ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ ದಾಖಲೆ ಸಡಿಲಿಕೆಗೆ ಮನವಿ ಮಾಡಿದ ಭೋವಿ ಮುಖಂಡ ಪವನ್ ಕುಮಾರ್ ಶಿರ್ವ

ಇಂದು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೆ ಗೌಡ ಅವರನ್ನು ಬೆಂಗಳೂರು ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಪಡೆಯಲು ಆಗುವ ಸಮಸ್ಯೆಯ ಬಗ್ಗೆ ಅವರಿಗೆ ವಿಸ್ತಾರವಾಗಿ ಪವನ್ ಕುಮಾರ್ ಶಿರ್ವ ಅವರು ವಿವರಿಸಿದರು.. ಈ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿ ಅವರಿಗೆ ಮತ್ತು ಸಚಿವರಿಗೆ ಜಾತಿ ಪ್ರಮಾಣ ಪತ್ರಕ್ಕೆ…

Read More

ನುಡಿದಂತೆ ನಡೆದ ಕೇರಳ ಸರಕಾರ, 178 ಮನೆಗಳಿಗೆ ಆಸರೆಯಾದ ಮುಖ್ಯಮಂತ್ರಿ

ಕಲ್ಪೆಟ್ಟ ಮುಂಡಕ್ಕೈ–ಚೂರಲ್ಮಲಾ ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡ ಕುಟುಂಬಗಳಿಗೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತಾ, ರಾಜ್ಯ ಸರ್ಕಾರವು ವಾಯನಾಡ್ ಮಾದರಿ ಟೌನ್‌ಶಿಪ್ ಯೋಜನೆಯ ಮೊದಲ ಹಂತವನ್ನು ಭಾನುವಾರ ಪೂರ್ಣಗೊಳಿಸಿ 178 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದೆ. ಈ ವಿಪತ್ತು 2024 ಜುಲೈ 30ರಂದು ಸಂಭವಿಸಿ ಸುಮಾರು ಎರಡು ವರ್ಷಗಳು ಕಳೆದಿವೆ.ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಲ್ಪೆಟ್ಟ ಎಲ್ಸ್ಟನ್ ಎಸ್ಟೇಟ್‌ನಲ್ಲಿ 64 ಹೆಕ್ಟೇರ್ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾದ ಟೌನ್‌ಶಿಪ್‌ನಲ್ಲಿ ಪ್ರತಿಯೊಬ್ಬ ಫಲಾನುಭವಿಗೂ ನೀಡಲಾದ ಏಳು ಸೆಂಟ್ ಜಮೀನಿನ ಹಕ್ಕುಪತ್ರಗಳನ್ನು ವಿತರಿಸಿದರು. ಜೊತೆಗೆ ವಿಪತ್ತಿನಿಂದ ಪ್ರಭಾವಿತರಾದ…

Read More

ಮಂಗಳೂರಿನ ಉರ್ವ ಕ್ರಿಕೇಟ್ ಮೈದಾನದಲ್ಲಿ ಮಾರ್ಚ್ 6 ರಿಂದ 8 ರ ವರೆಗೆ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಕ್ರಿಕೆಟ್ ಪಂದ್ಯಾಟ …. !

ಮಂಗಳೂರು:ಎಸ್. ಎಲ್. ಶೇಟ್ ಮತ್ತು ಎಂ. ರಘುನಾಥ ಶೇಟ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಮಾರ್ಚ್ 6 ರಿಂದ 8 ನೇ ತಾರೀಕಿನ ತನಕ ಹೊನಲು ಬೆಳಕಿನ ‘ದೈವಜ್ಞ ಯೂನಿಟಿ ಕಪ್-2026’ ಮಂಗಳೂರಿನ ಉರ್ವ ಕ್ರಿಕೇಟ್ ಮೈದಾನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಎಂ ಪ್ರಶಾಂತ್ ಶೇಟ್ ತಿಳಿಸಿದರು . ಅವರು ನಗರದ ಪತ್ರಿಕಾಭವದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿ , ಈ ಕ್ರೀಡಾಕೂಟವನ್ನು ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ…..

Read More

ಹಿಂದೂ ಸಮ್ಮೇಳನ ನಿಮಿತ್ತ ಅದ್ಧೂರಿ ಶೋಭಾಯಾತ್ರೆ : ಮಸೀದಿ ಕಾಣದಂತೆ ಪರದೆ…. !?

