Headlines

ಗುರುಪುರ ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿಪಿಎಂ ನಿಯೋಗ ಬೇಟಿ

ಗುರುಪುರ ಹೋಬಳಿಯಲ್ಲಿರುವ ನಾಲ್ಕು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ, ಆರೋಗ್ಯ ಕೇಂದ್ರಗಳ ಔಷಧಿ ಮೂಲಭೂತ ಸೌಕರ್ಯಗಳ ಕೊರತೆಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಗುರುಪುರ ವಲಯ ಸಮಿತಿಯು ಸಮಿತಿಯನ್ನು ರಚಿಸಿದ್ದು ಈ ನಿಯೋಗವು ಗುರುಪುರ ಹೋಬಳಿಯಲ್ಲಿರುವ ಕುಪ್ಪೆಪದವು,ಗಂಜಿಮಠ, ಕೊಂಪದವು,ಕುಡುಪು ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿತು. ಗುರುಪುರ ಹೋಬಳಿಯಲ್ಲಿರುವ ನಾಲ್ಕು ಆರೋಗ್ಯ ಕೇಂದ್ರಗಳ ಪೈಕಿ ಕುಡುಪು ಮತ್ತು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು…

Read More

ಕೇರಳಂ ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ; ಕಳೆದ ಒಂದು ವಾರ ಲೋಡ್ ಶೆಡ್ಡಿಂಗ್ ಅಗತ್ಯವಾಗಿಲ್ಲ*

ರಾಜ್ಯದಲ್ಲಿ ವಿದ್ಯುತ್‌ ಕೊರತೆಯ ಪರಿಸ್ಥಿತಿ ಸದ್ಯ ಶಮನಗೊಂಡಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಯಾವುದೇ ವಿದ್ಯುತ್‌ ನಿಯಂತ್ರಣ (ಲೋಡ್ ಶೆಡ್ಡಿಂಗ್) ಜಾರಿಗೊಳಿಸುವ ಅಗತ್ಯ ಬಂದಿಲ್ಲ ಎಂದು ಕೆಎಸ್‌ಇಬಿ (KSEB) ತಿಳಿಸಿದೆ. ಪವರ್ ಎಕ್ಸ್‌ಚೇಂಜ್‌ನಿಂದ ಅಗತ್ಯ ಪ್ರಮಾಣದ ವಿದ್ಯುತ್‌ ಲಭ್ಯವಾಗಿದ್ದರಿಂದ ವಿದ್ಯುತ್‌ ನಿಯಂತ್ರಣವನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಕೆಎಸ್‌ಇಬಿ ತಿಳಿಸಿದೆ. ಆದರೆ ಮಳೆಯ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್‌ ಬಳಕೆ ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ. ರಾಜ್ಯದಲ್ಲಿ ವಿದ್ಯುತ್‌ ಬಳಕೆ ಏರಿಕೆಯಾಗುತ್ತಿದ್ದಂತೆ ಕೆಎಸ್‌ಇಬಿ ಈ ಹಿಂದೆ ವಿದ್ಯುತ್‌ ನಿಯಂತ್ರಣ ಜಾರಿಗೊಳಿಸಿತ್ತು….

