ಕುಂಬಳೆಯಲ್ಲಿ ಉಸ್ತಾದ್ ನಾಪತ್ತೆ . ತನಿಖೆ ತೀವ್ರ
ಮಂಜೇಶ್ವರ : ಕುಂಬಳೆಯಲ್ಲಿ ಉಸ್ತಾದ್ ಮುಹಮ್ಮದ್ ಶಫೀಕ್ (32) ನಾಪತ್ತೆಯಾಗಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಬಂಬ್ರಾಣದ ಟುಂಬಿಯೋಡು ಹೌಸ್ನ ಅಬ್ದುಲ್ ರಶೀದ್ ಅವರ ಪುತ್ರ ಮುಹಮ್ಮದ್ ಶಫೀಕ್, ಡಿಸೆಂಬರ್ 21ರಂದು ರಾತ್ರಿ 8 ಗಂಟೆಗೆ ಬಂಬ್ರಾಣದ ಮಸೀದಿಗೆ ಹೋಗಲು ಮನೆಯಿಂದ ಹೊರಟಿದ್ದರು. ಆದರೆ ಅವರು ಮನೆಯ ಕಡೆಗೆ ಹಿಂತಿರುಗಿ ಬಾರದ ಬಗ್ಗೆ ಅವರ ಪತ್ನಿ ನಜ್ಜುನ್ನೀಸಾ ದೂರನ್ನು ಕೊಟ್ಟಿದ್ದಾರೆ. ಪತ್ನಿಯ ದೂರಿನ ಮೇರೆಗೆ, ಕುಂಬಳೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದಕ್ಕೂ…