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ತಿಳಿಸಿದರು . ಅವರು ನಗರದ ಇಂಡಿಯಾನ ಆಸ್ಪತ್ರೆಯ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಡ್…

Read More

ಶಿರ್ಲಾಲಿನಲ್ಲಿ ಬಾಲಕನ ದೈವ ನರ್ತನ ವೈರಲ್

ಅಜೆಕಾರು:ಅಜೆಕಾರು ಸಮೀಪದ ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರಕಲ ಕ್ಷೇತ್ರದಲ್ಲಿ ನಡೆದ ತನ್ನಿಮಾನಿಗ ನೇಮದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಬಾಲಕನ ದೈವ ನರ್ತನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿರ್ಲಾಲು ಶಾಲೆಯ ಸಮರ್ಥ್ ಎಂಬ ಬಾಲಕ, ತನ್ನ ಅಜ್ಜ ಹಾಗೂ ತಂದೆಯವರಿಂದ ಬಂದಿರುವ ಪರಂಪರಾಗತ ಕಲೆಯನ್ನು ಸಣ್ಣ ವಯಸ್ಸಿನಲ್ಲೇ ಅಳವಡಿಸಿಕೊಂಡು ದೈವ ಕುಣಿತ ಪ್ರದರ್ಶಿಸಿದ್ದಾನೆ. ತಂದೆ ಹರೀಶ ಅವರ ಮಾರ್ಗದರ್ಶನದಲ್ಲಿ ಸಮರ್ಥ್ ತನ್ನಿಮಾನಿಗ ಹೆಣ್ಣು ದೈವದ ಬಣ್ಣ…

Read More

ಬೈಕ್‌ಗೆ ಲಾರಿ ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಕಂಬಳಪದವು ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾನೆ. ನಡುಪದವು ಅಂಬೇಡ್ಕರ್ ಕಾಲನಿಯ ಬೇಬಿ ಅವರ ಪುತ್ರ ಸುಶಾಂತ್ (23) ಮೃತಪಟ್ಟ ಯುವಕನಾಗಿದ್ದಾನೆ. ಕಳೆದ ಗುರುವಾರ ಕಂಬಳಪದವು ಬಳಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಶಾಂತ್ ರಸ್ತೆ ಮೇಲೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಈ ಘಟನೆ…

Read More

ಬಂಟರ ಮಾತೃ ಸಂಘದಿಂದ ರವೀಂದ್ರನಾಥ ಶೆಟ್ಟಿ ಅವರಿಗೆ ಶ್ರದ್ದಾಂಜಲಿ

ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮುಂಡ್ಕೂರು ದೊಡ್ಡಮನೆ ರವೀಂದ್ರನಾಥ ಶೆಟ್ಟಿ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಬಂಟ್ಸ್ ಹಾಸ್ಟೇಲ್ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಶೃದ್ದಾಂಜಲಿ ಸಭೆ ಜರಗಿತು.ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ.ಅಜಿತ್ ಕುಮಾರ್ ರೈ ಮಾಲಾಡಿ ಅವರು ಮಾತನಾಡಿ, ರವೀಂದ್ರನಾಥ ಶೆಟ್ಟಿ ಅವರ ಅಗಲುವಿಕೆ ಸಮಾಜಕ್ಕೆ ಆದ…

Read More

ಲೇಬರ್ ಕೋಡ್ ವಿರುದ್ಧ ಹೋರಾಟಕ್ಕೆ ಕೇರಳ LDF ಗೆಲುವು ಬಲ: ಕೆ.ಎನ್. ಉಮೇಶ್

ಮಂಗಳೂರು: ಕಾರ್ಮಿಕ ವಿರೋಧಿ ಲೇಬರ್ ಕೋಡ್‌ಗಳ ವಿರುದ್ಧ ದೇಶಾದ್ಯಂತ ಜಂಟಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ, ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರದ ಗೆಲುವು ಈ ಹೋರಾಟಕ್ಕೆ ಬಲ ನೀಡಲಿದೆ ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಅಭಿಪ್ರಾಯಪಟ್ಟರು. ಮಂಗಳೂರಿನ ಸಂದೇಶ ಸಂಸ್ಥೆಯ ಸಭಾಂಗಣದಲ್ಲಿ ನಡೆಯುತ್ತಿರುವ ಎರಡು ದಿನಗಳ ಸಿಐಟಿಯು ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲೇಬರ್ ಕೋಡ್‌ಗಳನ್ನು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತರಲು ಮುಂದಾಗಿವೆ….

Read More
error: Content is protected !!