ಸಂತೆಕಟ್ಟೆ: ಇಂದಿನಿಂದ ಹಲಸು ಮತ್ತು ಹಣ್ಣು ಮೇಳ

ಉಡುಪಿ: ಸಂತೆಕಟ್ಟೆ ಕೆಮ್ಮಣ್ಣು ಲಿಟ್ಲ್ ಫ್ಲವರ್ ಹಾಲ್ ನಲ್ಲಿ ಮೇ 8ರಿಂದ 10ರ ವರೆಗೆ ಹಲಸು ಮತ್ತು ಹಣ್ಣು ಮೇಳವನ್ನು ಆಯೋಜಿಸಲಾಗಿದೆ ಎಂದು ಮೇಳದ ಆಯೋಜಕ ಮುಹಮ್ಮದ್ ಮುಕ್ತಾರ್ ಹುಸೇನ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ‌ ಮಾಹಿತಿ ನೀಡಿದ ಅವರು, ಚಂದ್ರ ಹಲಸು, ಕೇಸರ್ ಹಲಸು, ಏಕದಶಿ ಹಾಗೂ ರುದ್ರಾಕ್ಷಿ ಈ ನಾಲ್ಕು ತಳಿಯ ಹಲಸು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಹಲಸಿನ ಹಣ್ಣನ್ನು ಆಂಧ್ರಪ್ರದೇಶದಿಂದ ತರಿಸಲಾಗಿದೆ. ಇದರ ಜೊತೆಗೆ ಹಲಸಿನ ಸಂಡಿಗೆ, ಹಪ್ಪಳ, ದೋಸೆ,…

Read More

ಉಡುಪಿ: ಗ್ಯಾಸ್‌ ದರ ಏರಿಕೆ ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ

ಉಡುಪಿ: ವಾಣಿಜ್ಯ ಗ್ಯಾಸ್ ದರ ತೀವ್ರ ಏರಿಕೆ ವಿರುದ್ಧ ಇಂದು ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು.ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ನಗರದ ಬ್ರಹ್ಮಗಿರಿ ಸರ್ಕಲ್ ನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಳೆದ ಮೂರು ತಿಂಗಳಲ್ಲಿ‌ ಮೂರು ಬಾರಿ ವಾಣಿಜ್ಯ ಗ್ಯಾಸ್ ಬೆಲೆ ಏರಿಸಲಾಗಿದೆ.ಈ ಬಾರಿ 993 ರೂ.ಏರಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಯುದ್ಧದ ನೆಪ ಹೇಳಿ ಈ ಮಟ್ಟದಲ್ಲಿ ಬೆಲೆ ಏರಿಸುವ ಮೂಲಕ ಕೇಂದ್ರ ಸರಕಾರ ಹೊಟೇಲ್ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಬೆಲೆ…

Read More

ಪಲ್ಗುಣಿ ನದಿಯಲ್ಲಿ ಮೀನುಗಳ ಮಾರಣಹೋಮ: ಮಾಲಿನ್ಯಕ್ಕೆ ಜನರ ಆಕ್ರೋಶ

ಮಂಗಳೂರು: ಪಲ್ಗುಣಿ ನದಿ‌ ಕಲುಶಿತಗೊಂಡಿದೆ. ಅದರ ದೇಖಿ ರೇಖಿ ನೋಡಬೇಕಾದ ಮಂಗಳೂರು‌ ಮಹಾನಗರ ಪಾಲಿಕೆ ಕಣ್ಣು‌ಮುಚ್ಚಿ,‌ಕಿವಿ ಮುಚ್ಚಿ, ಬಾಯಿ ಮುಚ್ಚಿ ಕುಳಿತಿದೆ. ಪಾಲಿಕೆ ನಿರ್ಲಕ್ಷಕ್ಕೆ ರಾಶಿ ರಾಶಿ‌ ಮೀನುಗಳು ಸಾಯುತ್ತಿವೆ. ಮಂಗಳೂರು ನಗರದ ಹೊರವಲಯದ ಮಳವೂರು ಕೆಂಜಾರ್ ವ್ಯಾಪ್ತಿಯಲ್ಲಿ ಹರಿಯುವ ಪಲ್ಗುಣಿ ನದಿ ಕೆಲ ವರ್ಷಗಳ‌ ಹಿಂದೆ ಜೀವಂತ ನದಿಯಾಗಿತ್ತು. ಮೀನುಗಳು ಬದುಕಿಕೊಂಡಿದ್ದವು. ನೀರೂ ಸ್ವಚ್ಚವಾಗಿತ್ತು. ಈಗ ಅದು‌ ಮೀನುಗಳಿಗೆ ರುದ್ರಭೂಮಿಯಾಗಿದೆ. ಎಲ್ಲಿ ನೋಡಿದರೂ ಸತ್ತು ತೇಲುತ್ತಿರುವ ಜಲಚರಗಳ ರಾಶಿ‌ ಕಾಣುತ್ತಿದೆ. ಇತ್ತೀಚೆಗಷ್ಟೇ ಕಪ್ಪು ಬಣ್ಣಕ್ಕೆ ತಿರುಗಿದ್ದ…

