ಬಂಟರ ಯಾನೆ ನಾಡವರ ಮಾತೃ ಸಂಘ : ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಲ್ಲೂ ಸದಸ್ಯರನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘದ 2026 -29ರ ಸಾಲಿಗೆ ಮಾಲಾಡಿ ಅಜಿತ್‌ ಕುಮಾರ್ ರೈ ಕೊಡಿಯಾಲ್ ಗುತ್ತು ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದ ಮಹತ್ವಾಕಾಂಕ್ಷೆ ಯೋಜನೆಯಾದ ಶತಮಾನೋತ್ಸವ ಕಟ್ಟಡ ಸಂಕೀರ್ಣ, ವಿಶ್ವವ್ಯಾಪಿ ಸಮಾಜ ಬಾಂಧವರನ್ನು ಒಂದೇ ಸೂರಿನಡಿ ತರ ಬಯಸುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವುದು ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂದು ಕೆ ಅಜಿತ್ ಕುಮಾರ್ ರೈ…

Read More

‘ನನ್ನ ಜೀವ ಉಳಿದದ್ದೇ ದೊಡ್ಡದು’ : ಕುಕ್ಕರ್ ಬಾಂಬ್ ಸ್ಫೋಟ ಸಂತ್ರಸ್ತನ ಮಾತು

ಮಂಗಳೂರು :ಶಾರೀಕ್ ನಿಗಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿದ್ದೇನೆ ಎಂದು ಆಟೋ ಚಾಲಕ ಪುರು ಷೋತ್ತಮ ಪೂಜಾರಿ ನೋವಿನಿಂದ ನುಡಿದಿದ್ದಾರೆ.”ದುಡಿದು ತಿನ್ನುತ್ತಿದ್ದ ನನ್ನಂತಹ ವ್ಯಕ್ತಿಯನ್ನು ಈ ಸ್ಥಿತಿಗೆ ತಂದಿರುವ ಶಾರೀಕ್‌ಗೆ 10′ ವರ್ಷ ಜೈಲು ಶಿಕ್ಷೆ ಅಲ್ಲ, ಜೀವಾವಧಿ ಶಿಕ್ಷೆ ಆಗಬೇಕಿತ್ತು ಎಂದವರು ಹೇಳುತ್ತಿದ್ದಾರೆ. ಕಂಕನಾಡಿ ಗರೋಡಿ ಬಳಿ 2022ರ ನ. 19ರಂದು ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ವಿಶೇಷ ನ್ಯಾಯಾಲಯವು ಅಪರಾಧಿ ಮಹಮ್ಮದ್ ಶಾರೀಕ್‌ಗೆ 10 ವರ್ಷ ಕಠಿನ ಶಿಕ್ಷೆ ವಿಧಿಸಿರುವ…

Read More

ಐದು ರಾಜ್ಯಗಳಲ್ಲಿ ಮತದಾನೋತ್ತರ ಸಮೀಕ್ಷೆ: ಎಲ್ಲೆಲ್ಲಿ ಯಾರಿಗೆ ಮುನ್ನಡೆ?

ಹೊಸದಿಲ್ಲಿ:ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ವಿವಿಧ ರಾಜ್ಯಗಳಲ್ಲಿ ಭಿನ್ನ ರಾಜಕೀಯ ಫಲಿತಾಂಶಗಳ ಸುಳಿವು ನೀಡಿವೆ. ಬಹುತೇಕ ಸಮೀಕ್ಷೆಗಳು ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಗೆ, ಕೇರಳದಲ್ಲಿ ಯುಡಿಎಫ್‌ಗೆ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಗೆ ಸ್ಪಷ್ಟ ಮುನ್ನಡೆ ಸೂಚಿಸಿವೆ. ಪಶ್ಚಿಮ ಬಂಗಾಳ:ಪಶ್ಚಿಮ ಬಂಗಾಳದ 294 ಕ್ಷೇತ್ರಗಳಲ್ಲಿ ಸರಳ ಬಹುಮತಕ್ಕೆ 147 ಸ್ಥಾನಗಳ ಅವಶ್ಯಕತೆ ಇದೆ. ಪೀಪಲ್ಸ್ ಪಲ್ಸ್ ಸಮೀಕ್ಷೆ ಪ್ರಕಾರ ಟಿಎಂಸಿ 178-189 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ…

