ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಶಿವರಾಮ ಕಾಸರಗೋಡು 60ನೇ ಜನ್ಮದಿನೋತ್ಸವ ಪೋಸ್ಟರನ್ನು (ಭಿತ್ತಿ ಪತ್ರ) ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರಿಂದ ಬಿಡುಗಡೆ

ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮೋತ್ಸವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ( ರಿ ) ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ಬೆಳಿಗ್ಗೆ ಗಂಟೆ 11.00 ರಿಂದ ರಾತ್ರಿ 9.00 ರವರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಪೋಸ್ಟರ್ ರನ್ನು (ಭಿತ್ತಿ ಪತ್ರ) ಶ್ರೀ ಎಡನೀರು ಮಠದ…

Read More

ಪುನರ್‌ ಡಾಮಾರೀಕರಣ ಕಾಮಗಾರಿ ಪೂರ್ಣಗೊಂಡ ಒಂದೇ ವರ್ಷದಲ್ಲೇ ಸಂಪೂರ್ಣ ಹದಗೆಟ್ಟ ಕೆದಂಬಾಡಿ ರಸ್ತೆ .

ಮಂಜೇಶ್ವರ : ಅದೆಷ್ಟೋ ನಿರೀಕ್ಷೆಗಳಿಂದ ಕಾಮಗಾರಿ ಪೂರ್ಣಗೊಂಡಿದ್ದ ಮಂಜೇಶ್ವರ ಗೋವಿಂದ ಪೈ – ಕೆದಂಬಾಡಿ ರಸ್ತೆಯ ಪುನರ್‌ಡಾಮಾರೀಕರಣ ಕಾಮಗಾರಿ ಪೂರ್ಣಗೊಂಡ ಒಂದೇ ವರ್ಷದಲ್ಲೇ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು ₹5.24 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಈ ರಸ್ತೆ ಡಾಮಾರೀಕರಣಗೊಂಡಿದ್ದರೂ, ಇದೀಗ ರಸ್ತೆ ಎರಡೂ ಬದಿಗಳು ಸಂಪೂರ್ಣವಾಗಿ ಕುಸಿದು ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಸುಮಾರು 5.2 ಕಿ.ಮೀ ಉದ್ದದ ಈ ರಸ್ತೆ, ಕಾಮಗಾರಿ ಆರಂಭವಾಗುವ ವೇಳೆಯೇ ಅಗಲದಲ್ಲಿ ಅತಿಯಾದ ಕೊರತೆಯಿದ್ದ ಕಾರಣ ಸ್ಥಳೀಯರು ಭಾರೀ ವಿರೋಧ…

Read More

ಬಿಜೆಪಿಯಿಯಿಂದ ಜಿಲ್ಲಾಧಿಕಾರಿ ಕಚೇರಿಯತ್ತ ಪ್ರತಿಭಟನಾ ಮಾರ್ಚ್. ಶಬರಿಮಲೆಯಲ್ಲಿ ನಡೆದ ಲೂಟಿ : ಸಿ ಎಂ ಪಿಣರಾಯಿ ರಾಜೀನಾಮೆ ನೀಡಬೇಕು : ಎ.ಪಿ. ಅಬ್ದುಲ್ಲ ಕುಟ್ಟಿ

ಕಾಸರಗೋಡು: ಶಬರಿಮಲೆ ದೇವಸ್ಥಾನದಲ್ಲಿ ನಡೆದ ಅಕ್ರಮ ಹಾಗು ಚಿನ್ನಾಭರಣ ಲೂಟಿಯ ಬಗ್ಗೆ ಸಿಬಿಐ ಸಹಿತ ಕೇಂದ್ರೀಯ ಏಜೆನ್ಸಿಯಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಬರಿಮಲೆಯಲ್ಲಿನ ಚಿನ್ನದ ಆಭರಣಗಳನ್ನು ರಾಜ್ಯ ಸರಕಾರದ ತಿಳುವಳಿಕೆಯಲ್ಲೇ ಕಳ್ಳಸಾಗಾಣಿಕೆ ಮಾಡಲಾಗಿದೆ ಎಂದೂ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ ಪಿ ಅಬ್ದುಲ್ಲ ಕುಟ್ಟಿ ಒತ್ತಾಯಿಸಿದರು . ಶಬರಿಮಲೆ ಕ್ಷೇತ್ರದಲ್ಲಿ ನಡೆದ ಅಕ್ರಮ ಹಾಗು ಚಿನ್ನಾಭರಣ ಲೂಟ ವಿರೋಧಿಸಿ ಬಿಜೆಪಿ…

Read More

ಮೀನು ವ್ಯಾಪಾರಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳು ಬಂಧನ.

