ಗ್ಲಾಮರ್ ಬದಿಗಿಟ್ಟು ಭಕ್ತಿಭಾವದಲ್ಲಿ ಪೂಜಾ ಹೆಗ್ಡೆ; ಉಡುಪಿ ನಾಗಾರಾಧನೆಯಲ್ಲಿ ನಟಿಯ ಸರಳತೆ ಮೆಚ್ಚುಗೆಗೆ ಪಾತ್ರ
ಉಡುಪಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಪೂಜಾ ಹೆಗ್ಡೆ, ಸಿನಿಮಾ ಲೋಕದ ಗ್ಲಾಮರ್ ಬದಿಗಿಟ್ಟು ತುಳುನಾಡಿನ ಮಣ್ಣಿನ ಮಗಳಾಗಿ ಭಕ್ತಿ ಮೆರೆದಿದ್ದಾರೆ. ಕುತ್ಯಾರು ಮೂಲದ ಬೆಟ್ಟು ನಾಗ ಬ್ರಹ್ಮಸ್ಥಾನದ ತಮ್ಮ ಮೂಲಮನೆಯಲ್ಲಿ ನಡೆದ ಪವಿತ್ರ ‘ಡೆಕ್ಕೆ ಬಲಿ’ ಸೇವೆಯಲ್ಲಿ ಅವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಸಾಂಸ್ಕೃತಿಕ ಬೇರುಗಳನ್ನು ಮರೆಯದ ಪೂಜಾ, ಅಲ್ಲಿ ನೆರೆದಿದ್ದ ಭಕ್ತರ ನಡುವೆ ಅತ್ಯಂತ ಸರಳವಾಗಿ ಬೆರೆತು ಅಪ್ಪಟ ‘ಕುಡ್ಲದ ಪೊಣ್ಣು’ ಎಂಬ ಹೆಗ್ಗಳಿಕೆಗೆ ಪಾತ್ರರಾದರು….