Read More

ವಿಮಾ ಕ್ಷೇತ್ರಕ್ಕೆ ಸಹಕಾರಿ ಸಂಸ್ಥೆಗಳ ಎಂಟ್ರಿ; ಅಮಿತ್ ಶಾ ಘೋಷಿಸಿದ ಹೊಸ ಯೋಜನೆ

ನವದೆಹಲಿ, ಜುಲೈ 8: ಇನ್ಷೂರೆನ್ಸ್ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳು (Co-operative societies) ಎಂಟ್ರಿ ಕೊಡಲಿವೆ. ಭಾರತದಲ್ಲಿ ಕೃಷಿ ಮತ್ತು ಸಾಲ ಸೇವೆಗಳಿಗೆ ಸೀಮಿತವಾಗಿದ್ದ ಸಹಕಾರಿ ಕ್ಷೇತ್ರದ ವ್ಯಾಪ್ತಿ ಈಗ ವಿಸ್ತರಣೆ ಆಗಲಿದೆ. ಸಹಕಾರಿ ಸಂಸ್ಥೆಗಳು ಸೇರಿ ಭಾರತ್ ಟ್ಯಾಕ್ಸಿಯನ್ನು (Bharat Taxi) ನಡೆಸುತ್ತಿರುವ ರೀತಿಯಲ್ಲಿ ಸಹಕಾರಿ ಸಂಸ್ಥೆಗಳಿಗೆ ಇನ್ಷೂರೆನ್ಸ್ ಸೇವೆ ಒದಗಿಸುವ ಅವಕಾಶ ನೀಡಲು ಸರ್ಕಾರ ಯೋಜಿಸಿದೆ. ರೈತರ ಸಹಕಾರಿ ಸಂಸ್ಥೆಯಾದ IFFCO ಮತ್ತು ಟೋಕಿಯೋ ಇನ್ಷೂರೆನ್ಸ್ ಕಂಪನಿಗಳ ಸಹಭಾಗಿತ್ವದಲ್ಲಿ ಸ್ಥಾಪನೆಯಾದ IFFCO ಟೋಕಿಯೋ ಜನರಲ್…

Read More

ವಿಳಿಂಜಂ ಷೇರು ವರ್ಗಾವಣೆ ವಿಚಾರದಲ್ಲಿ ವಿರೋಧಪಕ್ಷ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು’; ಮುಖ್ಯಮಂತ್ರಿಗೆ ವಿರೋಧಪಕ್ಷ ನಾಯಕರ ಪತ್ರ

ವಿಳಿಂಜಂ ಬಂದರು ಷೇರು ವರ್ಗಾವಣೆ ವಿವಾದಕ್ಕೆ ಸಂಬಂಧಿಸಿ ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ಅದಾನಿ ಸಮೂಹವು ಕನ್ಸೆಷನ್ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿರುವುದನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಒಪ್ಪಂದ ಉಲ್ಲಂಘನೆ ಕುರಿತು ಸರ್ಕಾರ ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಷೇರು ವರ್ಗಾವಣೆಯಿಂದ ಅದಾನಿ ಸಮೂಹಕ್ಕೆ ದೊರೆಯುವ ಲಾಭದಲ್ಲಿ ಸರ್ಕಾರಕ್ಕೂ ಹಕ್ಕು ಇದೆಯಲ್ಲವೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.ವಿಳಿಂಜಂ ಷೇರು ವರ್ಗಾವಣೆ ವಿಷಯದಲ್ಲಿ ವಿರೋಧಪಕ್ಷವನ್ನು…

Read More

‘ಮುಖ್ಯಮಂತ್ರಿ ಸುಳ್ಳನ್ನು ಸತ್ಯದಂತೆ ಹೇಳುತ್ತಿದ್ದಾರೆ; ಈ ಸರ್ಕಾರ ಬಂದ ಬಳಿಕದ ಬೆಳವಣಿಗೆಗಳಲ್ಲೇ ಅನುಮಾನಗಳಿವೆ’: ಪಿ. ರಾಜೀವ್

