ಕಂಠರರ್ ರಾಜೀವರ್ ವಿರುದ್ಧ ಪುರಾವೆ ಇಲ್ಲ: ತನಿಖೆಯಲ್ಲಿ ಸಂಯಮ ಅಗತ್ಯ –ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ
ಕಾಸರಗೋಡು:ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ ಚಿನ್ನ ಹಗರಣ ಪ್ರಕರಣದಲ್ಲಿ ದೇವಾಲಯದ ತಂತ್ರಿಯಾಗಿರುವ ಕಂಠರರ್ ರಾಜೀವರ್ ಅವರಿಗೆ ಮಾನ್ಯ ನ್ಯಾಯಾಲಯ ಜಾಮೀನು ನೀಡಿದ್ದು, ಅವರ ವಿರುದ್ಧ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವುದನ್ನು ಸಚ್ಚಿದಾನಂದ ಭಾರತಿ ಸ್ವಾಮಿಗಳು ಸ್ವಾಗತಿಸಿದ್ದಾರೆ. ಅವರು ಈ ಬಗ್ಗೆ ಶ್ರೀಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹಿಂದೂ ದೇವಾಲಯ ಪರಂಪರೆಯ ರಕ್ಷಕರಾಗಿರುವ ತಂತ್ರಿಗಳು ಕೇವಲ ವ್ಯಕ್ತಿಗಳಷ್ಟೇ ಅಲ್ಲ; ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿಕೊಂಡು ಬಂದ ದೈವಿಕ ಹಾಗೂ ಅಧ್ಯಾತ್ಮಿಕ ಜವಾಬ್ದಾರಿಯ ಪ್ರತೀಕರಾಗಿದ್ದಾರೆ. ಅಂಥ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸಾಕ್ಷ್ಯ…
