ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿ- ಶ್ರೀ ಸೋಮಶೇಖರ್ ಜೆ ಎಸ್.ವರ್ಕಾಡಿ ಕಾಂಗ್ರೆಸ್ ಕಚೇರಿ ಕೆಕೆ ಜಾಯಿರನ್ ಸ್ಮೃತಿ ಭವನ ಉದ್ಘಾಟನೆ

ಸ್ವತಂತ್ರ ಭಾರತದ ರೂವಾರಿಗಳಾದ ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿಯಾಗಿದೆ. “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಕಾಂಗ್ರೆಸ್ ಎಂದೆಂದಿಗೂ ಜನ ಹೃದಯಗಳಲ್ಲಿ ಸ್ಥಾಯಿಯಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷದ ಉಲ್ಲೇಖವಿಲ್ಲದೆ ಆಧುನಿಕ ಭಾರತದ ಇತಿಹಾಸ ಪೂರ್ಣವಾಗದು ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ್ ಜೆ. ಎಸ್ ಹೇಳಿದ್ದಾರೆ.ಅವರು ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ “ಶ್ರೀ ಕೆ.ಕೆ. ಜಾಯಿರನ್ ಸ್ಮೃತಿ ಭವನ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಸಮಿತಿಯ ಮಜಿರ್ಪಳ್ಳದಲ್ಲಿ ಕಾರ್ಯಕ್ರಮ…

Read More

ಮಂಜೇಶ್ವರವನ್ನು ತ್ಯಾಜ್ಯ ಮುಕ್ತಗೊಳಿಸುವ ನಡುವೆ ವಿಕೃತ ಮೆರೆಯುವಕೆಲವು ಅವಿವೇಕಿಗಳ ದುಸ್ಸಾಹಸಕ್ಕೆ ತ್ಯಾಜ್ಯವು ಅಸಹ್ಯಪಡುವಂತಾಗಿದೆ

ಮಂಜೇಶ್ವರ : ಮಂಜೇಶ್ವರವನ್ನು ಸಂಪೂರ್ಣವಾಗಿ ತ್ಯಾಜ್ಯ ಮುಕ್ತವನ್ನಾಗಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ನಾಗರಿಕರು ಹರ ಸಾಹಸ ಪಡುತ್ತಿರುವ ಮಧ್ಯೆ ಕೆಲವು ವಿಕೃತ ಮನಸ್ಸುಗಳು ಸಾರ್ವಜನಿಕ ವಲಯದಲ್ಲಿ ತ್ಯಾಜ್ಯಗಳನ್ನು ಬಿಸಾಡುತ್ತಿರುವ ಕೃತ್ಯವನ್ನು ಮುಂದುವರಿಸುತ್ತಲೇ ಇದೆ.ಸಾರ್ವಜನಿಕ ವಲಯಗಳಲ್ಲಿ ನಿಯಮ ವಿರೋಧಿಯಾಗಿ ತ್ಯಾಜ್ಯ ಬಿಸಾಡುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅದರಲ್ಲಿ ಹೊಸದಾಗಿ ಉದ್ಯಾವರ-ಮಾಡ ಅಂಗನವಾಡಿ ಪ್ರದೇಶದ ಘಟನೆಯೊಂದು ಖಂಡನಾರ್ಹ ಬೆಳವಣಿಗೆಯಾಗಿದೆ. ಇದೀಗ ಉದ್ಯಾವರ ಮಾಡ ಅಂಗನವಾಡಿ ಪರಿಸರದಲ್ಲಿ ಅಗೋಸ್ಟ್ 3 ರಂದು ಸಂಜೆ 5 ಗಂಟೆಯ ಸುಮಾರಿಗೆ ಕಾರಿನ ನಂಬ್ರ ಪ್ಲೇಟಿಗೆ…

