ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಹಾಗೂ ಗುಳಿಗ ಸಾನಿಧ್ಯಗಳ ಆಡಳಿತ ಸಮಿತಿ ರೂಪೀಕರಣ

ವರ್ಕಾಡಿ ::ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಹಾಗೂ ಗುಳಿಗ ಸಾನಿಧ್ಯಗಳ ಆಡಳಿತ ಸಮಿತಿಯನ್ನು ದೈವಸ್ಥಾನದ ವಠಾರದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಸೀನ ಬೋಳದ ಪದವು ಇವರ ಘನ ಅಧ್ಯಕ್ಷತೆಯಲ್ಲಿ ರೂಪೀಕರಣ ಗೊಳಿಸಲಾಯಿತು. ಆಡಳಿತ ಸಮಿತಿಯ ಅಧ್ಯಕ್ಷರಾಗಿ ಶ್ರೀ ವಿಶ್ವನಾಥ ರೈ ಅಡ್ಕ, ಉಪಾಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ರವಿ ಮುಡಿಮಾರು, ಕೋಶಾಧಿಕಾರಿಯಾಗಿ ಮನೋಜ್ ಶೆಟ್ಟಿ ಭಂಡಾರ ಮನೆ ವರ್ಕಾಡಿ, ಪ್ರಧಾನ ಸಂಚಾಲಕರಾಗಿ ನವೀನ್ ಶೆಟ್ಟಿ ಮಂಗಲ್ಪಾಡಿ, ಆಯ್ಕೆಯಾದರು. ಹಾಗೂ ಗೌರವ…

Read More

ಮಂಜೇಶ್ವರ : ಸಿಬಿಎಸ್‌ಇ ಅಂತರ-ಶಾಲಾ ಫುಟ್‌ಬಾಲ್ ಟೂರ್ನಮೆಂಟ್ ನವೆಂಬರ್ 11ಕ್ಕೆ

ಮಂಜೇಶ್ವರ: ಮಂಜೇಶ್ವರ ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲಾ ಮೈದಾನದಲ್ಲಿ 11 ನವೆಂಬರ್ 2005 ರಂದು “ಸಿಬಿಎಸ್‌ಇ ಅಂತರ-ಶಾಲಾ ಫುಟ್‌ಬಾಲ್ ಟೂರ್ನಮೆಂಟ್” ಹಮ್ಮಿಕೊಂಡಿರುವುದಾಗಿ ಶಾಲಾ ಪ್ರಾಂಶುಪಾಲರಾದ ಶ್ರೀಯುತ ಅಬ್ದುಲ್ ಖಾದರ್ ರವರು ಶಾಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಮಂಗಳವಾರದಂದು ಬೆಳಿಗ್ಗೆ 9.30 ಉದ್ಘಾಟನಾ ಕಾರ್ಯಕ್ರಮದ ಬಳಿಕ ಆರಂಭಗೊಳ್ಳಲಿರುವ ಟೂರ್ನಮೆಂಟ್ ಸಂಜೆ 3.30 ಕ್ಕೆ ಸಮಾಪ್ತಿಗೊಳ್ಳಲಿದೆ. ಈ ಟೂರ್ನಮೆಂಟ್‌ಗೆ ವಿವಿಧ ಶಾಲೆಗಳು ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳ ಮಧ್ಯೆ ಉತ್ತಮ ಸ್ಪರ್ಧಾತ್ಮಕ ಮನೋಭಾವನೆ ಬೆಳಸುವುದು ಹಾಗೂ ಅವರ ಕ್ರೀಡಾ ಸಾಮರ್ಥ್ಯವನ್ನು…

Read More

ಕೊನೆಗೂ ಮೋಕ್ಷ ಕಂಡ ಮಂಜೇಶ್ವರ ಕೆ ಜೆ ಎಂ ರಸ್ತೆ: ಮಂಜೇಶ್ವರ ಶಾಸಕರ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಚಾಲನೆ

