ಜು. 6ರಂದು ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಎಚ್ಚರಿಕೆ ಮುಷ್ಕರ

ಕಾಸರಗೋಡು, ಜು. 4: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಜಾರಿಯಾದ ಬಳಿಕ ಖಾಸಗಿ ಬಸ್‌ಗಳ ಆದಾಯದಲ್ಲಿ ಗಣನೀಯ ಕುಸಿತ ಉಂಟಾಗಿದ್ದು, ನಷ್ಟದಲ್ಲಿರುವ ಖಾಸಗಿ ಬಸ್ ಉದ್ಯಮವನ್ನು ರಕ್ಷಿಸುವಂತೆ ಆಗ್ರಹಿಸಿ ಜುಲೈ 6ರಂದು (ಸೋಮವಾರ) ಜಿಲ್ಲೆಯಾದ್ಯಂತ ಒಂದು ದಿನದ ಎಚ್ಚರಿಕೆ ಮುಷ್ಕರ ನಡೆಸಲು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ತೀರ್ಮಾನಿಸಿದೆ. ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಪದಾಧಿಕಾರಿಗಳು, ಕೆಎಸ್‌ಆರ್‌ಟಿಸಿ ಸಂಚರಿಸುವ ಮಾರ್ಗಗಳಲ್ಲಿ ಓಡಾಡುವ ಖಾಸಗಿ ಬಸ್‌ಗಳಿಗೆ ಡೀಸೆಲ್ ವೆಚ್ಚ ಭರಿಸುವಷ್ಟು ಆದಾಯವೂ ದೊರೆಯುತ್ತಿಲ್ಲ. ಇತರ…

Read More

11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಬಂಧನ

ಕಾಸರಗೋಡು : ಪರಿಯಾರಂನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಇ.ವಿ. ಗೋಪಿನಾಥನ್ (62) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.​ಘಟನೆಯ ನಂತರ ಬಾಲಕಿ ದೈಹಿಕ ಅಸ್ವಸ್ಥತೆಯಿಂದ ನರಳುತ್ತಿದ್ದುದನ್ನು ಗಮನಿಸಿದ ತಾಯಿ, ವಿಚಾರಿಸಿದಾಗ ಕರಾಳ ಸತ್ಯ ಬಯಲಾಗಿದೆ. ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಯಾರಂ ಠಾಣಾಧಿಕಾರಿಗಳು ಪೋಕ್ಸೋ…

Read More

ಮಂಜೇಶ್ವರದಲ್ಲಿ ಕುಸಿದ ಹೆಂಚಿನ ಮನೆ: ಕೂದಲೆಳೆಯ ಅಂತರದಲ್ಲಿ ಬದುಕುಳಿದ ಕುಟುಂಬ

​ಮಂಜೇಶ್ವರ : ಮಂಜೇಶ್ವರ ರೈಲ್ವೆ ನಿಲ್ದಾಣದ ಸಮೀಪವಿರುವ ವೇದಾವತಿ ಎಂಬವರ ಮನೆ ಹಠಾತ್ತಾಗಿ ಕುಸಿದುಬಿದ್ದಿದೆ. ತೀವ್ರ ಶಬ್ದ ಕೇಳಿ ಎಚ್ಚೆತ್ತ ಕುಟುಂಬದವರು ತಕ್ಷಣ ಮನೆಯಿಂದ ಹೊರಗೆ ಓಡಿಬಂದಿದ್ದರಿಂದ, ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ​ಮನೆ ಕುಸಿದ ಪರಿಣಾಮ ಹೆಂಚಿನ ಛಾವಣಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ತೀವ್ರ ಹಾನಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಮುಖಂಡ ಹರಿಶ್ಚಂದ್ರ ಮಂಜೇಶ್ವರ, ಸ್ಥಳೀಯ ವಾರ್ಡ್ ಸದಸ್ಯೆ ಹರಿಣಾಕ್ಷಿ ಮತ್ತು ಕಲ್ಕಿ ಮಂಜೇಶ್ವರದ ಅರುಣ್ ದುರ್ಗಿಪಳ್ಳ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ…

Read More

ಉಪ್ಪಳದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರ: ಜುಲೈ 16ರವರೆಗೆ ಸಾರ್ವಜನಿಕರಿಗೆ ಅವಕಾಶ

