ಕಾಸರಗೋಡು ಸುನಾಮಿ ಕಾಲೊನಿಯಲ್ಲಿ ಸೆಪ್ಟಿಕ್ ಟ್ಯಾಂಕ್ ತುಂಬಿ ಹರಿಯುತ್ತಿದೆ ಎಂಬ ದೂರು; ನಿವಾಸಿಗಳಿಂದ ನಗರಸಭೆ ಕಚೇರಿ ಎದುರು ಧರಣಿ*

ಕಾಸರಗೋಡು:* 101 ಫ್ಲ್ಯಾಟ್‌ಗಳನ್ನು ಹೊಂದಿರುವ ಕಾಸರಗೋಡಿನ ಸುನಾಮಿ ಕಾಲೊನಿಯ ಸೆಪ್ಟಿಕ್ ಟ್ಯಾಂಕ್ ತುಂಬಿ ಹರಿಯುತ್ತಿರುವುದಾಗಿ ನಿವಾಸಿಗಳು ಆರೋಪಿಸಿದ್ದಾರೆ. ಕಾಲೊನಿಯಲ್ಲಿರುವ ಇಷ್ಟೊಂದು ಕುಟುಂಬಗಳ ತ್ಯಾಜ್ಯವನ್ನು ಪ್ರಸ್ತುತ ಸೆಪ್ಟಿಕ್ ಟ್ಯಾಂಕ್ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೊಡ್ಡ ಸಾಮರ್ಥ್ಯದ ಹೊಸ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಬೇಕು ಹಾಗೂ ಸಾಂಕ್ರಾಮಿಕ ರೋಗಗಳಿಂದ ನಿವಾಸಿಗಳಿಗೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು. ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಆರೋಗ್ಯದ ಅಪಾಯದಿಂದ ರಕ್ಷಿಸಲು ತಕ್ಷಣ ಕ್ರಮ…

Read More

ಅಕ್ರಮ ಬೃಹತ್ ಲ್ಯಾಟರೈಟ ಕಲ್ಲು ಗಣಿಗಾರಿಕೆ ಮತ್ತು ಸಾಗಣೆ; ಪೈವಳಿಗೆ ಪಂಚಾಯತ್ ಸದಸ್ಯ ಹಾಗೂ ಡಿವೈಎಫ್‌ಐ ನಾಯಕ ಜಾಕಿ ಅಲಿಯಾಸ್ ಜಕರಿಯಾ ವಿರುದ್ಧ ವಿಟ್ಲದಲ್ಲಿ ಪ್ರಕರಣ

ಕಾಸರಗೋಡು: ಅಕ್ರಮ ಲ್ಯಾಟರೈಟ್ ಕಲ್ಲು ಗಣಿಗಾರಿಕೆ ಹಾಗೂ ಲ್ಯಾಟರೈಟ್ ಮಣ್ಣು ಮತ್ತು ಕಲ್ಲಿನ ಅಕ್ರಮ ಸಾಗಣೆ ಆರೋಪದಡಿ ಡಿವೈಎಫ್‌ಐ ನಾಯಕ ಹಾಗೂ ಪೈವಳಿಗೆ ಗ್ರಾಮ ಪಂಚಾಯತ್ ಸದಸ್ಯ ಜಾಕಿ ಅಲಿಯಾಸ್ ಜಕರಿಯಾ ವಿರುದ್ಧ ಕರ್ನಾಟಕದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗಣಿಗಾರಿಕೆಗೆ ಬಳಸಲಾಗಿದ್ದ ಯಂತ್ರೋಪಕರಣಗಳು, ಇತರೆ ಸಾಧನಗಳು ಹಾಗೂ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ, ಲ್ಯಾಟರೈಟ್ ಕಲ್ಲು ಮತ್ತು…

Read More

ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಬಸ್ ಮುಷ್ಕರ ಸಂಪೂರ್ಣ; ಪ್ರಯಾಣಿಕರು ಸಂಕಷ್ಟದಲ್ಲಿ