ಬಾಗಲಕೋಟೆ:ಇತ್ತೀಚೆಗಷ್ಟೇ ಛತ್ರಪತಿ ಶಿವಾಜಿ ಜಯಂತಿ ವೇಳೆ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟದಂತಹ ಘಟನೆಯ ನಡುವೆಯೇ ಆರ್‌ಎಎನ್ ಕೋಟೆ ನಾಡಿನಲ್ಲಿ ಭಾನುವಾರ ಭವ್ಯ ಕೇಸರಿ ಶಕ್ತಿ ಪ್ರದರ್ಶನ ಏರ್ಪಡಿಸಿತ್ತು. ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರ ತೀವು ಕಟ್ಟೆಚ್ಚರ ಹಾಗೂ ಬಿಗಿ ಭದ್ರತೆ ನಡುವೆ ಶೋಭಾಯಾತ್ರೆ ನಿರಾತಂಕವಾಗಿ ಜರುಗಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್‌ ವರ್ಷದ ಹಿನ್ನೆಲೆ ನಗರದಲ್ಲಿ ಭಾನುವಾರ ಹಿಂದೂ ನಮ್ಮೇಳನ ನಿಮಿತ್ತ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿದ್ದು, ನಗರದ ವೆಂಕಟಪೇಟೆಯಲ್ಲಿ ಬರುವ ಪಾಂಚಜನ್ಮ…

Read More

ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ “ನಮೋ ನಿವಾಸ” ಹಸ್ತಾಂತರ ಕಾರ್ಯಕ್ರಮ

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಳಗಿನ ಸರಿಪಲ್ಲ, ಸರಸ್ವತಿ ಫ್ರೆಂಡ್ಸ್ ಕ್ಲಬ್ ಬಳಿ, ಶಾಸಕರಾದ ಡಿ. ವೇದವ್ಯಾಸ ಕಾಮತ್ ರವರ ನೇತೃತ್ವ ಹಾಗೂ ಇತರೆ ದಾನಿಗಳ ಸಹಕಾರದೊಂದಿಗೆ ನಿರ್ಮಾಣಗೊಂಡ “ನಮೋ ನಿವಾಸ” ದ ಹಸ್ತಾಂತರ ಕಾರ್ಯಕ್ರಮವು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ ಎಸ್. ರವರು ಮನೋಜ್ ದಂಪತಿಗಳಿಗೆ ಕೀಲಿ ಕೈ ಹಸ್ತಾಂತರಿಸಿ, ಸಂಘದ ಶತಾಬ್ದಿ ಹಿನ್ನಲೆಯಲ್ಲಿ ಸೇವಾ ಚಟುವಟಿಕೆ ಭಾಗವಾಗಿ ಈ ನಮೋ…

Read More

ಉಡುಪಿ ಕಂಬಳಕ್ಕೆ ಭೂಮಿ ಹಸ್ತಾಂತರವಾಗಿಲ್ಲ; ಭೂಮಿ ಪೂಜೆ ಕಾನೂನು ಬಾಹಿರ-ವಿನಯಕುಮಾರ್ ಸೊರಕೆ

ಉಡುಪಿ: 80 ಬಡಗುಬೆಟ್ಟುವಿನಲ್ಲಿ ನಡೆಯುವ ಉಡುಪಿ ಕಂಬಳಕ್ಕೆ ಜಿಲ್ಲಾಡಳಿತದಿಂದ 6.30 ಎಕರೆ ಭೂಮಿ ಕಂಬಳ ಸಮಿತಿಗೆ ಹಸ್ತಾಂತರವಾಗಿಲ್ಲ. ಆದ್ದರಿಂದ ಫೆ.28ರಂದು ಕಾಪು ಶಾಸಕರ ನೇತೃತ್ವದಲ್ಲಿ ನಡೆದ ಕಂಬಳ ಕರೆಯ ಭೂಮಿ ಪೂಜೆ ಕಾನೂನು ಬಾಹಿರವಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಕಂಬಳ ನಡೆಸುವುದಕ್ಕೆ ತನ್ನ ಅಭ್ಯಯಂತರವಿಲ್ಲ. ಆದರೆ ಅದು ಬಿಜೆಪಿ ಪಕ್ಷದ ಕಂಬಳ ಆಗಬಾರದು. ಜಿಲ್ಲಾಡಳಿತ ಕಂಬಳ ಆಗಬೇಕು. ಸ್ಥಳೀಯ ಜನರಿಗೆ ಕಂಬಳದಿಂದ ತೊಂದರೆ ಆಗದಂತೆ ಸೂಕ್ತ…

Read More

ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿರುವ ವಕೀಲ ಡಿ. ಪದ್ಮನಾಭ ಕುಮಾರ್ …. ! 8 ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್‌ಷಿಪ್‌ … !

ಮಂಗಳೂರು:ಅಬುದಾಬಿಯಲ್ಲಿ ಫೆಬ್ರವರಿ 4ರಿಂದ 15ರವರೆಗೆ ನಡೆದ ಅಂತರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ 2026ರಲ್ಲಿ ಮಂಗಳೂರು ಮೂಲದ ವಕೀಲ ಡಿ. ಪದ್ಮನಾಭ ಕುಮಾರ್ ಗಮನಾರ್ಹ ಸಾಧನೆ ಮಾಡಿ ಚಾಂಪಿಯನ್ನಾಗಿ ಹೊರಹೊಮ್ಮಿದ್ದು ಈ ಮೂಲಕ 8 ಬಾರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿರುವುದಾಗಿ ಸ್ವತಃ ಅವರೇ ಹೇಳಿದರು . ನಗರದ ಪತ್ರಿಕಾಭವನದಲ್ಲಿ ನಡೆಸಿಯಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಕ್ರೀಡಾಕೂಟದಲ್ಲಿ 25,000 ಕ್ರೀಡಾಪಟುಗಳು 125 ರಾಷ್ಟ್ರಗಳಿಂದ ಭಾಗವಹಿಸಿದ್ದರು. 27ಕ್ಕೂ ಹೆಚ್ಚು ಕ್ರೀಡೆಗಳು 38 ಸ್ಥಳಗಳಲ್ಲಿ ಆಯೋಜಿಸಲ್ಪಟ್ಟಿತ್ತು ಎಂದರು . ನಾನು…

