Headlines

ವರ್ಕಾಡಿ ಕಜೆ ಪ್ರದೇಶದಲ್ಲಿ ಭೀಕರ ಭೂಕುಸಿತ .ಅಪಾಯದ ಅಂಚಿನಲ್ಲಿ ಸ್ಥಳೀಯರು

ಮಂಜೇಶ್ವರ: ಮಂಜೇಶ್ವರದ ವರ್ಕಾಡಿ ಕಜೆ ಪ್ರದೇಶದಲ್ಲಿ ಭೂಮಿ ಕುಸಿದು ಅಪಾಯದ ಸ್ಥಿತಿ ಉಂಟಾಗಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಭೂಕುಸಿತದ ಪರಿಣಾಮವಾಗಿ ಸುಮಾರು 10 ಮೀಟರ್ ಆಳದ ಎರಡು ದೊಡ್ಡ ಗುಂಡಿಗಳು ಸೃಷ್ಟಿಯಾಗಿದೆ. ಈ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಭೂಮಿ ಕುಸಿದಿದ್ದು, ಆ ಭಾಗದ ನೆಲ ಬಿರುಕು ಬಿಟ್ಟಿದೆ. ಈ ಕಾರಣದಿಂದಾಗಿ ಸ್ಥಳೀಯ ನಿವಾಸಿಗಳಾದ ಅವ್ವಮ್ಮ, ಅಸಿಯಮ್ಮ, ಅಹ್ಮದ್ ಕುಞಿ ಮೊಂಟಾದವರನ್ನು ಸ್ಥಳೀಯರ ಸಹಾಯದಿಂದ ಮೊದಲೇ…

Read More

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷಚೇತನರ ಸಮಸ್ಯೆ ಪರಿಹಾರಕ್ಕೆ ಶಾಸಕ ಮಂಜುನಾಥ ಭಂಡಾರಿ ಒತ್ತಾಯ!

ಕುಂದಾಪುರ: ಕುಂದಾಪುರ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ವಿಶೇಷಚೇತನರ ಪ್ರಮಾಣಪತ್ರ ಮಾಡಿಸಲು ಕುಂದಾಪುರ ಮತ್ತು ಬೈಂದೂರಿನ ಬೇರೆ ಬೇರೆ ಕಡೆಗಳಿಂದ ಬಂದಿದ್ದ ವಿಶೇಷಚೇತನರು ಪ್ರಮುಖ ಶಸ್ತ್ರಚಿಕಿತ್ಸಕ ವೈದ್ಯರು ಲಭ್ಯವಾಗದ ಕಾರಣ ಪ್ರಮಾಣಪತ್ರ ಸಿಗದೆ ನಿರಾಶರಾಗಿ ವಾಪಸ್ ಆದ ಘಟನೆ ಇತ್ತೀಚಿಗೆ ನಡೆದಿದ್ದು ಕೂಡಲೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ವೈದ್ಯರನ್ನು ನೇಮಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಪತ್ರಮುಖೇನ ಒತ್ತಾಯಿಸಿದ್ದಾರೆ….

Read More

ಪೊಲೀಸರ ಮಿಂಚಿನ ಕಾರ್ಯಕ್ಕೆ ತಗಲು ಹಾಕಿಕೊಂಡ ಮಾಸ್ಟರ್ ಮೈಂಡ್ ರೋಹನ್ ಸಾಲ್ಡಾನ ಬಂಧನ

ಮಂಗಳೂರು: ಸಾಲ ಕೊಡುವ ಆಮಿಷವೊಡ್ಡಿ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳಿಂದ 200 ಕೋಟಿಗೂ ಅಧಿಕ ಹಣವನ್ನು ವಂಚಿಸಿದ ಆರೋಪಿ ರೋಹನ್ ಸಲ್ಡಾನಾ (45) ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಗುರುವಾರ ರಾತ್ರಿ ತನ್ನ ಐಷಾರಾಮಿ ಬಂಗಲೆಯಲ್ಲಿ ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಂಗಲೆಯಲ್ಲಿ ಗುಪ್ತ ಕೊಠಡಿ (ಹೈಡ್ ಔಟ್ ರೂಮ್) ಇರುವುದು ಕೂಡ ಪತ್ತೆಯಾಗಿದೆ. ರೋಹನ್ ಸಲ್ಡಾನಾ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು, ಭೂ ವ್ಯವಹಾರ ಮತ್ತು ಉದ್ಯಮದಲ್ಲಿ…

