ಮಂಜೇಶ್ವರ ರೈಲು ನಿಲ್ದಾಣದಲ್ಲಿ ಮಳೆಗಾಲದ ಸಂಕಷ್ಟ: ಮೇಲ್ಛಾವಣಿ ಕೊರತೆಯಿಂದ ಶೌಚಾಲಯದಲ್ಲಿ ಆಶ್ರಯ ಪಡೆಯುತ್ತಿರುವ ಪ್ರಯಾಣಿಕರು

ಮಂಜೇಶ್ವರ, ಜು. 7: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಸಮರ್ಪಕ ಮೇಲ್ಛಾವಣಿ (ಶೀಟ್ ಹೊದಿಕೆ) ಇಲ್ಲದ ಕಾರಣ ಮಳೆ ಸುರಿದಾಗ ಪ್ರಯಾಣಿಕರು ಶೌಚಾಲಯದೊಳಗೆ ಆಶ್ರಯ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಪ್ಲಾಟ್‌ಫಾರ್ಮ್‌ನ ಮಧ್ಯಭಾಗದಲ್ಲಿ ಮಾತ್ರ ಭಾಗಶಃ ಮೇಲ್ಛಾವಣಿ ಅಳವಡಿಸಲಾಗಿದ್ದು, ಉಳಿದ ಭಾಗ ಸಂಪೂರ್ಣ ಬಯಲಾಗಿಯೇ ಉಳಿದಿದೆ. ಪರಿಣಾಮ ಮಳೆ ಬಂದಾಗ ಪ್ರಯಾಣಿಕರು ನೆನೆಯುವುದನ್ನು ತಪ್ಪಿಸಿಕೊಳ್ಳಲು ಶೌಚಾಲಯ ಅಥವಾ ಇತರೆ ಸಣ್ಣ ಆಶ್ರಯ ಸ್ಥಳಗಳತ್ತ ಧಾವಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ….

Read More

ಮಲಯಾಳ ಭಾಷಾ ಮಸೂದೆ-2025 ಕುರಿತು ಸ್ಪಷ್ಟೀಕರಣ ಪತ್ರ: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮರುಪ್ರತ್ಯುತ್ತರ

ಕಾಸರಗೋಡು, ಜು. 7: ಕೇರಳ ಸರ್ಕಾರದ ಮಲಯಾಳ ಭಾಷಾ ಮಸೂದೆ-2025 ಕುರಿತು ಸಲ್ಲಿಸಿದ್ದ ಮನವಿಗೆ ಕೇರಳ ಸರ್ಕಾರದ ಆಡಳಿತ ಭಾಷಾ (Official Language) ಇಲಾಖೆಯ ಎಡಿಷನಲ್ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸ್ಪಷ್ಟೀಕರಣ ಪತ್ರ ಬಂದಿರುವುದಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ತಿಳಿಸಿದೆ. ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಈ ಹಿಂದೆ ಮುಖ್ಯಮಂತ್ರಿ ಹಾಗೂ ಕೇರಳ ರಾಜ್ಯ ಭಾಷಾ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಿದ್ದ ಮನವಿಯಲ್ಲಿ, ಮಲಯಾಳ ಭಾಷಾ ಮಸೂದೆಯ ಕೆಲ ಅಂಶಗಳು ಕನ್ನಡ ಭಾಷಿಕರು ಹಾಗೂ ಕನ್ನಡ…

Read More

ಕುಂಬಳೆ : ಅಬ್ಬರಿಸಿದ ಗಾಳಿ-ಮಳೆ: ಎರಡು ಮನೆಗಳಿಗೆ ಹಾನಿ

​ ಮಂಜೇಶ್ವರ : ಅತಿವೃಷ್ಟಿ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಂಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಮನೆಗಳು ಭಾಗಶಃ ಜಖಂಗೊಂಡಿವೆ. ಕುಂಬಳೆಯ 12ನೇ ವಾರ್ಡ್‌ನ ಕೋಟೇಕಾರಿನಲ್ಲಿ ರಾಧಾಕೃಷ್ಣ ಪೂಜಾರಿ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಕೂಡಲೇ ಹೊರಗೋಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ​ಅಲ್ಲದೆ, 24ನೇ ವಾರ್ಡ್‌ನ ಶೇಡಿಕಾವಿನಲ್ಲಿ ಮುತ್ತುಕೋಯ ತಂಗಲ್ ಅವರ ಹೆಂಚು ಹಾಕಿದ ಮನೆಯ ಮೇಲೆ ಪಕ್ಕದ ಮರ ಬಿದ್ದು ಮೇಲ್ಛಾವಣಿ ಧ್ವಂಸಗೊಂಡಿದೆ. ಸದ್ದು ಕೇಳಿ ಮನೆಯವರು ಹೊರಬಂದಿದ್ದರಿಂದ…