Read More

ಟ್ರೆಕ್ಕಿಂಗ್ ಹೋಗಿದ್ದ ಮೆಡಿಕಲ್ ಶಾಪ್ ಮಾಲಕಿ ನದಿಯಲ್ಲಿ‌ ಮುಳುಗಿ ದುರಂತ ಅಂತ್ಯ … !

ಉಡುಪಿ:ಹೊಸಂಗಡಿಯ ಭಾಗಿಮನೆ ಬಳಿ ಟ್ರೆಕ್ಕಿಂಗ್ ಹೋಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾ.1ರಂದು ನಡೆದಿದೆ.ಕುಂದಾಪುರದ ಮೆಡಿಕಲ್ ಶಾಪ್ ವೊಂದರ ಮಾಲಕಿ ಶುಭಶ್ರೀ ಕಾರಂತ್ ( 53) ಮೃತಪಟ್ಟ ಮಹಿಳೆ. ಕುಂದಾಪುರದಿಂದ 8-10 ಜನರ ತಂಡ ಹೊಸಂಗಡಿಯ ಮೆಟ್ಕಲ್ ಗುಡ್ಡ ಕಡೆಗೆ ಟ್ರೆಕ್ಕಿಂಗ್ ಹೋಗಿದ್ದರು. ಈ ವೇಳೆ ಶುಭಶ್ರೀ‌ ಅವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

Read More

ಮಾಜಿ ಪ್ರಧಾನಿ ದೇವೆಗೌಡರು ಕರಾವಳಿ ಪ್ರವಾಸ ! ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮನ… !

ಕಡಬ :ಭಾರತ ಸರಕಾರದ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೆ ಗೌಡರು ರವಿವಾರ ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದರು.ಬೆಂಗಳೂರು ಜಕ್ಕೂರು ವಿಮಾನ ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೆಲಿಕಾಫ್ಟರ್ ಮೂಲಕ ಹೊರಟು 5.30ಕ್ಕೆ ಕಡಬ ತಾಲೂಕಿನ ಬಿಳಿನೆಲೆ ಹೆಲಿಪ್ಯಾಡ್ಗೆ ಆಗಮಿಸಿ ಅಲ್ಲಿಂದ ರಸ್ತೆಮೂಲಕ ಕಾರಿನಲ್ಲಿ ಬಿಗಿಭದ್ರತೆಯೊಂದಿಗೆ ಕುಕ್ಕೇ ಸುಬ್ರಹ್ಮಣ್ಯದ ವಿವಿಐಪಿ ಅತಿಥಿಗ್ರಹಕ್ಕೆ ಬಂದರು.ಈ ಸಂಧರ್ಭದಲ್ಲಿ ಶ್ರೀ ದೇವಳದ ಪರವಾಗಿ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂದಿ ಮಾಜಿ ಪ್ರಧಾನಿಯವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಅತಿಥಿಗ್ರಹದಲ್ಲಿ ವಿಶ್ರಾಂತಿ ಪಡೆದು ರಾತ್ರಿ…

Read More

ರಾಜ್ಯದಾದ್ಯಂತ 70ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳ ಆರೋಪಿ, ಕುಖ್ಯಾತ ಕಳ್ಳ ‘ಶಟರ್’ ಜಲೀಲ್ ಪೊಲೀಸ್ ಬಲೆಗೆ

ಮಂಜೇಶ್ವರ: ಕೇರಳದಾದ್ಯಂತ ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳ ‘ಶಟರ್’ ಜಲೀಲ್ ಹಾಗೂ ಅವನ ಸಹಚರನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್ ನೇತೃತ್ವದ ತಂಡ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಈ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಕುಂಬಳೆ ಹಾಗೂ ಪೆರಿಯಾದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಬೆನ್ನಟ್ಟಿದ ಪೊಲೀಸರು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ​ಪಾಲಕ್ಕಾಡ್ ಚಿತ್ತೂರು ನಿವಾಸಿ ‘ಶಟರ್’ ಜಲೀಲ್ ಅಲಿಯಾಸ್ ಅಯಿರೂರ್ ಕೊಳಕ್ಕಪರಂಬಿಲ್ ಜಲೀಲ್ (36) ಹಾಗೂ ಕದ್ದ ಮಾಲುಗಳನ್ನು ಮಾರಾಟ…

Read More
error: Content is protected !!