ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿ- ಶ್ರೀ ಸೋಮಶೇಖರ್ ಜೆ ಎಸ್.ವರ್ಕಾಡಿ ಕಾಂಗ್ರೆಸ್ ಕಚೇರಿ ಕೆಕೆ ಜಾಯಿರನ್ ಸ್ಮೃತಿ ಭವನ ಉದ್ಘಾಟನೆ
ಸ್ವತಂತ್ರ ಭಾರತದ ರೂವಾರಿಗಳಾದ ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿಯಾಗಿದೆ. “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಕಾಂಗ್ರೆಸ್ ಎಂದೆಂದಿಗೂ ಜನ ಹೃದಯಗಳಲ್ಲಿ ಸ್ಥಾಯಿಯಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷದ ಉಲ್ಲೇಖವಿಲ್ಲದೆ ಆಧುನಿಕ ಭಾರತದ ಇತಿಹಾಸ ಪೂರ್ಣವಾಗದು ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ್ ಜೆ. ಎಸ್ ಹೇಳಿದ್ದಾರೆ.ಅವರು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ “ಶ್ರೀ ಕೆ.ಕೆ. ಜಾಯಿರನ್ ಸ್ಮೃತಿ ಭವನ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಸಮಿತಿಯ ಮಜಿರ್ಪಳ್ಳದಲ್ಲಿ ಕಾರ್ಯಕ್ರಮ…