ಕಾಸರಗೋಡು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವುದರಿಂದ ಖಾಸಗಿ ಬಸ್‌ಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಆರೋಪಿಸಿ, ಸೂಕ್ತ ಪರಿಹಾರ ಕೈಗೊಳ್ಳಬೇಂದು ಆಗ್ರಹಿಸಿ ಕಾಸರಗೋಡು ಜಿಲ್ಲೆಯ ಖಾಸಗಿ ಬಸ್‌ಗಳು ಇಂದು ಸಂಪೂರ್ಣ ಸೇವೆ ಸ್ಥಗಿತಗೊಳಿಸಿವೆ. ಜಿಲ್ಲೆಯ ಖಾಸಗಿ ಬಸ್ ಮಾಲೀಕರು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಣಂಗೂರಿನಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಧರಣಿ ನಡೆಸಿದರು. ಈ ಮುಷ್ಕರದಿಂದ ಪ್ರಯಾಣಿಕರು ತೀವ್ರ ತೊಂದರೆ…

Read More

ಗಂಭೀರ ಕಾಯಿಲೆಗಳ ಔಷಧಿಗಳನ್ನು ಮಾದಕ ವಸ್ತುವಿನ ಪರ್ಯಾಯವಾಗಿ ಬಳಸಲಾಗುತ್ತಿದೆ; ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿ ನೀಡಬಾರದು: ರಮೇಶ್ ಚೆನ್ನಿತ್ತಲ

ಗಂಭೀರ ಕಾಯಿಲೆಗಳಿಗೆ ಬಳಸುವ ಕೆಲವು ಔಷಧಿಗಳನ್ನು ಮಾದಕ ವಸ್ತುವಿನ ಪರ್ಯಾಯವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಮೆಡಿಕಲ್ ಅಂಗಡಿಯವರು ಔಷಧಿಗಳನ್ನು ನೀಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ತಪಾಸಣೆಗಳನ್ನು ಮತ್ತಷ್ಟು ಕಠಿಣಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ. ತಪಾಸಣೆ ವೇಳೆ ಪೊಲೀಸರ ಮೇಲೆ ನಡೆಯುವ ಯಾವುದೇ ದಾಳಿಯನ್ನು ಸಹಿಸಲಾಗುವುದಿಲ್ಲ ಎಂದು ರಮೇಶ್ ಚೆನ್ನಿತ್ತಲ ಸ್ಪಷ್ಟಪಡಿಸಿದರು. ಯಾವುದೇ ವಿಷಯದಲ್ಲೂ ರಾಜಿ…

Read More

​ಮಂಜೇಶ್ವರ ಎಸ್.ಎ.ಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅದ್ಧೂರಿ ಪ್ಲಸ್ ಒನ್ ಪ್ರವೇಶೋತ್ಸವ

​ಮಂಜೇಶ್ವರ: ಸ್ಥಳೀಯ ಸುಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸರಕಾರಿ ಅನುದಾನಿತ ಮಂಜೇಶ್ವರ ಎಸ್.ಎ.ಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ನೂತನ ವಿದ್ಯಾರ್ಥಿಗಳಿಗಾಗಿ ‘ಪ್ಲಸ್ ಒನ್ ಪ್ರವೇಶೋತ್ಸವ’ ಸಂಭ್ರಮದಿಂದ ನಡೆಯಿತು.​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಅವರು ವಹಿಸಿದ್ದರು. ಸಮಾರಂಭವನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರೀನಾ ಬಾಯ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ​ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು, ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು….