Read More

ಬದಿಯಡ್ಕ : ಲೈಂಗಿಕ ಸಂಬಂಧ ಬೆಳೆಸಿ ಅಪ್ರಾಪ್ತೆಗೆ ಹುಟ್ಟಿದ ಮಗುವನ್ನು ಅನಾಥ ಮಂದಿರಕ್ಕೆ ಹಸ್ತಾಂತರಿಸುವ ಯತ್ನದ ನಡುವೆ-ಆರೋಪಿಯ ಬಂಧನ

ಬದಿಯಡ್ಕ : ಲೈಂಗಿಕ ಸಂಬಂಧ ಬೆಳೆಸಿ 17ರ ಹರೆಯದ ಅಪ್ರಾಪ್ತೆಗೆ ಹುಟ್ಟಿದ ಮಗುವನ್ನು ಅನಾಥ ಮಂದಿರಕ್ಕೆ ಹಸ್ತಾಂಂತರಿಸುವ ಯತ್ನದ ನಡುವೆ ಆರೋಪಿಯನ್ನು ಬಂಧಿಸಲಾಗಿದೆ. ಯುವತಿ ಮತ್ತು ಯುವಕ ಇಬ್ಬರೂ ಬದಿಯಡ್ಕ ಠಾಣಾ ವ್ಯಾಪ್ತಿಗೆ ಸೇರಿದವರಾಗಿದ್ದಾರೆ. ಪ್ಲಸ್ ಟು ಶಿಕ್ಷಣ ಪಡೆದ ಬಳಿಕ ಮನೆಯಲ್ಲೇ ಇದ್ದ ಯುವತಿಯನ್ನು ತಾಯಿಯ ಸಂಬಂಧಿಕನೇ ಆದ ಮೂರು ಮಕ್ಕಳ ತಂದೆಯಾದ 40ರ ವ್ಯಕ್ತಿ ನಿರಂತರ ದೌರ್ಜನ್ಯ ನಡೆಸಿ ಗರ್ಭಿಣಿಯನ್ನಾಗಿಸಿದನೆನ್ನಲಾಗಿದೆ.ಯುವತಿ ಗರ್ಭಿಣಿ ಯಾದ ಬಳಿಕ ಶಂಕೆ ಬಾರದಿರಲು ಸುಳ್ಳು ಹೇಳಿ ಆಸ್ಪತ್ರೆ ಬದಲಾಯಿಸುತ್ತಾ ಚಿಕಿತ್ಸೆ…

Read More

ಕಾಸರಗೋಡು ಜಿಲ್ಲೆಗೆ ಬುಧವಾರ ರೆಡ್ ಅಲರ್ಟ್ – ಎಲ್ಲಾ ಶೈಕ್ಷಣಿಕ ಸಂಸ್ಥೆಗೂ ರಜೆ ಘೋಷಣೆ

ಭಾರೀ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ನಾಳೆ ಬಬುಧವಾರ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ಶಾಲಾ ಕಾಲೇಜು ಸಹಿತ ಶೈಕ್ಷಣಿಕ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ. ಕೇಂದ್ರ ಹವಾಮಾನ ಇಲಾಖೆ ಬಬುಧವಾರ ಕಾಸರಗೋಡು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಲೀ ರಜೆ ಪ್ರಕಟಿಸಿದರು. ಸಾರ್ವಜನಿಕ ಸುರಕ್ಷೆಯ ಮುನ್ನೆಚ್ಚರಿಕೆ ವಹಿಸಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಪ್ರಕಟಿಸಲಾಗಿದೆ. ಇದರಂತೆ ಕೇಂದ್ರೀಯ ವಿದ್ಯಾಲಯ, ಮದ್ರಸ, ಟ್ಯೂಷನ್ ಸೆಂಟರ್ ಸಹಿತ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಇದು ಅನ್ವಯವಾಗಿದೆ. ಈ ಹಿಂದೆ ಘೋಷಿಸಲ್ಪಟ್ಟ…

