ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟ ಅನುಭವಿಸಿದ ಕುಟುಂಬ ,ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ವತಿಯಿಂದ ಸಾಂತ್ವನ

ಮಂಜೇಶ್ವರ: ಗ್ಯಾಸ್ ಲೀಕ್ ಗೆ ಒಳಗಾಗಿ ತೀರ ನಾಶನಷ್ಟಕ್ಕೆ ಒಳಗಾದ ಕಾಸರಗೋಡು ಕೊಳಕೆಬೈಲ್ ನಿವಾಸಿ ಪುಷ್ಪ ಗಣಪತಿ ಆಚಾರ್ಯ ಅವರ ಮನೆಗೆ ರಾಜ ಬೆಳ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ಮಾಡ ಮಂಜೇಶ್ವರ ಇದರ ವತಿಯಿಂದ ಬೇಟಿ ನೀಡಿ ಸಾಂತ್ವನ ನೀಡಲಾಯಿತು. ಈ ಸಂದರ್ಭದಲ್ಲಿ 4 ಕಿಟ್ ಗಳನ್ನು ಹಾಗೂ ದಿನಸಿ ಸಾಮಾಗ್ರಿಗಳ ಸಹಿತ ಬಟ್ಟೆ, ಮಕ್ಕಳ ಕಲಿಕೆಗೆ ಬೇಕಾದ ಪುಸ್ತಕ ಇವುಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಪೂಜ್ಯ ಗುರುಗಳಾದ ಶ್ರೀ ರಾಜ ಬೆಳ್ಚಪ್ಪಾಡರು, ಹರೀಶ್ ಮೇಘ…

Read More

ಕಳೆದ 28 ದಿನಗಳಲ್ಲಿ 25 ಲಕ್ಷಕ್ಕೂ ಅಧಿಕ ಭಕ್ತರು ಶಬರಿಮಲೆ ಭೇಟಿ; ದಿನಕ್ಕೆ 4 ಲಕ್ಷ ಟಿನ್ ಅರವಣ ಪಾಯಸ ಮಾರಾಟ!

ಶಬರಿಮಲೆ:ಮಂಡಲ ತೀರ್ಥಯಾತ್ರೆ ಆರಂಭವಾದ ಬಳಿಕ ಕಳೆದ 28 ದಿನಗಳಲ್ಲಿ 25 ಲಕ್ಷಕ್ಕೂ ಅಧಿಕ ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ.ಪಂಪಾದಿಂದ ಸನ್ನಿಧಾನ ತನಕ ಎಲ್ಲೂ ಕಾಯದೆ ಭಕ್ತರು ನೇರವಾಗಿ ದರ್ಶನ ಪಡೆದಿದ್ದಾರೆ. ಸಾಂಪ್ರದಾಯಿಕ ಅರಣ್ಯ ಮಾರ್ಗದ ಮೂಲಕ 1 ಲಕ್ಷಕ್ಕೂ ಹೆಚ್ಚು ಭಕ್ತರು ಸನ್ನಿಧಾನಕ್ಕೆ ಆಗಮಿಸಿದ್ದಾರೆ. ಶಬರಿಮಲೆಯ ಸನ್ನಿಧಾನ, ಪಂವಾ, ನಿಲಕ್ಕಲ್ ಪ್ರದೇಶಗಳಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಮಲೆ ಏರುವ ಮೊದಲು ಭಕ್ತರು ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಎಸ್ .ಪ್ರೇಮ್ ಕೃಷ್ಣನ್ ತಿಳಿಸಿದ್ದಾರೆ. ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು…

Read More

ಅತ್ತಾವರ ಶ್ರೀ ಶಿವರಾಮರಾಯರ ಮನೆಯ ಹಿರಿಯ ಸದಸ್ಯೆ ಸುಶೀಲಾ ವಿಶ್ವನಾಥ್ ರಾವ್ ರೀಗೆ ಕನ್ನಡ ಭವನದಿಂದ ಗೌರವಾರ್ಪಣೆ.