ಮಂಜೇಶ್ವರ : ಬಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಬದಿಯಡ್ಕ ಸೀತಾಂಗೋಳಿ ಸಮೀಪ ಸ್ಥಳೀಯ ನಿವಾಸಿ ಹಾಗೂ ಮೀನು ವ್ಯಾಪಾರಿ ಅನಿಲ್‌ ಕುಮಾರ್ (40) ರ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳು ಕುಂಬಳೆ ಪೊಲೀಸ್ ಠಾಣೆಯಲ್ಲಿ ನೇರವಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.ಬದಿಯಡ್ಕ ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್ ಅಲಿಯಾಸ್ ಮೋಣು, ಅಜಿತ್ ಕುಮಾರ್ ಹಾಗೂ ಹರಿಕೃಷ್ಣ ಬಂಧಿತ ಆರೋಪಿಗಳು. ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸರು…

Read More

ಕಡಂಬಾರಿನಲ್ಲಿ ಆತ್ಮಹತ್ಯೆ ಪ್ರಕರಣ.ಸ್ಕೂಟರಿನಲ್ಲಿ ಆಗಮಿಸಿದ ಇಬ್ಬರು ಮಹಿಳೆಯರು ಅಧ್ಯಾಪಿಕೆಗೆ ಹಲ್ಲೆ ಮಾಡಿದ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆ.

ಮಂಜೇಶ್ವರ : ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬಾರಿನಲ್ಲಿರುವ ಯುವ ಅಧ್ಯಾಪಿಕೆ ಹಾಗೂ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೈದ ಘಟನೆಯಲ್ಲಿ ನಿಗೂಢತೆ ಹೆಚ್ಚಾಗುತ್ತಿದೆ. ಸ್ಕೂಟರಿನಲ್ಲಿ ಆಗಮಿಸಿದ ಇಬ್ಬರು ಮಹಿಳೆಯರು ಅಧ್ಯಾಪಿಕೆಯನ್ನು ದೂಡಿ ಹಲ್ಲೆಗೈಯುತ್ತಿರುವ ಸಿ ಸಿ ಟಿವಿ ದೃಶ್ಯ ಬೆಳಕಿಗೆ ಬಂದಿರುವುದು ನಿಗೂಢತೆಯನ್ನು ಹೆಚ್ಚಿಸಿದೆ. ಕಡಂಬಾರಿನ ಅಜಿತ್ (35) ಹಾಗೂ ಪತ್ನಿ ಖಾಸಗಿ ಶಾಲೆಯೊಂದರ ಅಧ್ಯಾಪಿಕೆಯಾಗಿರುವ ಶ್ವೇತಾ (27) ಎಂಬಿವರು ಮಂಗಳವಾರದಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂಧಿಸದೆ…

Read More

ವರ್ಕಾಡಿ ಕೊಡ್ಲಮೊಗರಿನಲ್ಲಿ ಭಾರೀ ಗಾಂಜಾ ಬೇಟೆ. 116 ಕೆ ಜಿ ಗಾಂಜಾ ಹಾಗೂ ಮಿನಿ ಲಾರಿ ವಶ.

ಮಂಜೇಶ್ವರ : ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಕೊಡ್ಲಮೊಗರಿನಲ್ಲಿ ಭಾರೀ ಗಾಂಜಾ ಬೇಟೆ. 116 ಕೆ ಜಿ ಗಾಂಜಾ ಹಾಗೂ ಮಿನಿ ಲಾರಿಯೊಂದನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ. ಸುಳ್ಯಮೆ ಯಲ್ಲಿರುವ ಮನೆಯೊಂದರ ಶೆಡ್ ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಾಗಿ ತೆಗೆದಿರಿಸಲಾಗಿದ್ದ ರೀತಿಯಲ್ಲಿ ಗಾಂಜಾ ಪತ್ತೆ ಹಚ್ಚಲಾಗಿದೆ. ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ್ದೆಂದು ಶಂಕಿಸಲಾಗುತ್ತಿರುವ ಮಿನಿ ಲಾರಿ ಶೆಡ್ ನ ಸಮೀಪದಲ್ಲಿ ನಿಲುಗಡೆಯಾಗಿತ್ತು.ರಹಸ್ಯ ಮಾಹಿತಿಯಂತೆ ಎ ಎಸ್ಪಿ ನಂದ ಗೋಪಾಲ್ ರವರ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸರು ಕಾರ್ಯಾಚರಣೆ…

Read More

ಓಟ್ ಚೋರ ಬಿಜೆಪಿಗೆ ವಿಗ್ರಹ ಚೋರ ಸಿಪಿಎಂ ಸಾಥ್- ಕಾಂಗ್ರೆಸ್ ಆರೋಪ.

