ಡಿ. 29ರಂದು ಬೇಕಲ್ ಫೆಸ್ಟ್ ವೇಳೆ ರೈಲು ಬಡಿದು ಮಗ ಮೃತಪಟ್ಟ ಖಿನ್ನತೆಯಿಂದ ಸಾವಿಗೆ ಶರಣಾದ ದಂಪತಿ

ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಯ ತಂದೆ, ತಾಯಿ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಯಿನಾಚಿಪರಂಬ್‌ನ ವೇಣುಗೋಪಾಲನ್ ನಾಯರ್ (55), ಪತ್ನಿ ಸ್ಮಿತಾ (45) ಎಂಬಿವರು ಮೃತಪಟ್ಟವರಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯ ಸೆಂಟ್ರಲ್ ಹಾಲ್‌ನಲ್ಲಿ ಮೃತದೇಹಗಳು ಕಂಡು ಬಂದಿವೆ. ವಿಷಯ ತಿಳಿದು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ವೇಣುಗೋಪಾಲನ್ ನಾಯರ್- ಸ್ಮಿತಾ ದಂಪತಿಯ ಏಕೈಕ ಪುತ್ರನೂ, ಮಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂ. ಶಿವನಂದನ್ (19) ಡಿಸೆಂಬರ್…

Read More

ಎರಡು ಮಾದಕ ವಸ್ತು ಪ್ರಕರಣಗಳಲ್ಲಿ ಪರಾರಿಯಾಗಿದ್ದ ಆರೋಪಿ ಬಂಧನ

ಕಾಸರಗೋಡು: ಎರಡು ಮಾದಕ ವಸ್ತು ಪ್ರಕರಣಗಳಲ್ಲಿ ಆರೋಪಿಯಾಗಿ ಜಾಮೀನಿನಲ್ಲಿ ಬಿಡುಗಡೆಯಾಗಿ ಪರಾರಿಯಾಗಿದ್ದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚೇವಾರ್, ಕುಂಡಂತಾಡುಕ ನಿವಾಸಿ ಅಸ್ರುದ್ದೀನ್ (32) ಎಂದು ಗುರುತಿಸಲಾಗಿದೆ. 2023ರಲ್ಲಿ ಪೊಸೋಟ್ ಪೆಟ್ರೋಲ್ ಪಂಪ್ ಸಮೀಪ ನಡೆದ ದಾಳಿಯಲ್ಲಿ 8.540 ಗ್ರಾಂ ಎಂಡಿಎಮ್ಎ (MDMA) ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಅಸ್ರುದ್ದೀನ್ ಪ್ರಮುಖ ಆರೋಪಿಯಾಗಿದ್ದನು. ಪ್ರಕರಣ ದಾಖಲಾದ ಬಳಿಕ ಪೊಲೀಸರು ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಲಯವು ಅವನಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನಿನಲ್ಲಿ…

Read More

ಕುಂಬಳೆಯಲ್ಲಿ ಶ್ರೀಮದ್ಭಗವದ್ಗೀತಾ ಜ್ಞಾನ ಸತ್ಸಂಗ ಆರಂಭ

ಕುಂಬಳೆ: ಶ್ರೀಶ್ರೀ ರವಿಶಂಕರ್ ಗುರುಜಿ ಅವರ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಶ್ರೀಮದ್ಭಗವದ್ಗೀತಾ ಜ್ಞಾನ ಸತ್ಸಂಗ ಕಾರ್ಯಕ್ರಮವು ಕಳೆದ ದಿನ ಕುಂಬಳೆಯ ನಾರಾಯಣ ಮಂಗಲಂ ಶ್ರೀ ಚೀರುಂಬ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಆರಂಭಗೊಂಡಿತು. ಈ ಕಾರ್ಯಕ್ರಮವು ಮಾರ್ಚ್ 13, 14 ಮತ್ತು 15ರಂದು ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಂತರರಾಷ್ಟ್ರೀಯ ತರಬೇತುದಾರ ಸಜಿ ನಿಸಾನ್ ಅವರು “ಭಗವದ್ಗೀತೆಯ ಮೂಲಕ ಜೀವನದಲ್ಲಿ ಯಶಸ್ಸು” ಎಂಬ ವಿಷಯದ ಕುರಿತು ತರಬೇತಿಗೆ ನೇತೃತ್ವ…

