ಜೋಡುಕಲ್ಲು ವಾಹನ ತಪಾಸಣೆ ವೇಳೆ ಭಾರೀ ಪ್ರಮಾಣದ ಎಂಡಿಎಂಎ ವಶ: ಇಬ್ಬರ ಬಂಧನ

ಮಂಜೇಶ್ವರ / ಕಾಸರಗೋಡು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್ ಹಾಗೂ ಮಂಜೇಶ್ವರ ಪೊಲೀಸರು ನಡೆಸಿದ ತಪಾಸಣೆಯಲ್ಲಿ 112 ಗ್ರಾಂ ಎಂಡಿಎಂಎ ಯೊಂದಿಗೆ ಇಬ್ಬರನ್ನು ಬಂಧಿಸಲಾಗಿದೆ.ಬಂದಿಯೋಡ್, ಕುಬಣೂರಿನ ಮೊಯ್ದೀನ್ ಕುಂಞಿ ಹಾಗೂ ಜೋಡ್‌ಕಲ್ಲು ನಿವಾಸಿ ಫಾರೂಕ್ ಮುಹಮ್ಮದ್ ಬಂಧಿತ ಆರೋಪಿಗಳು. ಮಾದಕ ವಸ್ತುಗಳನ್ನು ಸಾಗಿಸಲು ಬಳಸಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತಿ ಮೇರೆಗೆ ಸ್ಕ್ವಾಡ್ ಮತ್ತು ಮಂಜೇಶ್ವರ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ ಪೊಲೀಸರು ಇಂದು (ಗುರುವಾರ) ಮಧ್ಯಾಹ್ನ ಜೋಡ್‌ಕಲ್ಲು ಎಂಬಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಈ…

Read More

ಮಾನವ ಹಕ್ಕುಗಳ ಹೋರಾಟಗಾರ್ತಿ, ಸಮಾಜ ಸೇವಕಿ, ಶಿಕ್ಷಣ ತಜ್ಞೆ ಡಾ. ವನಿತಾ ತೋರ್ವಿ, ವಿಜಯಪುರ ರೀಗೆ ಕನ್ನಡ ಭವನದ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “2026.

ಮಾನವ ಹಕ್ಕುಗಳ ಹೋರಾಟಗಾರ್ತಿ, ಸಮಾಜ ಸೇವಕಿ, ಶಿಕ್ಷಣ ತಜ್ಞೆ ಡಾ. ವನಿತಾ ತೋರ್ವಿ, ವಿಜಯಪುರ ರೀಗೆ ಕನ್ನಡ ಭವನದ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ “2026. ಜುಲೈ 26ರ ಕನ್ನಡ ಭವನದ “ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಪ್ರಯುಕ್ತ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ದಲ್ಲಿ ಈ ಮೇಲಿನ ಪ್ರಶಸ್ತಿ ನೀಡಲಿದ್ದೆವೆಂದು ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ಕೆ…

Read More

ಭಾರತೀಯ ಮಜ್ದೂರ್ ಸಂಘದ 72ನೇ ಸ್ಥಾಪನಾ ದಿನ: ಚೌಕಿ ಜಂಕ್ಷನ್‌ನಲ್ಲಿ ಧ್ವಜಾರೋಹಣ

ಭಾರತೀಯ ಮಜ್ದೂರ್ ಸಂಘದ(BMS) 72 ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ಚೌಕಿ ಜಂಕ್ಷನಿನಲ್ಲಿ BMS ಚೌಕಿ ಯೂನಿಟ್ ಅಧ್ಯಕ್ಷ ಶ್ರೀ ದಯಾನಂದ ಚೌಕಿ ಕಡಪ್ಪರ ಧ್ವಜಾರೋಹಣಗೈದರು. BMS Chowki Unit ಪ್ರಧಾನ ಕಾರ್ಯದರ್ಶಿ ಶ್ರೀ ರಂಜಿತ್ ರಾಮ್ ನಗರ ಬೆದ್ರಡ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಚೌಕಿ ಕೋ-ಓಪರೇಟಿವ್ ಬ್ಯಾಂಕ್ ಮೇನೇಜರ್ ಶ್ರೀ ದೀಪಕ್ ಕೂಡ್ಲು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ BMS ಜಿಲ್ಲಾ ಸಮಿತಿ ಉಪಾಧ್ಯಕ, BMS ಮೊಗ್ರಾಲ್ ಪುತ್ತೂರು ಪಂಚಾಯತ್ ಘಟಕದ ಅಧ್ಯಕ್ಷ,…

