ಕೇರಳ :ತೀವ್ರ ಗಾಳಿ ಮಳೆ ಮದ್ಯೆಯೂ ಕಾವೇರಿದ ರಾಜಕೀಯ ಚಟುವಟಿಕೆ .ಎಡ ಬಲ ರಂಗಗಳಿಗೆ ಕಬ್ಬಿಣದ ಕಡಲೆಕಾಯಿಯಾದ ಉಪಚುನಾವಣೆ .
ಕೇರಳದಲ್ಲಿ ಈ ಬಾರಿ ಮುಂಗಾರುಮಳೆ 15 ವರ್ಷಗಳ ನಂತರ ಸಕಾಲಕ್ಕೆ ಆರಂಭವಾಗಿ ತೀವ್ರವಾದ ಗಾಳಿ ಮಳೆಯ ಸಾಧ್ಯತೆಯ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಒಂದೆಡೆ ತೀವ್ರವಾದ ಗಾಳಿ ಮಳೆ ರಾಜ್ಯಾದ್ಯಂತ ಮುಂದುವರಿಯುತ್ತಿದ್ದು ,ಇನ್ನೊಂದೆಡೆ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ರಾಜ್ಯದ ನಿಲಂಬೂರ್ ಸಹಿತ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಕ್ಕೆ ಜೂನ್ 19ರಂದು ನಡೆಯುವ ಉಪಚುನಾವಣೆಗೆ ಚುನಾವಣಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದ ನಂತರ ರಾಜ್ಯದಲ್ಲಿ ಕಾವೇರಿದ ರಾಜಕೀಯ ಚಟುವಟಿಕೆಗಳು ಮುಂದುವರಿಯುತ್ತಿದೆ.ಜೂನ್ 23ರಂದು ಮತ ಎಣಿಕೆ…
