ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಾವೇಶ :

ಮೀಯಪದವು : ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಾವೇಶವು ಮೀಯಪದವು ನಾರಾಯಣ ಅಡ್ಯಾಂತ್ತಾಯ.ಸ್ಮಾರಕ ಮಂದಿರದಲ್ಲಿ ನಡೆಯಿತು. ಸಿಪಿಎಂ ಹಿರಿಯ ನೇತಾರ ಕಾಂ : ಬಾಳಪ್ಪ ಬಂಗೇರರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಂ : ಬೇಬಿ ಬಾಲಕೃಷ್ಣನ್ ಸಮಾವೇಶವನ್ನು ಉದ್ಘಾಟಿಸಿದರು. ಸಿಪಿಐ ದೇಶೀಯ ಸಮಿತಿ ಸದಸ್ಯರಾದ ಕಾಂ : ಗೋವಿಂದನ್ ಪಳ್ಳಿಕಾಪಿಲ್, ಎಲ್ ಡಿ ಎಫ್ ಮಂಜೇಶ್ವರ ಮಂಡಲ ಸಮಿತಿ ಕನ್ವೀನರ್ ಕಾಂ : ಜಯರಾಮ ಬಲ್ಲoಗುಡೆಲ್, ಸಿಪಿಎಂ ನೇತಾರೆ, ಕಡoಬಾರ್ ಬ್ಲಾಕ್ ಡಿವಿಷನ್…

Read More

ಭಾಷೆ ಬಳಕೆಯಿಂದ ಬೆಳೆಯುತ್ತದೆ – ಡಾ. ಇಂಚರ ನಾರಾಯಣ ಸ್ವಾಮಿ

ಕಾಸರಗೋಡು : ಗಡಿನಾಡಿನ ಕನ್ನಡಿಗರ ಭಾಂದವ್ಯವು ಪರಸ್ಪರ ಚಿರಕಾಲದ ಅನುಬಂಧವಾಗಬೇಕು. ನಮ್ಮ ಮಕ್ಕಳಿಗೆ ಅಂಕ ಶಿಕ್ಷಣದ ಜತೆಗೆ ಕನ್ನಡ ಸಂಸ್ಕೃತಿಯ ಶಿಕ್ಷಣವನ್ನೂ ನೀಡಬೇಕು. ಕನ್ನಡ ಭಾಷೆಯ ಬಳಕೆ ಹೆಚ್ಚಾದಾಗ ಭಾಷೆಯು ಸ್ವಯಂ ಜಾಗೃತಿಯಾಗಿ ಬೆಳೆಯುತ್ತದೆ’ ಎಂದು ಕೋಲಾರದ ರಂಗ ಇಂಚರ ಟ್ರಸ್ಟಿನ ಅಧ್ಯಕ್ಷ ಡಾ. ಇಂಚರ ನಾರಾಯಣ ಸ್ವಾಮಿ ಹೇಳಿದರು. ಅವರು ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಶನಿವಾರ ಕಾಸರಗೋಡಿನ ಕನ್ನಡ ಭವನ, ಕನ್ನಡ ಭವನ…

Read More

ಬಂದ್ಯೋಡ್ ರಾ.ಹೆದ್ದಾರಿಯಲ್ಲಿ ಕಾರುಗಳ ಮಧ್ಯೆ ಡಿಕ್ಕಿ : ಮಹಿಳೆ ಸಾವು : ನಾಲ್ಕು ಮಂದಿಗೆ ಗಾಯ

ಮಂಜೇಶ್ವರ : ಬಂದ್ಯೋಡ್ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾರ್ ಕಾರಿನ ಹಿಂಬಾಗಕ್ಕೆ ಆಲ್ಟೋ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಐದು ಮಂದಿ ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕಾಸರಗೋಡು ಭಾಗದಿಂದ ತಲಪಾಡಿ ಭಾಗಕ್ಕೆ ಆಗಮಿಸುತ್ತಿದ್ದ ಎರಡೂ ವಾಹನಗಳು ಬಂದ್ಯೋಡ್ ಮುಟ್ಟಂ ನಲ್ಲಿ ಬಾನುವಾರ ರಾತ್ರಿ 7.45 ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಮಚ್ಚಂಪ್ಪಾಡಿ ನಿವಾಸಿ ಹುಸೈನ್ ಸಹದಿಯವರ ಪತ್ನಿ ಮಿರ್ಜಾನ (28) ಸಾವನ್ನಪ್ಪಿದ್ದಾರೆ. ಜೊತೆಯಾಗಿದ್ದ ಹುಸೈನ್ ಸಹದಿ(34)…

