ಕುಂಬಳೆ ಪರಿಸರದಲ್ಲಿ ಸರಣಿ ಕಾರು ಅಪಘಾತ ಹಲವರು ಗಾಯದಿಂದ ಪಾರು

ಮಂಜೇಶ್ವರ: ಕುಂಬಳೆ ಸಮೀಪದ ಭಾಸ್ಕರನಗರ ಕೆಎಸ್‌ಟಿಪಿ ರಸ್ತೆಯಲ್ಲಿ ಗಂಟೆಗಳ ವ್ಯತ್ಯಾಸದಲ್ಲಿ ಎರಡು ಕಾರುಗಳು ಅಪಘಾತಕ್ಕೀಡಾ ಗಿವೆ. ಈ ಪೈಕಿ ಒಂದು ಕಾರಿನಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಬರುತ್ತಿದ್ದ ಕಳತ್ತೂರು ನಿವಾಸಿಗಳು ಸಂಚರಿಸಿದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿಚರಂಡಿಗೆ ಮಗುಚಿ ಬಿದ್ದಿದೆ. ಅದರಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮತ್ತೊಂದು ಅಪಘಾತ ಕಳೆದ ರಾತ್ರಿ 12.30ರ ವೇಳೆ ಸಂಭವಿಸಿದೆ. ಇದರಲ್ಲಿ…

Read More

ಕುಂಬಳೆಯಲ್ಲಿ ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ ಅಪಾಯದಿಂದ ಪಾರಾದ ಚಾಲಕ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚರಿಸುತ್ತಿದ್ದ ಕಾರು ಬೆಂಕಿಗಾಹುತಿಯಾದ ಘಟನೆ ಇಂದು ಬೆಳಿಗ್ಗೆ ಕುಂಬಳೆಯಲ್ಲಿ ಸಂಭವಿಸಿದೆ. ಶಿರಿಯಾ ಬತ್ತೇರಿ ಮಹಲ್‌ನ ಮೂಸಾ ಖಲೀಲ್ ಎಂಬವರ ಸ್ವಿಫ್ಟ್ ಕಾರು ಬೆಂಕಿಗಾಹುತಿಯಾ ಗಿದೆ. ಮೂಸಾ ಖಲೀಲ್ ಬಂದ್ಯೋಡು ಭಾಗದಿಂದ ಕುಂಬಳೆ ಪೇಟೆಗೆ ಬರುತ್ತಿದ್ದರು. ಕುಂಬಳೆ ಪೇಟೆ ಸಮೀಪಕ್ಕೆ ತಲುಪಿದಾಗ ಕಾರಿನ ಮುಂಭಾಗದಿಂದ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಕೂಡಲೇ ಕಾರನ್ನು ನಿಲ್ಲಿಸಿ ಅವರು ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ಕೆಲವೇ ನಿಮಿಷಗಳೊಳಗೆ ಕಾರಿಗೆ ಪೂರ್ಣವಾಗಿ ಬೆಂಕಿ ಆವರಿಸಿದೆ. ವಿಷಯ ತಿಳಿದು ಸೀನಿಯರ್ ಫಯರ್…

Read More

ಕುಂಬಳೆ : ಲೈಟಿಂಗ್ಸ್ ಕಾರ್ಮಿಕನಾಗಿದ್ದ ಯುವಕ ಆತ್ಮಹತ್ಯೆ

ಕುಂಬಳೆ: ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಮಲಗಿದ ಕೋಣೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ಕುಂಬಳೆ ಮಾವಿನಕಟ್ಟೆ ನಿವಾಸಿ, ಪೇಟೆಯ ಲೈಟ್ ಏಂಡ್ ಸೌಂಡ್ಸ್ ಸಂಸ್ಥೆಯ ನೌಕರ ನಿತಿನ್ ಕುಮಾರ್ ಗಟ್ಟಿ (25)ಎಂಬವರು ಆತ್ಮಹತ್ಯೆ ಮಾಡಿದವರಾಗಿದ್ದಾರೆ. ರಾತ್ರಿ ಮಲಗಿದ ವ್ಯಕ್ತಿ ಬೆಳಗ್ಗೆ ಏಳದೇ ಇರುವುದನ್ನು ಗಮನಿಸಿ ಬಾಗಿಲು ಬಡಿದಾಗ ಪ್ರತಿಕ್ರಿಯೆ ಇಲ್ಲದಿರುವುದನ್ನು ನೋಡಿ ತಪಾಸಿಸಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಪತ್ತೆಯಾಯಿತು. ಕುಂಬಳೆ ಪೋಲೀಸರು ತಲುಪಿ ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ಸಾಗಿಸಿ ಶವ…