ಕಾಸರಗೋಡು : ಅವಿಬಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಮರಾಜ ಕ್ಷತ್ರಿಯ ಜನಾಂಗದ ಪ್ರಥಮ ಪರಿಷತ್ತು (1932 ಡಿಸೆಂಬರ್ 31,ಶನಿವಾರ )ಮಂಗಳೂರಿನಲ್ಲಿ ಅತ್ತಾವರ ಶಿವರಾಮರಾಯರ ಕಾರ್ಯದರ್ಶಿತ್ವದಲ್ಲಿ ಇವರದೇ ಮನೆ ವಠಾರದಲ್ಲಿ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮಿಜಿಗಳವರ ಘನ ಅದ್ಯಕ್ಷತೆಯಲ್ಲಿ ನಡೆದಿತ್ತು. ಸಮಾಜದ ಸುಮಾರು 200ಮಂದಿ ದುರೀಣರು ಅಂದು ಪ್ರಥಮ ಪರಿಷತ್ತಿನಲ್ಲಿ ಭಾಗವಹಿಸಿದ್ದರು. ಹರಿದು ಹಂಚಿ ಹೋಗಿದ್ದ ಸಮಾಜ ಬಂಧುಗಳನ್ನು ಒಂದಾಗಿಸಿ, ಮೊಕ್ತೇಸರಿಕೆಯ ಕಟು ಜಾತಿ ಕಟ್ಟುಪಾಡುಗಳ, ಜಾತಿ ವ್ಯವಸ್ಥೆಯ ಹಿಡಿತದಿಂದ, ಕಾಲಮಾನದ ಸಾಮಾಜಿಕ ಬದಲಾವಣೆಗಳಿಗನುಸಾರವಾಗಿ, ಅಂದಿನ…

Read More

ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಶಾಲಾ ವಿದ್ಯಾರ್ಥಿ

ಮಂಜೇಶ್ವರ : ಶಾಲಾ ವಿದ್ಯಾರ್ಥಿಯೊಬ್ಬ ಮನೆಯ ಮಲಗುವ ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ಹಾಗೂ ಬೆಳ್ಳೂರು ನೆಟ್ಟಣಿಗೆ ಕುಂಜತ್ತೋಡಿ ನಿವಾಸಿ ಜಯಕರ-ಅನಿತಾ ದಂಪತಿಯ ಪುತ್ರವಿದ್ಯಾರ್ಥಿ ಪ್ರಜ್ವಲ್ (14) ಸಾವನ್ನಪ್ಪಿದ ದುರ್ದೈವಿ. ತಾಯಿ ಅನಿತಾ ಮುಳ್ಳೇರಿಯ ಶಾಲೆಯಲ್ಲಿ ಕಲಿಯುತ್ತಿರುವ ಪುತ್ರಿಯನ್ನು ಕರೆದುಕೊಂಡು ಬರಲು ತೆರಳಿ ಬಳಿಕ ಅವರು ಮರಳಿ ಮನೆಗೆ ತಲುಪಿದಾಗ ಪ್ರಜ್ವಲ್ ಮಲಗುವ ಕೊಠಡಿಯೊಳಗೆ ಶಾಲು ಬಳಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಸ್ಥಳೀಯರು…

Read More

ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ ಕುಂಜತ್ತೂರು , ಅಂತರ್ ಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆ

ಮಂಜೇಶ್ವರ : ಅರಬಿಕ್ ದಿನಾಚರಣೆಯ ಪೂರ್ವಭಾವಿಯಾಗಿ ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ, ಕುಂಜತ್ತೂರು ಇವರ ಆಶ್ರಯದಲ್ಲಿ ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳಿಂದ ಅಂತರಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆಗಳು ವಿಜೃಂಭಿಸಿತು. ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವು ಅರಬಿಕ್ ದಿನಾಚರಣೆಯ ಭಾಗವಾಗಿ ಆಯೋಜಿಸಲ್ಪಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಕುರಾನ್ ಅಧ್ಯಯನ, ಅರಬಿಕ್ ಭಾಷೆ ಹಾಗೂ ಇಸ್ಲಾಮಿಕ್ ಸಂಸ್ಕೃತಿಯ ಬಗ್ಗೆ ಅರಿವು…