Read More

ಕನ್ನಡ ಭವನದಲ್ಲಿ ಕೋಲಾರ – ಕಾಸರಗೋಡು ಗಡಿನಾಡು ಕನ್ನಡ ರಾಜ್ಯೋತ್ಸವ ನ.15ರಂದು

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ಮತ್ತು ಬಿ ಶಿವಕುಮಾರ ನೇತೃತ್ವದ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿ ಆಶ್ರಯದಲ್ಲಿ ನ.15ರಂದು ಬೆಳಗ್ಗೆ 10ರಿಂದ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ವೇದಿಕೆಯಲ್ಲಿ ಕೋಲಾರ-ಕಾಸರಗೋಡು ಗಡಿನಾಡ ಕನ್ನಡ ರಾಜ್ಯೋತ್ಸವ ಸಂಭ್ರಮ-2025 ನಡೆಯಲಿದೆ. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ದೀಪ ಬೆಳಗಿಸಿ, ಪ್ರಾಸ್ತಾವಿಕವಾಗಿ ಮಾತನಾಡುವರು. ಕೋಲಾರದ ಪಿ. ನಾರಾಯಣಪ್ಪ ಕನ್ನಡ ಧ್ವಜಾರೋಹಣದೊಂದಿಗೆ…

Read More

ಕುಲಾಲ ವೇದಿಕೆ ಮಂಜೇಶ್ವರ-ಉಚಿತ ವೈದ್ಯಕೀಯ, ಶಿಬಿರ ಹೃದಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

ಮಂಜೇಶ್ವರ: ಕುಲಾಲ ವೇದಿಕೆ ಮಂಜೇಶ್ವರ ಹೊಸಬೆಟ್ಟು ಮಂಜೇಶ್ವರ ಇದರ ವತಿಯಿಂದ ಕುಲಾಲ ವೇದಿಕೆಯ ಹಿರಿಯ ಮಾರ್ಗದರ್ಶಕರಾಗಿದ್ದ ದಿ. ಜಯಂತಮಾಸ್ಟರ್ ಮೀಯಪದವು ಹಾಗೂ ದಿ.ಸೋಮಶೇಖರ ಬಡಾಜೆ ಇವರ ಸ್ಮರಣಾರ್ಥದಲ್ಲಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮಂಗಳೂರು ಹಾಗು ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ , ಹೃದಯ ತಪಾಸಣಾ ಶಿಬಿರ ಬಿಪಿ , ಶುಗರ್ ಹೃದಯ ತಪಾಸಣೆ, ಇಸಿಜಿ , ಸಾಮಾನ್ಯ ಔಷದಿಯ ವಿಭಾಗ ಅರೋಗ್ಯ ಕಾರ್ಡ್ ಹಾಗು ಬಡ ರೋಗಿಗಳ…

Read More

ಕಾಸರಗೋಡು ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ)ಕಾಸರಗೋಡು ತಾಲೂಕಿನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಪರಮ ಪೂಜ್ಯ ಪದ್ಮವಿಭೂಷಣ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತ್ರ ಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಿನ್ನೆ ವನಿತ ಭವನ ಕೂಡ್ಲುನಲ್ಲಿ ನಡೆಯಿತು . ಕೂಡ್ಲು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ದಿನೇಶ್ ರವರು ಪ್ರಗತಿ ನಿಧಿ ಬೇಡಿಕೆ…

Read More

ಎ ಎಚ್ ಎಸ್ ತಂಡದ ಏಳನೇ ಸೀಸನ್ ‘ಮಂಜೇಶ್ವರ ಬೀಚ್ ಉತ್ಸವ’

ಮಂಜೇಶ್ವರ: ಮಂಜೇಶ್ವರ ಜನತೆಗೆ ಮತ್ತೊಮ್ಮೆ ಮನರಂಜನೆಯನ್ನು ನೀಡಲು ಎ ಎಚ್ ಎಸ್ ತಂಡದ ಏಳನೇ ಸೀಸನ್ ಮಂಜೇಶ್ವರ ಬೀಚ್ ಉತ್ಸವ ಸ್ಥಳೀಯ ನಿವಾಸಿಗಳಾದ ಶಾನವಾಸ್, ಶೆರೀಫ್ ಹಾಗೂ ಇರ್ಫಾನ್ ಎಂಬಿವರ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಕುಂಡು ಕೊಳಕೆ ಬೀಚ್ ನಲ್ಲಿ ಮನರಂಜನೆಗೆ ಸಿದ್ದವಾಗಿದೆ. ಕಳೆದ 6 ಸೀಸನ್ ಗಳಲ್ಲೂ ನಷ್ಟದ ಹಾದಿಯಲ್ಲೇ ಸಾಗಿ ಕೈ ಸುಟ್ಟುಕೊಂಡಿರುವ ಈ ತಂಡ ನಾಡಿನ ಅಭಿವೃದ್ಧಿಗಾಗಿ ಈ ಸಲ ಕೂಡಾ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಉಚಿತ ಪ್ರವೇಶದೊಂದಿಗೆ ಉತ್ತಮ ಮನರಂಜನೆ ಹಾಗೂ ಆಗಮಿಸುವವರಿಗೆ…

Read More

ಗೆಳೆಯರ ಬಳಗ (ರಿ) ಬಲ್ಲಂಗುಡೆಲು ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ…!

