ಪೊಸೋಟು ಹೊಳೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ : ಮಲತ್ಯಾಜ್ಯ ಸುರಿಯುತ್ತಿರುವ ದಂಧೆಗೆ ಸಾರ್ವಜನಿಕರ ಆಕ್ರೋಶ
ಮಂಜೇಶ್ವರ: ಗಡಿ ಭಾಗದ ಮಂಜೇಶ್ವರದ ಪೊಸೋಟು ಹೊಳೆ ಇದೀಗ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಆತಂಕ ಮೂಡಿಸಿದೆ. ಜನಸಂದಣಿ ಇಲ್ಲದ ಸಮಯ ನೋಡಿ ಸೇಪ್ಟಿ ಟ್ಯಾಂಕ್ಗಳಿಂದ ಸಂಗ್ರಹಿಸಿದ ಶೌಚಾಲಯ ಮಾಲಿನ್ಯ (ಮಲತ್ಯಾಜ್ಯ) ವನ್ನು ಟ್ಯಾಂಕರ್ಗಳ ಮೂಲಕ ತಂದು ನೇರವಾಗಿ ಹೊಳೆಗೆ ಸುರಿಯಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ. ಕೇವಲ ಮಲತ್ಯಾಜ್ಯ ಮಾತ್ರವಲ್ಲದೆ, ಕೋಳಿ ಮತ್ತು ದನದ ಮಾಂಸದ ತ್ಯಾಜ್ಯಗಳನ್ನು ಕೂಡ ಇಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಈ ಭಾಗದ…