ವಿಳಿಂಜಂ ಬಂದರು ಷೇರು ವರ್ಗಾವಣೆ ವಿವಾದಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿರುದ್ಧ ಸಿಪಿಐ(ಎಂ) ನಾಯಕ ಪಿ. ರಾಜೀವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ವಿವಾದವು ಒಪ್ಪಂದದ ಷರತ್ತುಗಳ ಬಗ್ಗೆ ಅಲ್ಲ. ಷೇರು ವರ್ಗಾವಣೆಗೆ ಮೊದಲು ಅಗತ್ಯ ಪೂರ್ವಾನುಮತಿ ಪಡೆಯಲಾಗಿತ್ತೇ ಎಂಬುದೇ ಮುಖ್ಯ ಪ್ರಶ್ನೆ. ಆದರೆ ಮುಖ್ಯಮಂತ್ರಿ ಆ ಪ್ರಶ್ನೆಗೆ ಉತ್ತರಿಸುವುದನ್ನು ತಪ್ಪಿಸುತ್ತಿದ್ದಾರೆ. ಸುಳ್ಳನ್ನೇ ಸತ್ಯದಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ತಾವು ಯಾವ ಹುದ್ದೆಯಲ್ಲಿದ್ದೇವೆ ಎಂಬುದನ್ನು ಅವರು ಅರಿತುಕೊಳ್ಳಬೇಕು” ಎಂದು ಪಿ. ರಾಜೀವ್ ಹೇಳಿದ್ದಾರೆ. “ಮುಖ್ಯಮಂತ್ರಿ ದೇಶಾಭಿಮಾನಿ ಪತ್ರಿಕೆಯನ್ನು ಮಾತ್ರ…

Read More

ಕೇರಳ ಗ್ರಾಮೀಣ ಬ್ಯಾಂಕ್ 14ನೇ ವಾರ್ಷಿಕೋತ್ಸವ: ಪಾವೂರು ಶಾಖೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ

ಮಂಜೇಶ್ವರ, ಜುಲೈ 8: ಕೇರಳದ “ಕೃಷಿಕರ ಬ್ಯಾಂಕ್” ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳ ಗ್ರಾಮೀಣ ಬ್ಯಾಂಕ್ ತನ್ನ 14ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಅಂಗವಾಗಿ ಪಾವೂರು ಶಾಖೆಯಲ್ಲಿ ಬುಧವಾರ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ವ್ಯವಸ್ಥಾಪಕಿ ಶ್ರುತಿ ಸಿ. ವಹಿಸಿದ್ದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣೇಶ್ ಪಾವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಕೇಕ್ ಕತ್ತರಿಸುವ ಮೂಲಕ ಬ್ಯಾಂಕಿನ 14ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ…

Read More

ಜಿಮ್‌ಗೆ ಸಮಯ ಇಲ್ವಾ? ಪ್ರತಿದಿನ ಮೆಟ್ಟಿಲು ಹತ್ತಿ, ಆರೋಗ್ಯ ಕಾಪಾಡಿ!

ಇಂದಿನ ವೇಗದ ಜೀವನಶೈಲಿಯಲ್ಲಿ ಪ್ರತಿದಿನ ಜಿಮ್ ಅಥವಾ ವ್ಯಾಯಾಮಕ್ಕೆ ಸಮಯ ಮೀಸಲಿಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ದಿನನಿತ್ಯದ ಸಣ್ಣ ದೈಹಿಕ ಚಟುವಟಿಕೆಗಳೂ ಆರೋಗ್ಯ ಕಾಪಾಡಲು ನೆರವಾಗುತ್ತವೆ. ಅವುಗಳಲ್ಲಿ ಮೆಟ್ಟಿಲು ಹತ್ತುವುದು ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲದೆ ಎಲ್ಲೆಡೆ ಮಾಡಬಹುದಾದ ಈ ವ್ಯಾಯಾಮ ದೇಹವನ್ನು ಚುರುಕುಗೊಳಿಸುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳೇನು, ಯಾರಿಗೆ ಇದು ಒಳ್ಳೆಯದಲ್ಲ ಮತ್ತು ಯಾಕೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ….

