Headlines

ಉದ್ಯಾವರ ಮಾಡ ಕ್ಷೇತ್ರ ಮಹಾದ್ವಾರ ಲೋಕಾರ್ಪಣೆ

ಇತಿಹಾಸ ಪ್ರಸಿದ್ಧ ಉದ್ಯಾವರ ಮಾಡ ಕ್ಷೇತ್ರದ ಮಹಾದ್ವಾರ ಇಂದು ಲೋಕಾರ್ಪಣೆ ಗೊಂಡಿದೆ. ಈ ಮೊದಲು ಇದ್ದ ದ್ವಾರ ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೆರವುಗೊಂಡಿದ್ದು ನಂತರ ಸುಸಜ್ಜಿತ ದ್ವಾರದ ಬಗ್ಗೆ ಭಕ್ತರು ಒಲವು ವ್ಯಕ್ತಪಡಿಸಿದ್ದರು.ಈ ಪ್ರಕಾರವಾಗಿ ಸರ್ವರ ಸಹಕಾರದಿಂದ ಕೊಡುಗೈ ದಾನಿ ಕೇಶವ ಶಂಕರ ಆಳ್ವರು ದ್ವಾರದ ವೆಚ್ಚವನ್ನು ಭರಿಸಿ ಅತ್ಯಾಕರ್ಷಣೆಯಾದ ದ್ವಾರವನ್ನು ನಿರ್ಮಿಸಿಕೊಟ್ಟರು. ಲೋಕಾರ್ಪಣೆ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಾಜೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳು, ಮಾಡ ಕ್ಷೇತ್ರದ ಆಚಾರಕ್ಕೊಳಪಟ್ಟವರು, ದೇವಸ್ವಂ ಬೋರ್ಡ್ನಕಮಿಷನರ್ ಶ್ರೀ ಬಿಜು, ಸಹಾಯಕ ಕಮಿಷನರ್…

Read More

ಚಲಿಸುತಿದ್ದ ಕರ್ನಾಟಕ ಸಾರಿಗೆ ಬಸ್ಸಿನಿಂದ ರಸ್ತಗೆಸೆಯಲ್ಪಟ್ಟು ಪ್ರಯಾಣಿಕ ಗಂಭೀರ

ಮಂಜೇಶ್ವರ : ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಪ್ರಯಾಣಿಕರನ್ನು ಹೇರಿ ಕೊಂಡು ಸಾಗುತಿದ್ದ ಕರ್ನಾಟಕ ಸಾರಿಗೆ ಬಸ್ಸು ತೂಮಿನಾಡು ಜಂಕ್ಷನ್ ತಲುಪುತಿದ್ದಂತೆ ಬಾಗಿಲಿನ ಸಮೀಪದಲ್ಲಿ ನಿಂತಿದ್ದ ಪ್ರಯಾಣಿಕರೊಬ್ಬರು ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟು ಗಂಭಿರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗಾಯಾಳುವನ್ನು ಕುಂಜತ್ತೂರು ಸನ್ನಡ್ಕ ಪರಿಸರವಾಸಿ ಶಿವರಾಜ್ ಎಂಬುದಾಗಿ ತಿಳಿದು ಬಂದಿದೆ. ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಬಾಗಿಲುಗಳನ್ನು ಮುಚ್ಚದೆ ಪ್ರಯಾಣಿಕರನ್ನು ಹೇರಿಕೊಂಡು ಹೋಗುತ್ತಿರುವುದು ಇಂತಹ ಅಪಘಾತಗಳಿಗೆ ಕಾರಣವಾಗುತ್ತದೆ. ಸ್ಥಳೀಯರು ಬಸ್ಸನ್ನು ಕೆಲ ಸಮಯ ತಡೆದು ನಿಲ್ಲಿಸಿ ಬಳಿಕ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿದ…

Read More

ಕುಂಬಳೆ ಯುವ ವ್ಯಾಪಾರಿ ಹಾಡುಹಗಲೇ ನೇಣಿಗೆ ಶರಣು.

ಕುಂಬಳೆ ಪೇಟೆಯ ಹೃದಯ ಭಾಗದಲ್ಲಿ ಜ್ಯೂಸ್ ವ್ಯಾಪಾರ ನಡೆಸುತ್ತಿದ್ದ ಸಂತೋಷ್ ಯಾನೆ ಸಂತು (38) ಹಾಡು ಹಗಲೇ ನೇಣಿಗೆ ಶರಣಾಗ್ಗಿದ್ದಾರೆ.ಕುಂಬಳೆ ಪೆರುವಾಡಿನ ಕೃಷ್ಣಪ್ರೇಮಾವತಿ ದಂಪತಿಯ ಪುತ್ರ ನಾದ ಇವರು ಇಂದು ಮದ್ಯಾನ ಅರಿಮಲ ಕಾಂಪ್ಲೆಕ್ಸ್ ನ ಮೇಲೆ ತೆರಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Read More

ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಬಾಯರು ಬೆರಿಪದವು ಘಟಕದ ವತಿಯಿಂದ ಮನೆ ಹಸ್ತಾಂತರ ಹಾಗೂ ಅನಾರೋಗ್ಯದ ಚಿಕಿತ್ಸೆಗಾಗಿ ಸಹಾಯಹಸ್ತ

ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಬಾಯರು ಬೆರಿಪದವು ಘಟಕದ ವತಿಯಿಂದ ಶ್ರೀ ರಾಮಮೂಲ್ಯ ರವರಿಗೆ ಮನೆ ಹಸ್ತಾಂತರ ಹಾಗೂ ಹಾಗೂ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿಯು ಅನಾರೋಗ್ಯದ ಚಿಕಿತ್ಸೆಗಾಗಿ ಶ್ರೀಮತಿ ಸಂಧ್ಯಾ ಬೆರಿಪದಾವು ಇವರಿಗೆ ಶ್ರೀ ಸದಾಶಿವ ಶೆಟ್ಟಿಯವರ ಸಹಾಯಹಸ್ತ ವಿತರಿಸಲಾಯಿತು

Read More

ಚಲಿಸುತಿದ್ದ ಲಾರಿಯ ಹಿಂಬಾಗಕ್ಕೆ ಸ್ಕೂಟರ್ ಡಿಕ್ಕಿ : ಸ್ಕೂಟರ್ ಸವಾರನ ದಾರುಣ ಅಂತ್ಯ

ಮಂಜೇಶ್ವರ : ಚಲಿಸುತ್ತಿದ್ದ ಲಾರಿಯ ಹಿಂಬಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಮಂಗಳವಾರ ಬೆಳಿಗ್ಗೆ 9.10 ರ ಸುಮಾರಿಗೆ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಉಪ್ಪಳ ಐಲ ನಿವಾಸಿ ಉಮೇಶ್ ಹಾಗೂ ಸರೋಜಿನಿ ದಂಪತಿಗಳ ಪುತ್ರ ಕಲ್ಪೇಶ್ ಯು. ಉಚ್ಚಿಲ್ (35) ಸಾವನ್ನಪ್ಪಿದ ದುರ್ದೈವಿ.ಉಪ್ಪಳ ಭಾಗದಿಂದ ಕೆ ಸಿ ರೋಡ್ ನಲ್ಲಿರುವ ಪೇಪರ್ ಮಿಲ್ಲ್ ಗೆ ಕೆಲಸಕ್ಕೆ ತೆರಳುತ್ತಿರುವ ಮಧ್ಯೆ ಸ್ಕೂಟರ್ ನಿಯಂತ್ರಣ ತಪ್ಪಿ ಎದುರಿನಿಂದ ಸಂಚರಿಸುತಿದ್ದ…

Read More

ಮಾದಕ ವಸ್ತು ಮಾರಾಟದ ಹಲವು ಪ್ರಕರಣದ ಮುಖ್ಯ ಆರೋಪಿ ಮಂಜೇಶ್ವರದ ಯುವಕ ಬಂಧನ

ಮಂಜೇಶ್ವರ; ಹಲವು ಮಾದಕ ವಸ್ತು ಪ್ರಕರಣಗಳಲ್ಲಿ ಆರೋಪಿಯಾದ ಮುಳಿಂಜ ಪತ್ವಾಡಿಯ ಅಸ್ಕರ್ ಅಲಿ (27)ಎಂಬಾತನನ್ನು ಪಿಟ್ ಎನ್‌ಡಿಪಿಎಸ್ ಪ್ರಕಾರ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದಲ್ಲಿ 3.407 ಕಿಲೋ ಗ್ರಾಂ ಕೊಕೈನ್ ವಶಪಡಿಸಿದ ಪ್ರಕರಣ ಹಾಗೂ ಮೇಲ್ಪರಂಬಪೊಲೀಸರು 49.30 ಗ್ರಾಂ ಎಂಡಿಎಂಎ ವಶಪಡಿಸಿದಪ್ರಕರಣದಲ್ಲಿ ಅಸ್ಕ‌ರ್ ಅಲಿ ಮುಖ್ಯ ಆರೋಪಿಯೆಂದುಪೊಲೀಸರು ತಿಳಿಸಿದ್ದಾರೆ. ಈತ ಕೇರಳ ಹಾಗೂ ಕರ್ನಾಟಕ ಕೇಂದ್ರೀಕರಿಸಿ ಕಾರ್ಯಾಚರಿಸುವ ಮಾದಕ ವಸ್ತು ದಂಧೆಯ ಮುಖ್ಯ ಕೊಂಡಿಯಾಗಿದ್ದಾನೆ. ಅಲ್ಲದೆ ಹಲವು ಬಾರಿ ಈತ ಮಾದಕ ವಸ್ತುಗಳನ್ನು ಇತ್ತ ಸಾಗಿಸಿರುವುದಾಗಿ ಸೂಚನೆ…

Read More

ಕೋಮರಾಯ ಚಾಮುಂಡೇಶ್ವರಿ ಪುದ್ವಾರ್ ಮೆಚ್ಚಿ ನೆಮೋತ್ಸವ ಮೇ 8 ರಂದು.

