Headlines

ಮಲಪ್ಪುರಂನಲ್ಲಿ ಮತ್ತೆ ನಿಪಾ ವೈರಸ್.ಸಂಪರ್ಕ ಪಟ್ಟಿಯಲ್ಲಿ 49 ಮಂದಿ, ಮೂಲವನ್ನು ಕಂಡುಹಿಡಿಯಲು ಜಂಟಿ ಪರೀಕ್ಷೆ; ಆರೋಗ್ಯ ಸಚಿವೆ ವೀಣಾ ಜಾರ್ಜ್ ಭರವಸೆ.

ಮಲಪ್ಪುರಂನ ವಲಂಚೇರಿಯಲ್ಲಿ ನಿಪಾ ವೈರಸ್ ಇರುವುದು ದೃಢಪಟ್ಟಿದೆ.ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಅವರನ್ನು ಪೆರಿಂಥಲ್ಮನ್ನ ಇಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಗೆ ಸೂಕ್ತ ವಾದ ಔಷಧವನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು. ಸಂಪರ್ಕ ಪಟ್ಟಿಯಲ್ಲಿ 49 ಮಂದಿ. ಈ ಪ್ರದೇಶದಲ್ಲಿ 6 ಜನರಿಗೆ ಸಾದಾರಣ ಲಕ್ಷಣಗಳು ಕಂಡುಬಂದಿವೆ. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. 45 ಜನರು ಹೆಚ್ಚಿನ ಅಪಾಯದ ವರ್ಗದಲ್ಲಿದ್ದಾರೆ. ಈ ಪೈಕಿ 12 ಮಂದಿ ಮನೆಯಲ್ಲಿದ್ದಾರೆ. ರೋಗಲಕ್ಷಣಗಳನ್ನು ಹೊಂದಿರುವ…

Read More

ಮಂಗಳೂರು ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್​​, ಕೇಸ್​ ದಾಖಲಿಸುವಂತೆ ಆಕ್ರೋಶ

ಭಾರತ-ಪಾಕಿಸ್ತಾನ ಉದ್ವಿಗ್ನ ಸ್ಥಿತಿ ಹಿನ್ನೆಲೆ ದೇಶದೆಲ್ಲೆಡೆ ಹೈ ಅಲರ್ಟ್​ ಘೋಷಣೆ ಆಗಿದೆ. ಜನರು ಕೂಡ ಆತಂಕಗೊಂಡಿದ್ದಾರೆ. ಈ ಸಮಯದಲ್ಲಿ ಮಂಗಳೂರಿನ ವಿದ್ಯಾರ್ಥಿಯೊಬ್ಬರು ವಿವಾದಾತ್ಮಕ ಪೋಸ್ಟ್​ ಮಾಡುವ ಮೂಲಕ ನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡು ದೇಶಗಳಲ್ಲೂ ಯುದ್ಧದ ಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಟೈಮ್​ನಲ್ಲಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಶೇರ್ ಮಾಡುವ ಮೂಲಕ ಕಿಡಿ ಹೊತ್ತಿಸುವ ಕೆಲಸ ಮಾಡ್ತಿದ್ದಾರೆ.  ಮಂಗಳೂರು ವಿದ್ಯಾರ್ಥಿನಿಯಿಂದ dikkaraoperationsindura ಎಂಬ ಹ್ಯಾಶ್​ಟ್ಯಾಗ್​ ಬಳಸಿ ಎಂಬ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ….