Read More

ದೇವರ ಹೆಸರಿನಲ್ಲಿ ದೇಣಿಗೆ ದುರುಪಯೋಗ ಆರೋಪ: ಪ್ರಶ್ನೆ ಮಾಡಬಾರದೆನ್ನುವ ಬಿಜೆಪಿ ಹೇಳಿಕೆಗೆ ರಮಾನಾಥ್ ರೈ ತಿರುಗೇಟು

ಮಂಗಳೂರು: ದೇವರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಹಣದ ದುರುಪಯೋಗ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಪ್ರಶ್ನಿಸಬಾರದು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಸಚಿವ ಬಿ. ರಮಾನಾಥ್ ರೈ ತಿರುಗೇಟು ನೀಡಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಬದಲಾದ ಬಳಿಕ ದೇಣಿಗೆ ಸಂಗ್ರಹದಲ್ಲಿ ದಿನಕ್ಕೆ ಸುಮಾರು ₹8 ಲಕ್ಷ ವ್ಯತ್ಯಾಸವಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇಂತಹ ವಿಚಾರವನ್ನು ಸಾಮಾನ್ಯವೆಂದು ಬಿಂಬಿಸುವುದು ಸರಿಯಲ್ಲ. ದೇವರ ಹೆಸರಿನಲ್ಲಿ ಹಣಕಾಸಿನ ವ್ಯವಹಾರಗಳು…

Read More

ಜು. 13ರಂದು ಮಂಗಳೂರಿನಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನ

ಮಂಗಳೂರು ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ಸಾರ್ವಜನಿಕ ದರ್ಶನ ಕಾರ್ಯಕ್ರಮವು ಜುಲೈ 13ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್ ಮಂಗಳೂರು ಜಿಲ್ಲಾ ಸಂಯೋಜಕ ಸತೀಶ್ ಕಾಮತ್ ತಿಳಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಂಗಳಾದೇವಿ ದೇವಸ್ಥಾನದ ಸಮೀಪದ ರಮಾ ಲಕ್ಷ್ಮಿನಾರಾಯಣ ಕನ್ವೆಂಷನ್ ಹಾಲ್‌ನಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು….

Read More

ಸೀನು ಬರೋದು ಏಕೆ? ಕಾರಣ ಮತ್ತು ವಿಜ್ಞಾನ ಇಲ್ಲಿದೆ

ನಮ್ಮ ಮೂಗಿನೊಳಗೆ ನಾಸಲ್ ಮ್ಯೂಕೋಸಾ (Nasal Mucosa) ಎಂಬ ಸೂಕ್ಷ್ಮವಾದ ಪದರ ಇರುತ್ತದೆ. ಧೂಳು, ಹೊಗೆ, ವೈರಸ್, ಬ್ಯಾಕ್ಟೀರಿಯಾ ಅಥವಾ ಯಾವುದೇ ತೀಕ್ಷ್ಣವಾದ ವಾಸನೆ ಈ ಪದರವನ್ನು ಕೆರಳಿಸಿದಾಗ, ಅಲ್ಲಿರುವ ನರಗಳು ತಕ್ಷಣ ಮೆದುಳಿಗೆ ಸಂದೇಶ ಕಳುಹಿಸುತ್ತವೆ. ಮೆದುಳಿನ ‘ಸ್ನೀಜ್ ಸೆಂಟರ್’ ಸೀನು ಮಾಡಲು ದೇಹಕ್ಕೆ ಆದೇಶ ನೀಡುತ್ತದೆ. ಆಗ ಶ್ವಾಸಕೋಶಗಳು ಆಳವಾದ ಉಸಿರನ್ನು ತೆಗೆದುಕೊಂಡು, ಎದೆ, ಗಂಟಲು ಮತ್ತು ಮುಖದ ಸ್ನಾಯುಗಳು ಒಟ್ಟಾಗಿ ಹಠಾತ್ ಒತ್ತಡವನ್ನು ಸೃಷ್ಟಿಸುತ್ತವೆ. ಇದರಿಂದ ಮೂಗು ಮತ್ತು ಬಾಯಿಯಿಂದ ಗಾಳಿಯು ಅತ್ಯಂತ…

Read More
error: Content is protected !!