ಬೇಸಿಕ್ ಎಜುಕೇಷನ್ ಆಫೀಸರ್ ಗೆ. ಬೇಸಿಕ್ ಎಜುಕೇಶನ ಕೊರತೆ.ರಾಜಕೀಯ ಕೃಪೆ ಇದ್ದರೆ ಎಲ್ಲವೂ ಸಾಧ್ಯ. ಉತ್ತರ ಪ್ರದೇಶದಲ್ಲೊಂದು ವಿಶಿಷ್ಟ ನೇಮಕಾತಿ.

ತಿರುವನಂತಪುರ : ಭಾರತೀಯ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ ರಿಂಕು ಸಿಂಗ್. ತನ್ನದೇ ಆದ ವಿಶಿಷ್ಟ ಶೈಲಿಯ ಪ್ರತಿಭಾನ್ವಿತ ಆಟಗಾರ. ಮಾತ್ರವಲ್ಲ ತಂಡದ ಹೆಸರನ್ನು ಕೆಲ ಸಂದರ್ಭದಲ್ಲಿ ದಡ ಸೇರಿಸಿದ ಕ್ರೀಡಾಪಟು. 2022 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕ್ರಿಕೆಟಿಗ. ಆದರೆ ಇದೀಗ ಎಲ್ಲಾ ಮಾಧ್ಯಮಗಳಲ್ಲೂ ಇವರ ಸಾಧನೆಯ ಸಚಿತ್ರ ವರದಿ ನೀರಿನಂತೆ ಹರಿಯುತ್ತಿದೆ ಆಶ್ಚರ್ಯವೆಂದರೆ ಈ ಎಲ್ಲಾ ವರದಿ ಇವರ ಕ್ರೀಡಾ ಸಾಧನೆಗೆ ಅಲ್ಲ…. ಬದಲಾಗಿ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ…

Read More

ಡಿವೈಡರ್‌ನಿಂದ ಹೊರಗೆ ಬಂದು ನಿಂತಿದ್ದ ಕಬ್ಬಿಣದ ರಾಡ್‌ಗೆ ಕಾರು ನೇರವಾಗಿ ಡಿಕ್ಕಿ-ಅಪಘಾತದಲ್ಲಿ ಇಬ್ಬರು ಗಂಭೀರ

ಮಂಜೇಶ್ವರ : ಡಿವೈಡರ್‌ನಿಂದ ಹೊರಗೆ ಬಂದು ನಿಂತಿದ್ದ ಕಬ್ಬಿಣದ ರಾಡ್‌ಗೆ ಕಾರು ನೇರವಾಗಿ ಡಿಕ್ಕಿಯಾದ ಪರಿಣಾಮ, ಪ್ರಯಾಣಿಕನ ಕೈಗೆ ಕಬ್ಬಿಣದ ರಾಡ್ ತೂರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯ ಗೊಂಡಿದ್ದಾರೆ. ಗಾಯಗೊಂಡ ಪಳ್ಳಿಕರ ಮೌವ್ವಲೆಯ ಶೆಬಾಬ್ (24), ಫಯಾದ್ (28) ಎಂಬವರನ್ನು ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಸುಮಾರು 7.30ರ ಸುಮಾರಿಗೆ ಕುಂಬಳೆ ಜುಮಾ ಮಸೀದಿ ಬಳಿ ಸಂಭವಿಸಿದೆ. ಪಳ್ಳಿಕೆರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿವೈಡರ್‌ನ ಹೊರಗೆ ಬಂದು ನಿಂತಿದ್ದ…

Read More

ಸುನಾಮಿಯಂತೆ ಬರುತ್ತಿರುವ ಬೇನಾಮಿ ವಿದ್ಯಾ ಸಂಸ್ಥೆಗಳು.ವಿದ್ಯಾರ್ಥಿಗಳ ಪ್ರವೇಶದ ಕೊರತೆಯಲ್ಲಿ ಸರ್ಕಾರಿ ಶಾಲೆಗಳು.