Read More

ಭಾರೀ ಮಳೆ-ಗಾಳಿ: ಪ್ಲಾಚ್ಚಿಕರದಲ್ಲಿ ಮನೆ ಮೇಲೆ ಮರ ಬಿದ್ದು ಭಾರಿ ಹಾನಿ

ಕಾಸರಗೋಡು, ಜು. 7: ಭಾರೀ ಮಳೆ ಮತ್ತು ಬಿರುಗಾಳಿಯ ಪರಿಣಾಮ ಮರವೊಂದು ಮನೆ ಮೇಲೆ ಉರುಳಿಬಿದ್ದು ಮನೆ ಭಾಗಶಃ ಜಖಂಗೊಂಡ ಘಟನೆ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ಸಮೀಪದ ಪ್ಲಾಚ್ಚಿಕರದ ಆವುಳ್ಳಕ್ಕೋಡಿನಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಆವುಳ್ಳಕ್ಕೋಡು ಅಂಗನವಾಡಿ ಸಮೀಪದ ‘ತೋಟ್ಟಿನಕರ’ ನಿವಾಸಿಗಳಾದ ಬಾಲಕೃಷ್ಣನ್ ಹಾಗೂ ಶಾರದಾ ಟಿ.ವಿ. ಅವರ ಮನೆ ಮೇಲೆ ಇಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಬೃಹತ್ ಮರ ಉರುಳಿಬಿದ್ದಿದೆ. ಮರವು ಮನೆಯ ಮೇಲ್ಛಾವಣಿ ಹಾಗೂ ಪಕ್ಕದಲ್ಲಿದ್ದ ದನದ ಕೊಟ್ಟಿಗೆಯ ಮೇಲೆ ಬಿದ್ದ…

Read More

ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ 2026 ಸರ್ವಾಧ್ಯಕ್ಷರಾಗಿ ಡಾ. ಸಿ. ಸೋಮಶೇಖರ್ ಐಎಎಸ್ ಆಯ್ಕೆ

ಕಾಸರಗೋಡು, ಜು. 7: ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ಜುಲೈ 26ರಂದು (ಭಾನುವಾರ) ಕನ್ನಡ ಭವನದ ಡಾ. ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ನಡೆಯಲಿರುವ **”ಕರ್ನಾಟಕ–ಗಡಿನಾಡು ಕನ್ನಡ ಸಮ್ಮೇಳನ 2026″**ರ ಸರ್ವಾಧ್ಯಕ್ಷರಾಗಿ ಮಾಜಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೇವಾಕಾಂಕ್ಷಿಯಾಗಿರುವ ಡಾ. ಸಿ. ಸೋಮಶೇಖರ್, ಐಎಎಸ್ ಅವರನ್ನು ಆಯ್ಕೆ…

Read More

ಭೀಕರ ಗಾಳಿ-ಮಳೆ: ಮನೆ ಮೇಲೆ ಮರ ಬಿದ್ದು 90 ವರ್ಷದ ವೃದ್ಧೆಗೆ ಗಾಯ

ಕಾಸರಗೋಡು, ಜು. 7: ಕಾಸರಗೋಡು ಜಿಲ್ಲೆಯ ಕಿನಾನೂರು-ಕರಿಂತಳ ಪಂಚಾಯತ್ ವ್ಯಾಪ್ತಿಯ ನಾಂತಿಯಡ್ಕದಲ್ಲಿ ಸೋಮವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಬೀಸಿದ ಭೀಕರ ಗಾಳಿ-ಮಳೆಯ ಪರಿಣಾಮ ಬೃಹತ್ ಮರವೊಂದು ಮನೆ ಮೇಲೆ ಉರುಳಿಬಿದ್ದು 90 ವರ್ಷದ ವೃದ್ಧೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ. ನಾಂತಿಯಡ್ಕದ ಕೆ. ಜಾನಕಿ ಅವರಿಗೆ ಸೇರಿದ ಹೆಂಚಿನ ಮನೆ ಮೇಲೆ ಬೃಹತ್ ಮರ ಅಪ್ಪಳಿಸಿದ ಪರಿಣಾಮ ಮನೆಯ ಮೇಲ್ಛಾವಣಿಯ ಹೆಂಚುಗಳು ಕುಸಿದು ಬಿದ್ದವು. ಈ ವೇಳೆ ಮನೆಯೊಳಗಿದ್ದ ಜಾನಕಿ ಅವರ ತಾಯಿ ಕೆ. ಮಾಣಿ…