ಮಂಜೇಶ್ವರ : ಕಳೆದ ಹಲವು ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದ ಮಂಜೇಶ್ವರ ಕೆ.ಜೆ.ಎಂ. ರಸ್ತೆಗೆ ಕೊನೆಗೂ ಹೊಸ ಜೀವ ದೊರಕಿದೆ. ಮಂಜೇಶ್ವರ ಶಾಸಕರಾದ ಎ.ಕೆ.ಎಂ. ಅಶ್ರಫ್ ಅವರ ಅಭಿವೃದ್ಧಿ ನಿಧಿಯಿಂದ 97 ಲಕ್ಷ ರೂಪಾಯಿ ಮಂಜೂರಾಗಿದ್ದು, ಗುರುವಾರ ಈ ಮಹತ್ವದ ರಸ್ತೆ ಕಾಮಗಾರಿಗೆ ಅಧಿಕೃತ ಚಾಲನೆ ದೊರಕಿದೆ. ಸುಮಾರು 1400 ಮೀಟರ್ ವಿಸ್ತೀರ್ಣದ ಈ ರಸ್ತೆ ನಿರ್ಮಾಣದಲ್ಲಿ 1100 ಮೀಟರ್ ಕಾಂಕ್ರೀಟ್ ರಸ್ತೆ ಹಾಗೂ 300 ಮೀಟರ್ ಡಾಮರು ರಸ್ತೆ ನಿರ್ಮಾಣವಾಗಲಿದೆ. ಜೊತೆಗೆ, ರಸ್ತೆ ನೀರು ನಿಲ್ಲದಂತೆ ಮಾಡಲು…

Read More

ಮತದಾರರ ಪಟ್ಟಿ ಪರಿಷ್ಕರಣೆಯ ಎಲ್ಲಾ ಸೂಚನೆ ,ನಿರ್ಧೇಶಗಳನ್ನು ಕನ್ನಡದಲ್ಲೂ ಒದಗಿಸಿ : ಸಿಪಿಐ(ಎಂ) ಆಗ್ರಹ

ಮಂಜೇಶ್ವರ :ಕೇಂದ್ರ ಚುನಾವಣಾ ಕಮಿಷನ್ ಪ್ರಕ್ಯಾಪಿಸಿದ ಸ್ಪೆಷಲ್ ತೀವ್ರ ಪರಿಷ್ಕರಣೆ ಭಾಗವಾಗಿ ಕೇರಳದಲ್ಲಿ ನವಂಬರ್ 2 ರಿಂದ ಡಿಸೆಂಬರ್ 4 ರ ವರೆಗೆ ಮತದಾರರ ಪಟ್ಟಿಯ ತೀವ್ರ ಪರಿಶೋಧನೆ ನಡೆಸಲಿದ್ದಾರೆ.ಇದರ ಭಾಗವಾಗಿ ವಿವಿಧ ತಲದಲ್ಲಿ ಉದ್ಯೋಗಸ್ತರ ರಾಜಕೀಯ ಮುಖಾಂತರ ಸಭೆ ನಡೆದಿರುತ್ತದೆ.ಆದರೆ ಚುನಾವಣಾ ಅಧಿಕಾರಿಗಳು 2002 ರ ಮತದಾರ ಪಟ್ಟಿಯ ಆದಾರದಲ್ಲಿ ಈ ತೀವ್ರ ಪರಿಷ್ಕರಣೆ ನಡೆಸುವಾಗ ಕೇರಳದ ಗಡಿ ಭಾಗದಲ್ಲಿರುವ ಮಂಜೇಶ್ವರ ಮಂಡಲದಲ್ಲಿ ದೊಡ್ಡ ಸಮಸ್ಯೆ ತಲೆದೂರಿದೆ.ಮತದಾರರ 2002 ರ ಪಟ್ಟಿ ಮಲಯಾಳಂ ಭಾಷೆಯಲ್ಲಿದೆ.ಮತದಾರರಿಗೆ ನೀಡುವ…

