ಶ್ರೀ ಆದಿಶಕ್ತಿ ರಕ್ತೇಶ್ವರಿ ದೇವಸ್ಥಾನ ಹೊಸಂಗಡಿ, ಶಾರದಾ ಆರ್ಟ್ಸ್ ಕಲಾವಿದರು (ರಿ ) ಮಂಜೇಶ್ವರ ಶ್ರೀ ಅಯ್ಯಪ್ಪ ಸೇವಾ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ , ಚಕ್ರವರ್ತಿ (ರಿ )ಹೊಸಂಗಡಿ ಆಶ್ರಯದಲ್ಲಿ, 136ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಆಗಸ್ಟ್ 11ರಿಂದ ಆಗಸ್ಟ್ 26, 2026ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಗೆ ಸೇವೆ ಲಭ್ಯವಿರಲಿದೆ. ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.


ಶಿಬಿರವನ್ನು ಶ್ರೀ ಪದ್ಮನಾಭ ಆಚಾರ್ಯ ಬಾಡೂರು ಉದ್ಘಾಟಿಸುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಡ್ವಕೇಟ್ ನವೀನ್ ರಾಜ್ ವಹಿಸುವರು ಮಾಹಿತಿ ನೀಡುವವರು ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ,ಮುಖ್ಯ ಅತಿಥಿಗಳಾಗಿ ಶ್ರೀ ಪದ್ಮನಾಭ ಕಾಡಪ್ಪರ ,ಶ್ರೀ ತಾರಾನಾಥ ಗುರಿಕಾರರು,ಶ್ರೀ ಯಾಧವ ಬಡಾಜೆ , ಶಿ ಕೃಷ್ಣಾಜಿ ಮಂಜೇಶ್ವರ ,ಶ್ರೀ ಸುರೇಶ ಗಾಣಿ0ಜಾಲ್ ಭಾಗವಹಿಸುವರು.

ಹೊಸಂಗಡಿಯ ಶ್ರೀ ಆದಿಶಕ್ತಿ ರಕ್ತೇಶ್ವರಿ ದೇವಸ್ಥಾನದ ಶ್ರೀ ಆದಿ ಕಲಾಮಂಟಪದಲ್ಲಿ ಶಿಬಿರ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಯಾವುದೇ ರೀತಿಯ ವಿದ್ಯುತ್ ಶಾಕ್ ನೀಡುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಇಲೆಕ್ಟ್ರೋ ಮ್ಯಾಗ್ನೆಟ್ ಮೂಲಕ ಸ್ಟಿಮ್ಯುಲೇಷನ್ ನೀಡುವ ಚಿಕಿತ್ಸಾ ವಿಧಾನ ಇದಾಗಿದ್ದು, ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿಬಿರದಲ್ಲಿ ರಕ್ತಸಂಚಾರಕ್ಕೆ ಸಂಬಂಧಿಸಿದಂತೆ ಅರಿವು ಹಾಗೂ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಆಗಸ್ಟ್ 11ರಿಂದ 26ರವರೆಗೆ ನಡೆಯಲಿರುವ ಈ ಉಚಿತ ಶಿಬಿರಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಲಾಗಿದೆ.