Read More

ತಲಪಾಡಿ-ತೂಮಿನಾಡು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಗುಬ್ಬೆದ್ದು ನಾರುತ್ತಿರುವ ತ್ಯಾಜ್ಯ ರಾಶಿ: ನಾಗರಿಕರಲ್ಲಿ ಆಕ್ರೋಶ ಹಾಗೂ ರೋಗ ಭೀತಿ

ಮಂಜೇಶ್ವರ — ನೂತನವಾಗಿ ಕಾಮಗಾರಿ ಪೂರ್ಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಷಟ್ಪಪಥ (ಸಿಕ್ಸ್ ಲೈನ್) ರಸ್ತೆಯ ತಲಪಾಡಿಯಿಂದ ತೂಮಿನಾಡು ತನಕದ ಸರ್ವೀಸ್ ರಸ್ತೆಯ ಪರಿಸ್ಥಿತಿ ದಾರುಣವಾಗಿದೆ. ರಸ್ತೆಯ ಬದಿಗಳಲ್ಲಿ ತ್ಯಾಜ್ಯಗಳು ತುಂಬಿದ್ದು, ದುರ್ಗಂಧದಿಂದಾಗಿ ಜನರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಗೆ ತಲುಪಿದೆ. ಪ್ರತಿದಿನ ಈ ದಾರಿಯಾಗಿ ಶಾಲಾ ವಿದ್ಯಾರ್ಥಿಗಳು, ನೂರಾರು ವಾಹನಗಳು ಹಾಗೂ ಕಾಲ್ನಡೆ ಯಾತ್ರಿಕರು ಸಂಚಾರ ಮಾಡುತ್ತಿದ್ದು, ರಸ್ತೆಯ ಬದಿಯಲ್ಲಿ ಶೇಖರಣೆಯಾಗಿರುವ ಅಪಾಯಕಾರಿ ತ್ಯಾಜ್ಯ ಗುದ್ದಲಿಯಿಂದ ತೀವ್ರ ಅಸ್ವಚ್ಛತೆ ಉಂಟಾಗಿದೆ. ಪ್ಲಾಸ್ಟಿಕ್ ಮುಡಕಿಗಳು, ಆಹಾರದ ಅವಶಿಷ್ಟಗಳು, ಹಾಳಾದ ವಸ್ತುಗಳು…

Read More

ವರ್ಕಾಡಿ ವಲಯದ ಬಂಟರ ಸಂಘ ಆಯೋಜಿಸಿದ ಜನಮನ ರಂಜಿಸಿದ ಆಟಿಡೊಂಜಿ ಕೂಟ ಕಾರ್ಯಕ್ರಮ

ವರ್ಕಾಡಿ ವಲಯದ ಬಂಟರ ಸಂಘ ಆಯೋಜಿಸಿದ ಆಟಿಡೊಂಜಿ ಕೂಟ ಕಾರ್ಯಕ್ರಮವು ಜುಲೈ 27 ಆದಿತ್ಯವಾರ ಬೆಳಿಗ್ಗೆ ಕೋಳ್ಯೂರು ಆಡಿಟೋರಿಯಂನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆನೇಕಲ್ಲು ಛತ್ರ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಎನ್. ಟಿ. ರೈ ನಾಣಿಲ್ತಡಿಯವರು ಕಾರ್ಯಕ್ರಮ ಉದ್ಧಾಟಿಸಿದರು. ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಆಟಿಯ ದಿನದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಾಥ್ ಕೊಂಡೆ ಚಕ್ರಕೋಡಿ , ಸುಧೀಶ್ಚಂದ್ರ…

Read More

ಬಾಡೂರು ಪದವು ಶ್ರೀ ಕೃಷ್ಣ ಮಂದಿರದಲ್ಲಿ 39 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ 15 ರಂದು

