ವಾರಾಹಿ ಪೈಪ್ಲೈನ್ ಕಾಮಗಾರಿ ನಿರ್ಲಕ್ಷ್ಯ: ಆರೂರಿನಲ್ಲಿ ನದಿ ಪಾಲಾಗುತ್ತಿರುವ ಕೃಷಿಭೂಮಿ, ರೈತರ ಆತಂಕ
ಉಡುಪಿ: ಉಡುಪಿ ಜಿಲ್ಲೆಯ ಆರೂರು ಗ್ರಾಮದಲ್ಲಿ ವಾರಾಹಿ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿ ಬಳಿಕ ನದಿಯಲ್ಲಿ ಹಾಕಿದ್ದ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸದ ಕಾರಣ ನದಿಯ ಹರಿವಿನ ದಿಕ್ಕು ಬದಲಾಗಿದ್ದು, ಕೃಷಿಭೂಮಿಗಳು ನದಿ ಪಾಲಾಗುತ್ತಿರುವ ಘಟನೆ ರೈತರಲ್ಲಿ ಆತಂಕ ಮೂಡಿಸಿದೆ. ಆರೂರು ಗ್ರಾಮದ ತೆಂಕಬೆಟ್ಟು ಸೇತುವೆ ಸಮೀಪ ಹರಿಯುವ ಮಡಿಸಾಲು ಹೊಳೆಯಲ್ಲಿ ವಾರಾಹಿಯಿಂದ ಮಣಿಪಾಲಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಲೈನ್ ಅಳವಡಿಸುವ ವೇಳೆ ನದಿಗೆ ಅಡ್ಡಲಾಗಿ ಮಣ್ಣು ಮತ್ತು ಕಲ್ಲುಗಳನ್ನು ಹಾಕಲಾಗಿತ್ತು. ಕಾಮಗಾರಿ ಪೂರ್ಣಗೊಂಡು ಒಂದು…
