ಜಪಾನಿನ ಭಾರತೀಯ ರಾಯಭಾರಿಯಾಗಿ ಕಾಸರಗೋಡಿನ ಮಹಿಳೆ ನೇಮಕ .

ಕಾಸರಗೋಡು: ಕಾಸರಗೋಡಿನ ಮಹಿಳೆ ನಗ್ಮಾ ಮೊಹಮ್ಮದ್ ಮಾಲೀಕ್‌ರನ್ನು ಕೇಂದ್ರ ಸರಕಾರ ಜಪಾನಿನ ಭಾರತೀಯ ರಾಯಭಾರಿಯಾಗಿ ನೇಮಿಸಿದೆ. ಈಕೆ ಕಾಸರಗೋಡು ಕೋಟೆ ರಸ್ತೆಯ ಮೊಹಮ್ಮದ್ ಹಬೀಬುಲ್ಲಾ-ಸುಲುಭಾನು ದಂಪತಿ ಪುತ್ರಿಯಾಗಿದ್ದಾರೆ. ತಂದೆ ಮೊಹಮ್ಮದ್ ಹಬೀಬುಲ್ಲಾರಿಗೆ ಕೇಂದ್ರ ಸರಕಾರದ ಓವರ್‌ಸ್‌ ಕಮ್ಯೂನಿಕೇಶನ್ ಇಲಾಖೆಯಲ್ಲಿ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಅವರು ವರ್ಷಗಳ ಹಿಂದೆ ತಮ್ಮ ಕುಟುಂಬದ ಸಹಿತ ದಿಲ್ಲಿಯಲ್ಲಿ ವಾಸವಾಗಿದ್ದರು. ದಿಲ್ಲಿಯಲ್ಲೇ ಜನಿಸಿದ ನಗ್ಮಾ ಮೊಹಮ್ಮದ್ ಮಾಲೀಕ್ ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜು ಮತ್ತು ಡೆಲ್ಲಿ ಸ್ಕೂಲ್ ಆಫ್‌ ಇಕಾನೋಮಿಕ್ಸ್‌ನಲ್ಲಿ ಶಿಕ್ಷಣ ಪಡೆದರು….

Read More

ಅಂಬಿತ್ತಾಡಿಯಲ್ಲಿ ಹೈಟೆಕ್ ಅಂಗನವಾಡಿ ಶಿಲಾನ್ಯಾಸ: ಜನರ ಹೋರಾಟಕ್ಕೆ ಸಾರ್ಥಕ ಅಂತ್ಯ .

ಮಂಜೇಶ್ವರಂ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಿತ್ತಾಡಿ ಹೈಟೆಕ್ ಅಂಗನವಾಡಿ ಕಟ್ಟಡದ ಶಿಲಾನ್ಯಾಸ ಸಮಾರಂಭವು ಸಾಯಂಕಾಲ 4 ಗಂಟೆಗೆ ಉತ್ಸವದ ವಾತಾವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಹಲವಾರು ವರ್ಷಗಳಿಂದ ಸ್ಥಳೀಯರು ಆತುರದಿಂದ ಕಾಯುತ್ತಿದ್ದ ಈ ಕ್ಷಣವು, ಅಂಬಿತ್ತಾಡಿಯ ಜನರ ದೀರ್ಘಕಾಲದ ಆಶಯಕ್ಕೆ ಸಾರ್ಥಕ ಅಂತ್ಯ ತಂದಿತು. 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಈ ನೂತನ ಹೈಟೆಕ್ ಅಂಗನವಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೈಕೆಯ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್…