Read More

ಕಾಸರಗೋಡು ಸರಕಾರಿ ಕಾಲೇಜು ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ

ಕಾಸರಗೋಡು ಸರಕಾರಿ ಕಾಲೇಜು ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣುಬಿಗಿದು ಆತ್ಮಹತ್ಯೆಕಾಸರಗೋಡು: ವಿದ್ಯಾನಗರದಲ್ಲಿರುವ ಕಾಸರಗೋಡು ಸರಕಾರಿ ಕಾಲೇಜಿನ ಪ್ರಥಮ ಬಿ.ಎ.ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಪ್ರಥಮ ವರ್ಷದ ಬಿ.ಎ ವಿದ್ಯಾರ್ಥಿ ಪಾಣತ್ತೂರು ಕಣ್ಣಿಮೇಡ್ ನಿವಾಸಿ ಪಿ.ಡಿ.ಅಭಿಷೇಕ್(20)ಎಂಬಾತ ಆತ್ಮಹತ್ಯೆ ನಡೆಸಿದ ಯುವಕ.ವಿದ್ಯಾನಗರದ ಸರಕಾರಿ ಕಾಲೇಜ್ ಹಾಸ್ಟೆಲಿನಲ್ಲಿ ಸಹ ವಿದ್ಯಾರ್ಥಿಗಳು ಇಂದು ಮುಂಜಾನೆ ಫೋನ್ ಕರೆ ಮಾಡಿದರೂ ತೆಗೆಯದಿದ್ದಾಗ ಅವರು ಈತನ ಕೋಣೆಯ ಕಿಟಿಕಿ ಸರಿಸಿ ನೋಡಿದರು. ಈ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೈ…

Read More

ಮಂಜೇಶ್ವರ: ಬಿರುಸಿನ ಮಳೆ ಸುರಿದು ವಿವಿಧೆಡೆಗಳಲ್ಲಿ ಹಾನಿ

ಮಂಜೇಶ್ವರ ಹೊಸಂಗಡಿ ಎಂ ಎಂ ಪ್ಲಾಜದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಕಟ್ಟಡದ ಕೆಳಭಾಗದಲ್ಲಿರುವ ಎಲ್ಲಾ ವ್ಯಾಪಾರ ಕೇಂದ್ರಗಳು ಜಲಾವೃತಗೊಂಡಿದೆ. ಅದೇ ರೀತಿ ಪೊಸೋಟು ರಾಷ್ಟ್ರೀಯ ಹೆದ್ದಾರಿಯ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಮೀಪದ ಅಂದುಞ ಎಂಬವರ ಮನೆ ಜಲಾವೃತಗೊಂಡಿದೆ. ಇದರ ಸಮೀಪದ ಎರಡು ಮನೆಗಳು ಕೂಡಾ ಜಲಾವೃತಗೊಂಡಿದೆ. ಅದೇ ರೀತಿ ಎಡನೀರು ಸಮೀಪದ ಚೂರಿಮೂಲೆ ಎಂಬಲ್ಲಿ ತೆಂಗಿನಮರವೊಂದುದು ರಸ್ತೆಯ ಮೇಲೆ ಸಾಗುತ್ತಿದ್ದ ವಿದ್ಯುತ್ ತಂತಿಗೆ…