Read More

ಎ.ಜೆ.ಐ. ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಪ್ರೇರಣಾ ತರಗತಿ

ಬಂದ್ಯೋಡ್:10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ಎ.ಜೆ.ಐ. ಇಂಗ್ಲಿಷ್ ಶಾಲೆಯಲ್ಲಿ ಪ್ರೇರಣಾ ತರಗತಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ಅಬ್ದುಲ್ ಖಾದರ್ ಪಾರಾ ಉದ್ಘಾಟಿಸಿದರು. ಜನರಲ್ ಸೆಕ್ರಟರಿ ಅಬ್ದುಲ್ಲ ಮಾಳಿಕ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಮೊಹಮ್ಮದ್ ಪುಳಿಯಿಂಟಡಿ ಮತ್ತು ಉಪಾಧ್ಯಕ್ಷ ಉಸ್ಮಾನ್ ಹಾಜಿ ಕುಕ್ಕಾರ್ ಮಾತನಾಡಿದರು. ಶಾಲೆಯ ಪ್ರಿನ್ಸಿಪಲ್ ವೀಣಾ ಕುಮಾರಿ ಸ್ವಾಗತ ಭಾಷಣ ಮಾಡಿದರು. ಆಡಳಿತಾಧಿಕಾರಿ ಅಬ್ದುಲ್ಲ ಮೌಲವಿ ಶುಭಾಶಯಗಳನ್ನು ತಿಳಿಸಿದರು. ಹಮೀದ್ ಕೋಸ್ಮೋಸ್, ಹಮೀದ್ ನೀಲಕಮಲ್ ಮತ್ತು…

Read More

ಪೈವಳಿಕೆ–ಲಾಲ್ ಬಾಗ್–ಚಿಪ್ಪಾರ್–ಕುರುಡಪದವು ರಸ್ತೆ ಕಾಮಗಾರಿ ವಿಳಂಬ: ಬಿಜೆಪಿಪ್ರತಿಭಟನೆಗೆಸಿದ್ದ, ಎಂಎಲ್ಅಶ್ವಿನಿ

ಪೈವಳಿಕೆ: ಪೈವಳಿಕೆ–ಲಾಲ್ ಬಾಗ್–ಚಿಪ್ಪಾರ್–ಕುರುಡಪದವು ಸಂಪರ್ಕಿಸುವ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಾಹನ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಸುಮಾರು ಮೂರು ವರ್ಷಗಳ ಹಿಂದೆ ಈ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಬಳಿಕ ಬಂಡವಾಳ ಕೊರತೆ ಕಾರಣ ನೀಡಿ ಪುನಃ ಟೆಂಡರ್ ಪಾಸ್ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಮೂರು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ…

Read More

ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ – ಬಾಯಾರಿನಲ್ಲಿ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಕ್ಕೆ ಅದ್ಧೂರಿ ಸ್ವಾಗತ

ಬಾಯಾರು : ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವ ಆಚರಣೆಯ ಪ್ರಯುಕ್ತ ಆಂಧ್ರ ಪ್ರದೇಶದ ಪುಟ್ಟಪರ್ತಿ ಪ್ರಶಾಂತಿ ನಿಲಯಂ ಶ್ರೀ ಸತ್ಯಸಾಯಿ ಆಶ್ರಮದಿಂದ ಹೊರಟು ದೇಶವ್ಯಾಪಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥವು ಮಾರ್ಚ್ 10ರಿಂದ 12ರ ವರೆಗೆ ಕಾಸರಗೋಡು ಜಿಲ್ಲೆಯ ವಿವಿಧ ಶ್ರದ್ಧಾಕೇಂದ್ರಗಳಿಗೆ ಹಾಗೂ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರಗಳಿಗೆ ಭೇಟಿನೀಡಿತು. ಬುಧವಾರ ಸಂಜೆ ಬಾಯಾರು ಪರಿಸರಕ್ಕೆ ತಲುಪಿದ ರಥವನ್ನು ಆಟಿಕುಕ್ಕೆ ಪೆಟ್ರೋಲ್ ಪಂಪ್ ಬಳಿಯಿಂದ ಬಾಯಾರು ಪೇಟೆಯ ಮೂಲಕ ಆಕರ್ಷಕ ಮೆರವಣಿಗೆಯಲ್ಲಿ ಪ್ರಶಾಂತಿ…

Read More

ಮಂಜೇಶ್ವರ ಕರಾವಳಿಯಲ್ಲಿ ಕೃತಕ ಪಾರು ಯೋಜನೆ ಯಶಸ್ವಿ: ಮತ್ಸ್ಯ ಸಂಪತ್ತು ವೃದ್ಧಿಯಿಂದ ಮೀನುಗಾರರ ಮುಖದಲ್ಲಿ ಮಂದಹಾಸ