Read More

ಕೇರಳದಲ್ಲಿ ರಾಜಕೀಯ ಬದಲಾವಣೆ ಅನಿವಾರ್ಯ: ಎಂ.ಎಲ್. ಅಶ್ವಿನಿ

ಮಂಜೇಶ್ವರ: ಕೇರಳ ಎದುರಿಸುತ್ತಿರುವ ನಿರುದ್ಯೋಗ ಮತ್ತು ಅಭಿವೃದ್ಧಿ ಕುಂಠಿತವನ್ನು ಪರಿಹರಿಸಲು ರಾಜಕೀಯ ಬದಲಾವಣೆ ಅತ್ಯಗತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಅವರು ಬಿಜೆಪಿ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು . ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಅಡ್ವ. ಬಾಲಕೃಷ್ಣ ಶೆಟ್ಟಿ,ಕೆ.ಸತೀಶ್ ಚಂದ್ರ ಭಂಡಾರಿ, ರಾಜ್ಯ ಪರಿಷತ್ ಸದಸ್ಯ ಹರಿಶ್ಚಂದ್ರ ನಾಯ್ಕ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಜಿಲ್ಲಾ ಸಮಿತಿ ಸದಸ್ಯ…

Read More

ಸಾಕಾರಗೊಂಡ ಚಿಣ್ಣರ ಬಹು ಕಾಲದ ನಿರೀಕ್ಷೆ : ಅಂಬಿತ್ತಾಡಿ ಹೈಟೆಕ್ ಅಂಗನವಾಡಿಗೆ ಶಂಕುಸ್ಥಾಪನೆ .

ಮಂಜೇಶ್ವರ : ಚಿಣ್ಣರ ಬಾಳಿನಲ್ಲಿ ಚೆಲ್ಲಾಟವನ್ನು ನಡೆಸುತ್ತಿರುವವರ ವಿರೋಧ ಮಧ್ಯೆಯೂ ಎದೆಗುಂದದೆ ಊರವರು ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಅಂಬಿತ್ತಾಡಿ ಜನತೆಯ ಬಹುಕಾಲದ ನಿರೀಕ್ಷೆಯೊಂದು ಗುರುವಾರದಂದು ಸಾಕಾರಗೊಂಡಿತು. ಕಾಸರಗೋಡು ಜಿಲ್ಲಾ ಪಂಚಾಯತ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಡಿಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂದ್ರ ಸಂಖ್ಯೆ 11 ಅಂಬಿತ್ತಾಡಿ ಹೈಟೆಕ್‌ ಅಂಗನವಾಡಿಗೆ 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಿರುವ ಕಟ್ಟಡದ ಸಂಕುಸ್ಥಾಪನೆ ಬಹಳ ಅದ್ದೂರಿಯಾಗಿ ನೆರವೇರಿತು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ರವರ…

Read More

ವರ್ಕಾಡಿ ವೋಟ್ ಡಿಲೀಟ್ : ಬಿಜೆಪಿ ವಿರುದ್ಧ ಮತದಾರರ ಆಕ್ರೋಶ.

ಮಂಜೇಶ್ವರ : ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತದಾರ ಪಟ್ಟಿಯಿಂದ ಮತದಾರರನ್ನು ಡಿಲೀಟ್ ಮಾಡುವ ಬಿಜೆಪಿ ಷಡ್ಯಂತರದ ವಿರುದ್ಧ ನಾಗರಿಕರ ಆಕ್ರೋಶ ಬುಗಿಲೆದ್ದಿದೆ. ವರ್ಕಾಡಿ ಪಂಚಾಯತಿನ ವಿವಿಧ ವಾರ್ಡುಗಳಲ್ಲಿ ಸುಮಾರು ರೂ.1000ಕ್ಕೂ ಮಿಕ್ಕಿದ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವಂತೆ ಬಿಜೆಪಿ ಮುಖಂಡರ ಅರ್ಜಿಗೆ ಬುಧವಾರದಂದು ವರ್ಕಾಡಿ ಪಂಚಾಯಿತಿನಲ್ಲಿ ಮತದಾರರ ನೇರ ಸಂದರ್ಶನ ನಡೆಯಿತು. ಈ ಸಂದರ್ಭದಲ್ಲಿ ತಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲು ಮನವಿ ಕೊಟ್ಟ ಬಿಜೆಪಿ ಮುಖಂಡನ ವಿರುದ್ಧ ಮತದಾರರು ತರಾಟೆಗೆ ತೆಗೆದುಕೊಂಡಿದ್ದು, ಉದ್ವಿಗ್ನ…

Read More

ಆತ್ಮಹತ್ಯೆಗೆತ್ನಿಸಿದ ವಿದ್ಯಾರ್ಥಿನಿಯನ್ನು ರಕ್ಷಿಸಲು ಆಸ್ಪತ್ರೆಗೆ ಸಾಗಿಸುತ್ತಿರುವ ಮಧ್ಯೆ ಅಪಘಾತಕ್ಕೊಳಗಾಗಿ ಮ್ಯತ್ಯು.