ಕುಂಬಳೆ : ಬಾಡೂರು ಪದವು ಶ್ರೀ ಕೃಷ್ಣ ಮಂದಿರದಲ್ಲಿ 39 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಅಗೋಸ್ಟ್ 15 ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ನಡೆಯಲಿದೆ. ಜನ್ಮಾಷ್ಟಮಿಯ ಅಂಗವಾಗಿ ತಾರೀಕು 10-8-2025 ಆದಿತ್ಯವಾರ ಬೆಳಗ್ಗೆ 9ಗಂಟೆಗೆ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ12:30 ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ, ಹಾಗು 2ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ ಸಂಜೆ 4 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣಾ ವೇಷಧಾರಿಗಳ ಶೋಭಾಯಾತ್ರೆ…

Read More

ಉದ್ಯಾವರ ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

ಮಂಜೇಶ್ವರ : ಉದ್ಯಾವರ ಸಾವಿರ ಜಮಾಹತ್ ಅನಿವಾಸಿ ಭಾರತೀಯ ಸಂಘಟನೆಯಾದ ಉದ್ಯಾವರ ದುಬೈ ಕಮಿಟಿ ಹಾಗೂ ದೇರಳ ಕಟ್ಟೆ ಕಣಚೂರು ಮೆಡಿಕಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಉದ್ಯಾವರ ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಉದ್ಯಾವರ ದುಬೈ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಗಫೂರ್ ಗುಚ್ಚಿ ರವರ ಅಧ್ಯಕ್ಷತೆಯಲ್ಲಿ ನಡೆದ ವೈದ್ಯಕೀಯ ಶಿಬಿರವನ್ನು ಉದ್ಯಾವರ ಸಾವಿರ ಜಮಾಹತ್ ಅಧ್ಯಕ್ಷ ಸಯ್ಯದ್ ಸೈಪುಲ್ಲಾ ತಂಘಲ್ ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು (Byt1): ಉದ್ಯಾವರ ಸಾವಿರ…

Read More

ಮಂಜೇಶ್ವರ ಗ್ರಾಮ ಪಂಚಾಯತ್ ಆರೋಗ್ಯ ಕೇಂದ್ರ ಹಾಗೂ ಚಕ್ರವರ್ತಿ(ರಿ.) ಹೊಸಂಗಡಿ ನೇತೃತ್ವದಲ್ಲಿ ಆರೋಗ್ಯ ಮಾಹಿತಿ ಶಿಬಿರ

ಮಂಜೇಶ್ವರ ಗ್ರಾಮ ಪಂಚಾಯತ್ ಜನಕೀಯ ಆರೋಗ್ಯ ಕೇಂದ್ರ ಹಾಗೂ ಚಕ್ರವರ್ತಿ(ರಿ.) ಹೊಸಂಗಡಿ ಇದರ ಸಂಯೋಜಕತ್ವದಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳ ಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ನಿನ್ನೆ ನಡೆಯಿತು.

Read More

ಪ್ರಶಸ್ತಿ ಪುರಸ್ಕಾರ ಗಳು ಹೆಚ್ಚಿನ ದುಡಿಮೆಗೆ ಪ್ರೇರಣೆ. ಡಾ. ಎಚ್ ಪ್ರಭಾಕರ್

ಕಾಸರಗೋಡು: ಕನ್ನಡ ಭವನ ಕಾಸರಗೋಡು ಕೇಂದ್ರ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಇದರ ವತಿಯಿಂದ ಡಾ. ಎಚ್ ಪ್ರಭಾಕರರಿಗೆ ಅಭಿನಂದನ ಸನ್ಮಾನ ಸಮಾರಂಭ ನಡೆಯಿತು.ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲಲಿತ್ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೆಲ್ತ್ ಕೇರ್ ಎಕ್ಸೆಲೆನ್ ಸ್ ಪ್ರಶಸ್ತಿ ಸ್ವೀಕರಿಸಿದ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಹೃದ್ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ. ಪ್ರಭಾಕರರಿಗೆ ಪ್ರಶಸ್ತಿ ಪ್ರಧಾನ ಅಭಿನಂದನಾ ಸಮಾರಂಭ ನಡೆಯಿತು….

Read More
error: Content is protected !!