Read More

ಮುಖದ ಮೇಲಿನ ಸುಕ್ಕು ಡಾರ್ಕ್ ಸರ್ಕಲ್ ಸಮಸ್ಯೆಗೆ, ಬೇಯಿಸಿದ ಆಲೂಗಡ್ಡೆಯ ಫೇಸ್ ಮಾಸ್ಕ್

ನಿಮ್ಮ ಮುಖ ಕನ್ನಡಿಯಂತೆ ಹೊಳೆಯಬೇಕೇ?, ಮುಖದ ಕಲೆಗಳೆಲ್ಲ ಮಾಯವಾಗಿ ಸುಂದರವಾಗಿ ಕಾಣಿಸಬೇಕೇ?, ಇದಕ್ಕೆ ಸುಲಭ ಪರಿಹಾರ ಹುಡುಕುತ್ತಿದ್ದರೆ ಆಲೂಗಡ್ಡೆ ಉತ್ತಮ ಆಯ್ಕೆಯಾಗಬಹುದು. ನೀವು ಮುಖದ ಕಲೆಗಳನ್ನು ಕಡಿಮೆ ಮಾಡಲು ಅಥವಾ ಸುಕ್ಕುಗಳನ್ನು ತಡೆಯಲು ಬಯಸುತ್ತೀರಾದರೆ ಬೇಯಿಸಿದ ಆಲೂಗಡ್ಡೆಯಿಂದ ಮಾಡಿದ ಫೇಸ್ ಪ್ಯಾಕ್ಗಳನ್ನು ಹಚ್ಚಿ ನೋಡಿ. ಆಲೂಗಡ್ಡೆಯಿಂದ ಮುಖದಲ್ಲಿ ಹೊಳಪು ತರಲು ಸಾಧ್ಯ. ಆದ್ದರಿಂದ ಆಲೂಗಡ್ಡೆ ಅಡುಗೆಮನೆಗೆ ಮಾತ್ರ ಸೀಮಿತವಲ್ಲ. ಸೌಂದರ್ಯವರ್ಧಕವಾಗಿಯೂ ಸಹಕಾರಿ. ಆಲೂಗಡ್ಡೆ ರಸವು ಚರ್ಮದ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿದ್ದು ಅದು ಮುಖದಿಂದ ಕಲೆಗಳನ್ನು ತೆಗೆದುಹಾಕಲು…

Read More

ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆ: ಐಪಿಎಲ್‌ 2025 ರದ್ದು, ಬಿಸಿಸಿಐ ಮಹತ್ವದ ಘೋಷಣೆ!

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಇಂಡಿಯನ್‌ ಪ್ರಿಮಿಯರ್‌ ಲೀಗ್‌ (ಐಪಿಎಲ್)‌ 2025 ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಇಂಡಿಯನ್‌ ಪ್ರಿಮಿಯರ್‌ ಲೀಗ್‌ (ಐಪಿಎಲ್)‌ 2025 ಪಂದ್ಯಾವಳಿಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಪಹಲ್ಗಾಮ್‌ ಭಯೋತ್ಪಾದಕ ದಾಳಿ…

Read More

ಧ್ವಜಾರೋಹಣದೊಂದಿಗೆ ನಾಂದಿಯಾದ ಉದ್ಯಾವರ ಮಾಡ ಜಾತ್ರಾ ಆಯನ.

ಮಂಜೇಶ್ವರ. ಇತಿbಹಾಸ ಪ್ರಸಿದ್ಧ ಉದ್ಯಾವರ ಶ್ರೀ ಅರಸು ಮಂಜಿಷ್ಟಾ ರ್ ಕ್ಷೇತ್ರದ ವರ್ಷಾವಧಿ ಉತ್ಸವ ಮತ್ತು ಐತಿಹಾಸಿಕ ಬಂಡಿ ಉತ್ಸವದ ಆಯನವು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ನಿನ್ನೆ ರಾತ್ರಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿಗಳು, ಕ್ಷೇತ್ರದ ಆಚಾರ ಕೋಲಪಟ್ಟವರು, ಗಡಿ ಪ್ರಧಾನರು, ಗುರಿಕಾರರು, ಹತ್ತು ಸಮಸ್ತರು, ಆಡಳಿತ ಸಮಿತಿ ಮತ್ತು ಉತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಧಾರ್ಮಿಕತೆಯೊಂದಿಗೆ ಮತಸೌಹಾರ್ದತೆಗೆ ಪ್ರಸಿದ್ಧಿಯನ್ನು ಪಡೆದ ಈ ಕ್ಷೇತ್ರದಲ್ಲಿ ಮೇ 14…

Read More

ಭಾರತೀಯ ಸೇನೆಯ “ವಿಕ್ರಾಂತ್” ಯುದ್ಧ ನೌಕೆಯಿಂದ ಪಾಕಿಸ್ತಾನ್ ಕರಾಚಿಯ ಬಂದರು ಪುಡಿ ಪುಡಿ.

ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನವು ಭಾರತದ ಮೇಲೆ ನಡೆಸಲೆತ್ನಿಸಿದ ಪ್ರತೀಕಾರದ ದಾಳಿ ಇದೀಗ ಅದಕ್ಕೇ ತಿರುಗು ಬಾಣವಾಗಿ ಪರಿಣಮಿಸಿದೆ, ಭಾರತೀಯ ಸೇನೆಯು ಲಾಹೋರ್‌, ಕರಾಚಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ತನ್ನ ರಣಾರ್ಭಟ ಮಾಡಿದೆ. ಆಪರೇಷನ್ ಸಿಂದೂರು ಗೆ ಪ್ರತೀಕಾರವಾಗಿ ಪಾಕಿಸ್ತಾನವು ಜಮ್ಮು ಕಾಶ್ಮೀರದ ಮೇಲೆ ಡ್ರೋನ್ ನಡೆಸಿತ್ತು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಭಾರತವು ಸಿಯಾಲ್‌ಕೋಟ್ ಮತ್ತು ಲಾಹೋರ್‌ ಜೊತೆಗೆ ರಾಜಧಾನಿ ಇಸ್ಲಾಮಾಬಾದ್‌, ಕರಾವಳಿ ನಗರವಾದ ಕರಾಚಿ ಮೇಲೂ ಭಾರತ ಡ್ರೋನ್ ದಾಳಿ ಪ್ರಾರಂಭಿಸಿದೆ. ಅರಬ್ಬಿ…

Read More

ಮಂಜೇಶ್ವರದ ಮಚ್ಚೆಂಪಾಡಿಯಲ್ಲಿ ಸ್ಮಾರ್ಟ್ ಅಂಗನವಾಡಿ ಕಟ್ಟಡಕ್ಕೆ ಶಿಲನ್ಯಾಸ

ಮಂಜೇಶ್ವರ : ಮಂಜೇಶ್ವರ ಪಂಚಾಯತು ವ್ಯಾಪ್ತಿಯ ಮಚ್ಚಂಪಾಡಿಯಲ್ಲಿ ಮಹಿಳಾ ಮತ್ತು ಮಕ್ಕಳಿಗಾಗಿ ಮಂಜೇಶ್ವರ ಗ್ರಾಮ ಪಂಚಾಯತಿನ ಅನುಮತಿ ಮೇರೆಗೆ KDB ವತಿಯಿಂದ ಸುಮಾರು 34 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸ್ಮಾರ್ಟ್ ಅಂಗನವಾಡಿ ಕಟ್ಟಡದ ಶಿಲಾನ್ಯಾಸವನ್ನು ಪಂಚಾಯತು ಅಧ್ಯಕ್ಷೆ ಜೀನ್ ಲೆವಿನೋ ಮೊಂತೆರೋ ನಿರ್ವಹಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಕ್ ಎಂ ಅಧ್ಯಕ್ಷ ತೆ ವಹಿಸಿದರು. ಸಮಾರಂಭದಲ್ಲಿ ಜನಪ್ರತಿನಿಧಿಗಳಾದ ಕಮಲಾಕ್ಷಿ , ಯಾದವ ಬಡಾಜೆ,ಮುಂತಾಸ್ ಸಮೀರ,ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬೀನಾ ಕೆ,…

Read More

ಪಳ್ಳಿಕೆರೆ ದೇವರ ಮನೆ ಶ್ರೀ ರವಳನಾಥ ಅಮ್ಮನವರ ಮಹಿಷಾ ಮರ್ದಿನಿ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಚಂಡಿಕಾಯಾಗ ಪೂರ್ಣ.

ಕಾಸರಗೋಡಿನ ಪಳ್ಳಿಕೆರೆ ಶಕ್ತಿನಗರ ದೇವರಮನೆ ಶ್ರೀ ರವಳನಾಥ ಅಮ್ಮನವರು ಮಹಿಷಮರ್ದಿನೀ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದಲ್ಲಿ ಬ್ರಮ್ಮಕಲಶೋತ್ಸವ ಮತ್ತು ಸಹಸ್ರ ಚಂಡಿಕಾ ಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಂದ ಬ್ರಮ್ಮ ಶ್ರೀ ಕುಂಟಾರು ಶ್ರೀ ರವೀಶ್ ತಂತ್ರಿ ಗಳ ನೇತೃತ್ವ ದಲ್ಲಿ ಸಂಪನ್ನ ಗೊಂಡಿತು. ಮೇ 1 ರ ಗುರುವಾರ ಬೆಳಿಗ್ಗೆಗಣಪತಿ ಹೋಮದ ನಂತರ ವೃಷಭ ಲಗ್ನ ದಲ್ಲಿ ಶ್ರೀ ದೇವರಿಗೆ ಬ್ರಮ್ಮಕಲಾಶಭಿಷೇಕ ನಡೆಯಿತು.ಮೇ 2 ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ವಿವಿಧ…