ಕಾಸರಗೋಡು :ಬೇತೂರು ಪಾರ ಸಮೀಪದಲ್ಲಿ ಬುಧವಾರ ಬೆಳಿಗ್ಗೆ ಆತ್ಮಹತ್ಯೆಗೆ ಯತ್ನಿಸಿದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ರಕ್ಷಿಸಲು ಮನೆಯಿಂದ ಆಸ್ಪತ್ರೆಗೆ ಸಾಗಿಸುತ್ತಿರುವ ಮಧ್ಯೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಆಕೆ ಸಾವನ್ನಪ್ಪಿದ್ದಾಳೆ.ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಬೇಡಡ್ಕ ಬೇತೂರುಪಾರ ತಚ್ಚಾ‌ರ್ ಕುಂಡುವಿನ ಬಾಬು ಎಂಬವರ ಪುತ್ರಿ ಮಹಿಮಾ (19) ಸಾವನ್ನಪ್ಪಿದ ದುರ್ದೈವಿ. ಬುಧವಾರ ಬೆಳಗ್ಗೆ ಮಹಿಮಾ ಮನೆಯ ಮಲಗುವ ಕೊಠಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಮನೆಯವರು ತಕ್ಷಣ ನೇಣು ಹಗ್ಗದಿಂದ ಕೆಳಕ್ಕಿಳಿಸಿ ಕಾರಿನಲ್ಲಿ ಆಸ್ಪತ್ರೆಗೆ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ….

Read More

ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2025’ ಕಾರ್ಯಕ್ರಮ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿ ಮಂಜೇಶ್ವರ, ಕೇರಳ ಸರ ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ.ವೆಂಕಟರಾಜ ಪುಣಿಂಚಿತ್ತಾಯರ ‘ಪುವೆಂಪು ನೆನಪು-2025’ ಕಾರ್ಯಕ್ರಮ ಇಂದು ಬೆಳಿಗ್ಗೆ ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಭಾವ ಗಾಯನ, ನೃತ್ಯ ವೈಭವ, ಪ್ರಶಸ್ತಿ ವಿತರಣೆ ಸಮಾರಂಭ ನಡೆಯಿತು. ಎಡನೀರು ಮಠಾಧೀಶ ಶ್ರೀ…

Read More

ಕೇರಳ ರಾಜ್ಯ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ 9ನೇ ಕಾಸರಗೋಡು ಜಿಲ್ಲಾ ಸಮ್ಮೇಳನ. ಧ್ವಜ ಸ್ತಂಭದ ಮೆರವಣಿಗೆಗೆ ಚಾಲನೆ

ಮಂಜೇಶ್ವರ: ಕೇರಳ ರಾಜ್ಯ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ 9ನೇ ಕಾಸರಗೋಡು ಜಿಲ್ಲಾ ಸಮ್ಮೇಳನದ ಅಂಗವಾಗಿ ಕೇರಳ ಕರ್ನಾಟಕ ಗಡಿಪ್ರದೇಶವಾದ ತಲಪ್ಪಾಡಿಯಿಂದ ಧ್ವಜ ಹಾಗೂ ಧ್ವಜ ಸ್ತಂಭದ ಮೆರವಣಿಗೆಗೆ ಚಾಲನೆ ದೊರಕಿತು. ಕೆಎಸ್‌ಎಚ್‌ಜಿಒ ಜಿಲ್ಲಾ ಉಪಾಧ್ಯಕ್ಷ ಫಿರೋಜ್ ಪಡಿಂಇಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ವಿ. ಬಾಲನ್ ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್ ಸುಕುಮಾರನ್ ಕೊಪ್ಪಲಂ, ವೈಸ್ ಕ್ಯಾಪ್ಟನ್ ಹನೀಫ್ ಕರಿಂಗಪ್ಪಲ್ಲಂ, ಜಾಥಾ ಮ್ಯಾನೇಜರ್ ರಜಾಕ್ ಕಾಫಿಲ, ರಿಯಾಜ್ ಚೌಕಿ, ಬಶೀರ್‌ಕೋಟೂರ್, ಅಬು…

Read More

CPIM ಕೊಡ್ಲಮೊಗರು ಲೋಕಲ್ ಸಮಿತಿ ಕಚೇರಿ ಕಾಂ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರ ಅಕ್ಟೋಬರ್ 19 ರಂದು ಉದ್ಘಾಟನೆ.