Read More

ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ ಕುಂಜತ್ತೂರು, ಅಂತರಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆ

ಮಂಜೇಶ್ವರ : ಅರಬಿಕ್ ದಿನಾಚರಣೆಯ ಪೂರ್ವಭಾವಿಯಾಗಿ ಪೀಸ್ ಕ್ರಿಯೇಟಿವ್ ಸೆಂಟ್ರಲ್ ಶಾಲೆ, ಕುಂಜತ್ತೂರು ಇವರ ಆಶ್ರಯದಲ್ಲಿ ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳಿಂದ ಅಂತರಶಾಲಾ ಕುರಾನ್ ಪಠಣ, ಅರಬಿಕ್ ಕ್ಯಾಲಿಗ್ರಫಿ ಹಾಗೂ ಅಝಾನ್ ಸ್ಪರ್ಧೆಗಳು ವಿಜೃಂಭಿಸಿತು. ಸಿಬಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮವು ಅರಬಿಕ್ ದಿನಾಚರಣೆಯ ಭಾಗವಾಗಿ ಆಯೋಜಿಸಲ್ಪಟ್ಟಿದ್ದು, ವಿದ್ಯಾರ್ಥಿಗಳಲ್ಲಿ ಕುರಾನ್ ಅಧ್ಯಯನ, ಅರಬಿಕ್ ಭಾಷೆ ಹಾಗೂ ಇಸ್ಲಾಮಿಕ್ ಸಂಸ್ಕೃತಿಯ ಬಗ್ಗೆ ಅರಿವು…

Read More

ವೆಳ್ಳಾಟಂನ ಗುರಾಣಿ ಹೊಡೆತ ಪ್ರಕರಣ ಇತ್ಯರ್ಥ…. !

ಕಾಸರಗೋಡು:ವೆಳ್ಳಾಟಂನಲ್ಲಿ ಗುರಾಣಿಯಿಂದ ಹೊಡೆಯುವುದು ಸಂಪ್ರದಾಯವಾಗಿದ್ದು, ಶನಿವಾರದಂದು ಯುವಕನೋರ್ವನಿಗೆ ಬಿದ್ದ ಗುರಾಣಿ ಹೊಡೆತ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ.ನೀಲೇಶ್ವರದ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದ ವೇಳೆ ನಡೆದ ತೆಯ್ಯಂ ಆಚರಣೆಯಲ್ಲಿ ಮರದ ಗುರಾಣಿಯಿಂದ ತಲೆಗೆ ಬಿದ್ದ ಹೊಡೆತದಿಂದ ಯುವಕನೊಬ್ಬ ಕುಸಿದು ಬಿದ್ದ ಘಟನೆ ಶನಿವಾರ ನಡೆದಿತ್ತು.ತೆಯ್ಯಂ ವೇಳೆ ಸಾಂಪ್ರದಾಯಿಕವಾಗಿ ಒಂದು ಕೈಯಲ್ಲಿ ಕತ್ತಿ ಹಾಗೂ ಇನ್ನೊಂದು ಕೈಯಲ್ಲಿ ಮರದ ಗುರಾಣಿ ಹಿಡಿದು ಲಯಬದ್ಧ ಹಾಗೂ ತೀವ್ರ ಚಲನೆಯಲ್ಲಿ ನರ್ತನ ಇರುತ್ತದೆ. ಸಂಪ್ರದಾಯದ ಭಾಗವಾಗಿ, ತೆಯ್ಯಂ ದೈವ ದೇವಾಲಯದ ಧಾರ್ಮಿಕ ಸಹಾಯಕರಾದ…

Read More

ಜಿಲ್ಲೆಯ ಹಲವು ಪಂಚಾಯತ್‌ಗಳಲ್ಲಿ ಎಡರಂಗದ ಆಡಳಿತಕ್ಕೆ ಹಿನ್ನಡೆ- ಮೀಂಜದಲ್ಲೂ ಎಡರಂಗಕ್ಕೆ ಕೈತಪ್ಪಿದ ಆಡಳಿತ