Read More

ಕೇರಳ ಸ್ಥಳೀಯಾಡಳಿತ ಚುನಾವಣಾ ಸನ್ನಿಹಿತ : ಎಡರಂಗ ಸರಕಾರಕ್ಕೆ ಸವಾಲುಗಳ ಸರಮಾಲೆ

ತಿರುವನಂತಪುರಂ : ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯೆಂದೇ ವ್ಯಾಖ್ಯಾನಿಸಲಾಗುವ ತ್ರಿಸ್ತರ ಪಂಚಾಯತ್ ನ ಸ್ಥಳೀಯಾಡಳಿತ ಚುನಾವಣೆಗಳು ಬಹುತೇಕ ಸೆಪ್ಟೆಂಬರ್ ಒಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ. ಇದಕ್ಕೆ ಬೇಕಾಗಿ ಚುನಾವಣಾ ಆಯೋಗವು ವಾರ್ಡ್ ವಿಭಜನೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ಮಗ್ನವಾಗಿದೆ. 2026 ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿರುವ ಎಡರಂಗ ಸರಕಾರಕ್ಕೆ ಸ್ಥಳೀಯಾಡಳಿತ ಚುನಾವಣೆಯ ಸಮಯ ಸನ್ನಿಹಿತವಾಗುವ ಸಮಯದಲ್ಲೇ ಒಂದೊಂದೇ ಸವಾಲುಗಳು ಎದುರಾಗುತ್ತಿದೆ. ಇದು ಆಡಳಿತ ಪಕ್ಷದ…

Read More

ಕುಟ್ಟಿ ತೆಯ್ಯಂ-ಆದಿ ಮತ್ತು ವೇಡನ್ ತೆಯ್ಯಂ

ಆಟಿ ಮಾಸವನ್ನು ‘ಕರ್ಕಟಕ’ ಮಾಸವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಉತ್ತರ ಮಲಬಾರ್ ಭಾಗದಲ್ಲಿ ಅದರಲ್ಲೂ ಪ್ರಮುಖವಾಗಿ ಕಾಸರಗೋಡು ಮತ್ತು ಕಣ್ಣೂರ್ ಈ ಭಾಗದಲ್ಲಿ ದೈವಾರಾಧನೆಗಳು ದೇವಾಲಯಗಳಲ್ಲಿ ನಡೆಯುವುದು ಬಹುತೇಕ ವಿರಳವಾಗಿರುತ್ತದೆ. ಶೂನ್ಯ ಮಾಸದಲ್ಲಿ ಕೋಲಗಳನ್ನು ಕಟ್ಟಿ ಆಡಿಸುವ ಸಂಪ್ರದಾಯ ತುಂಬಾ ಕಡಿಮೆ. ಕಲಶ ಮಹೋತ್ಸವದ ಬಳಿಕ ಯಾವುದೇ ಕಳಿಯಾಟಗಳು, ದೈವಕಟ್ಟುಗಳು ನಡೆಯುವುದಿಲ್ಲ ಮುಂದಿನ ತುಲಾ ಹತ್ತು ಬರುವ ತನಕ. ಆದರೆ ಈ ನಡುವೆಯೂ ಕೂಡ ಒಂದು ವೈಶಿಷ್ಟವಾದ ದೈವರಾಧನೆಗಳು ನಡೆಯುತ್ತದೆ. ಆದರೆ ಇದು ವಯಸ್ಕರ ಕಟ್ಟಿ ಆಡುವ…

Read More

ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಡ್ರಗ್ಸ್ ವ್ಯಾಪಕ , ರಾಜಕೀಯ ನಾಯಕರು ಶಾಮೀಲಾಗಿರುವ ಸಾಧ್ಯತೆ .ಪತ್ರಿಕಾಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ ಶಾಸಕ ವೈ ಭರತ್ ಶೆಟ್ಟಿ :

ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಸಾಕಷ್ಟು ವಿದ್ಯಾ ಕೇಂದ್ರಗಳಿವೆ.ಆದರೆ ಈ ಭಾಗದಲ್ಲಿನ ಡ್ರಗ್ಸ್ ಹಾವಳಿಗೆ ಅನೇಕ ಯುವಕರು ಬಲಿಯಾಗುತ್ತಿದ್ದಾರೆ ಇದನ್ನು ಸರಕಾರ ತಡೆಯುವಲ್ಲಿ ವಿಫಲವಾಗಿದೆ. ಈ ಭಾಗಗಳಿಗೆ ತೆಲಂಗಾಣ,ಮಹಾರಾಷ್ಟ್ರ,ಕೇರಳ ಭಾಗದಿಂದ ಡ್ರಗ್ಸ್ ಪೂರೈಕೆಯಾಗುತ್ತಿದೆ.ಕರ್ನಾಟಕ ಸರಕಾರದಿಂದ ಡ್ರಗ್ಸ್ ಜಾಲವನ್ನು ಸರಿಯಾಗಿ ಬೇಧಿಸುವ ಪ್ರಯತ್ನಗಳು ನಡೆಯುತ್ತಿಲ್ಲ ಜೊತೆಗೆ ರಾಜಕೀಯ ನಾಯಕರು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳು ಆತಂಕಕಾರಿ ವಿಷವಾಗಿದೆ ಎಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಉತ್ತರ ವಲಯದ ಶಾಸಕರಾದ ವೈ ಭರತ್ ಶೆಟ್ಟಿ ಆತಂಕ ವ್ಯಕ್ತಪಡಿಸಿದರು . ಸುದ್ದಿಗೋಷ್ಠಿಯಲ್ಲಿ…

Read More

ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಗುಡ್ಡ ಕುಸಿದು ಮನೆಗೆ ಹಾನಿ. ಮನೆಯವರು ಪ್ರಾಣಾಪಾಯದಿಂದ ಪಾರು

ಕಾಸರಗೋಡು : ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ವರುಣನ ಆರ್ಭಟಕ್ಕೆ ಜನರು ಅಕ್ಷರಶಹ ತತ್ತರಿಸಿ ಹೋಗಿದ್ದಾರೆ . ಗಡಿನಾಡು ಕಾಸರಗೋಡಿನಲ್ಲಿ ನಡೆದ ಘಟನೆ ನಿದ್ರೆಯಲ್ಲಿದ್ದವರಿಗೆ ಒಂದು ಕ್ಷಣ ಯವಲೋಕದ ದರ್ಶನವನ್ನೇ ಮಾಡಿಸಿದೆ .ಹಂಚು ಹಾಕಿದ ಮನೆಯ ಮೇಲೆಯೇ ಗುಡ್ಡ ಕುಸಿದು ಮನೆ ಭಾಗಶಃ ಹಾನಿಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಚಂದ್ರಗಿರಿಯ ನಡಕ್ಕಾಲ್ ಎಂಬಲ್ಲಿ ನಡೆದಿದೆ . ಚಂದ್ರಗಿರಿ ನಡಕ್ಕಾಲ್ ಗ್ರಾಮದಲ್ಲಿ ವಾಸಿಸುವ ಮಿತೇಶ್ ಎಂಬವರ ಮನೆಗೆ ಸಮೀಪದ ಗುಡ್ಡ ನಿನ್ನೆ ರಾತ್ರಿ ಸುರಿದ ಭೀಕರ ಮಳೆಗೆ ಕುಸಿದಿದೆ…