Read More

ಕೌನ್ಸಿಲರ್ ಕರೆ ಮಾಡಿದಾಗ ಫೋನ್ ಸ್ವೀಕರಿಸಲಿಲ್ಲ; ಕ್ಲರ್ಕ್‌ಗೆ ವರ್ಗಾವಣೆ – ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಅಸಾಮಾನ್ಯ ಕ್ರಮ ಎಂಬ ಆರೋಪ

ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಫೋನ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಕ್ಲರ್ಕ್ ವಿರುದ್ಧ ಅಸಾಮಾನ್ಯ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಆಡಳಿತದ ಕಾರ್ಪೊರೇಷನ್‌ನಲ್ಲಿ, ಕೌನ್ಸಿಲರ್ ಕರೆ ಸ್ವೀಕರಿಸದ ಕಾರಣ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕ್ಲರ್ಕ್ ಸಂಧ್ಯಾ ರಾಣಿ ಅವರನ್ನು ಕಡಕಂಪಳ್ಳಿ ವಲಯ ಕಚೇರಿಗೆ ವರ್ಗಾಯಿಸಲಾಗಿದೆ. ವಳಿಯಶಾಲೆ ವಾರ್ಡ್‌ನ ಕೌನ್ಸಿಲರ್ ಸೂರ್ಯ ಕರೆ ಮಾಡಿದಾಗ ಸಂಧ್ಯಾ ರಾಣಿ ಫೋನ್ ಸ್ವೀಕರಿಸಲಿಲ್ಲ ಎಂಬುದು ಆರೋಪ. ಆದರೆ, ಮಗಳ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿ ತಾವು ಕೊಚ್ಚಿಯಲ್ಲಿದ್ದ ಕಾರಣ ಕರೆ…

Read More

ತಾಯಿಗೆ ಅನಾರೋಗ್ಯ, ಆರ್ಥಿಕ ಸಂಕಷ್ಟ’; ಹಣಕ್ಕಾಗಿ ಕಳ್ಳತನಕ್ಕೆ ಯತ್ನ – ತಾನು ಓದಿದ ಕಾಲೇಜಿನ ಹಾಸ್ಟೆಲ್‌ನಿಂದ ಹಾಸಿಗೆಗಳನ್ನು ಕದಿಯಲು ಯತ್ನಿಸಿದ ಹಳೆ ವಿದ್ಯಾರ್ಥಿ ಬಂಧನ

ಕೊಚ್ಚಿ: ಎರ್ನಾಕುಳಂನ ಮಹಾರಾಜಾಸ್ ಕಾಲೇಜಿನ ಹಾಸ್ಟೆಲ್‌ನಿಂದ ಹಾಸಿಗೆಗಳನ್ನು ಕಳವು ಮಾಡಲು ಯತ್ನಿಸಿದ ಹಳೆ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಮಾಲಿ ಮೂಲದ ಆನ್‌ಸ್ಟನ್ ಬಂಧಿತ ಆರೋಪಿ. 2024ರಲ್ಲಿ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ವಿದ್ಯಾರ್ಥಿಯಾಗಿದ್ದ ಆನ್‌ಸ್ಟನ್, ಭಾನುವಾರ ಮುಂಜಾನೆ ಕಳ್ಳತನದ ಉದ್ದೇಶದಿಂದ ಹಾಸ್ಟೆಲ್‌ಗೆ ಬಂದಿದ್ದನು. ಎಂಟು ಹಾಸಿಗೆಗಳನ್ನು ಪಿಕ್‌ಅಪ್ ವಾಹನದಲ್ಲಿ ಅಚ್ಚುಕಟ್ಟಾಗಿ ಕಟ್ಟಿ ಅಲ್ಲಿಂದ ಸಾಗಿಸಲು ಸಿದ್ಧತೆ ನಡೆಸುತ್ತಿದ್ದ ವೇಳೆ, ಭದ್ರತಾ ಸಿಬ್ಬಂದಿಯ ಗಮನಕ್ಕೆ ಈ ಘಟನೆ ಬಂದಿದೆ. ಸಿಬ್ಬಂದಿ ಪ್ರಶ್ನಿಸಿದಾಗ, “ಮರದ ಹುಳುಗಳನ್ನು ನಾಶಪಡಿಸಲು ಅಂಗಮಾಲಿಗೆ ಔಷಧ…