ಮಂಜೇಶ್ವರ : ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಇದರ ವಾರ್ಷಿಕ ಮಹಾಸಭೆ ಬಲ್ಲಂಗುಡೆಲು ಶ್ರೀ ಕ್ಷೇತ್ರದ ಪರಿಸರದ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಮಾದವ ಉಳಿಯರವರ ಅಧ್ಯಕ್ಷತೆಯಲ್ಲಿ ಜರಗಿತು. ಅಧ್ಯಕ್ಷರು : ಕಾರ್ತಿಕ್ ಶೆಟ್ಟಿ ಮಜಿಬೈಲು ಕೋಶಾಧಿಕಾರಿ : ಬಶೀರ್ ಮೂಡಂಬೈಲು ಕಾರ್ಯದರ್ಶಿ : ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ನೂತನ ಸಮಿತಿಯ ರೂಪೀಕರಣ ನಡೆಯಿತು.ಸಮಿತಿಯ ನೂತನ ಗೌರವ ಅಧ್ಯಕ್ಷರಾಗಿ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಅಧ್ಯಕ್ಷರಾಗಿ ಕಾರ್ತಿಕ್ ಶೆಟ್ಟಿ ಮಜಿಬೈಲು,ಉಪಾಧ್ಯಕ್ಷರಾಗಿ…

Read More

ಬಿಜೆಪಿ ಮೀoಜ ಪಂಚಾಯತ್ ಕಚೇರಿ ಉದ್ಘಾಟನೆ

ಬಿಜೆಪಿ ಮೀoಜ ಪಂಚಾಯತ್ ಕಚೇರಿ ಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡರಾದ ಸುನಿಲ್ ಪಿ ಆರ್, ಮಾಧು ಒಳಪಿಲ್, ಮಣಿಕಂಠ ರೈ, ಎ ಕೆ ಕಯ್ಯರ್, ಲೋಕೇಶ್ ನೊಂದ, ಕೃಷ್ಣ ನಾವಡ, ಕೃಷ್ಣ ಬೆಜ್ಜ, ನಾರಾಯಣ ನಾಯ್ಕ್, ಕೆ ವಿ ಭಟ್, ಶಾಲಿನಿ, ಜ್ಯೋತಿ, ಸಂತೋಷ್ ದೈಗೋಳಿ ಪದ್ಮನಾಭ ರೈ , ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು. ಚಂದ್ರಹಾಸ ಬೆಜ್ಜ…

Read More

ಅಜ್ಞಾತರಿಂದ ಗಲ್ಫ್ ನಿವಾಸಿಯ ಮನೆಗೆ ಗುಂಡು ಹಾರಾಟ

ಮಂಜೇಶ್ವರ : ಉಪ್ಪಳ ಹಿದಾಯತ್ ಬಜಾರಿನ ಕೊಲ್ಲಿ ಉದ್ಯೋಗಿಯೊಬ್ಬರ ಮನೆಗೆ ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಉಪ್ಪಳ ಹಿದಾಯತ್ ಬಜಾರಿನಲ್ಲಿ ವಾಸವಾಗಿರುವ ಅಬೂಬಕ್ಕರ್ ಎಂಬವರ ಮನೆಗೆ ಗುಂಡು ಹಾರಿಸಿರುವ ಬಗ್ಗೆ ದೂರಲಾಗಿದೆ. ಗುಂಡು ಹಾರಾಟದಿಂದ ಮನೆಯ ಕಿಟಿಕಿಯ ಗಾಜುಗಳು ಪುಡಿಯಾಗಿದೆ. ಅಬೂಬಕ್ಕರ್ ಕತಾರ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಈತನ ಪತ್ನಿ ಹಾಗೂ ಪುತ್ರಿ ಮನೆಯಲ್ಲಿದ್ದರೆಂದು ಹೇಳಲಾಗಿದೆ.ಕಾರಿನಲ್ಲಿ ಆಗಮಿಸಿದ ತಂಡ ಗುಂಡು ಹಾರಿಸಿ ತಕ್ಷಣ ಅಲ್ಲಿಂದ ಪರಾರಿಯಾಗಿರುವುದಾಗಿ ಹೇಳಲಾಗಿದೆ.ಮಾಹಿತಿ…

Read More
error: Content is protected !!