Read More

ಕಾಸರಗೋಡಿನಲ್ಲಿ ಕನ್ನಡ ಸಂಭ್ರಮ: ಮೇ 16ರಂದು ಸಂಸ್ಕೃತಿ ಉತ್ಸವ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ 16ರಂದು ಬೆಳಗ್ಗೆ 9ರಿಂದ ಸುಬ್ಬಯ್ಯಕಟ್ಟೆ ಕುಡಾಲ್ ಮೇರ್ಕಳದ ಕುಡಾಲು ಅನುದಾನಿತ ಕಿ.ಪ್ರಾ.ಶಾಲೆ ವಠಾರದಲ್ಲಿ ನಡೆಯಲಿದೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಕಾಸರಗೋಡು ಇದರ ಸಂಸ್ಥಾಪಕರಾದಎಸ್ ಪ್ರದೀಪ ಕುಮಾರ ಕಲ್ಕೂರ ತಿಳಿಸಿದರು…

Read More

ಪೆರ್ಲ ನೇತಾಜಿ ಗ್ರಂಥಾಲದಲ್ಲಿ ರೀಡಿಂಗ್ ಥಿಯೇಟರ್

ಪೆರ್ಲ : ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ಬಾಲವೇದಿಕೆಯ ಮಕ್ಕಳ ವಾಚನಾ ಕಳರಿ ಅಂಗವಾಗಿ ರೀಡಿಂಗ್ ಥೀಯೇಟರ್ ಕಾರ್ಯಕ್ರಮ ಜರಗಿತು.ಕವಿ ಶ್ರೀನಿವಾಸ ಪೆರಿಕ್ಕಾನ ರೀಡಿಂಗ್ ಥಿಯೇಟರ್ ಉದ್ಘಾಟಿಸಿ ‘ಮಕ್ಕಳ ರಚನಾ ಕೌಶಲ್ಯತೆ ಎಳೆವೆಯಲ್ಲೇ ಬೆಳೆಯಲು ವಾಚನಾ ಕಳರಿ ಹೊಸ ಭರವಸೆಯನ್ನು ಮೂಡಿಸುತ್ತಿದೆ. ಅವರಿಗೆ ಅವಕಾಶಗಳನ್ನು ಒದಗಿಸಿ ಕೊಡುವುದು ಅತೀ ದೊಡ್ಡ ಕೆಲಸವಾಗಿದೆ’ ಎಂದು ನುಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ರಂಗಕರ್ಮಿ ಅಶೋಕ್ ಮಾಸ್ತರ್ ಕೊಡ್ಲಮೊಗರು ತರಗತಿ ನಡೆಸಿದರು. ನಾಟಕ ಓದು, ಕಥಾ ಓದು ಮುಂತಾದ ಸಾಹಿತ್ಯ ಪ್ರಕಾರಗಳನ್ನು…