Read More

“ಭಾವೈಕ್ಯತೆಯ ಕೊಂಡಿಯ0ತಿರುವ ಉದ್ಯಾವರ ಜಾತ್ರೆಗೆ ಇಂದು ಕೊಡಿ”

ಕಾಸರಗೋಡು ಜಿಲ್ಲೆಯ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಹಿಂದೂ ಮುಸ್ಲಿಂ ಭಾವೈಕತೆಗೆ ದೇಶದಲ್ಲೇ ಗಮನ ಸೆಳೆದ ಶೃದ್ಧಾ ಕೇಂದ್ರವಾಗಿದೆ. ಇಲ್ಲಿನ ಮಹಿಮೆಯ ರೋಚಕ ಕಥೆಗಳು ಭಾವುಕರನ್ನು ತಲೆತೂಗಿಸುವಷ್ಟು ಆಕರ್ಷಿತವಾಗಿದೆ.ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಠರನ್ನು ರಕ್ಷಿಸಲು ಶ್ರೀಮನ್ ನಾರಾಯಣ ದೇವರು ದೇವಲೋಕದಿಂದ ಅಣ್ಣ ಮತ್ತು ತಮ್ಮ ದೈವರನ್ನು ಕೊರಳು ತುಂಬ ಮಲ್ಲಿಗೆಯನ್ನು ಸೊಂಟ ತುಂಬಾ ಕೇದಗೆ ಹೂವಿನಲ್ಲೂ ಏಳೇಳು ಕಡಲ ಮಧ್ಯೆ ಇರುವ ಹಾಲಿನ ಕಡಲಿನಲ್ಲಿ ಸೃಷ್ಟಿಸಿ ಮಾಯದ ಹಡಗಿನಲ್ಲಿ ವೇಣೂರಿಗೆ…

Read More

ಉಗ್ರರ ಹಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ “ಸಿಂಧೂರ” ಮಾನವೀಯತೆ ಮೆರೆದ ಭಾರತೀಯ ಸೇನೆ

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸೇನೆ ಬಹಳ ಬುದ್ಧಿವಂತಿಕೆಯಿ0ದ ಹಾಗೂ ಯೋಜಿತ ಕಾರ್ಯದೊಂದಿಗೆ ತಕ್ಕ ಉತ್ತರ ನೀಡಿ ಪಾಕಿಸ್ಥಾನದ ವಿರುದ್ಧ ಪ್ರತೀಕಾರ ಆರಂಭಿಸಿದೆ.ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 26 ಭಾರತೀಯರು ಸಾವನ್ನಪ್ಪಿದ್ದು ಇದರಲ್ಲಿ ಸಿಂಧೂರ ನಷ್ಟಗೊಳಿಸಿದವರಿಗೆ ಸಿಂಧೂರದ ಬೆಲೆ ಏನೆಂಬುದನ್ನು ಅಪರೇಷನ್ ಸಿಂಧೂರದ ಮೂಲಕ ತಿಳಿಸಿದೆ. ಮೇ17ರ ಬುಧವಾರ ನಸುಕಿನ ವೇಳೆ ಅಪರೇಷನ್ ಸಿಂಧೂರ ಅಡಿಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ಭಯೊತ್ಪಾಧನೆಯನ್ನ ಪ್ರೋತ್ಸಾಹಿಸುತ್ತಿರುವ ಜೈಶ್.ಎ-ಮೊಹಮ್ಮದ್ ,ಲಷ್ಕರ್-ಎ-ತೊಯ್ಬ,ಸಂಘಟನೆಯನ್ನ…

Read More
error: Content is protected !!