Read More

ಹೊಟ್ಟೆಯಲ್ಲಿ ವಿಷ ಪತ್ತೆ;ಅಸಹಜ ಸಾವು ಪ್ರಕರಣ ದಾಖಲು

​ಕಾಸರಗೋಡು : ಬೇಡಗಂ ಪೊಲೀಸ್ ಠಾಣಾ ವ್ಯಾಪ್ತಿಯ ತೋರೋ ನಿವಾಸಿ ಟಿ. ಅನಶ್ವರ (19) ಹೊಟ್ಟೆಗೆ ವಿಷ ಸೇರಿ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ಲಸ್‌ಟು ಮುಗಿಸಿ ಉನ್ನತ ಶಿಕ್ಷಣಕ್ಕೆ ಸಿದ್ಧತೆ ನಡೆಸುತ್ತಿದ್ದ ಈಕೆಗೆ ಮಂಗಳವಾರ ಮುಂಜಾನೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಂಡಂಗುಳಿ ಕ್ಲಿನಿಕ್, ಬೇಡಗಂ ತಾಲೂಕು ಆಸ್ಪತ್ರೆ ಹಾಗೂ ಚೆಂಗಳದ ಸಹಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾಥರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ​ಪರೀಕ್ಷೆಯ ವೇಳೆ ಯುವತಿಯ ಹೊಟ್ಟೆಗೆ ವಿಷ ಸೇರಿರುವುದು…

Read More

ಉಪ್ಪಳದ ಸೋಂಕಾಲ್ ನಿವಾಸಿ ಅಲ್ತಾಫ್ ಕೊಲೆ ಪ್ರಕರಣ:6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಜೇಶ್ವರ : ಉಪ್ಪಳದ ಸೋಂಕಾಲ್ ನಿವಾಸಿ ಅಲ್ತಾಫ್ ಕೊಲೆ ಪ್ರಕರಣದಲ್ಲಿ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಲ್ಪಾಡಿಯ ಅಬ್ದುಲ್ ರುಮೀದ್ (29) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಗಲ್ಫ್‌ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅಧಿಕಾರಿಗಳು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ​2019 ಜೂನ್ 23ರಂದು ಅಲ್ತಾಫ್‌ರನ್ನು ಮನೆಯಿಂದ ಅಪಹರಿಸಿ ಹಲ್ಲೆ ನಡೆಸಿ ಕೈಯ ನರ ಕತ್ತರಿಸಿ ಮಂಗಳೂರು ಆಸ್ಪತ್ರೆ ವರಾಂಡದಲ್ಲಿ ಬಿಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಜೂನ್ 25ರಂದು ಅವರು ಸಾವನ್ನಪ್ಪಿದ್ದರು….

Read More

ಕೇಂದ್ರ ಯೋಜನೆಗಳನ್ನು ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು: ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ನರೇಂದ್ರ ಮೋದಿ ಸರ್ಕಾರದ ಜನಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸಲು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ ಹೇಳಿದ್ದಾರೆ. ಪ್ರಧಾನಮಂತ್ರಿ ದಿವ್ಯಾಂಗ ಕೇಂದ್ರ, ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್‌ಡೆಸ್ಕ್ ಹಾಗೂ ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಜಂಟಿಯಾಗಿ ಮುಳ್ಳೇರಿಯ ಗಣೇಶ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವಯೋಶ್ರೀ ಯೋಜನೆ’ಯ ನೋಂದಣಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹಿರಿಯ ನಾಗರಿಕರಿಗೆ ಐದು ಲಕ್ಷ ರೂಪಾಯಿ ಆರೋಗ್ಯ ಭದ್ರತೆ ಒದಗಿಸುವ ಆಯುಷ್ಮಾನ್…

Read More

ಗ್ರಾಹಕರ ಪರ ತೀರ್ಪು; ಸೌತ್ ಇಂಡಿಯನ್ ಬ್ಯಾಂಕ್‌ಗೆ ಪರಿಹಾರ ಪಾವತಿಸಲು ಆದೇಶ

ಕಾಸರಗೋಡು: ಗ್ರಾಹಕರ ಖಾತೆಯಿಂದ ಕಡಿತಗೊಳಿಸಿದ ಹಣವನ್ನು ಮರುಪಾವತಿಸುವುದರ ಜೊತೆಗೆ, ಉಂಟಾದ ಮಾನಸಿಕ ವೇದನೆ ಹಾಗೂ ಅನಾನುಕೂಲತೆಗೆ ಸೂಕ್ತ ಪರಿಹಾರವನ್ನು ನೀಡುವಂತೆ ಸೌತ್ ಇಂಡಿಯನ್ ಬ್ಯಾಂಕ್‌ನ ಸೀತಾಂಗೋಳಿ ಶಾಖೆಗೆ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ಆದೇಶ ನೀಡಿದೆ. ಈ ಆದೇಶವು ಸೌತ್ ಇಂಡಿಯನ್ ಬ್ಯಾಂಕ್, ಸೀತಾಂಗೋಳಿ ಶಾಖೆ ವಿರುದ್ಧ ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು ದಾಖಲಿಸಿದ್ದ ದೂರಿನ ವಿಚಾರಣೆಯ ಬಳಿಕ ಹೊರಬಿದ್ದಿದೆ. ದೂರಿನ ಪ್ರಕಾರ, ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು 2022ರಲ್ಲಿ ಸೌತ್ ಇಂಡಿಯನ್…