Read More

ಧಾರಾಕಾರವಾಗಿ ಸುರಿಯುವ ಮಳೆಯಿಂದ ಮಂಜೇಶ್ವರದ ಹಲವೆಡೆ ಮನೆ, ಮಸೀದಿ, ವಿದ್ಯಾಸಂಸ್ಥೆಗಳು ಜಲಾವೃತ

ಮಂಜೇಶ್ವರ : ಧಾರಾಕಾರವಾಗಿ ಸುರಿಯುವ ಮಳೆಯಿಂದ ಮಂಜೇಶ್ವರದ ಹಲವೆಡೆ ಮನೆ, ಮಸೀದಿ, ವಿದ್ಯಾಸಂಸ್ಥೆಗಳು ಜಲಾವೃತಗೊಂಡಿದೆಕಳೆದ ಕೆಲವು ದಿನಗಳಿಂದ ಮಂಜೇಶ್ವರ ಉಪ್ಪಳಗಳಲ್ಲಿ ಪ್ರಳಯ ಸಂಭವಿಸಲು ಸಾಧ್ಯತೆ ಇರುವ ಬಗ್ಗೆ ಸಂಬಂಧ ಪಟ್ಟ ಇಲಾಖೆ ಸೂಚನೆ ನೀಡಿದ್ದರೂ ಇದಕ್ಕೆ ಬೇಕಾಗಿ ಪೂರ್ವ ಸಿದ್ಧತೆಗಳನ್ನು ನಡೆಸಬೇಕಾಗಿದ್ದ ಸ್ಥಳೀಯಾಡಳಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವನ್ನು ಪಾಲಿಸಿರುವುದಾಗಿ ಆರೋಪ ಕೇಳಿ ಬಂದಿದೆ. ಕಳೆದ ರಾತ್ರಿ ಸುರಿದ ಬಿರುಸಿನ ಮಳೆಗೆ ವರ್ಕಾಡಿ ಪಂಚಾಯತು ವ್ಯಾಪ್ತಿಯ ಎರಡನೇ ವಾರ್ಡಿನಲ್ಲಿರುವ ಮುಡಿಮಾರು – ಬೇಕರಿ ರಸ್ತೆ ಪೂರ್ಣವಾಗಿ ಕುಸಿದು…

Read More

ರಸ ಗೊಬ್ಬರದ ಬೆಲೆಏರಿಕೆ : ರೈತಸಂಘದ ಪ್ರತಿಭಟನೆ

ಕೇಂದ್ರದ ಮೋದಿ ಸರಕಾರವು ರಾಸಾಯಿನಿಕ ಗೊಬ್ಬರಗಳ ಬೆಲೆ ಯನ್ನು ವಿಪರೀತವಾಗಿ ಹೆಚ್ಚಿಸಿದನ್ನು ಪ್ರತಿಭಟಿಸಿಕೊಂಡು ರೈತ ಸಂಘ(AIKS) ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಪೈವಳಿಕೆ ಅಂಚೆ ಕಚೇರಿಗೆ ರೈತರ ಮಾರ್ಚ್ ಮತ್ತು ಧರಣಿ ನಡೆಯಿತು. ರೈತಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎ. ಚಂದ್ರಶೇಖರ್ ಉದ್ಘಾಟಿಸಿದರು. ಏರಿಯಾ ಅಧ್ಯಕ್ಷರಾದ ಅಬ್ದುಲ್ ರಸಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಗೀತಾ ಸಾಮಾಣಿ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ, ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಭಂಡಾರಿ, ಅಬ್ದುಲ್ಲ ಕೆ, ಶ್ರೀಮತಿ.ರಹಮತ್ ನೇತಾರರಾದ…

Read More

ಕಾ| ಲೋಕಯ್ಯ ಪೂಜಾರಿಯವರ 8 ನೇ ವಾರ್ಷಿಕ ಸಂಸ್ಮರಣೆ

ಉಪ್ಪಳ : ಕಾ| ಲೋಕಯ್ಯ ಪೂಜಾರಿ ಯವರ 8 ನೇ ವಾರ್ಷಿಕ ಸಂಸ್ಮರಣೆ ಬೇಕೂರು ಸುಭಾಷ್ ನಗರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಯ್ಯ ಪೂಜಾರಿಯವರ ಸಹೋದರರಾದ ಕೃಷ್ಣಪ್ಪ ಪೂಜಾರಿ ವಹಿಸಿದರು. ಕಾರ್ಯಕ್ರಮವನ್ನು ಸಿ.ಪಿ.ಐ (ಎಂ) ಲೋಕಲ್ ಕಮಿಟಿ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೋಳ್ಳಾರು ಉದ್ಘಾಟಿಸಿ ಮಾತನಾಡಿದರು. ಏರಿಯಾ ಕಮಿಟಿ ಸದಸ್ಯರಾದ ಡಿ.ಕಮಲಾಕ್ಷ ಲೋಕಲ್ ಕಮಿಟಿ ಸದಸ್ಯರಾದ ಪ್ರವೀಣ್,ಪಾರ್ವತಿ,ಸಜಾನ್, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ ಹಾಗೂ ಹಿರಿಯ ಕಮಿನಿಷ್ಟ್ ನೇತಾರ ದಾಮೋದರ್ ಕಣ್ಣಟಿಪಾರೆ ,ಯುವಶಕ್ತಿ…

Read More
error: Content is protected !!