Read More

ಪೊಲೀಸ್ ಮುಂದೆ ಹಾಡು ಹಾಡಿದ ಬಾಲಕ .ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದ ಒಂದು ನಿತ್ಯದ ಘಟನೆಯೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲಾಗಿದೆ. ಪೋಷಕರೊಂದಿಗೆ ಠಾಣೆಗೆ ಬಂದಿದ್ದ ಚಿಕ್ಕ ಬಾಲಕನೊಬ್ಬ ಪೊಲೀಸರ ಮುಂದೆ ಹಾಡಿದ ಹಾಡು ಕ್ಷಣಾರ್ಧದಲ್ಲಿ ವೈರಲ್ ಆಗಿ, ನೆಟ್ಟಿಗರ ಮನ ಗೆದ್ದಿದೆ. ಉಪ್ಪಳದ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಪ್ಪೈತೋಟದ ನಿವಾಸಿ ಅಶ್ರಫ್ ಅವರ ಪುತ್ರ ಹಾಗೂ ಬಂದ್ಯೋಡ್ ಕುನ್ನಿಲ್ ಶಾಲೆಯ ಯು ಕೆ ಜಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ರಾಹಿಂ ಮೊಹಮ್ಮದ್ ಸಹಲ್ ಎಂಬ ಈ ಬಾಲಕ ಸಾಮಾಜಿಕ…

Read More

ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಗೆ ಆಹ್ವಾನ

ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ವಾಮನ್ ರಾವ್ ಬೇಕಲ್- ಸಂಧ್ಯಾರಾಣಿ ಟೀಚರ್ ಸಾರಥ್ಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕೋಲಾರ -ಕಾಸರಗೋಡು ಗಡಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-2025 ಕಾರ್ಯಕ್ರಮವು ಇದೇ ನವಂಬರ್ 15ರಂದು ಅಪರಾಹ್ನ 1 ಗಂಟೆಯಿಂದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು,ಕಾಸರಗೋಡು ಜಿಲ್ಲಾ ಘಟಕದ ಸಹಕಾರದಲ್ಲಿ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ. ಕವಿಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಆಸಕ್ತರು ತಮ್ಮ…

Read More

ನಾಗರಕಟ್ಟೆ ಡಿಸೆಂಬರ್ 4 , 5 ರ ಬ್ರಹ್ಮಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ.

ಕಾಸರಗೋಡು : ಕಾಸರಗೋಡು ಕೋಟೆಯ ಪೂರ್ವ ಮುಂಭಾಗದಲ್ಲಿ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಶ್ರೀ ಶ್ರೀ ಡಾ. ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಗಳವರಿಂದ ಸ್ಥಾಪಿಸಲ್ಪಟ್ಟ ಶ್ರೀ ಶಾರದಾ ಭಜನಾಶ್ರಮದ ಜೀರ್ಣೋದ್ದಾರ ಹಾಗೂ ನಾಗದೇವರ ಮತ್ತು ರಕ್ತೇಶ್ವರಿ ಅಮ್ಮನವರ ನೂತನ ಕಟ್ಟೆ ಗಳಲ್ಲಿ ವೇದಾಚಾರ್ಯ ಶ್ರೀ ಶ್ರೀ ಉಚ್ಚಿಲ್ಲತಾಯ ಪದ್ಮನಾಭ ತಂತ್ರಿಗಳ ಕಾರ್ಮಿಕತ್ವದಲ್ಲಿ ಡಿಸೆಂಬರ್ 4 ಹಾಗೂ 5.ರಂದು ನಡೆಯಲಿರುವ ಬ್ರಹ್ಮ ಕಲಶ ಮತ್ತು 4ರಂದು ಸಂಜೆ 5ಗಂಟೆಗೆ ಮಾಜಿ ಮಂತ್ರಿ ಕೃಷ್ಣ ಜೆ. ಪಾಲೇಮಾರ್ ಅದ್ಯಕ್ಷತೆಯಲ್ಲಿ, ನಡೆಯುವ ಕ್ಷಾತ್ರ…