Read More

ಕಾಸರಗೋಡು ಸಿಪಿಐ(ಎಂ) ಲೋಕಲ್ ಕಮಿಟಿ ಕಚೇರಿ ಮೇಲೆ ದಾಳಿ; ಇಬ್ಬರು ಬಿಜೆಪಿ ಕಾರ್ಯಕರ್ತರ ಬಂಧನ

ಕಾಸರಗೋಡು: ಸಿಪಿಐ(ಎಂ) ಲೋಕಲ್ ಕಮಿಟಿ ಕಚೇರಿ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ವಿಶಾಲ್ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ. ತಾಯನ್ನೂರು ಸಿಪಿಐ(ಎಂ) ಲೋಕಲ್ ಕಮಿಟಿ ಕಚೇರಿಯ ಮೇಲೆ ದಾಳಿ ನಡೆದಿತ್ತು. ದಾಳಿಯಲ್ಲಿ ಕಚೇರಿಯ ಕಿಟಕಿಗಳ ಗಾಜುಗಳು ಹಾಗೂ ಧ್ವಜಸ್ತಂಭಗಳಿಗೆ ಹಾನಿಯಾಗಿದೆ.ಈ ದಾಳಿಯ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಸಿಪಿಐ(ಎಂ) ಆರೋಪಿಸಿತ್ತು. ಉದ್ದೇಶಪೂರ್ವಕವಾಗಿ ಸಂಘರ್ಷ ಸೃಷ್ಟಿಸಲು ಈ ಕೃತ್ಯ ಎಸಗಲಾಗಿದೆ ಎಂದು ಪಕ್ಷದ ನಾಯಕರು ಹೇಳಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು…

Read More

ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಪರೀಕ್ಷೆಗಳ ಉನ್ನತ ಸಾಧಕರಿಗೆ ಅಭಿನಂದನೆ

ಪಳ್ಳಂಜಿ: ಮುಳಿಯಾರ್ ವಲಯದ ಬಿಜೆಪಿ ಬೂತ್ 86 ಮತ್ತು 232 ರ ಬೂತ್ ಸಮಿತಿಗಳ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಹಾಗೂ ಎಲ್‌ಎಸ್ಎಸ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಿಡುಗುಳಿ ಶ್ರೀ ವೀರಮಾರುತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಹೊಸ ಪೀಳಿಗೆಗೆ ಉನ್ನತ ಶಿಕ್ಷಣದ ಜೊತೆಗೆ ಮೌಲ್ಯಗಳು ಮತ್ತು ಶಿಸ್ತನ್ನು ನೀಡದಿದ್ದರೆ, ಕೇವಲ ಒಂದು ಸಮಾಜದ ಮಾತ್ರವಲ್ಲದೆ ಇಡೀ ದೇಶದ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ ಎಂದು…

Read More

ಎಲ್‌ಡಿಎಫ್ ಆಡಳಿತ ನಡೆಸಿದರೂ ಯುಡಿಎಫ್ ಆಡಳಿತ ನಡೆಸಿದರೂ ಮೀನುಗಾರರಿಗೆ ಟ್ರೋಲಿಂಗ್ ಅವಧಿಯು ಕಡುಬಡತನದ ಕಾಲ: ಎಂ.ಎಲ್. ಅಶ್ವಿನಿ

​ಕಾಸರಗೋಡು: ಎಲ್‌ಡಿಎಫ್ ಆಡಳಿತ ನಡೆಸಿದರೂ ಯುಡಿಎಫ್ ಆಡಳಿತ ನಡೆಸಿದರೂ ಕೇರಳದ ಮೀನುಗಾರರಿಗೆ ಟ್ರೋಲಿಂಗ್ ನಿಷೇಧವಿರುವ ತಿಂಗಳುಗಳು ಕಡುಬಡತನದ ಅವಧಿಯಾಗಿದ್ದು, ಪೆನ್ಷನ್ ಹಾಗೂ ರೇಷನ್ ವಿಳಂಬವಾಗುವುದು ಇಲ್ಲಿ ನಿರಂತರ ಘಟನೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಹೇಳಿದರು. ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಾಸರಗೋಡು ಫಿಶರೀಸ್ ಕಚೇರಿ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ​ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ನರೇಂದ್ರ ಮೋದಿ ಸರ್ಕಾರವು ಮೀನುಗಾರರ ಸುರಕ್ಷತೆ ಮತ್ತು ಕಲ್ಯಾಣವನ್ನು ಜಾರಿಗೊಳಿಸುತ್ತಿದ್ದರೆ, ರಾಜ್ಯ ಸರ್ಕಾರಕ್ಕೆ…

Read More

ಕನ್ನಡ ಭವನ ರಜತ ಸಂಭ್ರಮ ಸಮಾರೋಪ: ಸಮ್ಮೇಳನ ಸಮಿತಿ ಅಧ್ಯಕ್ಷರಾಗಿ ಡಾ. ವೆಂಕಟ್ರಮಣ ಹೊಳ್ಳ ನೇಮಕ

ಕಾಸರಗೋಡು, ಜು. 6: ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯವು ತನ್ನ ಸ್ಥಾಪನೆಯ 25ನೇ ವರ್ಷವನ್ನು ಇದೇ ಜುಲೈ 22ರಂದು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ರಜತ ಸಂಭ್ರಮವನ್ನು ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ರಜತ ಸಂಭ್ರಮದ ಅಂಗವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಒಟ್ಟು 40ಕ್ಕೂ ಅಧಿಕ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ರಜತ ಸಂಭ್ರಮದ ಸಮಾರೋಪ ಸಮಾರಂಭವು ಜುಲೈ 26ರಂದು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ…

Read More
error: Content is protected !!