ತಿರುವನಂತಪುರ : ಸರಕಾರವು ಸರಕಾರಿ ಶಾಲೆಗಳ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸಿ ನೂತನ ವಿವಿಧ ಯೋಜನೆಗಳನ್ನು ರೂಪಿಸಿ ಪರಿಚಯಿಸಿದರೂ, ಇತ್ತೀಚಿನ ವರ್ಷಗಳಲ್ಲಿ ಸುನಾಮಿಯಂತೆ ಬರುತ್ತಿರುವ ಕೆಲವು ಬೇನಾಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳಿಂದಾಗಿ ಕೆಲವು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವು ತೀರಾ ಕುಂಠಿತವಾಗಿದೆ. ಹೆಚ್ಚಿನ ಖಾಸಗಿ ವಿದ್ಯಾ ಸಂಸ್ಥೆಗಳು ವಿವಿಧ ರಾಜಕೀಯ ಪಕ್ಷದ ಉನ್ನತ ನಾಯಕರ ಆಡಳಿತದಲ್ಲಿ ಕಾರ್ಯಾಚರಿಸುತ್ತಿದ್ದು, ತಮಗೆ ಬೇಕಾದ ರೀತಿಯಲ್ಲಿ ಅನುಕೂಲಕರವಾದ ವರದಿಯನ್ನ ತಯಾರಿಸಿ ಸುಲಭವಾಗಿ ರಾಜ್ಯ ಸರ್ಕಾರದಿಂದ ಅನುಮತಿ ಪತ್ರ ( NOC) ಪಡೆದು ಕೇಂದ್ರ…

Read More

ವಿ.ವಿ. ಪಠ್ಯ ಕ್ರಮದಲ್ಲಿ ವೇಡನ್ ಗೀತೆ. ಅಳವಡಿಕೆ ಗೆ ಮಾನದಂಡವೇನು.?ಸ್ಪಷ್ಟನೆ ಕೇಳಿದ ಚಾನ್ಸ್ಲರ್

ತೀರಾ ಕಡುಬಡತನ ದಿಂದ ಅವಿರತ ಶ್ರಮ ದೊಂದಿಗೆ ಯಾವುದಾದರು ಕ್ಷೇತ್ರ ದಲ್ಲಿ ವಿಶಿಷ್ಟ ಸಾಧನೆ ಮಾಡಿದ ಪ್ರತಿಭಾನ್ವಿತ ಸಾಧಕರ ಕುರಿತಾಗಿ ಅವರ ಸಾಧನೆಯ ಬಗ್ಗೆ ಶಾಲಾ ಕಾಲೇಜು ಪಠ್ಯಪುಸ್ತಕದಲ್ಲಿ ಸೇರಿಸಿ ಮುಂದಿನ ಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಮಾರ್ಗದರ್ಶನ ವಾಗುವಂತೆ ಮಾಡುವುದು ಉತ್ತಮ ಕಾರ್ಯವಾಗಿದೆ. ಆದರೆ ಕಲ್ಲಿಕೋಟೆ ವಿಶ್ವವಿದ್ಯಾನಿಲಯದ 2025-26 ನೇ ಶೈಕ್ಷಣಿಕ ವರ್ಷದ ವಿವಿ ಪಠ್ಯಕ್ರಮದಲ್ಲಿ ಬುಡಕಟ್ಟು ಸಮುದಾಯದಿಂದ ಬಂದ ವಿಶಿಷ್ಟ ಪ್ರತಿಭೆಯ ಕಲಾವಿದ ಹರಿದಾಸ್ ಮುರಳಿ @ ವೇಡನ್ ಇತ್ತೀಚೆಗೆ ಹಾಡಿ ತುಂಬಾ ಜನಪ್ರಿಯ…

Read More

ಬಾಳಿಯೂರಿನಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿ ಆರಂಭ.

ಮಂಜೇಶ್ವರ : ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಅಯ್ಯಪ್ಪ ಕೃಪ ಯಕ್ಷಗಾನ ಅಧ್ಯಯನ ಕೇಂದ್ರ ಬಾಳಿಯೂರು ಸಂಸ್ಥೆಯ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ನಡೆಯಿತು. ಇಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸಂಕಬೈಲು ಸತೀಶ್ ಅಡಪ್ಪ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಶ್ರೀ ಶೇಖರ ಶೆಟ್ಟಿ ಬಾಯಾರು, ಶ್ರೀ ರಾಧಾಕೃಷ್ಣ ರೈ ಶ್ರೀಮತಿ ತಾರಾಮಣಿ ವಿ ರೈ, ಯೋಗೇಶ್…