Read More

ಮಂಜೇಶ್ವರದಲ್ಲಿ ಕೋಳಿ ಸಾಗಾಟ ಲಾರಿ ಚಾಲಕನ ಹತ್ಯೆ: ಆರೋಪಿ ಶ್ರೀನಿವಾಸ 24 ಗಂಟೆಯಲ್ಲಿ ಬಂಧನ

ಮಂಜೇಶ್ವರ: ಸೀತಾಂಗೋಳಿಯ ಮದ್ಯದಂಗಡಿಯ ಸಮೀಪ ಕೋಳಿ ಸಾಗಾಟ ಲಾರಿ ಚಾಲಕ ಶಫಾಯತ್ ಅವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಶ್ರೀನಿವಾಸನನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸಿದ್ದಾರೆ. ಹಳೆ ದ್ವೇಷ ಹಾಗೂ ಕುಡಿದ ಮತ್ತಿನಲ್ಲಿ ನಡೆದ ಮಾತಿನ ಚಕಮಕಿಯೇ ಈ ಘೋರ ಕೃತ್ಯಕ್ಕೆ ಕಾರಣವೆಂದು ತಿಳಿದುಬಂದಿದೆ. ​ ಸೋಮವಾರ ಶಫಾಯತ್ ಮತ್ತು ತಂಡದ ನಡುವೆ ಮದ್ಯ ಸೇವಿಸುವಾಗ ಗಲಾಟೆ ನಡೆದಿತ್ತು. ಇದರ ಮುಂದುವರಿದ ಭಾಗವಾಗಿ ಮಂಗಳವಾರ ಮಧ್ಯಾಹ್ನ ಶಫಾಯತ್ ನಿರ್ಜನ ಕಟ್ಟಡದ ಹಿಂದೆ ಮದ್ಯ ಸೇವಿಸುತ್ತಿದ್ದಾಗ, ಆರೋಪಿ…

Read More

ಉಪ್ಪಳ ಎಟಿಎಂ ದರೋಡೆ ಪ್ರಕರಣ: ಮುಖ್ಯ ಸಂಚುಗಾರ ಕಿಟ್ಟು ಬಂಧನ

​ಮಂಜೇಶ್ವರ: ಉಪ್ಪಳದಲ್ಲಿ ಎಟಿಎಂಗೆ ತುಂಬಿಸಲು ತಂದಿದ್ದ ಸುಮಾರು ಅರ್ಧ ಕೋಟಿ ರೂಪಾಯಿಗಳನ್ನು ಹಗಲು ವೇಳೆಯೇ ದೋಚಿದ್ದ ಪ್ರಕರಣದ ಮುಖ್ಯ ಸಂಚುಗಾರನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್ ಮೂಲದ ಆರುಮುಖಂ (ಕಿಟ್ಟು) ಬಂಧಿತ ಆರೋಪಿ. ಈತ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ​ಮಂಜೇಶ್ವರ ಎಸ್‌ಐ ದಿನೇಶ್ ರಾಜನ್ ನೇತೃತ್ವದ ತಂಡವು ಛತ್ತೀಸ್‌ಗಢದ ಅಡಗುತಾಣದಲ್ಲಿ ಈತನನ್ನು ಅತಿ ಸಾಹಸಿಕವಾಗಿ ಸೆರೆಹಿಡಿದಿದೆ. 2024ರ ಮಾರ್ಚ್ 27ರಂದು ಖಾಸಗಿ ಏಜೆನ್ಸಿಯ ವ್ಯಾನ್ ಗಾಜು ಒಡೆದು ಹಣದ ಪೆಟ್ಟಿಗೆಯನ್ನು ಕದಿಯಲಾಗಿತ್ತು. ಸಿಸಿಟಿವಿ ದೃಶ್ಯಗಳ ಆಧಾರದ…

