ಶಾಸಕರ ನಿರಂತರ ಪ್ರಯತ್ನ ಫಲಿತಾಂಶ: ಕುಂಬಳೆ ಕಂಜಿಕಟ್ಟೆ ಸೇತುವೆ ಪುನರ್ನಿರ್ಮಾಣಕ್ಕೆ ನಬಾರ್ಡ್ನಿಂದ ₹27.10 ಕೋಟಿ
ಕುಂಬಳೆ : ಕಾಲಪರಿಣಾಮದಿಂದ ಹಾನಿಗೊಳಗಾದ ಕುಂಬಳೆ ನದಿಗೆ ಅಡ್ಡವಾಗಿ ನಿರ್ಮಿಸಲಾದ ಕಂಜಿಕಟ್ಟೆ ನಿಯಂತ್ರಕ-ಸೇತುವೆಯ ಪುನರ್ನಿರ್ಮಾಣಕ್ಕೆ ನಬಾರ್ಡ್ ವತಿಯಿಂದ ₹27.10 ಕೋಟಿ ಮಂಜೂರಾಗಿದೆ ಎಂದು ಶಾಸಕ ಎ.ಕೆ.ಎಂ. ಅಶ್ರಫ್ ತಿಳಿಸಿದ್ದಾರೆ. ಪ್ರಸ್ತುತ ಸಾಲಿನ ಆರ್ಐಡಿಎಫ್ (ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ) ಯೋಜನೆಯಡಿ ಈ ಅನುದಾನ ಮಂಜೂರಾಗಿದೆ. 2024ರ ಏಪ್ರಿಲ್ನಲ್ಲಿ ಸೇತುವೆಯ ದುಸ್ಥಿತಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಅದನ್ನು ಮುಚ್ಚಿ ಸಂಚಾರವನ್ನು ನಿಷೇಧಿಸಿದ್ದರು. ಇದರ ಪರಿಣಾಮವಾಗಿ ಕುಂಬಳೆ ಪಂಚಾಯತ್ ವ್ಯಾಪ್ತಿಯ ಕಂಜಿಕಟ್ಟೆ , ಮಳಿ, ಕುಂಡಪ್ಪು, ತಳ ಕೊಡಿಯಮ್ಮ, ಆರಿಕ್ಕಾಡಿ, ಚತ್ರಂಪಳ್ಳಂ,…