Read More

ಡಾ. ವಾಮನ್ ರಾವ್ ಬೇಕಲ್ ಕುರಿತ ಕೃತಿ ಬಿಡುಗಡೆ

ಕಾಂತಾವರ : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಜೀವನ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಚಯಿಸುವ ಕೃತಿಯನ್ನು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಯು. ವಿಶ್ವನಾಥ ಶೆಣೈ ಅವರು ಕಾಂತಾವರ ಕನ್ನಡ ಸಂಘದಲ್ಲಿ ಬಿಡುಗಡೆ ಮಾಡಿದರು. ಕಾಸರಗೋಡಿನ ಸಾಹಿತಿ ವಿರಾಜ್ ಅಡೂರು ರಚಿಸಿದ ಈ ಕೃತಿಯು ಕಾಂತಾವರದ ಕೆ. ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ…

Read More

ಆಡಳಿತ ಭಾಷಾ ಸಪ್ತಾಹದ ಜಿಲ್ಲಾ ಮಟ್ಟದ ಉದ್ಘಾಟನೆ

ಕಾಸರಗೋಡು: ಆಡಳಿತ ಭಾಷಾ ಸಪ್ತಾಹಕ್ಕೆ ಸಂಬಂಧಿಸಿದಂತೆ ಕಾಸರಗೋಡು ನೋಂದಣಿ ಇಲಾಖೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಮಂಜೇಶ್ವರ ಉಪ-ನೋಂದಣಿ ಕಚೇರಿಯಲ್ಲಿ ದಿನಾಂಕ 04-11-2025 ರಂದು ನಡೆಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಜಿಲ್ಲಾ ನೋಂದಣಾಧಿಕಾರಿ ಶ್ರೀ ಫಿರೋಜ್ ಟಿ.ಎಂ., ಮಲಯಾಳಂ ಭಾಷೆಯಲ್ಲಿ ಆಡಳಿತದ ಮೂಲಕ ಎಲ್ಲಾ ವರ್ಗದ ಜನರು ಆಡಳಿತದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದರು. ಪ್ರಸಿದ್ಧ ನಾಟಕಕಾರ ಮತ್ತು ಬರಹಗಾರ ಶ್ರೀ ಸುರೇಶ್ ಬಿ.ಎನ್. ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರಂ ಉಪ-ನೋಂದಣಿಾಧಿಕಾರಿ ಶ್ರೀ ಅರುಣ್‌ಕುಮಾರ್ ಕೆ. ಶ್ರೀ ರಂಜು ಎಂ.ವಿ….

Read More

K ಜಯರಾಜ ಶೆಟ್ಟಿ ಚಾರ್ಲ,ಮಂಜೇಶ್ವರ ಇವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ 2025 ರ ಪ್ರಶಸ್ತಿ

ಮಂಜೇಶ್ವರ: ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ತನ್ನದೇ ವಿಶಿಷ್ಟತೆಯಲ್ಲಿ ವೈಶಿಷ್ಟ್ಯ ಪೂರ್ಣವಾಗಿ ದೀನ ದಲಿತರ ಸೇವೆಗಾಗಿ, ಅಸಹಾಯಕ ಕುಟುಂಬಗಳ ಕಲ್ಯಾಣಕ್ಕೆ ಸಂಪೂರ್ಣ ತೊಡಗಿಸಿ, ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಸಮಾಜಮುಖಿ ಸೇವಾ ಕಾರ್ಯ ಮಾಡುವ ಯುವ ನಾಯಕ, K ಜಯರಾಜ ಶೆಟ್ಟಿ ಚಾರ್ಲ,ಮಂಜೇಶ್ವರ ಇವರಿಗೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ 2025 ರ ಪ್ರಶಸ್ತಿ ಪ್ರಧಾನಿಸಲಾಯಿತು.

Read More
error: Content is protected !!