ಮಂಜೇಶ್ವರ: ಜಿಲ್ಲೆಯ ಹಲವು ಪಂಚಾಯತ್‌ಗಳಲ್ಲಿ ಎಡರಂಗದ ಆಡಳಿತಕ್ಕೆ ಹಿನ್ನಡೆಯಾಗಿರುವಂತೆಯೇ ಮೀಂಜದಲ್ಲೂ ಎಡರಂಗ ಆಡಳಿತ ಕೈತಪ್ಪಿದೆ.ಇಲ್ಲಿ ಕಳೆದಬಾರಿ ಸಿಪಿಐಗೆ 3 ಸೀಟು ಲಭಿಸಿದ್ದು, ಎಡರಂಗಕ್ಕೆ ಒಟ್ಟು 5 ಸ್ಥಾನ ಲಭಿಸಿತ್ತು. ಆದರೆ ಈ ಬಾರಿ ಸಿಪಿಎಂಗೆ ಒಂದು ಸ್ಥಾನ ಮಾತ್ರ ಲಭಿಸಿದೆ. ಕಳೆದಬಾರಿ ಆರು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ 1 ಸೀಟು ಹೆಚ್ಚಿಸಿಕೊಂಡಿದೆ. ಈ ಬಾರಿ ಇಲ್ಲಿ ಯುಡಿಎಫ್ 9 ಸೀಟುಗಳನ್ನು ಪಡೆದು ಆಡಳಿತವನ್ನು ತನ್ನದಾಗಿಸಿದೆ. ಮಂಜೇಶ್ವರದಲ್ಲಿ ಯುಡಿ ಎಫ್ ಸಂಭ್ರಮಾಚರಣೆ ನಡೆಸಿದೆ. ತೂಮಿನಾಡಿನಿಂದ ಮಂಜೇಶ್ವರ ಅಂಡರ್ ಪಾಸ್…

Read More

ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾ‌ರ್ ವಾಚನಾಲಯದ ಮೇಲೆ ಪಟಾಕಿ ಸಿಡಿಸಿ ಹಾನಿ- ಕುಂಬಳೆ ಪೊಲೀಸರು ಕೇಸು ದಾಖಲು

ಮಂಜೇಶ್ವರ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾ‌ರ್ ವಾಚನಾಲಯದ ಮೇಲೆ ಪಟಾಕಿ ಸಿಡಿಸಿ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಪ್ಲೆಕ್ಸ್ ಬೋರ್ಡ್‌ಗಳನ್ನು ಹಾನಿಗೈಯುವುದರ ಜೊತೆಯಾಗಿ ವಾಚನಾಲಯದ ಮುಂಬಾಗದಲ್ಲಿ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವ ಬಗ್ಗೆ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಸಿಪಿಎಂ ನೀಡಿದ…

Read More

ಮೀಂಜ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು ವಿಧಿವಶ

ಮೀಂಜ:- ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು (63 ) ಅಲ್ಪ ಕಾಲದ ಅಸೌಖ್ಯದಿಂದ ಡಿ.13 ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಮೀನಾಕ್ಷಿ ,ತಮ್ಮ ಶಂಕರ ಆಚಾರ್ಯ, ತಂಗಿ ದೇವಕಿ, ಮಗ ಸಂತೋಷ್,ಸೊಸೆ ಶ್ವೇತಾ, ಅಳಿಯ ಪದ್ಮನಾಭ,ಮೊಮ್ಮಗ ಗಾಯನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಕಿರಿಯ ಮಗ ಅಶೋಕ ಮತ್ತು ಮಗಳಾದ ನವ್ಯ ಇವರು ಅಕಾಲಿಕ ಮರಣಕ್ಕೀಡಾದ ಕಾರಣ ಈ ಮೊದಲೇ ಕಳೆದುಕೊಂಡಿದ್ದಾರೆ. ಶ್ರೀ…

Read More
error: Content is protected !!