ಉಪ್ಪಳ, ಜು.3: ಶ್ರೀ ಅಯ್ಯಪ್ಪ ಸೇವಾ ಸಮಿತಿ, ಅಯ್ಯಪ್ಪ ಮಂದಿರ ಉಪ್ಪಳ ಹಾಗೂ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ 132ನೇ ಉಚಿತ ಫುಟ್ ಫಾಲ್ಸ್ ಥೆರಪಿ ಶಿಬಿರವನ್ನು ಜುಲೈ 2ರಿಂದ 16ರವರೆಗೆ ಉಪ್ಪಳದ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ಸಾರ್ವಜನಿಕರು ಉಚಿತವಾಗಿ ಭಾಗವಹಿಸಿ ಥೆರಪಿಯ ಪ್ರಯೋಜನ ಪಡೆಯಬಹುದಾಗಿದೆ. ಶಿಬಿರವನ್ನು ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಯ್ಯಪ್ಪ ಮಂದಿರ…

Read More

ಹಾಡು ಹಗಲೇ ಬೈಕ್‌ನಲ್ಲಿ ಬಂದು ಮಹಿಳೆಯನ್ನು ಕೆಡವಿ ಮೂರು ಪವನ್ ಚಿನ್ನದ ಸರ ದೋಚಿದ ದುಷ್ಕರ್ಮಿಗಳು

​ಕಾಸರಗೋಡು: ಮಧ್ಯಾಹ್ನದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಹಿಳೆಯನ್ನು ತಳ್ಳಿ, ಅವರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ತಾಲಿಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಕಾಸರಗೋಡಿನ ಮಾವುಂಗಾಲ್‌ನಲ್ಲಿ ನಡೆದಿದೆ. ​ನೆಲ್ಲಿತ್ತರ ಫುಡ್ ಪ್ರೊಡಕ್ಟ್ಸ್ ಸಂಸ್ಥೆಯ ಉದ್ಯೋಗಿ, ಪುಲಯನಡುಕದ ರವಿ ಅವರ ಪತ್ನಿ ಕೆ.ಸಿಂಧು (42) ಸರ ಕಳೆದುಕೊಂಡ ಮಹಿಳೆ. ಸಿಂಧು ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ನಂತರ, ಸ್ಕೂಟರ್‌ನಲ್ಲಿ ಅಂಗಡಿಗೆ ಸಾಮಗ್ರಿ ತರಲು ತೆರಳಿದ್ದರು. ಮರಳಿ ಮನೆಗೆ ಹಿಂತಿರುಗುತ್ತಿದ್ದಾಗ, ಬಿಳಿ ಬಣ್ಣದ ಹಳೆಯ ಮಾದರಿಯ ಸ್ಕೂಟರ್‌ನಲ್ಲಿ…

Read More

ಜನಪ್ರಿಯ ವೈದ್ಯರೂ, ಪ್ರಸಿದ್ಧ ಸಾಹಿತಿಯೂ ಆಗಿರುವ ಡಾ. ಸುರೇಶ್ ನೆಗಳಗುಳಿ ಇವರು “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026″ಕ್ಕೆ ಆಯ್ಕೆ.

ಕಾಸರಗೋಡು : ಡಾ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ, ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಹಾಗೂ ವಾಮನ್ ರಾವ್ ಬೇಕಲ್ ಸ್ಥಾಪಿತ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಜೂಲೈ 26.ಭಾನುವಾರ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ “ದಲ್ಲಿ ಅಪ್ರತಿಮ ಮುಕ್ತಕ ಕವಿ, ಸಾಹಿತಿ, ಹಿರಿಯ ಜನಪ್ರಿಯ ವೈದ್ಯರೂ ಆಗಿರುವ ಡಾ. ಸುರೇಶ್ ನೆಗಳಗುಳಿ ಇವರಿಗೆ ಸಮ್ಮೇಳನದಲ್ಲಿ “ನಾಡೋಜ ಡಾ….

Read More

ಭಾರೀ ಮಳೆಗೆ ಕುಸಿದ ಮನೆ: ಬಿಜೆಪಿ ನಾಯಕರ ಭೇಟಿ

ಕಾಸರಗೋಡು: ಬುಧವಾರ ಸುರಿದ ಭಾರೀ ಮಳೆಗೆ ಮಂಗಲ್ಪಾಡಿ ಪಂಚಾಯತ್‌ನ ಶಿರಿಯಾ ವಾರ್ಡ್ ನಿವಾಸಿ ತಿರುಮಲೇಶ್ ಎಂಬುವವರ ಮನೆ ಕುಸಿದಿದ್ದು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್, ಜಿಲ್ಲಾ ಉಪಾಧ್ಯಕ್ಷ ರಮೇಶ್, ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಕಿಶೋರ್ ಕುಮಾರ್, ವಿನು ಮತ್ತು ಭರತ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ಹಂಚಿನ ಮನೆಯ ಮೇಲ್ಛಾವಣಿಯು ಭಾರಿ ಸದ್ದಿನೊಂದಿಗೆ ಕುಸಿದು ಬಿದ್ದಿದೆ. ವಯೋಸಹಜ…

