ಮಕ್ಕಳೊಂದಿಗೆ ಪ್ರಯಾಣಿಸಿದ ಮಹಿಳೆಗೆ ಸಂಕಷ್ಟ – ಬಸ್ ಸಿಬ್ಬಂದಿ ವಿರುದ್ಧ ದೂರು
ಮಂಗಳೂರು:ಬಸ್ ಪ್ರಯಾಣದ ವೇಳೆ ತಮಗೆ ಸಂಭವಿಸಿದ ಅನುಭವವನ್ನು ಹಂಚಿಕೊಂಡಿರುವ ಮಹಿಳೆಯೊಬ್ಬರು, ಸಾರಿಗೆ ವ್ಯವಸ್ಥೆಯ ಮೇಲಿನ ನಿರ್ಲಕ್ಷ್ಯ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದಾರೆ. ಕಾರ್ಕಳ ಮೂಲದ ರಮಿತಾ ಸೂರ್ಯವಂಶಿ ಎಂಬವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು, ತಾವು ಎದುರಿಸಿದ ತೊಂದರೆಗಳನ್ನು ವಿವರಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ಬೆಂಗಳೂರುದಿಂದ ಪುತ್ತೂರಿಗೆ ಪ್ರಯಾಣಿಸಲು ಖಾಸಗಿ ಬಸ್ನ್ನು ಬುಕ್ ಮಾಡಿದ್ದರು. ಪ್ರಯಾಣದ ದಿನ ಸಂಜೆ, ತಾವು ಹತ್ತಬೇಕಿದ್ದ ಬಸ್ ಕೆಟ್ಟು ಹೋಗಿದೆ ಎಂದು ಕರೆ ಬಂದಿದ್ದು, ಮಜೇಸ್ಟಿಕ್ನಿಂದ ಮತ್ತೊಂದು…