ಸಹಸ್ರ ಕಣ್ಣುಗಳ ಸಾಕ್ಷಿಯಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ವೈಭವ
ದೈವ ಮರಕಲ ಅಂಗಳವು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಸಾವಿರಾರು ಭಕ್ತರು ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ಪಡೆದು ಭಕ್ತಿಭಾವದಲ್ಲಿ ತೇಲಿದರು. ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಮಂಗಲದಾಯಕ ಮೂರ್ತಿಯ ದಿವ್ಯ ದರ್ಶನ ನಿನ್ನೆಯ ದಿನವಾಯಿತ್ತು . ಸುಮಾರು ನೂರು ವರ್ಷಗಳ ಬಳಿಕ ಕೀಕಾನ ಗ್ರಾಮದಲ್ಲಿ ಕಂಡನಾರ್ ಕೇಳನ್ ವೆಳ್ಳಾಟಂ ದರ್ಶನ ನೀಡಿದ್ದು, ಸಾಕ್ಷಾತ್ ಶಿವಾಂಶ ಹೊಂದಿದ ದೈವದ ಅವತಾರ ಭಕ್ತರಲ್ಲಿ ಮೈ ರೋಮಾಂಚನ ಮೂಡಿಸಿತು….