Read More

ಆಚಾರವಿಲ್ಲದ… ನಾಲಿಗೆಯಲ್ಲಿ ನೀಚ ಬುದ್ಧಿಯ ತೋರಿಸಿದ. ಪ್ರಮೋದ್ ನ ‘ಪ್ರಮಾದ.VSSC ಸಿಬ್ಬಂದಿ ಜಿಆರ್ ಪ್ರಮೋದ್ ಗೆ ಕಠಿಣ ಶಿಕ್ಷೆ ಆಗಬೇಕು

ತಿರುವನಂತಪುರ : ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದೇಶದ ಗರಿಮೆಯನ್ನು, ಹಿರಿಮೆಯನ್ನು ವಿಶ್ವ ರಾಷ್ಟ್ರಗಳ ಮುಂದೆ ಬಾನೆತ್ತರಕ್ಕೆ ಹಾರಿಸಿದ ನಮ್ಮ ಹೆಮ್ಮೆಯ ಸಂಸ್ಥೆ. ಇಂತಹ ಸಂಸ್ಥೆಗಳ ಸುಪರ್ದಿಯಲ್ಲಿ ಬರುವ ಇನ್ನೊಂದು ಸಂಸ್ಥೆಯೇ (vssc.) ವಿಕ್ರಂ ಸಾರಾಭಾಯಿ ಸ್ಪೆಸ್ ಸೆಂಟರ್. ಕೇಂದ್ರ ಸರಕಾರದ ಆದೀನ ದಲ್ಲಿ ಈ ಸಂಸ್ಥೆಯು ಕಾರ್ಯಾಚರಿಸುತ್ತಿದೆ. ಇಂತಹ ಅಭಿಮಾನದ ನಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಯಾಗಿರುವ G R ಪ್ರಮೋದ್ ಎಂಬಾತ ತನ್ನ ಮುಖಪುಟದ ಬ್ಲಾಗಿನಲ್ಲಿ ಭಾರತಾಂಬೆಯ ಕುರಿತು ಕೆಟ್ಟ ಶಬ್ದಗಳನ್ನು ಉಪಯೋಗಿಸಿ ಲೇಖನ ಮಾಡಿದ್ದು, ನಾಗರಿಕ…

Read More

ಕೇರಳ: ಆರೋಗ್ಯ ಇಲಾಖೆ ಯ ಆನಾರೋಗ್ಯ ದ ಬಗ್ಗೆ ಡಾ. ಯೆರಿಸ್ ಬಿಚ್ಚಿಟ್ಟ ಸತ್ಯ.

ಇದೇನಾ ನಂಬರ್ ಒನ್ ಅಭಿವೃದ್ಧಿ ? ಸಾರ್ವಜನಿಕ ರ ಯಕ್ಷ ಪ್ರಶ್ನೆ. ತಿರುವನನಂತಪುರ : ಕಳೆದ 9 ವರ್ಷದ ನಿರಂತರವಾದ ಎಡರಂಗ ಸರಕಾರದ ಆಡಳಿತದಲ್ಲಿ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಮಾಡಿದ್ದೇವೆ ಎಂಬ ಉದ್ದಟ್ಟ ತನ ಮೆರೆಯುತ್ತಿರುವ ಸಹಕಾರಕ್ಕೆ ತಿರುವನಂತಪುರ ಮೆಡಿಕಲ್ ಕಾಲೇಜಿನ ಸರ್ಜನ್ ಡಾಕ್ಟರ್ ಹೇರಿಸ್ ಚಿರೇಕಲ್ ಬಿಚ್ಚಿಟ್ಟ ಸತ್ಯ ಆರೋಗ್ಯ ಇಲಾಖೆಯ ದುರಾವಸ್ತೆಯ ಸತ್ಯಾ ಸತ್ಯತೆಯನ್ನು ಬಯಲಿಗೆಳೆದಿದೆ. ಇಂದು ಚುನಾವಣಾ ಸಮಯದಲ್ಲಿ ಆ ಕ್ಷೇತ್ರವನ್ನು ನನ್ನ ಪ್ರತಿಷ್ಠೆಯ ಕಣವನ್ನಾಗಿ ತನ್ನಲ್ಲೇ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಪಡುತ್ತಿರುವ…

