ಮಂಜೇಶ್ವರದಲ್ಲಿ ಎಲ್ಡಿಎಫ್–ಯುಡಿಎಫ್ ರಹಸ್ಯ ಒಪ್ಪಂದ ಆರೋಪ: ಕೆ. ಸುರೇಂದ್ರನ್ ಟೀಕೆ
ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ಪರಸ್ಪರ ಸಹಾಯ ಮಾಡಿಕೊಂಡಿವೆ ಎಂದು ಕೆ. ಸುರೇಂದ್ರನ್ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು ಕ್ಷೇತ್ರದಲ್ಲಿ ಎಲ್ಡಿಎಫ್ ಪಡೆದ ಮತಗಳಲ್ಲಿ ಭಾರಿ ಕುಸಿತ ಕಂಡಿದೆ. ಸುಮಾರು 20,000ಕ್ಕೂ ಹೆಚ್ಚು ಮತಗಳು ಕಳೆದ ಬಾರಿಗಿಂತ ಕಡಿಮೆಯಾಗಿದ್ದು, ಇದು ಯುಡಿಎಫ್ಗೆ ಲಾಭ ಮಾಡಿಕೊಡುವ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಅವರು ಟೀಕಿಸಿದರು. ಮಂಡಲದಲ್ಲಿ ವ್ಯವಸ್ಥಿತವಾಗಿ ಸಾಮುದಾಯಿಕ ಏಕೀಕರಣವನ್ನು ಸೃಷ್ಟಿಸಲಾಗಿದೆ. ಮತಗಳನ್ನು ಕ್ರೋಢೀಕರಿಸಲು ಯೋಜಿತವಾಗಿ ಈ ಪ್ರಯತ್ನ…