ಕೊಡ್ಲಮೊಗರು: ವರ್ಕಾಡಿ ಪಂಚಾಯತ್ ನಲ್ಲಿ ಸಿಪಿಐಎಂ ಪಕ್ಷದ ಸಂಘಟನೆಗಾಗಿ ಹಗಲಿರುಳೆನ್ನದೆ ದುಡಿದು, ತನ್ನ ಜೀವನವನ್ನೇ ಕಾರ್ಮಿಕ ವರ್ಗದ ಹಿತಕ್ಕಾಗಿ ಮುಡಿಪಾಗಿಸಿದ, ಹಲವಾರು ವರ್ಷಗಳ ಕಾಲ ಲೋಕಲ್ ಸಮಿತಿ ಕಾರ್ಯದರ್ಶಿಯಾಗಿ ಸೇವೆಗೈದ ಕಾಂ. ಕೆ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರವಾದ ಸಿಪಿಐಎಂ ಕೊಡ್ಲಮೊಗರು ಲೋಕಲ್ ಸಮಿತಿ ಕಚೇರಿಯ ಉದ್ಘಾಟನೆಯನ್ನು ಅಕ್ಟೋಬರ್ 19 ರಂದು ಬೆಳಿಗ್ಗೆ 10 ಗಂಟೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ. ವಿ. ಗೋವಿಂದನ್ ಮಾಸ್ಟರ್ ನಿರ್ವಹಿಸಲಿದ್ದಾರೆ. ರಾಜ್ಯ ಸಮಿತಿ ಸದಸ್ಯರಾದ, ಕೆ. ಪಿ. ಸತೀಶ್ ಚಂದ್ರನ್,…

Read More

ಕೋಟೆ,ಧೂಮಾವತಿ “ದೀಪಾವಳಿ ನೇಮೋತ್ಸವ “ಕ್ಕೆ ವೀಳ್ಯ.

ಕಾಸರಗೋಡು ಕೋಟೆ -ಪಳ್ಳದ ಕೊಟ್ಯ ಶ್ರೀ ಧೂಮಾವತಿ “ದೀಪಾವಳಿ ನೇಮೋತ್ಸವ “ದಿನಾಂಕ 19ರ ಸಂಜೆ 6ಕ್ಕೆ ನೆಲ್ಲಿಕುಂಜೆ ಪಳ್ಳದ ಕೊಟ್ಯ ತರವಾಡು ದೈವಸ್ಥಾನ ದಿಂದ ಮೆರವಣಿಗೆ ಮೂಲಕ ಭಂಡಾರ ಕೋಟೆಬಾಗಿಲಿನಲ್ಲಿನ ಪಳ್ಳದಕೊಟ್ಯ ಚಾವಡಿಯಲ್ಲಿ, ಕೋಟೆ ನಾಯಕರ ಮನೆ ಯವರು ರಾಮಕ್ಷತ್ರಿಯ ಸಮಾಜ ಹಾಗೂ ಊರ, ಪರವೂರ ಭಕ್ತಾದಿಗಳ ಕೂಡುವಿಕೆಯಿಂದ ದಿನಾಂಕ 20. ದೀಪಾವಳಿ ದಿನದಂದು ನಡೆಯಲಿರುವ ದೈವ ಕೋಲದ “ವೀಳ್ಯ ಕೊಡುವಿಕೆ “ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ನಡೆಯಲ್ಲಿ ನಡೆಯಿತು. ಕೋಟೆ ಧೂಮಾವತಿ ಉತ್ಸವ ಸಮಿತಿ ನೇತೃತ್ವದಲ್ಲಿ ಧೂಮಾವತಿ…

Read More
error: Content is protected !!