Read More

‘ತರವಾಡು ‘ತುಳು ಸಿನಿಮಾದ ಟೀಸರ್ ಬಿಡುಗಡೆ

ಮಂಗಳೂರಿನ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಉಮೇಶ್ ಪಡುಬಿದ್ರೆ ನಿರ್ಮಾಣ ದ ಶರತ್ ಶೆಟ್ಟಿ ನಿರ್ದೇಶನ ದಲ್ಲಿ ಶೋಭಾ ಶೆಟ್ಟಿ ಬ್ಯಾನರ್ ಹಾಗೂ ಪ್ರೊಡಕ್ಷನ್ ನಲ್ಲಿ ನಿರ್ಮಾಣ ವಾದ ‘ತರವಾಡು ‘ತುಳು ಸಿನಿಮಾದ ಟೀಸರ್ ಜೂನ್ 29ರಂದು ಮದ್ಯಾಹ್ನ 2 ಗಂಟೆಗೆ ಬಿಡುಗಡೆ ಮಾಡಲಾಯಿತು. ಇನ್ನು ಈ ಚಿತ್ರದಲ್ಲಿ ಶೋಧನ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇನ್ನು ಈ ಟೀಸರ್ ಬಿಡುಗಡೆಗೆ ಮುಖ್ಯ ಅತಿಥಿಗಳಾಗಿ ಸಂತೋಷ್ ಶೆಟ್ಟಿ,ಡಿ.ಕೆ ಶೆಟ್ಟಿ, ವಿಠ್ಠಲ್ ಶೆಟ್ಟಿ,ವಿಜಯ ಕುಮಾರ್ ಕೊಡಿಯಾಲಬೈಲು,ಪ್ರಕಾಶ್…

Read More

ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ -ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆ

ಸುರತ್ಕಲ್: ಬಂಟರ ಸಂಘ (ರಿ.) ಸುರತ್ಕಲ್ ಇದರ 2025 – 27 ನೇ ಸಾಲಿನ ನಿರ್ದೇಶಕರ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ್ ಶೆಟ್ಟಿ ಕಟ್ಲ, ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್, ಸಹಕಾರ್ಯದರ್ಶಿಯಾಗಿ ಮೀರಾ ವಾಣಿ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ…

Read More

“ಬಾಲಿಕಾಶ್ರಮದ ಮಕ್ಕಳ ಜೊತೆ ಒಂದು ಸಂಜೆ “

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾಕೇಂದ್ರ ಜಲಿಗುಡ್ಡೆ ಇದರ ಹಾಗೂ ಬಾಲಿಕಾಶ್ರಮ ಕಂಕನಾಡಿ ಇಲ್ಲಿನ ಮಕ್ಕಳಿಗಾಗಿ“ಬಾಲಿಕಾಶ್ರಮದ ಮಕ್ಕಳ ಜೊತೆ ಒಂದು ಸಂಜೆ ” ಎಂಬ ಸಮಯೋಜಿತ ಕಾರ್ಯಕ್ರಮವನ್ನು ತಾ. 22.6.2025 ನೇ ರವಿವಾರಬಾಲಿಕಾಶ್ರಮದ ಸಭಾಂಗಣದಲ್ಲಿ ಆಯೋಜಿಸಲಾಯಿತು. ಪ್ರಾಥಮಿಕ ಶಾಲಾ ಬಾಲಕಿಯರಿಗಾಗಿ ರಾಮಾಯಣ ಮತ್ತು ಮಹಾಭಾರತ ಅಲ್ಲದೆ ಪುರಾಣಗಳ ಬಗ್ಗೆ ಸುಮಾರು 50 ಕ್ಕೂ ಅಧಿಕ ರಸಪ್ರಶ್ಣೆ ಯನ್ನು ಕೇಳಲಾಗಿ ಸಮರ್ಪಕವಾಗಿ ಮಕ್ಕಳು ಪ್ರಶ್ಣಾನುಸಾರ ಉತ್ತರ ನೀಡಿದರು. 60 ಕ್ಕೂ ಹೆಚ್ಚು ಬಾಲಕಿಯರು ಈ ರಸಪ್ರಶ್ಣೆಯಲ್ಲಿ…

Read More
error: Content is protected !!