Read More

ಹೊಸಂಗಡಿ ಲಾಡ್ಜ್ ಬೆದರಿಕೆ ಪ್ರಕರಣ: ಮುಖ್ಯ ಸಂಚುಗಾರ ಅಬೂಬಕ್ಕರ್ ಬಂಧನ

​ಮಂಜೇಶ್ವರ: ಹೊಸಂಗಡಿಯ ಲಾಡ್ಜ್ ಒಂದರಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತನನ್ನು ಬೆದರಿಸಿ, ನಗ್ನಚಿತ್ರಗಳನ್ನು ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣದ ಮುಖ್ಯ ಸಂಚುಗಾರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿ ಪಿ.ಎಂ. ಅಬೂಬಕ್ಕರ್ (40) ಬಂಧಿತ ಆರೋಪಿ. ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ವಿಶೇಷ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದೆ.​ಈ ಪ್ರಕರಣದಲ್ಲಿ ಅಬೂಬಕ್ಕರ್ ಐದನೇ ಆರೋಪಿಯಾಗಿದ್ದಾನೆ. ​​ 2026ರ ಜನವರಿಯಲ್ಲಿ ಹೊಸಂಗಡಿ ಪೇಟೆಯ ಲಾಡ್ಜ್ ಒಂದರ ರೂಮ್ ನಂಬರ್ 206ರಲ್ಲಿ ಈ ಘಟನೆ ನಡೆದಿತ್ತು.​ ರೂಮಿನಲ್ಲಿದ್ದ ಯುವತಿ ಮತ್ತು…

Read More

ನಿಜದ ದೀಪವಾಗಬೇಕಾದ ಮಾಧ್ಯಮ: ಆತ್ಮರತಿಯ ಕನ್ನಡಿಯೇ? ಅಥವಾ ಸಮಾಜದ ಕಣ್ಣೇ?

​ಸಮಾಜವೆಂಬ ಮಹಾವೃಕ್ಷಕ್ಕೆ ಮಾಧ್ಯಮವು ಬೇರುಗಳಿಗೆ ನೀರೆಯುವ ಸಂಸ್ಕಾರವಾಗಬೇಕಿತ್ತು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ, ಸತ್ಯದ ಸೂರ್ಯರಶ್ಮಿಯನ್ನು ಕತ್ತಲ ಕೋಣೆಗಳಿಗೆ ತಲುಪಿಸಬೇಕಾದ ಈ ಪವಿತ್ರ ರಂಗವಿಂದು ಅನಿವಾರ್ಯ ಆತ್ಮಾವಲೋಕನದ ಹೊಸ್ತಿಲಲ್ಲಿ ನಿಂತಿದೆ. ಸಮಾಜದ ಕಣ್ಣಾಗಬೇಕಾದ ಕನ್ನಡಿ ಇಂದು ಕೇವಲ ವ್ಯಕ್ತಿಗತ ‘ಆತ್ಮರತಿ’ಯ ಬಿಂಬವಾಗಿ ಬದಲಾಗುತ್ತಿದೆಯೇ? ಜಗತ್ತಿನ ಅಂಕುಡೊಂಕುಗಳನ್ನು ತಿದ್ದುವ ಹೊಣೆ ಹೊತ್ತವರು ತಮ್ಮೊಳಗಿನ ಅಹಂಕಾರದ ಸುಳಿಗೆ ಸಿಲುಕಿ ವೃತ್ತಿಧರ್ಮವನ್ನೇ ಮರೆಯುತ್ತಿರುವುದು ಇಂದಿನ ಕಾಲದ ಬಹುದೊಡ್ಡ ವ್ಯಂಗ್ಯ.​ ವೃತ್ತಿಪರತೆಯ ಕೊರತೆ ಮತ್ತು ಹೊಣೆಗೇಡಿತನ ​ಇತ್ತೀಚೆಗೆ ನಡೆದ ಒಂದು ಘಟನೆ ನನ್ನನ್ನು ಗಾಢವಾಗಿ…

