ಮಂಗಳೂರು-ಚೆನ್ನೈ ಮಧ್ಯೆ ವಿಶೇಷ ರೈಲು: ಓಣಂ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ
ಮಂಜೇಶ್ವರ: ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಮಂಗಳೂರು-ಚೆನ್ನೈ ನಡುವೆ ರೈಲ್ವೆ ಇಲಾಖೆಯು ಹೊಸ ವಿಶೇಷ ರೈಲನ್ನು ಘೋಷಿಸಿದೆ. ಈ ರೈಲು ಜುಲೈ 13 ರಿಂದ ಆಗಸ್ಟ್ 31ರವರೆಗೆ ಕಾರ್ಯನಿರ್ವಹಿಸಲಿದೆ. ಪ್ರತಿ ಸೋಮವಾರ ಸಂಜೆ 4 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು, ಮರುದಿನ ಬೆಳಗ್ಗೆ 10.55ಕ್ಕೆ ಚೆನ್ನೈ ತಲುಪಲಿದೆ. ವಾಪಸ್ ಚೆನ್ನೈನಿಂದ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹೊರಟು, ಬುಧವಾರ ಬೆಳಗ್ಗೆ 8.40ಕ್ಕೆ ಮಂಗಳೂರು ತಲುಪಲಿದೆ. ಈ ರೈಲಿನಲ್ಲಿ 2 ಸೆಕೆಂಡ್ ಎಸಿ, 8 ಥರ್ಡ್ ಎಸಿ,…