Read More

ಕುಂಬಳೆಯಲ್ಲಿ ವ್ಯಾಪಾರಿಗಳಿಂದ ಅಂಗಡಿ ಬಂದ್ ಪ್ರತಿಭಟನೆ ಮತ್ತು ಪಂಚಾಯತ್ ಕಚೇರಿಗೆ ಮೆರವಣಿಗೆ

ಕಾಸರಗೋಡು: ಕುಂಬಳೆಯ ಹಳೆಯ ಬಸ್ ನಿಲ್ದಾಣವನ್ನು ಪ್ರಯಾಣಿಕರ ಬಳಕೆಗೆ ತೆರೆಯಬೇಕು, ನೆಲಸಮಗೊಳಿಸಲಾದ ಕುಂಬಳೆ ಬಸ್ ನಿಲ್ದಾಣವನ್ನು ಮರುನಿರ್ಮಿಸಿ ವ್ಯಾಪಾರಿಗಳನ್ನು ಪುನರ್ವಸತಿ ಮಾಡಬೇಕು, ಆಟೋ ರಿಕ್ಷಾಗಳಿಗೆ ಪಂಚಾಯತ್ ನೋಂದಣಿಯನ್ನು ಕಡ್ಡಾಯಗೊಳಿಸಬೇಕು, “ಟೇಕ್ ಎ ಬ್ರೇಕ್” ಹಾಗೂ ಮೀನು ಮಾರುಕಟ್ಟೆಯನ್ನು ತೆರೆಯಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ವ್ಯಾಪಾರಿ–ಉದ್ಯಮಿ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಪೇಟೆಯಲ್ಲಿ ಮಧ್ಯಾಹ್ನದವರೆಗೆ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಯಿತು. ಅಂಗಡಿ ಬಂದ್ ಜೊತೆಗೆ ಖಾಸಗಿ ಬಸ್‌ಗಳ ಮುಷ್ಕರವೂ ನಡೆದಿದ್ದರಿಂದ ಕುಂಬಳೆ ಪೇಟೆ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿತ್ತು.ವ್ಯಾಪಾರಿಗಳು…

Read More

ಖ್ಯಾತ ಶಿಕ್ಷಣ ತಜ್ಞ, ಸಂಘಟಕ ರಮಾನಂದ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026”

ಕಾಸರಗೋಡು: ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಸಂಘಟನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಶಿಕ್ಷಣ ತಜ್ಞ ಮತ್ತು ಸಂಘಟಕರಾದ ರಮಾನಂದ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026” ಪ್ರದಾನ ಮಾಡಲಾಗುತ್ತಿದೆ. ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ…

Read More

ತೋಡಿನಲ್ಲಿ ಈಜಲು ಹೋಗಿದ್ದ 10ನೇ ತರಗತಿ ವಿದ್ಯಾರ್ಥಿ ನೀರಲ್ಲಿ ಮುಳುಗಿ ದುರ್ಮರಣ

ಮೂವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಆದಿತ್ಯ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆಯುಸಿರು ಕಾಸರಗೋಡು, ಜುಲೈ 6: ಬೇಕಲ ಪೊಲೀಸ್ ಠಾಣಾ ವ್ಯಾಪ್ತಿಯ ಪನಯಾಲ್‌ನ ಕೊಟ್ಟಪ್ಪಾರ ತೋಡಿನಲ್ಲಿ ಈಜಲು ತೆರಳಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪನಯಾಲ್ ನೆಲ್ಲಿಯಡ್ಕ ಉನ್ನತಿಯ ಅನೀಶ್ ಅವರ ಪುತ್ರ ಹಾಗೂ ತಚ್ಚಂಗಾಡು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಆದಿತ್ಯ (15) ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಆದಿತ್ಯ ತನ್ನ ಮೂವರು ಸ್ನೇಹಿತರೊಂದಿಗೆ…

Read More
error: Content is protected !!