Read More

ಮೇ.೧೦ ಕೆಮ್ಮಾಯಿಯಲ್ಲಿ ಆರ್.ಕೆ ಸ್ಪೋಟ್ಸ್ ಮತ್ತು ಆರ್ಟ್ಸ್ ಕ್ಲಬ್‌ನಿಂದ ಉಚಿತ ಪುಸ್ತಕ ವಿತರಣೆ

ಪುತ್ತೂರು:ಆರ್‌ಕೆ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ಪುತ್ತೂರು ಇದರ ವತಿಯಿಂದ ವಿದ್ಯೆಯ ಹಾಡಿಗೆ ಪ್ರೇರಣೆಯ ಕೈ ಹಿಡಿತ ಎಂಬ ಧ್ಯೇಯ ವಾಕ್ಯದಲ್ಲಿ ೨೦೦ ವಿದ್ಯಾರ್ಥಿಗಳ:ಇಗೆ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವು ಮೇ.೧೦ರಂದು ಬೆಳಿಗ್ಗೆ ಕೆಮ್ಮಾಯಿ ಜಂಕ್ಷನ್‌ನಲ್ಲಿ ನಡೆಯಲಿದೆ ಎಂದು ಆಶೀರ್ ಕೆಮ್ಮಾಯಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.ಕ್ರೀಡೆ, ಕಲೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಉತ್ತೇಜನ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಆರ್‌ಕೆ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ಶಾಲಾ ಕಾಲೇಜು ಪ್ರಾರಂಭವಾಗುವ ಮುನ್ನ ಬಡ ವಿದ್ಯಾರ್ಥಿಗಳನ್ನು ಗುರುತಿಸಿ…

Read More

ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ನೀಡಲು ಸ್ಪೀಕರ್ ಸೂಚನೆ

ಕುಡಿಯುವ ನೀರಿನ ಯೋಜನೆಗಳಿಗೆ ವಿಳಂಬವಿಲ್ಲದೇ ವಿದ್ಯುತ್ ಸಂಪರ್ಕ ನೀಡಲು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಸೂಚಿಸಿದ್ದಾರೆ.ಅವರು ಗುರುವಾರ ಪ್ರಜಾ ಸೌಧ ದಲ್ಲಿ ಉಳ್ಳಾಲ ತಾಲೂಕು ಬರ ನಿರ್ವಹಣೆ ಮತ್ತು ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಲವೆಡೆ ಟ್ಯಾಂಕ್ ನಿರ್ಮಿಸಿ ಬೋರ್ ವೆಲ್ ಕೊರೆಯಲಾಗಿದ್ದರೂ ವಿದ್ಯುತ್ ಸಂಪರ್ಕ ವಿಳಂಬವಾಗಿ ನೀರು ಪೂರೈಕೆಗೆ ತೊಂದರೆಯಾಗುತ್ತಿವೆ. ಡೆಪಾಸಿಟ್ ಮೊತ್ತಕ್ಕೆ ಕಾಯದೆ, ವಿದ್ಯುತ್ ಸಂಪರ್ಕ ನೀಡಲು ಈಗಾಗಲೇ ಸರಕಾರ ಸೂಚಿಸಿದೆ. ಮುಂದೆ ಗ್ರಾಮ ಪಂಚಾಯತ್…

Read More

“ಇದು ಕೇವಲ ಲವ್ ಟ್ಯಾಪ್” — ಟ್ರಂಪ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ವಾಷಿಂಗ್ಟನ್:ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ತೀವ್ರಗೊಂಡಿದ್ದು, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ “ಇದು ಕೇವಲ ಲವ್ ಟ್ಯಾಪ್” ಎಂಬ ಹೇಳಿಕೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ನಡೆದ ಸೇನಾ ಚಟುವಟಿಕೆಗಳ ಹಿನ್ನೆಲೆ, ಇರಾನ್ ಅಮೆರಿಕದ ಯುದ್ಧನೌಕೆಗಳ ಮೇಲೆ ಕ್ಷಿಪಣಿ, ಡ್ರೋನ್ ಹಾಗೂ ವೇಗದ ದೋಣಿಗಳ ಮೂಲಕ ದಾಳಿ ನಡೆಸಲು ಯತ್ನಿಸಿದೆ ಎಂದು ವರದಿಯಾಗಿದೆ. ಆದರೆ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಎಲ್ಲಾ ದಾಳಿಗಳನ್ನು ಯಶಸ್ವಿಯಾಗಿ ತಡೆದಿದ್ದು, ಯಾವುದೇ ಹಾನಿಯಾಗಿಲ್ಲ ಎಂದು…

Read More
error: Content is protected !!