Read More

ಹೊಸಂಗಡಿ ಶ್ರೀ ಅಯ್ಯಪ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ: ಮೇ 2ರಂದು ನವಕಲಶಾಭಿಷೇಕ, ತುಪ್ಪಾಭಿಷೇಕ

ಶ್ರೀ ಅಯ್ಯಪ ಕ್ಷೇತ್ರ ಹೊಸಂಗಡಿ ಶ್ರೀ ಸನ್ನಿಧಿಯಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶ್ರೀ ಅಯ್ಯಪ್ಪ ಸ್ವಾಮಿಗೆ ನವಕಲಶಾಭಿಷೇಕ ಹಾಗೂ ತುಪ್ಪಾಭಿಷೇಕ ಕಾರ್ಯಕ್ರಮವು 02-05-2026ರಂದು ನಡೆಯಲಿದೆ. ಈ ಧಾರ್ಮಿಕ ವಿಧಿವಿಧಾನಗಳು ನಡಿಬೈಲು ಬ್ರಹ್ಮಶ್ರೀ ಗೋವಿಂದ ಭಟ್ ಅವರ ನೇತೃತ್ವದಲ್ಲಿ ನೆರವೇರಲಿವೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6:00 ಗಂಟೆಗೆ ಗಣಪತಿ ಹೋಮ, 8:00 ಗಂಟೆಗೆ ನಿತ್ಯಪೂಜೆ, 8:30ಕ್ಕೆ ಭಜನಾ ಕಾರ್ಯಕ್ರಮ, 11:00 ಗಂಟೆಗೆ ನವಕಲಶಾಭಿಷೇಕ ಹಾಗೂ ಮಧ್ಯಾಹ್ನ 12:00 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ ನಡೆಯಲಿದೆ. ಬಳಿಕ…

Read More

ಮಂಜೇಶ್ವರದಲ್ಲಿ ಕಾಮ್ರೇಡ್ ಎಂ. ರಾಮಪ್ಪ ಮಾಸ್ಟರ್ ಅವರ 35ನೇ ಸಂಸ್ಮರಣಾ ಸಮ್ಮೇಳನ

ಮಂಜೇಶ್ವರ: ಮಂಜೇಶ್ವರದ ಅಭಿವೃದ್ಧಿಯ ಹರಿಕಾರ, ತುಳುನಾಡಿನ ಕಮ್ಯುನಿಷ್ಟ್ ಚಳುವಳಿಯ ಅಗ್ರಗಣ್ಯ ನೇತಾರ ಹಾಗೂ ಮಂಜೇಶ್ವರದ ಮಾಜಿ ಶಾಸಕ ಕಾಮ್ರೇಡ್ ಎಂ. ರಾಮಪ್ಪ ಮಾಸ್ಟರ್ ಅವರ 35ನೇ ಸಂಸ್ಮರಣಾ ಸಮ್ಮೇಳನವು ಮಂಜೇಶ್ವರದ ಥೋಮಸ್ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಜರಗಿತು.​ಸಿಪಿಐ ಹಿರಿಯ ನಾಯಕ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,(Byt1) “ರಾಮಪ್ಪ ಮಾಸ್ಟರ್ ಅವರು ನಮ್ಮ ಸಂಘಟನಾ ಚಟುವಟಿಕೆಗಳಿಗೆ ನಿರಂತರವಾಗಿ ಸಲಹೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು….