ಕಾಸರಗೋಡು ಪಾಯ್ಯರಂಬೆ ಕಂಬಾರ್ ಹತ್ತು ಸಮಸ್ತರ ಶ್ರೀ ಕೋಮರಾಯ ಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಪುದ್ವಾರ್ ಮೆಚ್ಚಿ ನೆಮೋತ್ಸವ ಮೇ 8 ರ ಗುರುವಾರ ನಡೆಯಲಿದೆ

Read More

ಇತಿಹಾಸ ಪ್ರಸಿದ್ಧ ಉದ್ಯಾವರ ಬಂಡಿ ಉತ್ಸವ ಮೇ 08 ರಿಂದ 14 ರವರೆಗೆ

ಮಂಜೇಶ್ವರ ಉದ್ಯಾವರ ದ ಇತಿಹಾಸ ಪ್ರಸಿದ್ಧ ಅರಸು ಮಂಜಿಷ್ಣಾರ್ ಕ್ಷೇತ್ರ ದ ವರ್ಷಾವದಿ ಉತ್ಸವ ಹಾಗೂ ಬಂಡಿ ಉತ್ಸವ ಮೇ 8 ರಿಂದ 14 ರವರೆಗೆ ನಡೆಯಲಿದೆ. 8 ರಂದು ರಾತ್ರಿ 8 ಗಂಟೆ ಗೆ ತಾಲಿಮು ಪ್ರದರ್ಶನ, ರಾತ್ರಿ 9 ಗಂಟೆ ಗೆ ಧ್ವಜಾರೋಹಣ. 10 ಗಂಟೆ ಗೆ ಕಂಚಿಲ ಸೇವೆ, ಕಟ್ಟೆ ದೀಪರಾಧನೆ9 ರಂದು ರಾತ್ರಿ 1 ಗಂಟೆ ಗೆ ಅಣ್ಣಾದೈವದ ನೇಮ, ಕೆರೆ ದೀಪರಾಧನೆ ಹಾಗೂ 10 ರಂದು ಬೆಳಿಗ್ಗೆ 9 ಗಂಟೆ…

Read More

ಮಂಜೇಶ್ವರದ ಚರ್ಚ್ ಬೀಚ್ ರಸ್ತೆಯಲ್ಲಿ ಮನೆಯಲ್ಲಿ ಕಳವು

ಮಂಜೇಶ್ವರ: ಮಂಜೇಶ್ವರದ ಚರ್ಚ್ ಬೀಚ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಭಾರೀ ಮೌಲ್ಯದ 22 ಪವನ್ ಆಭರಣಗಳನ್ನು ಕದ್ದೊಯ್ದಿದ್ದಾರೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿ ವಾಸವಾಗಿರುವ ನವೀನ್ ಮೊಂತೇರೊ ಎಂಬವರ ಮನೆಯಲ್ಲಿ ಕಳವು ನಡೆದಿದೆ.ಮನೆ ಮಾಲೀಕ ನವೀನ್ ಹಾಗೂ ಕುಟುಂಬ ಏಪ್ರಿಲ್ 21ರಂದು ಸಂದರ್ಶನ ವೀಸಾದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ತೆರಳಿದ್ದರು.ಇದೀಗ ಅವರು ಮನೆಗೆ ಹಿಂದಿರುಗಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಎರಡು ಮಹಡಿಗಳಿರುವ ಮನೆಗೆ ಹಿಂಭಾಗದ ಬಾಗಿಲನ್ನು ಒಡೆದು ಕಳ್ಳರು ಒಳನುಗ್ಗಿದ ಕಳ್ಳರು…

Read More

ಬಜ್ಪೆ ಕೊಲೆ ಪ್ರಕರಣಕ್ಕೆ ಸಂಬಂದಿಸಿದ 8 ಮಂದಿ ಆರೋಪಿಗಳ ಬಂಧನ

ಮಂಗಳೂರು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದ ರೌಡಿಶೀಟರ್ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಬ್ದುಲ್ ಸಫಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಝಾನ್ ಮತ್ತು ಆದಿಲ್ ಮೆಹರೂಫ್ ಬಂಧಿತ ಆರೋಪಿಗಳು. ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹಸಚಿವ ಜಿ. ಪರಮೇಶ್ವರ್, “ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ…

Read More
error: Content is protected !!