Read More

ಮಕ್ಕಳ ಜೀವದೊಂದಿಗೆ ಆಟ: ಮಗುಚಿಬಿದ್ದ ಶಾಲಾ ಆಟೋ: ಏಳು ವಿದ್ಯಾರ್ಥಿಗಳು ಗಾಯ

ಮಂಜೇಶ್ವರ /​ಕಾಸರಗೋಡು : ಶಾಲಾ ಮಕ್ಕಳ ರಕ್ಷಣೆಯನ್ನು ಗಾಳಿಗೆ ತೂರಿ, ಮಿತಿಗಿಂತ ಅಧಿಕ ಮಕ್ಕಳನ್ನು ತುಂಬಿಕೊಂಡು ತೆರಳುತ್ತಿದ್ದ ಆಟೋರಿಕ್ಷಾವೊಂದು ಪಲ್ಟಿಯಾಗಿ ಏಳು ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿರುವ ಭೀಕರ ಘಟನೆ ನಗರದ ಎಂ.ಜಿ. ರಸ್ತೆಯ ಫೋರ್ಟ್ ರಸ್ತೆಯಲ್ಲಿ ಬೆಳಿಗ್ಗೆ ನಡೆದಿದೆ.ಅಪರಿಮಿತ ವೇಗ ಹಾಗೂ ಮಿತಿಮೀರಿದ ಮಕ್ಕಳ ಭಾರವೇ ಈ ದುರ್ಘಟನೆಗೆ ಕಾರಣವೆಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ. ಮೆಡೋನಾ ಮತ್ತು ಟೌನ್ ಮುನ್ಸಿಪಲ್ ಶಾಲೆಯ ಮುದ್ದು ಮಕ್ಕಳು ಗಾಯಾಳುಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗಳಲ್ಲಿ ಮಕ್ಕಳ ಜೀವದೊಂದಿಗೆ ಆಟವಾಡುವ ಚಾಲಕರ…

Read More

ಕೊಡ್ಲಮೊಗರಿನಲ್ಲಿ ವಿ. ಎಸ್. ಅಚ್ಚುತಾನಂದನ್ ಪ್ರಥಮ ಸಂಸ್ಮರಣಾ ದಿನಾಚರಣೆ

ಕಾಂ. ವಿ. ಎಸ್. ಅಚ್ಚುತಾನಂದನ್ ಅವರ ಪ್ರಥಮ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಕೊಡ್ಲಮೊಗರುದಲ್ಲಿ ಪಕ್ಷದ ಹಿರಿಯ ನಾಯಕರಿಗೆ ಗೌರವಾರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಾಂ. ಸಿ. ಎಚ್. ಕುಂಜ್ಞಬು ಉದ್ಘಾಟಿಸಿದರು. ಕಾಂ. ಸಿ. ಜಿ. ಮ್ಯಾಥ್ಯು ಅಧ್ಯಕ್ಷತೆ ವಹಿಸಿದ್ದರು. ಕಾಂ. ಕೆ. ಆರ್. ಜಯಾನಂದ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿ. ಎಸ್. ಅಚ್ಚುತಾನಂದನ್ ಅವರ ಆದರ್ಶಗಳು ಮತ್ತು ಜನಪರ ಸೇವೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪಕ್ಷದ…

Read More

ವಯೋಶ್ರೀ ಯೋಜನೆ ಸ್ಕ್ರೀನಿಂಗ್ ಶಿಬಿರ ಆಯೋಜನೆ

ಕಾಸರಗೋಡು:ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಹಾಗೂ ದಿವ್ಯಾಂಗರಿಗೆ ಉಚಿತ ಸಹಾಯಕ ಸಾಧನಗಳನ್ನು ವಿತರಿಸುವ ಉದ್ದೇಶದಿಂದ ಸ್ಕ್ರೀನಿಂಗ್ ಶಿಬಿರವನ್ನು ಮಧೂರಿನ ಉಳಿಯತ್ತಡ್ಕದ ಅಟಲ್‌ಜಿ ಸಮುದಾಯ ಭವನದಲ್ಲಿ ಆಯೋಜಿಸಲಾಯಿತು. ಪ್ರಧಾನಮಂತ್ರಿ ದಿವ್ಯಶ ಕೇಂದ್ರ ಹಾಗೂ ವಿಕಸಿತ ಕೇರಳ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್‌ನ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಲ್. ಅಶ್ವಿನಿ, ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಉಚಿತ ಸಹಾಯಕ ಸಾಧನಗಳನ್ನು…

Read More
error: Content is protected !!