Read More

ಬಿಜೆಪಿ ಇಂದು ಗ್ರಾಮ ಗ್ರಾಮ ಗಳಲ್ಲಿ ಅನಿವಾರ್ಯ -ಆದರ್ಶ ಬಿ ಎಂ

ಮಿಯಪದವು :ಮೋದಿ ಆಡಳಿತದಲ್ಲಿ ದೇಶದ ಪ್ರಗತಿ ಇಂದು ಲೋಕಕ್ಕೆ ಮಾದರಿ, ಕೇರಳದಲ್ಲಿಯೂ ಇಂದು ಬಿಜೆಪಿ ಪ್ರಬಲ ಶಕ್ತಿ, ಗ್ರಾಮ ಗ್ರಾಮ ಗಳಲ್ಲಿ ಬಿಜೆಪಿ ಜನಸಾಮಾನ್ಯರಿಗೆ ಅನಿವಾರ್ಯ, ಕೇಂದ್ರ ಯೋಜನೆಗಳು ಇಂದು ಪ್ರತಿ ಫಲನುಭವಿ ಗಳ ಮನೆಮನೆಗಳಿಗೆ ತಲುಪುತ್ತಿದೆ. ಆದರೆ ಕೇರಳ ಪಿನರಾಯಿ ಸರಕಾರ ಅವಾಸ್ ಯೋಜನೆ, ಅಯುಷ್ಮಾನ್ ಯೋಜನೆ, ಕೃಷಿ ಸಮ್ಮಾನ್ ಯೋಜನೆ, ಸರ್ವಶಿಕ್ಷ ಅಭಿಯಾನ ಗಳನ್ನು ಬುಡಮೇಲೂ ಗೊಳಿಸುತಿದೆ ಹಾಗೂ ಅನೇಕ ಯೋಜನೆಗಳನ್ನು ಹೆಸರು ಬದಲಾಯಿಸಿ ತನ್ನ ಯೋಜನೆ ಎಂಬತ್ತೆ ಬಿಂಬಿಸುತಿದೆ. ಎಂದು ಬಿಜೆಪಿ ಮಂಜೇಶ್ವರ…

Read More

ಕ್ಯಾಮೆರಾ ನೋಡ್ತಾಯಿದೆ…………ತ್ಯಾಜ್ಯ ಬಿಸಾಡ್ತಿದ್ದೀರಾ..? ಎಚ್ಚರಿಕೆ!

ಮಂಜೇಶ್ವರದಲ್ಲಿ ರಸ್ತೆಯ ಬದಿಗೆ ತ್ಯಾಜ್ಯ ಬಿಸಾಡೋದು ಈಗ ‘ರಿಯಾಲಿಟಿ ಶೋ’ ಆಗುತ್ತಿದೆ! ಹೌದು… ನೀವು ಕೈಯಲ್ಲಿ ಪ್ಲಾಸ್ಟಿಕ್ ಹಿಡಿದು, ತ್ಯಾಜ್ಯ ಬಿಸಾಡೋದು ನಿಮ್ಮ ಯೋಚನೆಯಂತೆ ‘ಸೀಕ್ರೆಟ್’ ಆಗಿರಬಹುದು, ಆದರೆ ಮೆಲೆ ನೋಡಿ – CCTV ಸಾರ್ ನಿಮ್ಮನ್ನು ನೋಡುತ್ತಿದ್ದಾರೆ! ಮಂಜೇಶ್ವರ ಗ್ರಾಮ ಪಂಚಾಯತ್ ಎಚ್ಚರವಾಗಿದೆ.ರಸ್ತೆ ಬದಿಗಳಲ್ಲಿ ಕಸ ತ್ಯಾಜ್ಯ ಬಿಸಾಡುವವರನ್ನು ಪತ್ತೆ ಹಚ್ಚಲು, ಹಲವು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪಂಚಾಯತ್ ಕಚೇರಿಯಿಂದ ನೇರವಾಗಿ ಈ ದೃಶ್ಯಗಳನ್ನು ವೀಕ್ಷಿಸುವ ವ್ಯವಸ್ಥೆ ಕೂಡಾ ರೂಪುಗೊಂಡಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ…

Read More

ಸ್ನಾನಕ್ಕೆಂದು ಕೆರೆಗೆ ಇಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ದಾರುಣ ಸಾವು

ಮಂಜೇಶ್ವರ: ಸ್ನಾನಕ್ಕೆಂದು ಕೆರೆಗೆ ಇಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನೊಂದು ಬಾಲಕನನ್ನು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.ಕಾಞಂಗಾಡ್ ನ ಮಾಣಿಕ್ಕೋತ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಾಲೆಕ್ಕಿ ಅಝೀಝ್ ರವರ ಪುತ್ರ ಆಫಾಝ್(9) ಹಾಗೂ ಹೈದರ್ ರವರ ಪುತ್ರ ಅನ್ವರ್ (11) ಸಾವನ್ನಪ್ಪಿದ ಬಾಲಕರು.ಅನ್ವರ್ ನ ಸಹೋದರ ಹಾಶಿಮ್ ನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಣಿಕ್ಕೋತ್ ಪಾಲೆಕ್ಕಿ ಮಸೀದಿಯ ಕೆರೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮಾಹಿತಿ ಅರಿತು ನಾಗರಿಕರು, ಅಗ್ನಿಶಾಮಕ…