ಮತದಾರ ಯಾದಿಯಲ್ಲಿ ಕ್ರಿಮಿನಲ್ ಸ್ವಭಾವದ ಹಸ್ತಕ್ಷೇಪ ನಡೆಸಿ ಅಧಿಕಾರಕ್ಕೇರಿದ ಬಿಜೆಪಿಗೆ ಕೇರಳದ ಶಬರಿಮಲೆ ಕ್ಷೇತ್ರದಲ್ಲಿ ಸ್ವರ್ಣ ಕವಾಟಗಳ ಕಳ್ಳತನದಲ್ಲಿ ಜವಾಬ್ದಾರಿಕೆಯಿರುವ ಸರಕಾರವು ಕೈ ಜೋಡಿಸಿರುವುದಾಗಿ ಅನುಮಾನಗಳಿವೆ. ಉಗಾಂಡಾದ ಯಾವುದೋ ಕುಗ್ರಾಮದಲ್ಲಿ ಎರಡು ದಿನ ನಳ್ಳಿ ನೀರು ಬರದಿದ್ದರೆ ಮೂರನೇ ದಿನ ದೆಹಲಿಯ ಉಗಾಂಡಾ ರಾಯಭಾರ ಕಚೇರಿಯ ಮುಂಭಾಗ ಹೋರಾಟ ನಡೆಸುವ ಸಿಪಿಎಂ ಈ ಓಟ್ ಕಳ್ಳತನದ ಬಗ್ಗೆ ಚಕಾರವೆತ್ತಿಲ್ಲ. ಅದೇ ರೀತಿ ಭಾರತದ ಅತ್ಯಂತ ಪವಿತ್ರ ಆರಾಧನಾ ಕೇಂದ್ರವಾಗಿರುವ ಶಬರಿಮಲೆ ಕ್ಷೇತ್ರದ ಬಾಗಿಲು, ಗೋಡೆಗಳ ಸ್ವರ್ಣ ಚೋರತನಕ್ಕೆ…

Read More

ಪ್ರತಿಭೆಗಳ ಅನಾವರಣಕ್ಕೆ ಸೃಜನೋತ್ಸವ ಸಹಕಾರಿ : ಕಮಲಾಕ್ಷ ಡಿ

ಕೊಡ್ಲಮೊಗರು : ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುವುದರೊಂದಿಗೆ ಪ್ರತಿಭೆಗಳ ಅನಾವರಣಕ್ಕೆ ಸೃಜನೋತ್ಸವ ಸೂಕ್ತ ವೇದಿಕೆಯನ್ನು ನೀಡುತ್ತದೆ.ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಮಕ್ಕಳ ಬೆಳವಣಿಗೆಗೆ ಉತ್ತೇಜನ ನೀಡುವ ಗ್ರಂಥಾಲಯದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿ ಕಮಲಾಕ್ಷ ಡಿ ರವರು ತಿಳಿಸಿದರು. ಅವರು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಸಹಕಾರದಲ್ಲಿ ವರ್ಕಾಡಿ ಪಂಚಾಯತ್ ನೇತೃತ್ವ ಸಮಿತಿಯ ಆಶ್ರಯದಲ್ಲಿ ಜರಗಿದ ವರ್ಕಾಡಿ ಪಂಚಾಯತ್ ಮಟ್ಟದ ಸೃಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಂಜೇಶ್ವರ…

Read More

ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರಿಗೆ ಅನಿವಾಸಿ ಕನ್ನಡಿಗರ ಸಮ್ಮೇಳನ ಹೊರನಾಡ ಕನ್ನಡಿಗರ ಸಮ್ಮೇಳನದ ಗೌರವ ಪುರಸ್ಕಾರಕ್ಕೆ ಆಯ್ಕೆ .

ಮಂಜುನಾಥ ಎಜುಕೇಷನ್ ಟ್ರಸ್ಟ್ (ರಿ ),ಹೃದಯವಾಹಿನಿ ಕರ್ನಾಟಕ,ಮಂಗಳೂರು ಹಾಗೂ ಎಸ್. ಕೆ.ಮುನ್ಸಿಪಾಲ್ ಎಂಪ್ಲಾಯಿಸ್ ಯೂನಿಯನ್(ರಿ),ಮಂಗಳೂರು ಸಹಯೋಗದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ 2025 ಅಕ್ಟೋಬರ್ 9 ಗುರುವಾರದಂದು ನಡೆಯುವ ದ್ವಿತೀಯ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನದಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ…

Read More

ಪೆರ್ಲದ ವಾಹನ ಚಾಲಕ ಕುಂಬಳೆಯಲ್ಲಿ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ.

ಕುಂಬಳೆ : ರೈಲ್ವೆ ಹಳಿಯಲ್ಲಿ ಯುವಕನೊರ್ವನ ಮೃತದೇಹ ರೈಲಿಗೆ ತಲೆ ಒಡ್ಡಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃತ ವ್ಯಕ್ತಿ ಪೆರ್ಲದಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಟುಕುಕ್ಕೆ ಸಮೀಪ ಸೂರ್ಡೇಲು ನಿವಾಸಿ ದಿ.ಶೀನಪ್ಪ ರೈಗಳ ಪುತ್ರ ತಾರನಾಥ ರೈ (46) ಎಂದು ಗುರುತಿಸಲಾಗಿದೆ. ಈ ಹಿಂದೆ ಪೆರ್ಲದಲ್ಲಿ ಬಾಡಿಗೆ ವಾಹನ ಚಲಾಯಿಸುತ್ತಿದ್ದ ಇವರು ಇದೀಗ ಸ್ವಲ್ಪ ಸಮಯಗಳ ಹಿಂದೆ ತನ್ನ ವಾಹನಗಳನ್ನು ಮಾರಿದ್ದು ಬಳಿಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದು ಬಂದಿದೆ….

Read More
error: Content is protected !!