Read More

ಡ್ರಿಂಕ್ ಅಂಡ್ ಡ್ರೈವ್ ಆರೋಪ; ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಹೆಲೆನ್ ಆಫ್ ಸ್ಪಾರ್ಟಾ ಪೊಲೀಸ್ ವಶಕ್ಕೆ

ಕಾಸರಗೋಡು, ಜು. 2: ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಹೆಲೆನ್ ಆಫ್ ಸ್ಪಾರ್ಟಾ (ಧನ್ಯ ಎಸ್. ರಾಜೇಶ್) ಅವರನ್ನು ಮದ್ಯಪಾನ ಮಾಡಿ ವಾಹನ ಚಲಾಯಿಸಿದ (ಡ್ರಿಂಕ್ ಅಂಡ್ ಡ್ರೈವ್) ಆರೋಪದ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ವಾಹನ ತಪಾಸಣೆ ವೇಳೆ ಪೊಲೀಸರು ಅವರ ಕಾರನ್ನು ತಡೆದು ಪರಿಶೀಲಿಸಿದ್ದು, ಪರೀಕ್ಷೆಯಲ್ಲಿ ಅವರು ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಬಳಿಕ ಮೋಟಾರು ವಾಹನ ಕಾಯ್ದೆಯ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದೆ.

Read More

ಕಾಸರಗೋಡಿನಲ್ಲಿ ರಾಜ್ಯಮಟ್ಟದ ಕನ್ನಡ ಪತ್ರಿಕಾ ದಿನಾಚರಣೆ; ಪತ್ರಿಕಾ ಸಾಧಕರಿಗೆ ಗೌರವ ಪ್ರಶಸ್ತಿ

ಕಾಸರಗೋಡು, ಜು. 2: ಕಾಸರಗೋಡು ಜಿಲ್ಲಾ (ದಕ್ಷಿಣ ಕನ್ನಡ ಜಿಲ್ಲಾ) ಫ್ರೀಲಾನ್ಸ್ ಪತ್ರಕರ್ತರ ಸಂಘದ 41ನೇ ವರ್ಷಾಚರಣೆ ಹಾಗೂ ರಾಜ್ಯಮಟ್ಟದ ಕನ್ನಡ ಪತ್ರಿಕಾ ದಿನಾಚರಣೆ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಸಮಾರಂಭ ನಡೆಯಿತು. ಲೇಖಕ ಹಾಗೂ ಪತ್ರಿಕಾ ಅಂಕಣಕಾರ ವಿಷ್ಣು ಕೆ. ಶ್ಯಾನುಭೋಗ್ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಗಡಿನಾಡಿನಲ್ಲಿ ಕನ್ನಡ ಪತ್ರಿಕೋದ್ಯಮದ ಇತಿಹಾಸ ಕುರಿತು ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಛಾಯಾಗ್ರಾಹಕ…

Read More

ಯೂತ್ ಕಾಂಗ್ರೆಸ್ ನಾಯಕ ಫರ್ಸೀನ್ ಮಜೀದ್‌ಗೆ ಜೀವ ಬೆದರಿಕೆ; ಮುಖ್ಯಮಂತ್ರಿ ವಿ.ಡಿ. ಸತೀಶನ್‌ಗೆ ದೂರು

ಇಂಡಿಗೋ ವಿಮಾನದಲ್ಲಿ ನಡೆದ ಪ್ರತಿಭಟನೆಯ ಪ್ರಕರಣದ ಬಳಿಕ ತಮ್ಮ ಜೀವಕ್ಕೆ ಬೆದರಿಕೆ ಬರುತ್ತಿದೆ ಎಂದು ಯೂತ್ ಕಾಂಗ್ರೆಸ್ ನಾಯಕ ಫರ್ಸೀನ್ ಮಜೀದ್ ಆರೋಪಿಸಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ದೂರು ಸಲ್ಲಿಸಿದ್ದಾರೆ. ಕಣ್ಣೂರು ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಫರ್ಸೀನ್ ಮಜೀದ್, ಜುಲೈ 1ರ ಮುಂಜಾನೆ ಗಲ್ಫ್ ದೇಶದ ದೂರವಾಣಿ ಸಂಖ್ಯೆಯಿಂದ ಮತ್ತೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಸಿಪಿಐ(ಎಂ) ಕಾರ್ಯಕರ್ತರಿಂದ ಹತ್ಯೆಯಾದ ಶುಹೈಬ್ ಅವರ ಸ್ಥಿತಿಯೇ ನಿನಗೂ ಆಗಲಿದೆ…

Read More
error: Content is protected !!