Read More

ಕುಂಬಳೆ ಸೀತಾಂಗೋಳಿಯಲ್ಲಿ ಕೋಳಿ ವಾಹನ ಚಾಲಕನನ್ನು ತಲೆಗೆ ಹೊಡೆದು ಹತ್ಯೆ

ಕಾಸರಗೋಡು ಜಿಲ್ಲೆಯ ಕುಂಬಳೆ ಸೀತಾಂಗೋಳಿಯಲ್ಲಿ ಜನರಿಲ್ಲದ ಕಟ್ಟಡದ ಹಿಂಭಾಗದಲ್ಲಿ ಕೋಳಿ ವಾಹನ ಚಾಲಕನನ್ನು ತಲೆಗೆ ಹೊಡೆದು ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಪ್ಪಾಳಿ ಪೊನ್ನಂ ಪಾಡಲಡುಕ್ಕಂ ನಿವಾಸಿ ಸಫಾಯತ್ (30) ಮೃತಪಟ್ಟ ವ್ಯಕ್ತಿ.ಪ್ರಾಥಮಿಕ ಮಾಹಿತಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹತ್ಯೆ ನಡೆದಿರಬಹುದು ಆಂದಾಜಿಸಲಾಗಿದೆ. ಘಟನೆ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಯಿತು. ಸ್ಥಳೀಯರು ಮೃತದೇಹವನ್ನು ಕಂಡು ಕುಂಬಳೆಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ . ಮೃತದೇಹದ ಇನ್‌ಕ್ವೆಸ್ಟ್ ಪ್ರಕ್ರಿಯೆ…

Read More

ಗ್ಲಾಮರ್ ಬದಿಗಿಟ್ಟು ಭಕ್ತಿಭಾವದಲ್ಲಿ ಪೂಜಾ ಹೆಗ್ಡೆ; ಉಡುಪಿ ನಾಗಾರಾಧನೆಯಲ್ಲಿ ನಟಿಯ ಸರಳತೆ ಮೆಚ್ಚುಗೆಗೆ ಪಾತ್ರ

​ ಉಡುಪಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಪೂಜಾ ಹೆಗ್ಡೆ, ಸಿನಿಮಾ ಲೋಕದ ಗ್ಲಾಮರ್ ಬದಿಗಿಟ್ಟು ತುಳುನಾಡಿನ ಮಣ್ಣಿನ ಮಗಳಾಗಿ ಭಕ್ತಿ ಮೆರೆದಿದ್ದಾರೆ. ಕುತ್ಯಾರು ಮೂಲದ ಬೆಟ್ಟು ನಾಗ ಬ್ರಹ್ಮಸ್ಥಾನದ ತಮ್ಮ ಮೂಲಮನೆಯಲ್ಲಿ ನಡೆದ ಪವಿತ್ರ ‘ಡೆಕ್ಕೆ ಬಲಿ’ ಸೇವೆಯಲ್ಲಿ ಅವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಸಾಂಸ್ಕೃತಿಕ ಬೇರುಗಳನ್ನು ಮರೆಯದ ಪೂಜಾ, ಅಲ್ಲಿ ನೆರೆದಿದ್ದ ಭಕ್ತರ ನಡುವೆ ಅತ್ಯಂತ ಸರಳವಾಗಿ ಬೆರೆತು ಅಪ್ಪಟ ‘ಕುಡ್ಲದ ಪೊಣ್ಣು’ ಎಂಬ ಹೆಗ್ಗಳಿಕೆಗೆ ಪಾತ್ರರಾದರು….

Read More

ಯಕ್ಷದ್ರುವ ಪಟ್ಲ ಫೌಂಡೇಶನಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಮಂಗಳೂರು: ಮೇ 30 ಶನಿವಾರದಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ *ಪಟ್ಲ ಸಂಭ್ರಮ 2026 * ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ (SSLC) ಮತ್ತು ಪಿಯುಸಿ ( 2nd PUC) ವಿಭಾಗದಲ್ಲಿ ಶೇಕಡ 90ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಈ ಯೋಜನೆಯ ಫಲಾನುಭವಿಗಳು ತಮ್ಮ ಭಾವಚಿತ್ರ, ಬಿಪಿಎಲ್ ಕಾರ್ಡ್ ಪ್ರತಿ ಹಾಗೂ ಅಂಕಪಟ್ಟಿಯೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ದಿನಾಂಕ…

Read More
error: Content is protected !!