Read More

ಸದ್ಬಳಕೆ ಆಗದ 1 ಕೋಟಿ 30 ಲಕ್ಷ ರೂಪಾಯಿ ಅನುದಾನ ನೆನೆಗುದಿಗೆ ಬಿದ್ದ ಸುರುಮಾ ತೋಡು ಶುದ್ದೀಕರಣ

ಮಂಜೇಶ್ವರ, ಮೇ 23: ಮಂಜೇಶ್ವರ ಗ್ರಾಮ ಪಂಚಾಯತಿಯ 3ನೇ ವಾರ್ಡಿನ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭವಾಗುವ ಮುನ್ನ ಸುರುಮ ತೋಡನ್ನು ಶುದ್ಧೀಕರಣ ಮಾಡುವ ಕೆಲಸಕ್ಕೆ ಸಂಬಂಧಪಟ್ಟ ಉದ್ದೇಶಿತ ಕಾರ್ಯಗಳು ಇಲ್ಲಿಯವರೆಗೆ ಆರಂಭವಾಗಿಲ್ಲ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಈ ನಿರ್ಲಕ್ಷ್ಯದ ಪರಿಣಾಮವಾಗಿ, ತೋಡಿನಲ್ಲಿ ತುಂಬಿ ಕೊಂಡಿರುವ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳು ಕೃಷಿಕರ ಹೊಲಗಳಿಗೆ ನುಗ್ಗಿ ಬೆಳೆ ಹಾನಿಗೆ ಕಾರಣವಾಗುತ್ತಿದೆ. ಸ್ಥಳೀಯ ರೈತರು ಹಾಗೂ ಪರಿಸರವಾಸಿಗಳು ನೀಡಿರುವ ಮಾಹಿತಿಯಂತೆ, ತೋಡಿನ ನವೀಕರಣಕ್ಕಾಗಿ ಸರಕಾರದಿಂದ ಸುಮಾರು ಒಂದು ಕೋಟಿ…

Read More

ಚೆರ್ಕಳ ಬೇವಿಂಜೆಯಲ್ಲಿ ಚಲಿಸುತ್ತಿದ್ದ ಕಾರು ಅಗ್ನಿಗೆ ಆಹುತಿ : ಕಾರಿನಲ್ಲಿದ್ದ ಐವರು ಅಪಾಯದಿಂದ ಪಾರು

ಕಾಸರಗೋಡು: ಇಲ್ಲಿನ ಚೆರ್ಕಳ ಬೇವಿಂಜೆ ಗುಡ್ಡೆಯಲ್ಲಿ ಚಲಿಸುತ್ತಿದ್ದ ಕಾರೊಂದು ಇಂದು ಬೆಳಿಗ್ಗೆ ಹೊತ್ತಿ ಉರಿದಿದೆ.ಕಾರಿನಲ್ಲಿದ್ದ ಐವರ ತಂಡ ಅದೃಷ್ಟವಶಾತ್ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನ್ಯೂ ಮುಂಬೈಯಿಂದ ಕೇರಳದ ಕಣ್ಣೂರು ಜಿಲ್ಲೆಯ ಕಣ್ಣೋಪುರಂಗೆ ಬರುತ್ತಿದ್ದ ಸಿಎನ್ ಜಿ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಇವರು ಮುಂಬೈಯಿಂದಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಚೆರ್ಕಳ ದಾಟುತ್ತಿದ್ದಂತೆಯೇ ಕಾರಿನಿಂದ ಹೊಗೆ ಏಳುವುದನ್ನು ಗಮನಿಸಿದ ಚಾಲಕ ಇಕ್ಬಾಲ್ ಅಹಮ್ಮದ್ ಕುಟ್ಟಿ ಬೇವಿಂಜೆಯಲ್ಲಿ ಕಾರು ನಿಲ್ಲಿಸಿ ಅದರಲ್ಲಿ…

Read More
error: Content is protected !!