ಕೇರಳ ಸ್ಥಳೀಯಾಡಳಿತ ಚುನಾವಣಾ ಸನ್ನಿಹಿತ : ಎಡರಂಗ ಸರಕಾರಕ್ಕೆ ಸವಾಲುಗಳ ಸರಮಾಲೆ
ತಿರುವನಂತಪುರಂ : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ತ್ರಿಸ್ತರ ಪಂಚಾಯತ್ ನ ಸ್ಥಳೀಯಾಡಳಿತ ಚುನಾವಣೆಗಳು ಬಹುತೇಕ ಸೆಪ್ಟೆಂಬರ್ ಒಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಇದಕ್ಕೆ ಬೇಕಾಗಿ ಚುನಾವಣಾ ಆಯೋಗವು ವಾರ್ಡ್ ವಿಭಜನೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ಮಗ್ನವಾಗಿದೆ. 2026 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿರುವ ಎಡರಂಗ ಸರಕಾರಕ್ಕೆ ಸ್ಥಳೀಯಾಡಳಿತ ಚುನಾವಣೆಯ ಸಮಯ ಸನ್ನಿಹಿತವಾಗುವ ಸಮಯದಲ್ಲೇ ಒಂದೊಂದೇ ಸವಾಲುಗಳು ಎದುರಾಗುತ್ತಿದೆ. ಇದು ಆಡಳಿತ ಪಕ್ಷದ…