ಮಂಜೇಶ್ವರ: ಸಮುದ್ರದಲ್ಲಿ ಕ್ಷೀಣಿಸುತ್ತಿರುವ ಮತ್ಸ್ಯ ಸಂಪತ್ತನ್ನು ಮರುಪೂರಣ ಮಾಡುವ ಉದ್ದೇಶದಿಂದ ಮೀನುಗಾರಿಕಾ ಇಲಾಖೆಯು ಮಂಜೇಶ್ವರ ಫಿಷಿಂಗ್ ಹಾರ್ಬರ್ ಸಮೀಪ ಜಾರಿಗೆ ತಂದ ‘ಕೃತಕ ಪಾರು’ ಯೋಜನೆ ಭಾರಿ ಯಶಸ್ಸು ಕಂಡಿದೆ. ಯೋಜನೆಯ ಭಾಗವಾಗಿ ಸಮುದ್ರದಾಳದಲ್ಲಿ ಅಳವಡಿಸಲಾದ ಕಾಂಕ್ರೀಟ್ ಬ್ಲಾಕ್‌ಗಳು ಈಗ ಮೀನುಗಳ ಬೃಹತ್ ಆವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಕರಾವಳಿಯ ಮೀನುಗಾರರಿಗೆ ಹೊಸ ಆಶಾಕಿರಣವಾಗಿವೆ. ಕೂಂತಳ್ ಮೀನುಗಳ ಲಭ್ಯತೆಯಲ್ಲಿ ಏರಿಕೆ ಸಮುದ್ರದ ಮಲಿನೀಕರಣ ಹಾಗೂ ಹವಾಮಾನ ವೈಪರೀತ್ಯಗಳಿಂದ ನೈಸರ್ಗಿಕ ಹವಳದ ದಿಬ್ಬಗಳು ಕ್ರಮೇಣ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾನವ ನಿರ್ಮಿತ…

Read More

ಕಾರಿನಲ್ಲಿ ಸಾಗಿಸುತ್ತಿದ್ದ 103 ಲೀಟರ್ ಗೋವಾ ಮದ್ಯ ವಶ: ಕುಂಜತ್ತೂರು ನಿವಾಸಿ ಬಂಧನ

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾ ಮೂಲದ ಮದ್ಯವನ್ನು ಕಾಸರಗೋಡು ಎಕ್ಸೈಸು ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ .ಕಾಸರಗೋಡು ರೇಂಜ್ ಎಕ್ಸೈಸ್ ತಂಡ ಹಾಗು ಕಾಸರಗೋಡು ಎಕ್ಸೈಸು ಇಂಟೆಲಿಜೆನ್ಸ್ ಬ್ಯೂರೋ ಸಂಯುಕ್ತವಾಗಿ ನಡೆಸಿದ ಪರಿಶೀಲನೆಯಲ್ಲಿ, ನೀರ್ಚಾಲ್ ಭಾಗದತ್ತ ಮದ್ಯ ಸಾಗಿಸುತ್ತಿದ್ದ KL 57 A 5775 ಸಂಖ್ಯೆಯ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ 103.68 ಲೀಟರ್ ಗೋವಾ ಮೂಲದ ಅನ್ಯ ರಾಜ್ಯದ IMFL ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮಂಜೇಶ್ವರಂ…

Read More

ಕಾಸರಗೋಡು: ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ರಜತ ಮಹೋತ್ಸವ ಅಂಗವಾಗಿ ಸಾಹಿತ್ಯೋತ್ಸವ

ಕಾಸರಗೋಡು: ಕಾಸರಗೋಡು ಕನ್ನಡ ಗ್ರಾಮದಲ್ಲಿರುವ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ರಜತ ಮಹೋತ್ಸವ ವರ್ಷ (2000–2026) ಅಂಗವಾಗಿ “25 ಸರಣಿ ದತ್ತಿ ಉಪನ್ಯಾಸ ಮಾಲಿಕೆ” ಹಾಗೂ “ಕಾಸರಗೋಡು ಸಾಹಿತ್ಯೋತ್ಸವ – ಕನ್ನಡೋತ್ಸವ” ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ನೆಲೆಯಲ್ಲಿ ಬೃಹತ್ ಕನ್ನಡ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಈ ಗ್ರಂಥಾಲಯವು ಲೇಖಕರು, ಸಾಹಿತಿಗಳು, ಕವಿಗಳು, ಮಾಧ್ಯಮದವರು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ಕಲಾವಿದರಿಗೆ ಅಧ್ಯಯನಕ್ಕೆ ಅಗತ್ಯವಾದ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ…

Read More

ಕಣ್ವತೀರ್ಥದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಆಯುರ್ವೇದ ಚಿಕಿತ್ಸಾ ಶಿಬಿರ

ಬೆಂಗ್ರೆ ಕಣ್ವತೀರ್ಥ: ಶ್ರೀ ದೇವಿ ಕೃಪಾ ಫ್ರೆಂಡ್ಸ್ ಕ್ಲಬ್ (ರಿ) ಬೆಂಗ್ರೆ ಕಣ್ವತೀರ್ಥ, ಶ್ರೀ ಭಗವತಿ ಕೃಪಾ ಬಾಲಾಂಜನೇಯ ವ್ಯಾಯಾಮ ಶಾಲೆ (ರಿ) ಬೆಂಗ್ರೆ ಕಣ್ವತೀರ್ಥ, ಜಗದ್ಗುರು ಶ್ರೀ ನಿತ್ಯಾನಂದ ಮಹಾ ಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ) ಕೊಂಡೇವೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರಕ್ಕೆ ಒನ್ ಸೈಟ್ ಎಸ್ಪಿಲೋರ್ ಲಕೋಟಿಕಾ ಫೌಂಡೇಶನ್, ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು,…

Read More
error: Content is protected !!