ಪರಂಬಳ–ಕಯ್ಯಾರಿನಲ್ಲಿ ದೀಪಪೂಜನ ಕಾರ್ಯಕ್ರಮಕ್ಕೆ ಸಜ್ಜು
ಪರಂಬಳ–ಕಯ್ಯಾರು: ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೆರಗು ತುಂಬಿದ ವಿಶೇಷ ಕಾರ್ಯಕ್ರಮಕ್ಕೆ ಪರಂಬಳ–ಕಯ್ಯಾರು ಪ್ರದೇಶದಲ್ಲಿ ವೇದಿಕೆ ಸಜ್ಜಾಗಿದೆ.ತಾಲೂಕು ಮಟ್ಟದಲ್ಲಿ ಶ್ರೇಷ್ಠ ಭಜನಾ ಮಂಡಳಿ ಪ್ರಶಸ್ತಿ ಪಡೆದ ದುರ್ಗಾಶಕ್ತಿ ಕುಣಿತ ಭಜನಾ ತಂಡ, ಪರಂಬಳ–ಕಯ್ಯಾರು ವತಿಯಿಂದ ದೀಪಪೂಜನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. “ಅಸತೋಮಾ ಸದ್ಗಮಯ… ತಮಸೋಮಾ ಜ್ಯೋತಿರ್ಗಮಯ” ಎಂಬ ಮಹತ್ವದ ಸಂದೇಶದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಭಕ್ತರ ಮನಸ್ಸಿಗೆ ಆತ್ಮಶಾಂತಿ ಹಾಗೂ ಧಾರ್ಮಿಕ ಜಾಗೃತಿಯನ್ನುಂಟುಮಾಡುವ ಉದ್ದೇಶ ಹೊಂದಿದೆ.ಏಪ್ರಿಲ್ 12, 2026 ಭಾನುವಾರ ಸಂಜೆ 6 ಗಂಟೆಗೆ ಪರಂಬಳ–ಕಯ್ಯಾರು ಭಾರತ ಮಾತಾ ಸೇವಾ…